Just In
- 1 hr ago
Today Rashi Bhavishya: ಗುರುವಾರದ ದಿನ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಕಚೇರಿಯಲ್ಲಿ ಬಹಳ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ
- 11 hrs ago
ವಾಸ್ತು ಶಾಸ್ತ್ರ: ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಎಂದಿಗೂ ಸಾಲ ನೀಡಬೇಡಿ
- 12 hrs ago
ಅಮೆಜಾನ್ ಸೇಲ್: ಶೇ.60ಕ್ಕೂ ಅಧಿಕ ರಿಯಾಯಿತಿಯಲ್ಲಿ ದೊರೆಯುತ್ತಿದೆ ವಿಟಮಿನ್ ಸಪ್ಲಿಮೆಂಟ್ಸ್
- 13 hrs ago
ಅಮೆಜಾನ್ ಸೇಲ್: ಶೇ.50ಕ್ಕೂ ಅಧಿಕ ರಿಯಾಯಿತಿಯಲ್ಲಿ ದೊರೆಯುತ್ತಿದೆ ಪ್ರೊಟೀನ್ ಪೌಡರ್, ಸಪ್ಲಿಮೆಂಟ್ಸ್
Don't Miss
- News
ಸಾವಕರ್ರ್ ಫ್ಲೆಕ್ಸ್ ವಿವಾದದಿಂದ ಕೋಟಿ ಕೋಟಿ ನಷ್ಟ, 'ಬ್ರ್ಯಾಂಡ್ ಶಿವಮೊಗ್ಗ'ಕ್ಕೆ ಕಪ್ಪು ಚುಕ್ಕೆ
- Sports
ನಿರ್ಣಾಯಕ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆದ್ದು ಟಿ20 ಸರಣಿ ವಶಕ್ಕೆ ಪಡೆದ ಐರ್ಲೆಂಡ್
- Movies
'ಶೇರ್' ಅವತಾರವೆತ್ತಿದ ಕಿರುತೆರೆ ನಟ ಕಿರಣ್ ರಾಜ್: 3ನೇ ಸಿನಿಮಾ ಶುರು!
- Education
How To Become IAS Officer : ಐಎಎಸ್ ಅಧಿಕಾರಿಯಾಗುವುದು ಹೇಗೆ ?
- Technology
ನಾಯ್ಸ್ ಸಂಸ್ಥೆಯಿಂದ ಹೊಸ ಸ್ಮಾರ್ಟ್ವಾಚ್ ಲಾಂಚ್! 7 ದಿನಗಳ ಬ್ಯಾಟರಿ ಬ್ಯಾಕಪ್!
- Automobiles
ಭಾರತದಲ್ಲಿ ಹೊಸ ಟೂರಿಂಗ್ ರೇಂಜ್ ಬೈಕ್ಗಳನ್ನು ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್
- Finance
ಹಾಲಿನ ದರ ಮತ್ತೆ ಹೆಚ್ಚಿಸಿದ ಮದರ್ ಡೈರಿ, ಅಮುಲ್ ಮಿಲ್ಕ್, ಎಷ್ಟು ಹೆಚ್ಚಳ?
- Travel
ಇಲ್ಲಿಯವರೆಗೆ ಯಾರಿಗೂ ಈ ಗುಹೆಯೊಳಗಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ..!
Ram Navami 2021 : ರಾಮನವಮಿ 2021: ದಿನಾಂಕ, ಇತಿಹಾಸ ಹಾಗೂ ಮಹತ್ವ ಇಲ್ಲಿದೆ
ಹಿಂದೂ ಧರ್ಮದಲ್ಲಿ ಶ್ರೀ ರಾಮನವಮಿ ಎಂದರೆ ಅದೊಂಥರ ಹಬ್ಬದ ಸಂಭ್ರಮ. ಮಹಾವಿಷ್ಣುವಿನ ಏಳನೇಯ ಅವತಾರವಾದ ಶ್ರೀರಾಮನು ಜನಿಸಿದ ನವಮಿಯಂದು ಈ ಹಬ್ಬ ಆಚರಿಸಲಾಗುತ್ತದೆ. ಈ ದಿನ ಪುಷ್ಯಾ ನಕ್ಷತ್ರದಲ್ಲಿ ಮಧ್ಯಾಹ್ನದ ವೇಳೆ ಕರ್ಕಾಟಕ ಲಗ್ನದಲ್ಲಿ ಅಯೋದ್ಯೆಯಲ್ಲಿ ರಾಮ ಜನಿಸಿದನೆಂಬ ನಂಬಿಕೆ ಇದೆ. ಹಾಗಾದರೆ ಈ ವರ್ಷ ರಾಮನವಮಿ ಯಾವಾಗ ಬಂದಿದೆ? ಅದರ ಮಹತ್ವ ಹಾಗೂ ಇತಿಹಾಸವೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

೨೦೨೧ರ ರಾಮನವಮಿ ದಿನಾಂಕ ಹಾಗೂ ಮುಹೂರ್ತ:
ರಾಮ ನವಮಿ ಹಿಂದೂಗಳ ಹಬ್ಬಗಳಲ್ಲಿ ಅತ್ಯಂತ ಪವಿತ್ರವಾದುದಾಗಿದೆ. ಈ ನವಮಿಯನ್ನು ಈ ಬಾರಿ ಏಪ್ರಿಲ್ 21ರಂದು ಆಚರಿಸಲಾಗುವುದು. ರಾಮ ನವಮಿ ಪೂಜಾ ಮುಹೂರ್ತ ಏಪ್ರಿಲ್ 21 ರ ಬೆಳಿಗ್ಗೆ 11:02 ರಿಂದ 01:38 ರವರೆಗೆ ಇರುತ್ತದೆ. ರಾಮ ನವಮಿ ತಿಥಿ 2021 ಏಪ್ರಿಲ್ 21 ರಂದು ಬೆಳಿಗ್ಗೆ 12:43 ಕ್ಕೆ ಪ್ರಾರಂಭವಾಗಿ, ಏಪ್ರಿಲ್ 22, 2021 ರಂದು ಬೆಳಿಗ್ಗೆ 12:35 ಕ್ಕೆ ಅಂತ್ಯವಾಗುತ್ತದೆ.
ನವಮಿ ತಿಥಿ ಪ್ರಾರಂಭ- ಏಪ್ರಿಲ್ 21, 2021 ರಂದು ಮಧ್ಯಾಹ್ನ 12:43
ನವಮಿ ತಿಥಿ ಅಂತ್ಯ- ಏಪ್ರಿಲ್ 21, 2021 ರಂದು ಮಧ್ಯಾಹ್ನ 12:35

ರಾಮನವಮಿ ಪೌರಾಣಿಕ ಇತಿಹಾಸ:
ಧರ್ಮ ಶಾಸ್ತ್ರಗಳ ಪ್ರಕಾರ, ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯಪಾಯಸವನ್ನು ನೀಡುತ್ತಾನೆ. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.

ರಾಮ ನವಮಿ ಮಹತ್ವ:
ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ಸಮಯದಲ್ಲಿ ಶ್ರೀರಾಮ ನವಮಿ ತಿಥಿಯಲ್ಲಿ ಜನಿಸಿದರೆಂದು ನಂಬಲಾಗಿದೆ. ಅಯೋಧ್ಯೆಯಲ್ಲಿ ರಾಮ ನವಮಿ ಆಚರಣೆಗಳು ಅತ್ಯಂತ ಗಮನಾರ್ಹವಾದುದು ಏಕೆಂದರೆ ಇದು ಭಗವಾನ್ ರಾಮನ ಜನ್ಮಸ್ಥಳವಾಗಿದೆ. ರಾಮ ನವಮಿ ಸಮಯದಲ್ಲಿ ಭಕ್ತರು ದೂರದ ಸ್ಥಳಗಳಿಂದ ಅಯೋಧ್ಯೆಗೆ ಬರುತ್ತಾರೆ. ರಾಮ ವಿಷ್ಣುವಿನ 7 ನೇ ಅವತಾರ (ಅವತಾರ) ಎಂದು ಪರಿಗಣಿಸಲಾಗಿದೆ. ಭಗವಾನ್ ರಾಮ ಮಂತ್ರಗಳನ್ನು ಜಪಿಸುವುದರಿಂದ ಎಲ್ಲ ಪಾಪಗಳನ್ನು ಕಳೆದು, ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿದೆ.