Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ನೆನಪಿಡಿ ಇಂತಹ ಪೂಜಾ ಸಾಮಗ್ರಿಗಳನ್ನು ಅಪ್ಪಿತಪ್ಪಿಯೂ ನೆಲದ ಮೇಲೆ ಇಡಬೇಡಿ!
ಹಿಂದೂ ಧರ್ಮದಲ್ಲಿ ಪೂಜೆ ಎನ್ನುವುದು ಅತೀ ಪ್ರಾಮುಖ್ಯವಾದ ಅಂಶವಾಗಿದೆ. ತುಂಬಾ ಶ್ರದ್ಧಾಭಕ್ತಿಯಿಂದ ನಾವು ಪೂಜೆ ಮಾಡುತ್ತೇವೆ. ಇದರಿಂದ ನಾವು ದೇವರ ಆಶೀರ್ವಾದ ಪಡೆಯಲು ಸಾಧ್ಯ. ಹೀಗಾಗಿ ಪ್ರತಿಯೊಂದು ಪೂಜೆ ವೇಳೆ ತುಂಬಾ ಶುದ್ಧವಾಗಿದ್ದು, ಎಲ್ಲಾ ರೀತಿಯಿಂದಲೂ ಸರಿಯಾದ ಕ್ರಮದಲ್ಲಿ ಪೂಜೆ ನೆರವೇರುವಂತೆ ನಾವು ಮಾಡುತ್ತೇವೆ. ಆದರೆ ನಮಗೆ ತಿಳಿದೋ ಅಥವಾ ತಿಳಿಯದೆಯೋ ಕೆಲವೊಂದು ತಪ್ಪುಗಳು ನಡೆಯುತ್ತದೆ. ಇದನ್ನು ನಾವು ಕಡೆಗಣಿಸಬೇಕು.

ಕೆಲವು ತಪ್ಪುಗಳು ತುಂಬಾ ಸಣ್ಣ ಮಟ್ಟದ್ದಾಗಿರುವುದು. ಇನ್ನು ಕೆಲವು ತಪ್ಪುಗಳನ್ನು ನಾವು ಖಂಡಿತವಾಗಿಯೂ ಕಡೆಗಣಿಸಲೇಬೇಕು. ಕೆಲವೊಂದು ಪೂಜಾ ಸಾಮಗ್ರಿಗಳನ್ನು ನಾವು ನೆಲದ ಮೇಲಿಟ್ಟುಕೊಂಡು ಪೂಜೆ ಮಾಡುವುದು ಸರಿಯಾದ ಕ್ರಮವಲ್ಲ. ಇದು ನಾವು ಮಾಡುವಂತ ತಪ್ಪು. ಪೂಜೆ ಮಾಡುವ ವೇಳೆ ನೆಲದ ಮೇಲೆ ಇಡಬಾರದ ಕೆಲವು ಪೂಜಾ ಸಾಮಗ್ರಿಗಳು ಯಾವುದು ಎಂದು ಈ ಲೇಖನ ಮೂಲಕ ತಿಳಿದುಕೊಳ್ಳುವ...

ಸಾಲಿಗ್ರಾಮ
ಸಾಲಿಗ್ರಾಮ ಕಲ್ಲನ್ನು ವಿಷ್ಣುವಿನ ಪ್ರತಿರೂಪವೆಂದು ಪರಿಗಣಿಸಲಾಗಿದೆ ಮತ್ತು ಇದನ್ನು ಹಲವಾರು ಮನೆಗಳಲ್ಲಿ ನಾವು ಕಾಣುತ್ತೇವೆ. ಕಪ್ಪು ಬಣ್ಣದ ಈ ಕಲ್ಲು ನೇಪಾಳದಲ್ಲಿ ಹರಿಯುವ ನದಿ ಗಂದಕಿಯ ತೀರದಲ್ಲಿ ಸಿಗುವುದು. ಇದನ್ನು ನೆಲದ ಮೇಲೆ ಇಡಬಾರದು ಎಂದು ಹೇಳಲಾಗುತ್ತದೆ. ಇದನ್ನು ಶುದ್ಧವಾಗಿರುವ ಬಟ್ಟೆ ಮೇಲೆ ಇಡಬೇಕು. ಶಿವನ ಪ್ರತಿರೂಪವಾಗಿರುವಂತಹ ಶಿವಲಿಂಗವನ್ನು ಕೂಡ ಹೀಗೆ ಮಾಡಬೇಕು.

ಉಪನಯನ(ಜನಿವಾರ)
ಉಪನಯನವು ಜನಿವಾರಕ್ಕೆ ಮತ್ತೊಂದು ಹೆಸರಾಗಿದೆ. ಹಿಂದೂ ಧರ್ಮದಲ್ಲಿ ಬ್ರಾಹ್ಮಣರ ಸಹಿತ ಕೆಲವೊಂದು ಪಂಗಡದವರು ಈ ಪವಿತ್ರ ದಾರವನ್ನು ತೊಡುವರು. ಹುಡುಗರು ಒಂದು ವಯಸ್ಸಿಗೆ ಬಂದ ಬಳಿಕ ಕೆಲವೊಂದು ವಿಧಿವಿಧಾನ ಮೂಲಕವಾಗಿ ಅವರಿಗೆ ಈ ಜನಿವಾರ ತೊಡಿಸಲಾಗುತ್ತದೆ. ಇದನ್ನು ಯಾವತ್ತೂ ನೆಲದ ಮೇಲೆ ಇಡಬಾರದು.

ಶಂಖ
ಹೆಚ್ಚಿನ ಹಿಂದೂಗಳ ಮನೆಯಲ್ಲಿ ಶಂಖವು ಕಾಣಸಿಗುವುದು. ಮುರಿದಿರುವ ಶಂಖವನ್ನು ಮನೆಯಲ್ಲಿ ಇಡಬಾರದು ಎಂದು ಹೇಳಲಾಗುತ್ತದೆ. ಅದೇ ರೀತಿ ಈ ಶಂಖವನ್ನು ನೆಲದ ಮೇಲೆ ಕೂಡ ಇಡಬಾರದು.

ದೀಪ
ಪೂಜೆ ಮಾಡುವಾಗ ಹೆಚ್ಚಿನವರು ಈ ತಪ್ಪನ್ನು ಮಾಡುವರು. ಯಾಕೆಂದರೆ ದೀಪವನ್ನು ಇಡುವಾಗ ನೇರವಾಗಿ ನೆಲದ ಮೇಲೆ ಇಡಬಾರದು. ಅದರಡಿಗೆ ಏನಾದರೂ ಪ್ಲೇಟ್ ಅಥವಾ ಟ್ರೇ ಇಡಬೇಕು. ಇದರ ಬಳಿಕ ದೇವರಿಗೆ ದೀಪ ಹಚ್ಚಬೇಕು. ಇದನ್ನು ನೆಲದ ಮೇಲೆ ಇಡಬಾರದು.

ಬಂಗಾರ
ದೇವರಿಗೆ ಪೂಜೆ ಮಾಡುವಂತಹ ವೇಳೆ ಕೆಲವು ಜನರು ಪೂಜೆಯ ಅರಿವಾಣದಲ್ಲಿ ಬಂಗಾರದ ಆಭರಣವನ್ನು ಇಡುವರು. ಬಂಗಾರವು ಸಮೃದ್ಧಿಯ ಸಂಕೇತವಾಗಿದೆ ಮತ್ತು ಇದನ್ನು ಲಕ್ಷ್ಮೀ ದೇವಿ ಎಂದು ನಂಬಲಾಗಿದೆ. ಇದರಿಂದ ಬಂಗಾರವನ್ನು ಯಾವಾಗಲೂ ಕೆಂಪು ಬಟ್ಟೆಯಲ್ಲಿ ಕಟ್ಟಿಡಬೇಕು. ಇದನ್ನು ನೆಲದ ಮೇಲೆ ಇಡಬಾರದು.



Click it and Unblock the Notifications