Latest Updates
-
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ -
ದೆಹಲಿ ಬಿಸಿಲು: ಸುಡುವ ತಾಪಮಾನದಲ್ಲೂ ಸ್ಟೈಲಿಶ್ ಆಗಿ ಕಾಣಲು ವೈರಲ್ ಆಗ್ತಿವೆ ಈ ಸಿಂಪಲ್ ಹ್ಯಾಕ್ಸ್! -
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ! -
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ?
ಹೊಸವರ್ಷ 2022: ಮನೆಯಲ್ಲಿ ವರ್ಷವಿಡೀ ಸುಖ-ಶಾಂತಿ ನೆಲೆಸಲು, ಈ ವಾಸ್ತುಕ್ರಮಗಳನ್ನು ಕೈಗೊಳ್ಳಿ
2022ನೇ ಇಸವಿಯ ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಕಳೆದ ವರ್ಷದಲ್ಲಿ ಎದುರಿಸಿದ ಎಲ್ಲಾ ತೊಂದರೆಗಳು ಮತ್ತು ಸಮಸ್ಯೆಗಳು ಕೊನೆಗೊಳ್ಳಬೇಕು ಎಂಬುದು ಹೆಚ್ಚಿನವರ ಆಶಾಭಾವನೆ.
ಆದರೆ, ನಾವು ಮಾಡುವ ಕೆಲವು ತಪ್ಪುಗಳಿಂದ, ವರ್ಷವಿಡೀ ಮನೆಯಲ್ಲಿ ಸಮಸ್ಯೆ ಎದುರಿಸಬೇಕಾಗುವುದು. ಈ ಕಾರಣಗಳಿಂದಾಗಿ, ಜೀವನದಲ್ಲಿ ಮತ್ತು ನಮ್ಮ ಮನೆಯಲ್ಲಿ ಶಾಂತಿ ಇರುವುದಿಲ್ಲ. ಅದರ ಪರಿಣಾಮದಿಂದಾಗಿ, ಆರ್ಥಿಕ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳು ಜೀವನದಲ್ಲಿ ಬರಲು ಪ್ರಾರಂಭಿಸುತ್ತವೆ. ಆದ್ದರಿಂದ ಹೊಸ ವರ್ಷದಲ್ಲಿ ಸಂತೋಷ ಮತ್ತು ಸಮೃದ್ಧಿಗಾಗಿ ವಾಸ್ತು ಪ್ರಕಾರ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವುಗಳಾವುವು ಎಂಬದನ್ನು ಇಲ್ಲಿ ನೋಡೋಣ.
ವರ್ಷವಿಡೀ ಸಂತೋಷ ಮತ್ತು ಸಮೃದ್ಧಿಗಾಗಿ ಹೊಸ ವರ್ಷ ಬರುವ ಮುನ್ನ ತೆಗೆದುಕೊಳ್ಳಬೇಕಾದ ಕೆಲವು ವಾಸ್ತುಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ:

1. ಮುಖ್ಯ ಬಾಗಿಲು:
ಹೊಸ ವರ್ಷದ ಆಗಮನದ ಸಂದರ್ಭದಲ್ಲಿ, ಮನೆಯ ಮುಖ್ಯ ಬಾಗಿಲು ಹೆಚ್ಚು ಹೊಳೆಯಬೇಕೆಂದು ಬಯಸಿದರೆ, ಅದನ್ನು ಯಾವಾಗಲೂ ಅಂದರೆ, ವರ್ಷವಿಡೀ ಈ ಬಾಗಿಲನ್ನು ಸ್ವಚ್ಛವಾಗಿಡಿ. ಕೊಳಕು ಇಲ್ಲಿ ಇರದಂತೆ ನೋಡಿಕೊಳ್ಳಿ ಮತ್ತು ಯಾವುದೇ ರೀತಿಯಲ್ಲಿ ಬಾಗಿಲು ಒಡೆಯದಂತೆ ನೋಡಿಕೊಳ್ಳಿ. ಏನಾದರೂ ಮುರಿದುಹೋದರೆ, ಅದನ್ನು ಸರಿಪಡಿಸಿ ಅಥವಾ ಅದನ್ನು ಬದಲಿಸಿ.

2.ಮುರಿದ ಹಾಸಿಗೆ
ಮುರಿದ ಹಾಸಿಗೆಯನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ, ವೈವಾಹಿಕ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ ಎಂದು ನಂಬಲಾಗಿದೆ. ಇದರಿಂದ ಮನೆಯಲ್ಲಿ ಶಾಂತಿ ಇರುವುದಿಲ್ಲ, ಹಾಗೆಯೇ ಲಕ್ಷ್ಮಿಯೂ ಕೋಪಗೊಳ್ಳುತ್ತಾಳೆ. ಆದ್ದರಿಂದ ಮನೆಯಲ್ಲಿ ಹಾಸಿಗೆ ಒಡೆದಿದ್ದರೆ, ಹೊಸ ವರ್ಷ ಬರುವ ಮೊದಲು ಅದನ್ನು ಸರಿಪಡಿಸಿ ಅಥವಾ ಸಾಧ್ಯವಾದರೆ, ಮುರಿದ ಹಾಸಿಗೆಯನ್ನು ತೆಗೆದು ಹೊಸ ಹಾಸಿಗೆಯನ್ನು ಖರೀದಿಸಿ.

3. ಒಡೆದ ಗಾಜಿನ ವಸ್ತುಗಳು:
ವಾಸ್ತು ಶಾಸ್ತ್ರದಲ್ಲಿ, ಮನೆಯಲ್ಲಿ ಗಾಜಿನ ವಸ್ತುಗಳು ಒಡೆದಿರುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ನೀವು ಆ ವಸ್ತುವನ್ನು ಬಳಸದಿದ್ದರೂ ಸಹ, ಅದು ವಾಸ್ತು ದೋಷಗಳನ್ನು ಉಂಟುಮಾಡಿ, ಮಾನಸಿಕ ಒತ್ತಡ ಮತ್ತು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಈ ಒಡೆದ ಗಾಜಿನ ವಸ್ತುವನ್ನು ಮನೆಯಿಂದ ಹೊರಗೆ ಎಸೆಯುವುದು ಸರಿಯಾದ ಮಾರ್ಗವಾಗಿದೆ. ಅದರ ಸ್ಥಳಕ್ಕೆ ಮನೆಗೆ ಕೆಲವು ಹೊಸ ವಸ್ತುಗಳನ್ನು ತನ್ನಿ. ಹೊಸ ವಸ್ತುಗಳನ್ನು ತರುವ ಸ್ಥಿತಿಯಲ್ಲಿ ಇಲ್ಲದಿದ್ದರೂ ಒಡೆದ ಗಾಜನ್ನು ಮನೆಯಿಂದ ಹೊರಹಾಕಿ.

4. ಕೆಟ್ಟ ಎಲೆಕ್ಟ್ರಾನಿಕ್ ವಸ್ತುಗಳು:
ಮನೆಯಲ್ಲಿ ಫೋಟೋ ಫ್ರೇಮ್ ಅಥವಾ ಯಾವುದಾದರೂ ಕೆಟ್ಟ ಎಲೆಕ್ಟ್ರಾನಿಕ್ ವಸ್ತು ಇದ್ದರೆ, ಹೊಸ ವರ್ಷ ಬರುವ ಮೊದಲು ಅದನ್ನು ಮನೆಯಿಂದ ಹೊರಹಾಕುವುದು ಉತ್ತಮ.

5. ವಿದ್ಯುತ್ ತಂತಿ:
ಅನೇಕ ಬಾರಿ ಮನೆಯ ಹಾಳಾದ ವೈಯರಿಂಗ್ ಸರಿಪಡಿಸಿದ ನಂತರ ಉಳಿದ ವಿದ್ಯುತ್ ತಂತಿಯನ್ನು ಜನರು ಇಟ್ಟುಕೊಳ್ಳುತ್ತಾರೆ. ವಾಸ್ತು ಪ್ರಕಾರ, ಹಾಳಾದ ಅಥವಾ ಎಡ ವಿದ್ಯುತ್ ತಂತಿಯನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಹೊಸ ವರ್ಷದ ಆರಂಭದ ಮೊದಲು, ಮನೆಯಿಂದ ಹೊರಹಾಕಲು ಯತ್ನಿಸಿ.
ಹೊಸ ವರ್ಷವನ್ನು ಹೇಗೆ ಸ್ವಾಗತಿಸುವುದು?
ತಜ್ಞರ ಪ್ರಕಾರ, ಹೊಸ ವರ್ಷವನ್ನು ಸ್ವಾಗತಿಸಲು, ಮನೆಯ ಮುಖ್ಯ ಬಾಗಿಲಿಗೆ ಮಾವಿನ ಎಲೆಯ ತೋರಣ ಹಾಕುವುದರ ಜೊತೆಗೆ, ನಿಮ್ಮ ಮುಖ್ಯ ಬಾಗಿಲಿಗೆ ಚೆಂಡು ಹೂ ಅಥವಾ ಗುಲಾಬಿಗಳ ಹಾರವನ್ನು ಹಾಕಬಹುದು.



Click it and Unblock the Notifications