Just In
- 54 min ago ಜೈಲಿನಲ್ಲಿ ಪ್ರಿಂಟಿಂಗ್ ತರಬೇತಿ ಪಡೆದ..! ಹೊರಬಂದು ನಕಲಿ ನೋಟು ಮುದ್ರಿಸಿದ ವ್ಯಕ್ತಿ..!
- 1 hr ago ಮೆನ್ಸ್ಟ್ರಲ್ ಕಪ್ ಬಳಸಿ ಈಜಾಡಬಹುದೇ, ಸುರಕ್ಷಿತವೇ? ಲೀಕ್ ಆಗುವುದಿಲ್ಲವೇ?
- 5 hrs ago ದೇಶದ 7 ಪ್ರಬಲ ರಾಜಕೀಯ ಕುಟುಂಬಗಳಿವು..! ಎಲ್ಲಾ ಸರ್ಕಾರದಲ್ಲೂ ಇವರದ್ದೇ ಮೇಲುಗೈ..!
- 14 hrs ago ದಿನ ಭವಿಷ್ಯ ಮಾರ್ಚ್ 26: ಮಂಗಳವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- Technology honor: ಹಾನರ್ನಿಂದ ಬರಲಿದೆ ಮ್ಯಾಜಿಕ್ ಫ್ಲಿಪ್ ಫೋನ್! ಯಾವಾಗ ಲಾಂಚ್?
- News ಮೋದಿ ಎಂದು ಕೂಗುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದ ಸಚಿವರಿಗೆ ತಿರುಗೇಟು ಕೊಟ್ಟ ಮಾಜಿ ಸಿಎಂ
- Automobiles ಜನಪ್ರಿಯ ಜಾವಾ ಬೈಕ್ ಖರೀದಿಸಿದ ಲೆಜೆಂಡ್ ಸಿಂಗರ್ ಕೈಲಾಶ್ ಖೇರ್: ಸ್ಪೆಷಲ್ ಪೂಜೆ
- Finance ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೇ ವಿಲೀನ ಮಾಡಿ: ಪ್ರಯಾಣಿಕರ ಸಲಹೆ
- Sports Virat Kohli: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ಕೆಲವೇ ಕ್ಷಣದಲ್ಲಿ ವಿರಾಟ್ ಕೊಹ್ಲಿ ವಿಡಿಯೋ ಕಾಲ್ನಲ್ಲಿ ಬ್ಯುಸಿ!
- Movies ಇಂಗ್ಲಿಷ್ ಶೈಲಿಯಲ್ಲಿ ಕನ್ನಡ ಹಾಡು ಹಾಡಿದ್ದ ಸರಿಗಮಪ ಸೀಸನ್ 20ರ ವಿಶೇಷ ಸ್ಪರ್ಧಿ; ಯುಎಸ್ನಲ್ಲಿ ಭರ್ಜರಿ ಸ್ವಾಗತ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯುಗಾದಿ 2021 : ಹೊಸವರ್ಷದ ದಿನಾಂಕ, ಇತಿಹಾಸ ಹಾಗೂ ಮಹತ್ವ
ಯುಗ ಯುಗಾದಿ ಕಳೆದರೂ, ಯಗಾದಿ ಮರಳಿ ಬರುತ್ತಿದೆ, ಹೊಸ ವರುಷಕೆ ಹೊಸ ಹರುಷಕೆ ಹೊಸತು ಹೊಸತು ತರುತಿದೆ. ಹೌದು, ಇನ್ನೇನು ಕೆಲವೇ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಹೊಸ ವರ್ಷ ಎಂದು ಆಚರಣೆ ಮಾಡುವ ಯುಗಾದಿ ಹಬ್ಬ ಬರಲಿದೆ. ಚೈತ್ರ ಮಾಸದ ಮೊದಲ ದಿನದಂದು ಸಾಮಾನ್ಯವಾಗಿ ಆಚರಣೆ ಮಾಡುವ ಈ ಯುಗಾದಿಯನ್ನು ಕೇರಳದಲ್ಲಿ ವಿಶು, ಮಹಾರಾಷ್ಟ್ರದಲ್ಲಿ ಗುಡಿ ಪದ್ವ ಎಂದು ಕರೆಯಲಾಗುತ್ತದೆ. ನಾವೆಲ್ಲರೂ ಸಂಭ್ರಮದಿಂದ ಆಚರಣೆ ಮಾಡುವ ಈ ಹಬ್ಬ ಈ ವರ್ಷ ಯಾವ ದಿನ ಬಂದಿದೆ? ಈ ಹಬ್ಬದ ಹಿಂದಿರುವ ಮಹತ್ವವೇನು? ಆಚರಣೆಯ ಹಿಂದಿರುವ ಇತಿಹಾಸೇನು ಎಂಬುದನ್ನು ನಾವಿಂದು ಹೇಳಲಿದ್ದೇವೆ.
2021ರ ಯುಗಾದಿ ದಿನಾಂಕ, ಮಹತ್ವ ಹಾಗೂ ಇತಿಹಾಸವನ್ನು ಈ ಕೆಳಗೆ ಹೇಳಿದ್ದೇವೆ;
ಯುಗಾದಿ 2021 ದಿನಾಂಕ ಮತ್ತು ಸಮಯ:
ಈ ವರ್ಷದ ಯುಗಾದಿ ಹಬ್ಬವನ್ನು ಮಂಗಳವಾರ, ಏಪ್ರಿಲ್ 13, 2021ರಂದು ಆಚರಣೆ ಮಾಡಲಾಗುತ್ತದೆ.
ಪ್ರತಿಪದ ತಿಥಿ ಪ್ರಾರಂಭ - 2021 ಎಪ್ರಿಲ್ 12 ರಂದು ಬೆಳಿಗ್ಗೆ 08:00
ಪ್ರತಿಪದ ತಿಥಿ ಅಂತ್ಯ - 2021 ಏಪ್ರಿಲ್ 13 ರಂದು ಬೆಳಿಗ್ಗೆ 10:16
ಯುಗಾದಿ ಹಬ್ಬದ ಇತಿಹಾಸ :
ಯುಗಾದಿಯ ಆಧ್ಯಾತ್ಮಿಕ ಮಹತ್ವ: ಹಿಂದೂ ನಂಬಿಕೆಯ ಪ್ರಕಾರ, ಬ್ರಹ್ಮ ಈ ಶುಭ ದಿನದಂದು ಭೂಮಿಯನ್ನು ಸೃಷ್ಟಿಸಲು ಪ್ರಾರಂಭಿಸಿದನು. "ಯುಗ " ಎಂದರೆ ವಯಸ್ಸು ಅಥವಾ ಸಮಯ ಮತ್ತು "ಆದಿ" ಎಂದರೆ ಪ್ರಾರಂಭ. ಬ್ರಹ್ಮನು ಈ ದಿನದಂದು ಇಡೀ ಜಗತ್ತನ್ನು ನಿರ್ಮಿಸಲು ಪ್ರಾರಂಭಿಸಿದನು ಮತ್ತು ವರ್ಷಗಳು, ತಿಂಗಳುಗಳು, ದಿನಗಳು ಮತ್ತು ಇನ್ನೂ ಅನೇಕವನ್ನು ರೂಪಿಸಿದನು ಮತ್ತು ಈ ಭೂಮಿಯಲ್ಲಿ ವಾಸಿಸಲು ಜನ್ಮ ನೀಡಿದನು ಎಂದು ನಂಬಲಾಗಿದೆ. ಮಹಾ ವಿಷ್ಣುವಿನ ಹಲವಾರು ಹೆಸರುಗಳಲ್ಲಿ ಯುಗಾದಿ ಕೂಡ ಒಂದು. ಭಗವಾನ್ ವಿಷ್ಣುವನ್ನು ಯುಗಗ್ರೀಕ ಎಂದು ಹೇಳಲಾಗುತ್ತದೆ. ಅಂದರೆ ಯುಗದ ಸೃಷ್ಟಿಕರ್ತ. ಆದ್ದರಿಂದ ಭೂಮಿಯ ಸೃಷ್ಟಿಕರ್ತನಾದ ಬ್ರಹ್ಮನನ್ನು ಪೂಜಿಸಲು ಈ ದಿನ ಅತ್ಯಂತ ಶುಭ ದಿನವಾಗಿದೆ.
ಯುಗಾದಿಯ ಐತಿಹಾಸಿಕ ಮಹತ್ವ:
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಕ್ರಿ.ಪೂ 18.02.3102 ಕ್ಕೆ ಅನುಗುಣವಾದ ಚೈತ್ರದ ಪ್ರಕಾಶಮಾನವಾದ ಹದಿನೈದನೆಯ ಮುಂಜಾನೆ ಶ್ರೀ ಕೃಷ್ಣನ ನಿರ್ಯಾಣವನ್ನು ಪ್ರಾರಂಭಿಸದನು ಎಂದು ಪರಿಗಣಿಸಲಾಗಿದೆ. ಈ ದಿನವು ಕಲಿಯುಗದ ಆರಂಭವನ್ನು ಸೂಚಿಸುತ್ತದೆ. ಆದ್ದರಿಂದ ಯುಗಾದಿಯನ್ನು ಕಲಿಯುಗದ ಆರಂಭ ಎಂದು ನಂಬಲಾಗಿದೆ.
ಯಗಾದಿಯ ಮಹತ್ವ:
ಉತ್ತರ ಗೋಳಾರ್ಧವು 21 ದಿನಗಳವರೆಗೆ ಗರಿಷ್ಠ ಸೂರ್ಯನ ಕಿರಣಗಳನ್ನು ಪಡೆಯುವ ರೀತಿಯಲ್ಲಿ ಭೂಮಿಯು ಈ ದಿನದಂದು ಚಲಿಸುತ್ತದೆ. ಭೂಮಿಯ ಮೇಲಿನ ವಸಂತಋತುವಿನ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಈ ಋತುವನ್ನು ಹಸಿರು ಮತ್ತು ಎಲೆಗಳು ಮತ್ತು ತಾಜಾ ಗಾಳಿಯ ಋತುಮಾನ ಎಂದೂ ಕರೆಯಲಾಗುತ್ತದೆ, ಈ ಸಮಯದಲ್ಲಿ ಹೊಸ ಎಲೆಗಳು ಮತ್ತು ಹೂವುಗಳು ಅರಳುತ್ತವೆ ಮತ್ತು ಹಣ್ಣುಗಳು ಮೊಗ್ಗುಗಳನ್ನು ಬಿಡಲು ಪ್ರಾರಂಭಿಸುತ್ತವೆ. ಈ 21 ದಿನಗಳ ಪರಿವರ್ತನೆಯು ಭೂಮಿಗೆ ಚೈತನ್ಯ ನೀಡುತ್ತದೆ ಮತ್ತು ಮುಂಬರುವ ವರ್ಷಕ್ಕೆ ಅದನ್ನು ಮತ್ತೆ ಸಿದ್ಧಪಡಿಸುತ್ತದೆ.