Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ನವರಾತ್ರಿಯಂದು ದುರ್ಗಾ ಸಪ್ತಶತಿಯನ್ನು ಪಠಿಸುವುದು ಅತಿ ಮುಖ್ಯ ಏಕೆ?
ದುರ್ಗಾಮಾತೆಯು ಅವತಾರವನ್ನು ತಾಳಿರುವುದು ದುಷ್ಟ ಮಹಿಷಾಸುರನನ್ನು ಮಧಿಸುವುದಕ್ಕಾಗಿದೆ. ವಿಶಿಷ್ಟ ವರವೊಂದನ್ನು ಬೇಡಿಕೊಂಡಿದ್ದ ಮಹಿಷಾಸುರನನ್ನು ವಧಿಸುವುದಕ್ಕೆ ಎಲ್ಲಾ ದೇವತೆಗಳು ತಮ್ಮ ಶಕ್ತಿಯನ್ನು ಧಾರೆ ಎರೆದು ಪ್ರಬಲ ಶಕ್ತಿಯೊಂದನ್ನು ರೂಪಿಸುತ್ತಾರೆ. ಅವರೇ ದುರ್ಗಾಮಾತೆಯಾಗಿದ್ದಾರೆ.
ಇನ್ನೇನು ಈ ವರ್ಷ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 7ರವರೆಗೆ ನವರಾತ್ರಿ ಹಬ್ಬ ಆರಂಭವಾಗುತ್ತಿದೆ. ಈ ವೇಳೆ ಸಕಲ ದುಷ್ಟಶಕ್ತಿಗಳಿಂದ ಕಾಪಾಡುವ ದೇವಿಯನ್ನು ನೆನೆಯುವುದು ಇಂದು ಪ್ರತಿಯೊಂದು ಮನೆಗಳಲ್ಲಿ ಸಂಪ್ರದಾಯವಾಗಿದೆ. ಹೆಚ್ಚಿನ ಬಲಿಷ್ಠ ಶಕ್ತಿಗಳನ್ನು ಹೊಂದಿರುವ ದುರ್ಗಾಮಾತೆಯು ಜಗನ್ಮಾತೆ ಎಂದೆನಿಸಿಕೊಂಡಿದ್ದಾರೆ. ಯಾವುದೇ ಕಾರ್ಯದಲ್ಲಿ ಯಶಸ್ಸು ನಮ್ಮದಾಗಬೇಕು ಎಂದಾದಲ್ಲಿ ದುರ್ಗೆಯನ್ನು ಮನಸ್ಸಿನಲ್ಲಿ ಪ್ರಾರ್ಥಿಸಿದರೆ ಸಾಕು ಆ ಕೆಲಸದಲ್ಲಿ ನಾವು ಯಶಸ್ಸನ್ನು ಪಡೆದುಕೊಳ್ಳುತ್ತೇವೆ.

ರಾವಣನನ್ನು ಸೋಲಿಸಲು ರಾಮನ ಕೂಡ ಯುದ್ಧಕ್ಕೆ ಮೊದಲು ದುರ್ಗೆಯನ್ನು ಪ್ರಾರ್ಥಿಸಿಕೊಂಡಿದ್ದರು ಎಂಬುದಾಗಿ ಪುರಾಣಗಳು ಹೇಳುತ್ತಿವೆ. ಹೀಗೆ ದುರ್ಗೆಯನ್ನು ನೆನೆದವರನ್ನು ಆಕೆ ಸದಾಕಾಲವೂ ಕಾಪಾಡುತ್ತಾರೆ. ಇಂದಿನ ಲೇಖನದಲ್ಲಿ ಆಕೆಯ ಶಕ್ತಿ ಸ್ವರೂಪವಾದ ಚಂಡಿ ಪಥದ ಬಗ್ಗೆ ಅರಿತುಕೊಳ್ಳೋಣ. ಚಂಡಿ ಎಂಬುದು ಸಂಸ್ಕೃತದಲ್ಲಿ ಭಯವನ್ನು ಹೋಗಲಾಡಿಸುವುದು ಎಂಬುದಾಗಿ ಅರ್ಥವನ್ನು ನೀಡುತ್ತದೆ. ಅಂದರೆ ಭಯವನ್ನು ನಿವಾರಿಸುವ ರಕ್ಷಾ ಕವಚವಾಗಿ ಈ ಚಂಡಿ ಪಥ ಕಾರ್ಯನಿರ್ವಹಿಸುತ್ತದೆ.
ಇದನ್ನು ದುರ್ಗಾ ಸಪ್ತಶತಿ ಎಂಬುದಾಗಿ ಕೂಡ ಕರೆಯುತ್ತಾರೆ. ಮಾರ್ಕಂಡೇಯ ಪುರಾಣದ 13 ನೇ ಅಧ್ಯಾಯನದಲ್ಲಿ ಇದರ ಬಗ್ಗೆ ತಿಳಿಸಲಾಗಿದೆ. ದೇವರು ಮತ್ತು ದುಷ್ಟ ಶಕ್ತಿಯ ನಡುವಿನ ಕಥೆಯನ್ನು ಇದು ಹೇಳುತ್ತದೆ. ಮಹಿಷಾಸುರನನ್ನು ದುರ್ಗಾಮಾತೆಯು ಹೇಗೆ ವಧಿಸಿದರು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇದೇ ಮಾತೆಯು ಲಕ್ಷ್ಮೀ ಸ್ವರೂಪದಲ್ಲಿ ಅವತಾರವನ್ನು ತಳೆದು ತನ್ನ ಭಕ್ತರಿಗೆ ಧನ ಕನಕ ಸಂಪತ್ತುಗಳನ್ನು ಹಂಚಿ ಮಗುವಿನಂತೆ ನೋಡಿಕೊಳ್ಳುತ್ತಾರೆ.
ಆದರೆ ಅದುವೇ ಕೆಟ್ಟದ್ದು ನಡೆದ ಸಂದರ್ಭದಲ್ಲಿ ದುರ್ಗೆಯ ಅವತಾರವನ್ನು ತಾಳಿ ದಮನ ಮಾಡುತ್ತಾರೆ. ಇದು 700 ಮಂತ್ರಗಳನ್ನು ಹೊಂದಿದ್ದು ಏಕಾಗ್ರತೆಯಿಂದ ತಪ್ಪಿಲ್ಲದೆ ಇದರ ಉಚ್ಛಾರಣೆಯನ್ನು ಮಾಡಬೇಕು. ಹೀಗೆ ಮಾಡುವುದರಿಂದ ಇದನ್ನು ಓದುವವರಿಗೆ ಮಾತೆಯ ಅನುಗ್ರಹ ದೊರೆಯುತ್ತದೆ. ಚೈತ್ರ ಅಥವಾ ಶರದ್ ಋತುವಿನಲ್ಲಿ ಈ ಮಂತ್ರವನ್ನು ಪಠಿಸಬೇಕು. ಹೋಮಗಳನ್ನು ಮಾಡುವಾಗ ಈ ಮಂತ್ರಗಳನ್ನು ಪಠಿಸುತ್ತಿದ್ದರು.
ಚಂಡಿ ಪಥದಲ್ಲಿರುವುದರ ಪ್ರಯೋಜನಗಳು
ಈ ಮಂತ್ರವನ್ನು ಪಠಿಸುವುದು ಓದುಗರಿಗೆ ಧನಾತ್ಮಕವಾಗಿ ಪರಿಣಾಮವನ್ನು ಉಂಟುಮಾಡಲಿದ್ದು ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಇದು ವ್ಯಕ್ತಿಗೆ ಧೈರ್ಯವನ್ನು ನೀಡುತ್ತದೆ ಮತ್ತು ಅವರಲ್ಲಿದ್ದ ಭಯವನ್ನು ದೂರಮಾಡುತ್ತದೆ. ಇದು ದೈಹಿಕವಾಗಿ ಕೂಡ ನಮ್ಮನ್ನು ಸ್ವಾಸ್ಥ್ಯರನ್ನಾಗಿಸಲು ಸಹಕಾರಿಯಾಗಿದೆ. ಇದನ್ನು ಸರಿಯಾದ ಉಚ್ಛಾರಣೆಯಲ್ಲಿ ಆರೋಹಣ ಮತ್ತು ಅವರೋಹಣದಲ್ಲಿ ಪಠಿಸುವುದರಿಂದ ಓದುವವರಲ್ಲಿ ಧನಾತ್ಮಕ ಶಕ್ತಿ ಉಂಟಾಗುತ್ತದೆ.



Click it and Unblock the Notifications













