Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಬೆಂಗಳೂರು ಬಸವನಗುಡಿಯಲ್ಲಿ ಸ್ಪೆಷಲ್ ಸಂಕ್ರಾಂತಿ

ಸಾಮಾನ್ಯಕ್ಕೆ, ಬಸವನಗುಡಿ ಅಂತ ಯಾಕೆ ಹೆಸರು ಇಡ್ತಾರಪ್ಪಾ ಅಂದರೆ ಅದಕ್ಕೂ ಮುನ್ನ... ಹುಟ್ಟಿಸಿದ ದೇವರು ಹುಲ್ಲು ಮೇಯಿಸೋಲ್ವಾ ಎಂದು ಬದುಕು ಕಟ್ಟಿಕೊಳ್ಳಲು 20 ವರ್ಷಗಳ ಹಿಂದೆ ಬೆಂಗಳೂರಿನ ಬಸವನಗುಡಿಗೆ ಬಂದೆ. ಆಗ ಬಸವನಗುಡಿ ಬಡಾವಣೆಗೆ ಪ್ರದಕ್ಷಿಣೆ ಹಾಕಿದಾಗ ದಾರಿಯುದ್ದಕ್ಕೂ 'ಬಸವನಗುಡಿಗೆ ಯಾಕೆ ಈ ಹೆಸರು ಬಂತು' ಎಂಬ ಪ್ರಶ್ನೆ ನನಗೆ ಸಾಥ್ ನೀಡಿತ್ತು.
ಆಮೇಲೆ ಅನಿಸಿದ್ದು, ಬೆಂಗಳೂರಿನ ಈ ಬಡಾವಣೆಗೆ ಬಸವನಗುಡಿ ಎಷ್ಟು ಅರ್ಥಪೂರ್ಣವಾಗಿದೆ ಎಂದು! ಏಕೆಂದರೆ ಎಲ್ಲೆಂದರಲ್ಲಿ, ಹೌದು ನಡುರಸ್ತೆಗಳಲ್ಲೂ ನಡುಚಾಚಿ ಮಲಗಿರುವ ಗೋವುಗಳನ್ನು ಕಂಡಾಗ ನಿಜಕ್ಕೂ ನನ್ನ ಹಳ್ಳಿ ವಾತಾವರಣ ನೆನಪಿಗೆ ಬಂದಿತ್ತು.
ಆಮೇಲಾಮೇಲೆ ಕಾಲ ಬದಲಾಗುತ್ತಾ ಬಂತು. ಅದೇನೋ Y2K ಅಂತ ಬಂದಮೇಲಿನ ಕಾಲಘಟ್ಟದಲ್ಲಿ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಪರಿವರ್ತನೆಯಾಗಿದ್ದೇ ಬಂತು, ಅದುವರೆಗೂ ಬಸವನಗುಡಿಯ ಕಾಲಬುಡಲದಲ್ಲಿ ಮಲಗಿದ್ದ ಜಾನುವಾರು ಸಂತತಿಗೆ ಸಾಫ್ಟ್ ವೇರುಗಳ ಬೈಕು, ಕಾರು ಬಾರಿನ ಆರ್ಭಟದಲ್ಲಿ ಗರಬಡಿದಂತಾಯಿತು.
ಬಸವನಗುಡಿ ಆಸುಪಾಸು ಹೊಲಗದ್ದೆಗಳು ಇದ್ದವಂತೆ. ಇಲ್ಲಿ ಗೌಳಿಗರು ಹೆಚ್ಚಾಗಿ ನೆಲೆಸಿದ್ದರಂತೆ. ಇಲ್ಲಿದ್ದ ಜನಸಂಖ್ಯೆಯಷ್ಟೇ ಹಸು-ಕರು ಎತ್ತುಗಳು ಇದ್ದವಂತೆ. ಇಲ್ಲಿ ಸಂಕ್ರಾಂತಿ ಊರಹಬ್ಬವಾಗಿ ನಡೆಯುತ್ತಿತ್ತು. ಕಡಲೆಕಾಯಿ ಪರಿಶೆಗಿಂತ ಜೋರಾಗಿ ಜನ ಸೇರುತ್ತಿದ್ದರಂತೆ ಎಂಬುದೆಲ್ಲ ಕಾಲಗರ್ಭದಲ್ಲಿ ಅಡಗಿಹೋಗಿದೆ.
ಆದರೂ ದೊಡ್ಡಗಣಪತಿ ದೇವಸ್ಥಾನದ ಬಂಡೆಬಸವ ಇದಕ್ಕೆ ಮೂಕ ಸಾಕ್ಷಿಯಾಗಿ ತಳವೂರಿರುವುದರಿಂದ ಬಸವನಗುಡಿಯಲ್ಲಿ ಸಂಕ್ರಾಂತಿ ಸಂಭ್ರಮವನ್ನು ಇನ್ನೂ ಕಾಣಬಹುದಾಗಿದೆ. ಮನೆಸಂಪ್ರದಾಯ, ಊರಸಂಪ್ರದಾಯ ಎಂದು ಇಲ್ಲಿನ ಗೋಪಾಲಕರು ಈಗಲೂ ತಮ್ಮ ಜಾನುವಾರುಗಳನ್ನು ಸಿಂಗರಿಸಿ, ಸಂಭ್ರಮಿಸುವುದುಂಟು.
ಸಿಂಗರಿಸಿದ ಎತ್ತುಗಳನ್ನು ಒಂದಷ್ಟು ಮೆರವಣಿಗೆ ಮಾಡಿಸಿ, ಮೈದಾನದಲ್ಲಿ ಹಾಕಿರುವ ಕಿಚ್ಚಿನ ಮೇಲೆ ಅವುಗಳನ್ನು ಹಾಯಿಸುವುದೂ ಉಂಟು. ನಶಿಸುತ್ತಿರುವ ಈ ಸಂಪ್ರದಾಯಕ್ಕೆ ಸಾಕ್ಷಿಯಾಗಲು ಈ ಬಾರಿಯಾದರೂ ಬಸವನಗುಡಿ ನೆಟ್ಟಕಲ್ಲಪ್ಪ ಸರ್ಕಲಿಗೆ ಜನವರಿ 14ರಂದು ಬರುತ್ತೀರಲ್ವೇ?



Click it and Unblock the Notifications