Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ವಿದೇಶದಲ್ಲೂ ಸದ್ದುಮಾಡುತ್ತಿದೆ, ಮೂಢನಂಬಿಕೆಗಳೆಂಬ ಪೆಡಂಭೂತ!
ಮೂಢನಂಬಿಕೆಗಳು ಜನರ ಜೀವನದ ಭದ್ರ ಬುನಾದಿ ಎಂದೇ ಹೇಳಬಹುದು. ಬೆಕ್ಕು ಅಡ್ಡಬಂದಲ್ಲಿ ಅಪಶಕುನ, ಕಾಗೆ ಕೂಗಿದಲ್ಲಿ ನೆಂಟರ ಆಗಮನ ನಾಯಿ ಊಳಿಟ್ಟರೆ ಮನೆಯ ಯಜಮಾನನಿಗೆ ಅಪಾಯ ಹೀಗೆ ನಾವು ನಂಬುವ ಮೂಢನಂಬಿಕೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನಮ್ಮ ಇಂದಿನ ಜೀವನದಲ್ಲಿ ಇಷ್ಟು ಮುಖ್ಯವಾದ ಪಾತ್ರವನ್ನು ವಹಿಸಿರುವ ಮೂಢನಂಬಿಕೆ ಇತಿಹಾಸದಲ್ಲೂ ತನ್ನ ಗುರುತನ್ನು ಉಂಟುಮಾಡಿದೆ ಎಂಬುದೇ ಇದರ ವಿಶೇಷತೆಯಾಗಿದೆ. ಮೂಢನಂಬಿಕೆಯ ಸುಳಿಯಲ್ಲಿ ನಲುಗುತ್ತಿದೆ ನಮ್ಮ ಭಾರತ..!
ನಮ್ಮ ಸಮಾಜದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಮೂಢನಂಬಿಕೆಗಳ ಪಟ್ಟಿಯನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಸಣ್ಣ ವಿಚಾರಗಳಿಂದ ಜನ್ಮತಾಳಿರುವ ಈ ಮೂಢನಂಬಿಕೆಗಳ ಭಂಡಾರ ಬೆಳೆಯುತ್ತಾ ಬೆಳೆಯುತ್ತಾ ದೃಢವಾಗುತ್ತಾ ಹೋಗಿದೆ. ಈ ನಂಬಿಕೆಗಳು ಎಂದಿಗೂ ಅಂತ್ಯವಿಲ್ಲ. ಬದಲಿಗೆ ಹೊಸ ಹೊಸ ನಂಬಿಕೆಗಳ ಜನ್ಮತಾಳುತ್ತಾ ಬರಲಿವೆ. ಮೂಢನಂಬಿಕೆಗಳೊಂದಿಗೆ ತಳುಕು ಹಾಕಿಕೊಂಡಿರುವ ಸತ್ಯಗಳು
ಇವುಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬುದು ಆ ಭಗವಂತನಿಗೆ ಮಾತ್ರ ಗೊತ್ತು. ಕೆಲವೊಂದು ನಂಬಿಕೆಗಳಿಗೆ ವೈಜ್ಞಾನಿಕ ಕಾರಣಗಳಿದ್ದರೂ ಮತ್ತೆ ಕೆಲವೊಂದು ನಂಬಿಕೆಗಳು ನಗುವನ್ನು ತರಿಸುವಂತಿದೆ. ಬನ್ನಿ ಆ ಮೂಢನಂಬಿಕೆಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡಲಿದ್ದು ನಿಮಗಿದು ಆಶ್ಚರ್ಯವನ್ನುಂಟು ಮಾಡುವುದು ಖಂಡಿತ.

ಮದುವೆಯಲ್ಲಿನ ಮುಖದ ಪರದೆ
ರೋಮನ್ ಇತಿಹಾಸದ ಪ್ರಕಾರ, ಮದುವೆಯ ಸಮಯದಲ್ಲಿ ಮುಖಕ್ಕೆ ಹಾಕುವ ಪರದೆ ಕೆಟ್ಟ ಶಕ್ತಿಗಳಿಂದ ಕಾಪಾಡುವಂಥದ್ದಾಗಿದೆ. ಮದುವಣಗಿತ್ತಿಯ ಮುಖವನ್ನು ಮುಸುಕಿನಿಂದ ಮರೆಮಾಡುವುದು ಉದ್ದೇಶವಾಗಿದ್ದರೂ ಕೆಟ್ಟ ಶಕ್ತಿಗಳಿಂದ ರಕ್ಷಣೆ ಎಂಬುದು ಇದರ ಮುಖ್ಯ ಉದ್ದೇಶವಾಗಿದೆ.

ಮಕ್ಕಳಾಗದಿರಲು ಲೆಟಿಸ್ ಸೊಪ್ಪು ಕಾರಣ
19 ನೇ ಶತಮಾನದಲ್ಲಿ, ಮಕ್ಕಳನ್ನು ಹೊಂದಬೇಕೆಂಬ ಬಯಕೆಯುಳ್ಳವರು ಸಲಾಡ್ಗಳನ್ನು ಸೇವಿಸುತ್ತಿರಲಿಲ್ಲವಂತೆ. ಇದನ್ನು ಬರಡು ಸಸ್ಯವೆಂದು ಪರಿಗಣಿಸಲಾಗಿದ್ದು ಗರ್ಭಧಾರಣೆಗೆ ಹಾನಿಕರ ಎಂಬುದಾಗಿ ನಿರ್ಧರಿಸಲಾಗಿತ್ತು.

ರಾತ್ರಿ ಚ್ಯೂಯಿಂಗ್ ಗಮ್ ಸೇವನೆ ನಿಷೇಧ
ಇದು ಟರ್ಕಿಯಲ್ಲಿ ನಂಬಲಾಗುವ ಬಲವಾದ ಮೂಢನಂಬಿಕೆಯಾಗಿದೆ. ರಾತ್ರಿ ವೇಳೆ ಚ್ಯೂಯಿಂಗ್ ಗಮ್ ಸೇವಿಸಿದಲ್ಲಿ, ಅದು ಸತ್ತವರ ಮಾಂಸವನ್ನು ಅಗೆಯುವುದು ಎಂಬುದಾಗಿ ನಂಬಲಾಗಿತ್ತು.

ದಿರಿಸು ಮೇಲಕ್ಕೆ ಎದ್ದಲ್ಲಿ ಹೊಸ ದಿರಿಸು ಖರೀದಿ
ನಿಜಕ್ಕೂ ಇದು ಪೊಳ್ಳು ಮೂಢನಂಬಿಕೆ ಎಂದೇ ಹೇಳಬಹುದು! ಮಹಿಳೆಯರ ಲಂಗದ ಕೆಳತುದಿ ಮೇಲಕ್ಕೆದ್ದು ಕಿಸೆಯಂತೆ ರಚನೆಯಾದಲ್ಲಿ ಆಕೆಯ ಜೀವನದಲ್ಲಿ ಏನಾದರೂ ಅದೃಷ್ಟ ಖುಲಾಯಿಸುತ್ತದೆ ಎಂದರ್ಥವಾಗಿದೆ. ಹೊಸ ದಿರಿಸನ್ನು ಆಕೆ ತೊಡುತ್ತಾಳೆ ಎಂಬ ನಂಬಿಕೆಯಾಗಿದೆ.

ಮಧ್ಯರಾತ್ರಿ ದ್ರಾಕ್ಷಿ ತಿಂದಲ್ಲಿ ಶುಭಸೂಚನೆ
ಸ್ಪೇನ್ನಲ್ಲಿ ಹೊಸ ವರ್ಷದ ಸಂಜೆಯಲ್ಲಿ, ಜನರು ಒಬ್ಬರಿಗೊಬ್ಬರು ಶುಭ ಕೋರುವುದಿಲ್ಲ. ಬದಲಿಗೆ ಅವರು 12 ದ್ರಾಕ್ಷಿಗಳನ್ನು ಸೇವಿಸುತ್ತಾರೆ. ಇದರಿಂದ 12 ತಿಂಗಳುಗಳೂ ಅವರಿಗೆ ಅದೃಷ್ಟವನ್ನು ತರುತ್ತವೆ ಎಂದಾಗಿದೆ.

ಹಕ್ಕಿ ಹಿಕ್ಕೆ ಹಾಕಿದಲ್ಲಿ ನೀವು ಶ್ರೀಮಂತರಾಗುತ್ತೀರಿ
ರಷ್ಯಾದಲ್ಲಿ, ನಿಮ್ಮ ಮೇಲೆ ಹಕ್ಕಿ ಹಾಕಿದಲ್ಲಿ ನೀವು ಶ್ರೀಮಂತರಾಗುತ್ತೀರಿ ಎಂಬ ನಂಬಿಕೆ ಇದೆ. ಇದನ್ನು ಅದೃಷ್ಟವೆಂದು ನಂಬುತ್ತಾರೆ. ಇದು ನಿಮಗೆ ಶ್ರೀಮಂತಿಕೆಯನ್ನು ತರುತ್ತದೆ ಎಂಬುದಾಗಿ ಹೇಳಲಾಗುತ್ತಿದೆ. ಹೆಚ್ಚು ಪಕ್ಷಿಗಳು ಸೇರಿ ಹೆಚ್ಚು ಹಿಕ್ಕೆ ಹಾಕಿದಲ್ಲಿ ನೀವು ಆಗರ್ಭ ಶ್ರೀಮಂತರಾಗುವುದು ಖಂಡಿತ ಏನಂತೀರಿ?

ಜೂಲಿಯೆಟ್ಗೆ ಪ್ರೇಮ ಪತ್ರ
ಜೂಲಿಯೆಟ್ಗೆ ಪ್ರೇಮ ಪತ್ರ ಬರೆದು ಜೂಲಿಯೆಟ್ ಬದುಕಿದ್ದ ದೇವಾಲಯದ ಗೋಡೆಯ ಮೇಲೆ ಅಂಟಿಸುವುದರಿಂದ ಪ್ರೀತಿಯಲ್ಲಿದ್ದವರಿಗೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಪ್ರೀತಿಯ ಅದೃಷ್ಟಕ್ಕಾಗಿ ಇಲ್ಲಿ ವೀಕ್ಷಕರು ಜೂಲಿಯೆಟ್ನ ಕಂಚಿನ ಪ್ರತಿಮೆಯ ಬಲ ಸ್ತನವನ್ನೇ ದೋಚಿದ್ದಾರೆ.



Click it and Unblock the Notifications
