Just In
- 8 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 9 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 10 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 10 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- Movies ಮಂಗಳ ಗ್ರಹದಿಂದ ಬಂದಿದ್ದಾರೆ ಎಂಬಷ್ಟು ವಿಚಿತ್ರ ವ್ಯಕ್ತಿ ರಾಹುಲ್ ಗಾಂಧಿ ; ಕಂಗನಾ ರಣಾವತ್..!
- Sports Hardik Pandya: ಹಾರ್ದಿಕ್ ಪಾಂಡ್ಯರಲ್ಲಿನ ನಾಯಕತ್ವದ ಗುಣಗಳು ಕಾಣೆಯಾಗಿವೆಯಾ?
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಟಿ ಅಮಾವಾಸ್ಯೆ : ಜಾತಕದಲ್ಲಿರುವ ಪಿತೃದೋಷದಿಂದ ಮುಕ್ತಿ ಪಡೆಯಲು ಇಲ್ಲಿವೆ ಈ ಪರಿಹಾರ ಕ್ರಮಗಳು
ಪ್ರತಿ ತಿಂಗಳ ಅಮಾವಾಸ್ಯೆ ತಿಥಿ ಪೂರ್ವಜರಿಗೆ ಬಹಳ ಮುಖ್ಯ. ಈ ದಿನ ಪೂರ್ವಜರಿಗಾಗಿ ಕೆಲವು ಪ್ರಮುಖ ಕೆಲಸಗಳನ್ನು ಮಾಡಿದರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದರಿಂದ ಪಿತೃದೋಷ ನಿವಾರಣೆಯಾಗಿ ಆಶೀರ್ವಾದ ಸಿಗುವುದು ಎಂಬ ನಂಬಿಕೆ ಭಾರತೀಯರಲ್ಲಿದೆ. ಈ ಕಾರಣಕ್ಕಾಗಿ, ಅಮಾವಾಸ್ಯೆಯ ದಿನದಂದು ಪೂರ್ವಜರ ಹೆಸರಿನಲ್ಲಿ ದಾನ ಮಾಡುವುದು.
ಇನ್ನೂ ಆಷಾಢ ಅಮಾವಾಸ್ಯೆ ಅಥವಾ ಆಟಿ ಅಮಾವಾಸ್ಯೆ ಆಗಸ್ಟ್ 8ರಂದು ನಡೆಯಲಿದೆ. ಪಿತೃಗಳ ವಿಚಾರಕ್ಕೆ ಬಂದರೆ ಈ ಅಮಾವಾಸ್ಯೆಗೆ ಹೆಚ್ಚಿನ ಪ್ರಾಶಸ್ತ್ಯ ಇದೆ. ಈ ದಿನ ಮಾಡುವ ಕಾರ್ಯಗಳು ಪೂರ್ವಜರ ಆತ್ಮಗಳನ್ನು ತೃಪ್ತಿಪಡಿಸುತ್ತದೆ. ಅದರಲ್ಲಿ ಒಂದು ಗಿಡನೆಡುವುದು. ಜ್ಯೋತಿಷ್ಯದ ಪ್ರಕಾರ, ಅಮಾವಾಸ್ಯೆ ದಿನದಂದು ಒಂದು ಗಿಟ್ಟರೆ ನಿಮಗೆ ಜೀವನದಲ್ಲಿ ಉತ್ತಮವಾಗುವುದು. ಈ ಸಸ್ಯ ಬೆಳೆದ ರೀತಿಯಲ್ಲೇ ಜೀವನದಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ನಿಮ್ಮ ಜಾತಕದಲ್ಲಿ ಪಿತೃದೋಷ ಹೊಂದಿದ್ದರೆ ನೀವು ಖಂಡಿತವಾಗಿಯೂ ಆಟಿ ಅಮಾವಾಸ್ಯೆಯಂದು ಕೆಲ ಸಸ್ಯಗಳನ್ನು ನೆಡಬೇಕು. ಇದು ನಿಮ್ಮ ಪೂರ್ವಜರಿಗೆ ಶಾಂತಿಯನ್ನು ನೀಡುತ್ತದೆ ಜೊತೆಗೆ ಅವರ ಆಶೀರ್ವಾದವು ನಿಮಗೆ ಲಭ್ಯವಾಗುವುದು.
ಪೂರ್ವಜರಿಗೆ ಬಹಳ ಶುಭವೆಂದು ಪರಿಗಣಿಸಲಾದ ಸಸ್ಯಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:
ಆಲದ ಗಿಡ:
ಆಲದ ಮರವನ್ನು ನಮ್ಮ ಪೌರಾಣಿಕ ಗ್ರಂಥಗಳಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಮರಕ್ಕೆ ಮೋಕ್ಷ ಎಂಬ ಹೆಸರಿನಿಂದಲೂ ಕರೆಯಲಾಗುಗುವುದು. ಅಮಾವಾಸ್ಯೆಯ ದಿನದಂದು ಈ ಗಿಡವನ್ನು ನೆಟ್ಟರೆ, ಪೂರ್ವಜರಿಗೆ ಸಾಕಷ್ಟು ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ. ಈ ದಿನ ಶಿವನನ್ನು ಆಲದ ಮರದ ಕೆಳಗೆ ಕುಳಿತು ಪೂಜಿಸಬೇಕು. ಇದು ಕುಟುಂಬದೊಳಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ಅರಳಿ ಮರ:
ಆಲದ ಮರದಂತೆ, ನಮ್ಮ ಪೌರಾಣಿಕ ಗ್ರಂಥಗಳಲ್ಲಿ ಅರಳಿ ಮರವನ್ನು ಸಹ ಬಹಳ ಶುಭವೆಂದು ಪರಿಗಣಿಸಲಾಗಿದೆ. ಅಮಾವಾಸ್ಯೆಯ ದಿನದಂದು ನೀವು ಈ ಮರವನ್ನು ನೆಟ್ಟರೆ, ನಿಮ್ಮ ಪೂರ್ವಜರಿಗೆ ಮೋಕ್ಷ ಸಿಗುತ್ತದೆ. ಅಮಾವಾಸ್ಯೆಯ ದಿನದಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸಿದರೆ, ಅದು ನಿಮಗೆ ತುಂಬಾ ಶುಭವಾಗಿರುತ್ತದೆ. ನಿಮ್ಮ ಜಾತಕದಲ್ಲಿ ಗುರು ಚಾಂಡಾಲ ಯೋಗ ಇದ್ದರೆ, ನೀವು ಅಮಾವಾಸ್ಯೆಯ ದಿನದಂದು ಅರಳಿ ಗಿಡವನ್ನು ನೆಡಬೇಕು.
ತುಳಸಿ ಗಿಡ:
ನಮ್ಮ ಸಂಸ್ಕೃತಿಯಲ್ಲಿ ತುಳಸಿ ಸಸ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಇದರ ಮೂಲಕ ನಾವು ವೈಕುಂಠ ಧಾಮದೊಂದಿಗೆ ಸಂಪರ್ಕ ಸಾಧಿಸಬಹುದು ಎಂಬ ನಂಬಿಕೆಯಿದೆ. ಅಮಾವಾಸ್ಯೆಯ ದಿನದಂದು ನಿಮ್ಮ ಪೂರ್ವಜರ ಹೆಸರಿನಲ್ಲಿ ತುಳಸಿ ಗಿಡವನ್ನು ನೆಟ್ಟರೆ, ಪೂರ್ವಜರಿಗೆ ಮೋಕ್ಷ ಸಿಗುತ್ತದೆ ಮತ್ತು ಅವರು ನೇರವಾಗಿ ವೈಕುಂಠ ಅಥವಾ ಸ್ವರ್ಗಕ್ಕೆ ಹೋಗುತ್ತಾರೆ. ಯಾವ ಮನೆಯಲ್ಲಿ ತುಳಸಿಗಿಡವಿರುವುದೋ ಅವರ ಮನೆ ವಾಸ್ತುದೋಷ ಮುಕ್ತವಾಗಿರುತ್ತದೆ ಎಂಬ ನಂಬಿಕೆಯಿದೆ.
ಬಿಲ್ವಪತ್ರೆ:
ಈ ಮರವು ಶಿವನ ಅತ್ಯಂತ ಪ್ರಿಯವಾದ ಮರವಾಗಿದೆ. ಅಮಾವಾಸ್ಯೆಯ ದಿನದಂದು ಇದನ್ನು ನೆಡುವುದರಿಂದ, ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗುತ್ತದೆ. ಪೂರ್ವಜರ ಹೆಸರಿನಲ್ಲಿ ಗಂಗಾಜಲ ಅರ್ಪಿಸಿ, ನಂತರ ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸಿದರೆ, ಅದು ಪೂರ್ವಜರ ಆತ್ಮಗಳಿಗೆ ಶಾಂತಿಯನ್ನು ನೀಡುತ್ತದೆ.