Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಮಕರ ಸಂಕ್ರಾಂತಿ: ಉಡುಪಿಯಲ್ಲಿ ವೈಭವದ ಮೂರು ತೇರು
ದಕ್ಷಿಣಾಯಣದ ಆರು ತಿಂಗಳ ಅವಧಿಯ ಕೊನೆಯ ದಿನವಾದ ಮಕರ ಸಂಕ್ರಮಣದ ದಿನದಂದು ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಮಠದ ಸಂಪ್ರದಾಯದಂತೆ ಮೂರು ರಥವನ್ನು ಎಳೆಯುವ ಉತ್ಸವ ಅನಾದಿ ಕಾಲದಿಂದಲೂ ನಡೆದು ಕೊಂಡು ಬರುತ್ತಿದೆ.
ಮಾರ್ಗಶಿರ ಮಾಸ ಕೃಷ್ಣಪಕ್ಷದ ದ್ವಾದಶಿಯಿಂದ ಅಂದರೆ ಜನವರಿ 9ರಿಂದ ಆರಂಭವಾಗುವ ಸಪ್ತೋತ್ಸವದ ಆರನೇ ದಿನ ರಾತ್ರಿ ಮಾಧ್ವ ಸಂಪ್ರದಾಯಂದಂತೆ ಬ್ರಹ್ಮರಥೋತ್ಸವ ಸೇರಿ ಮೂರು ರಥವನ್ನು ಅ ್ಟ ಮಠಾಧೀಶರ ಉಪಸ್ಥಿತಿಯಲ್ಲಿ ಎಳೆಯಲಾಗುವುದು.
12ನೇ ಶತಮಾನದಲ್ಲಿ ಆಚಾರ್ಯ ಮಧ್ವರು ಮಕರ ಸಂಕ್ರಾಂತಿಯ ದಿನದಂದು ಕಡಗೋಲು ಕೃಷ್ಣ ವಿಗ್ರಹವನ್ನು ಪ್ರತಿಷ್ಟಾಪಿಸಿದರು.

ಅಂದಿನಿಂದ ಮಧ್ವಾಚಾರ್ಯರ ಆದೇಶದಂತೆ ಮಕರ ಸಂಕ್ರಾಂತಿಯ ಪುಣ್ಯದಿನದಂದು ಮೂರು ರಥ ಮತ್ತು ಮರುದಿನ ಹಗಲು ಬ್ರಹ್ಮ ರಥವನ್ನು ಎಳೆಯುವುದು ಮಠದ ಪದ್ಧತಿ. ಹಗಲು ಉತ್ಸವ ಈ ಭಾಗದಲ್ಲಿ 'ಚೂರ್ಣೋತ್ಸವ' ಎಂದೇ ಪ್ರಸಿದ್ದ.
ಮೂರು ರಥ ಎಳೆಯುವ ದಿನದಂದು ಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ ದೇವ ಉತ್ಸವ ಮೂರ್ತಿಯನ್ನು ಮಧ್ವ ಸರೋವರದಲ್ಲಿ ನಡೆಯುವ ತೆಪ್ಪೋತ್ಸವದ ನಂತರ ಕೃಷ್ಣ ಮಠದ ದ್ವಾರದಲ್ಲಿ ಕ್ರಮವಾಗಿ ಬ್ರಹ್ಮರಥ, ಗರುಡ ರಥ ಮತ್ತು ಮಹಾಪೂಜೆ ರಥ (ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ) ಎಂದು ಕರೆಯಲ್ಪಡುವ ರಥದಲ್ಲಿ ಇಟ್ಟು ರಥಬೀದಿ ಸುತ್ತ ಒಂದು ಸುತ್ತು ಎಳೆಯಲಾಗುವುದು.
ರಥ ಸಾಗುವ ಮುಂದೆ ಮಠಾಧೀಷರು ನಡೆದುಕೊಂಡು ಬರುವುದು ಮಠದ ಇನ್ನೊಂದು ಸಂಪ್ರದಾಯ. ಇತ್ತೀಚಿನ ದಿನಗಳಲ್ಲಿ ಮೂರು ರಥದ ಜೊತೆ ಇನ್ನೆರಡು ರಥಗಳನ್ನೂ ಎಳೆಯಲಾಗುತ್ತದೆ.
ಇದಾದ ಮರುದಿನ ಹಗಲು ಉತ್ಸವ ನಡೆಯುತ್ತದೆ. ಅಂದು ಕೃಷ್ಣ ಮತ್ತು ಮುಖ್ಯಪ್ರಾಣನ ಉತ್ಸವ ಮೂರ್ತಿಯನ್ನು ರಥದಲ್ಲಿ ಇಟ್ಟ ನಂತರ ಗರುಡ ರಥವನ್ನು ಮೂರು ಸುತ್ತು ಸುತ್ತುತ್ತಾನೆ. ಅದಾದ ನಂತರವೇ ರಥ ಎಳೆಯಲು ಚಾಲನೆ ನೀಡಲಾಗುತ್ತದೆ.
ವೈಭವದ ಉತ್ಸವದ ನಂತರ ಪರ್ಯಾಯ ಸ್ವಾಮಿಗಳು ಭಕ್ತಾದಿಗಳಿಗೆ ಮಂತ್ರಾಕ್ಷತೆಯನ್ನು ನೀಡುತ್ತಾರೆ. ಇದಾದ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ಲಕ್ಷಾಂತರ ಮಂದಿ ಭಕ್ತಾದಿಗಳು ಒಟ್ಟು ಏಳು ದಿನ ನಡೆಯುವ ಉತ್ಸವಕ್ಕೆ ವರ್ಷ ವರ್ಷ ಸಾಕ್ಷಿಯಾಗುತ್ತಾರೆ



Click it and Unblock the Notifications