Just In
- 3 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 4 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 5 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 5 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ನೇಹಿತರ ದಿನ ವಿಶೇಷ ಲೇಖನ-'ಗೆಳೆತನವೆಂಬ ಸಿರಿತನ'
ಒಂದು ಒಳ್ಳೆಯ ಪುಸ್ತಕ ಒಬ್ಬ ಒಳ್ಳೆಯ ಗೆಳೆಯನಿದ್ದಂತೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಒಳ್ಳೆಯ ಗೆಳೆಯನೊಬ್ಬ ನಮ್ಮ ಇಡೀ ಜೀವನವನ್ನು ಸುಂದರವಾಗಿಸಬಲ್ಲ. ಜೀವನದಲ್ಲಿ ಎದುರಾಗುವ ಕಷ್ಟ- ನಷ್ಟಗಳನ್ನು ಸಹೃದಯಿಗಳೊಂದಿಗೆ ಮಾತ್ರ ಹಂಚಿಕೊಳ್ಳಬಹುದು. ಅವರ ಸಲಹೆಗಳಿಂದ ಧೈರ್ಯ, ಸ್ಫೂರ್ತಿ ಸಿಗುವುದು.
ಹಾಗೆಯೇ ಸಂತೋಷವನ್ನು ಹಂಚಿಕೊಳ್ಳುವುದಕ್ಕೂ ಸಹೃದಯಿಗಳೇ ಬೇಕು. ಇಲ್ಲವಾದರೆ, ಸಂತೋಷ ಸಂಪೂರ್ಣ ಅನುಭವಕ್ಕೆ ಬರುವುದಿಲ್ಲ!! ಸಮಾಜದಲ್ಲಿ ಎಲ್ಲ ರೀತಿಯ ಜನಗಳೂ ಇರುತ್ತಾರೆ. ನಮ್ಮ ಕಷ್ಟ ಗಳಿಗೆ ಸ್ಪಂದಿಸುವುದು ಹಾಗಿರಲಿ, " ಕೆಳಗೆ ಬಿದ್ದವನಿಗೆ ತಲೆಗೊಂದು ಕಲ್ಲು" ಎಂಬಂತೆ ಅವಹೇಳನ ಮಾಡುವವರೂ ಇರುತ್ತಾರೆ.
ನೋವಿಗೆ ಉಪ್ಪು ಹಚ್ಚುವ ಇಂತಹವರ ನಡುವೆ ಒಬ್ಬ ಸಹೃದಯಿಯ ಬೆಂಬಲ ನಮಗೆ ಇದ್ದರೂ ಸಾಕು; ಬದುಕು ಬಂಗಾರ ವಾಗಬಲ್ಲದು. ದುರ್ಜನರು ನಮ್ಮ ಸಂತೋಷವನ್ನು ಸಹಿಸರು. ಆದ್ದರಿಂದ ಅಂತಹವರಿಂದ ದೂರವಿರುವುದೇ ಮೇಲು.
ಗೆಳೆಯ-ಗೆಳತಿಯರ ದೊಡ್ಡ ಗುಂಪೇ ನಿಮ್ಮ ಸುತ್ತಲೂ ಇದೆ ಎಂದಾದರೆ, ನೀವು ಪರಮ ಸುಖಿಗಳು.ಅದೃಷ್ಟವಂತರು. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಎಂದು ಪರಸ್ಪರ ಸಹಾಯ ಮಾಡಿಕೊಳ್ಳುತ್ತಾ, ಸಂತೋಷವನ್ನು ಹಂಚಿಕೊಳ್ಳುವ ಮೂಲಕ ಸಂತೋಷವನ್ನು ಇಮ್ಮಡಿಗೊಳಿಸಿಕೊಳ್ಳುತ್ತಾ,( ಬೆಳಕಿನ ಎದುರು ಕನ್ನಡಿ ಇಟ್ಟರೆ ಹೇಗೋ ಹಾಗೆ, ಸಂತೋಷ ಸಹೃದಯರ ಸಹವಾಸದಲ್ಲಿ ಇಮ್ಮಡಿಗೊಳ್ಳುವುದು) ಜೀವನದ ಜಟಕಾ ಬಂಡಿ ಸುಗಮವಾಗಿ ಸಾಗುವುದು. ಸ್ನೇಹಕ್ಕೇಕೆ ಶಾಸ್ತ್ರದ ಹಂಗು !!
ಕೆಲವೊಮ್ಮೆ ಒಳ್ಳೆಯ ಗೆಳೆಯ/ತಿಯರ ಸಹೃದಯತೆಯ ಮೌಲ್ಯ ನಮಗೆ ತಿಳಿದಿರುವುದಿಲ್ಲ. ಬೆಳ್ಳಗಿರುವುದೆಲ್ಲ ಹಾಲು ಎಂಬ ಭಾವನೆ ನಮ್ಮದಾಗಿರುತ್ತದೆ. ನಮಗೆ ಸಂಕಷ್ಟ ಎದುರಾದಾಗ ಯಾರು ನಮ್ಮನ್ನು ಧೃತಿಗೆಡದಂತೆ ಕಾಪಾಡಿ ನೆರವಾಗುತಾರೋ, ಆಗ ಮಾತ್ರ " ನಿಜವಾದ" ಗೆಳೆತನದ ಪರಿಚಯವಾಗುತ್ತದೆ. ಇವರು ನಮ್ಮ ಸುಖವನ್ನು ಕಂಡು ತಾವೇ ಸುಖಿಸಿದಷ್ಟು ಸಂತಸ ಪಡಬಲ್ಲರು! ನಿಜವಾದ ಪೀತಿ ನಿಸ್ವಾರ್ಥವಾದುದು. ಸ್ವಹಿತಕ್ಕಾಗಿ ನಮಗೆ ಹತ್ತಿರವಾಗುವ ಜನ, ನಿಜವಾದ ಗೆಳೆಯರಲ್ಲ. ಅಂತಹವರಿಗೆ ಗೆಳೆತನವೂ ಒಂದು ವ್ಯಾಪಾರದಂತೆ. "ಉಂಟಾದ ಕಾಲಕ್ಕೆ ನೆಂಟರು ಇಷ್ಟರು...".ಮನೆ ತುಂಬಿಕೊಳ್ಳುತ್ತಾರೆ .
ಕೈ ಖಾಲಿಯಾದಾಗ ಯಾರು ನಮ್ಮ ಕೈ ಹಿಡಿದು ಮುನ್ನಡೆಯಲು ಅನುವಾಗುತ್ತಾರೋ ಅವರು ನಿಜವಾದ ಗೆಳೆಯರು. ಗೆಳೆತನದಿಂದ ಅನೇಕ ರೀತಿಯ ಲಾಭಗಳೂ ಇವೆ. ಗೆಳೆತನದಿಂದ ಮನಸ್ಸು ಪ್ರಫುಲ್ಲವಾಗುತ್ತದೆ, ನಿರಾಳ ವಾಗುತ್ತದೆ. ಇದರಿಂದಾಗಿ ಹೃದ್ರೋಗ, ಮಾನಸಿಕ ಒತ್ತಡದಂತಹ ಖಾಯಿಲೆಯೂ ಹತ್ತಿರ ಸುಳಿಯದು.
ಮನಸ್ಸು ಭಾರವಾದಾಗ ಗೆಳೆಯ/ತಿಯರೊಂದಿಗೆ ದುಃಖ ಹಂಚಿಕೊಂಡರೆ ಮನಸ್ಸು ಹಗುರಾಗುತ್ತದೆ. ನೀವು ಕೆಲಸ ಮಾಡುವ ಕಚೇರಿಯಲ್ಲಿ ಸಹೃದಯಿಗಳಿದ್ದರಂತೂ ನೀವು ತುಂಬ ಅದೃಷ್ಟವಂತರು. ನಿಮ್ಮ ಕೆಲಸ ಸಲೀಸು ಮಾತ್ರವಲ್ಲ, ನಿಮ್ಮ ಕೆಲಸ ಕೆಲಸವೇ ಅನಿಸದೆ, ಅದೊಂದು ಆಟದಂತೆ ಸುಲಲಿತವಾಗುವುದು.
ಕೆಲವೊಮ್ಮೆ ಸಂದರ್ಭಕ್ಕನುಸಾರವಾಗಿ ಪುರುಷ-ಸ್ತ್ರೀಯರ ನಡುವೆ ಸ್ನೇಹ ಉಂಟಾದಾಗ, ಆ ಸ್ನೇಹವನ್ನು ಒಂದು ಶಿಷ್ಟ ಸಂಸೃತಿಯ ಪರಿಧಿಯೊಳಗೆ ಹಿಡಿದಿಡಬೆಕಾಗುವುದು. ಅನ್ಯ ಲಿಂಗದವರೊಂದಿಗಿನ ಸ್ನೇಹವು, ಶರೀರದ ಮಿಲನದಲ್ಲೇ ಪರ್ಯಾವಸಾನಗೊಳ್ಳಬೇಕೆಂದೇನೂ ಇಲ್ಲ.
ಇದನ್ನು ಅರಿತು ಕೊಳ್ಳಲು ಒಂದು ಸಭ್ಯ ಸಂಸ್ಕಾರದ ಹಿನ್ನೆಲೆ ಬೇಕಾಗುತ್ತದೆ. ಪ್ರಾಣಿಗಳಿಗೂ ಮತ್ತು ಮನುಷ್ಯರಿಗೂ ಇರುವ ವ್ಯತ್ಯಾಸ ಇಲ್ಲೇ ಅಲ್ಲವೇ? ಒಟ್ಟಿನಲ್ಲಿ ಸ್ನೇಹದ ಎಡ-ಬಲವನ್ನರಿತು ಪ್ರಬುದ್ಧ ಸಂಸ್ಕಾರದ ಹಿನ್ನೆಲೆಯಲ್ಲಿ ಮುಂದುವರೆಯುವ ಸ್ನೇಹ ಜೀವನ ಪಥಕ್ಕೆ ಅನಿವಾರ್ಯವೂ ಹೌದು, ಆನಂದವು ಹೌದು!