Latest Updates
-
ಇನ್ಮುಂದೆ ಸ್ನ್ಯಾಕ್ಸ್ ಪ್ಯಾಕೆಟ್ ಮೇಲೆ ಎಚ್ಚರಿಕೆ! FSSAI ತರುತ್ತಿದೆ ಹೊಸ ನಿಯಮ, ಗ್ರಾಹಕರಿಗೆ ಲಾಭವೇನು? -
ಮುಂಬೈನಲ್ಲಿ ವರುಣನ ಅಬ್ಬರ: IMDಯಿಂದ ಆರೆಂಜ್ ಅಲರ್ಟ್ ಘೋಷಣೆ, ಕನ್ನಡಿಗರು ಎಚ್ಚರ! -
ವಿಶ್ವ ಮೆದುಳು ದಿನ: ದಿನವಿಡೀ ಚುರುಕಾಗಿರಲು ಬೆಳಿಗ್ಗೆ ಈ 10 ನಿಮಿಷದ 'ನ್ಯೂರೋ-ವಾರ್ಮಪ್' ಮಾಡಿ! -
ದೆಹಲಿ ಮೆಟ್ರೋ ಸಂಚಾರ ವ್ಯತ್ಯಯ: ಸಂಗಾತಿಯೊಂದಿಗೆ ಟೆನ್ಷನ್ ಇಲ್ಲದೆ ಪ್ರಯಾಣಿಸುವುದು ಹೇಗೆ? -
ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್: ಭಾರಿ ಮಳೆ ಮತ್ತು ಭೂಕುಸಿತದಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ದೆಹಲಿಯಲ್ಲಿ ಯೆಲ್ಲೋ ಅಲರ್ಟ್: ಮಳೆಗಾಲದಲ್ಲಿ ಕಚೇರಿಗೆ ಹೋಗುವವರು ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ -
ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್ಪ್ಯಾಕ್ಡ್: ಹೊಸ ಫೋಲ್ಡಬಲ್ ಫೋನ್ಗಳ ಲಾಂಚ್ಗೆ ಕೌಂಟ್ಡೌನ್, ನೀವು ರೆಡಿನಾ? -
ಅಂತರಾಷ್ಟ್ರೀಯ ಚೆಸ್ ದಿನ: ಆಟದ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸರಳ ಟಿಪ್ಸ್! -
ಭಾರಿ ಮಳೆ: ಅಮರನಾಥ-ವೈಷ್ಣೋದೇವಿ ಯಾತ್ರೆ ಸ್ಥಗಿತ; ಯಾತ್ರಿಕರು ಈಗ ಏನು ಮಾಡಬೇಕು? -
ಬಿರುಗಾಳಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ
ಶ್ರಾವಣ ಮಾಸದಲ್ಲಿ ನಾನ್ವೆಜ್ ತಿನ್ನಲೇಬಾರದು ಎಂಬುವುದರ ಹಿಂದಿದೆ ಈ ಧಾರ್ಮಿಕ, ವೈಜ್ಞಾನಿಕ ಕಾರಣಗಳು
ಕನ್ನಡ ಶ್ರಾವಣ ಮಾಸ ಜುಲೈ 29ಕ್ಕೆ ಪ್ರಾರಂಭವಾಗಿದೆ. ಶ್ರಾವಣ ಮಾಸವೆಂದರೆ ಅದು ಹಬ್ಬಗಳ ಮಾಸ, ಹೌದು ಶ್ರಾವಣ ಮಾಸದ ಬಹುತೇಕ ದಿನಗಳು ವಿಶೇಷತೆಯಿಂದ ಕೂಡಿರುತ್ತೆ. ಶ್ರಾವಣ ಸೋಮವಾರ, ಮಂಗಳ ಗೌರಿ ವ್ರತ, ವರಮಹಾಲಕ್ಷ್ಮಿ ಪೂಜೆ ಹೀಗೆ ಹಲವಾರು ಹಬ್ಬಗಳು ಈ ತಿಂಗಳಿನಲ್ಲಿದೆ.

ಶ್ರಾವಣ ಮಾಸದ ಆಹಾರ ಪದ್ಧತಿಯಲ್ಲೂ ಕೆಲವೊಂದು ನಿಯಮಗಳಿವೆ. ಈ ತಿಂಗಳಿನಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಎಮಬ ನಿಯಮವಿದೆ, ಈ ತಿಂಗಳಿನಲ್ಲಿ ಕಡ್ಡಾಯವಾಗಿ ಸಸ್ಯಾಹಾರ ಮಾತ್ರ ಸೇವಿಸಬೇಕು ಎಂದು ಹೇಳಲಾಗುವುದು, ಆದ್ದರಿಂದ ಶ್ರಾವಣ ಮಾಸದ ವ್ರತ ನಿಯಮಗಳನ್ನು ಪಾಲಿಸುವವರು ಸಸ್ಯಾಹಾರ ಮಾತ್ರ ಸೇವಿಸುತ್ತಾರೆ.
ಶ್ರಾವಣ ಮಾಸದಲ್ಲಿ ಸಸ್ಯಾಹಾರ ಮಾತ್ರ ಏಕೆ ಸೇವಿಸಬೇಕು ಎಂಬುವುದಕ್ಕೆ ಕೆಲವೊಂದು ಕಾರಣಗಳಿವೆ, ಇದರ ಹಿಂದೆ ಧಾರ್ಮಿಕ ಕಾರಣಗಳು ಮಾತ್ರವಲ್ಲ, ವೈಜ್ಞಾನಿಕ ಕಾರಣವೂ ಇದೆ. ಅವು ಏನೆಂದು ತಿಳಿಯೋಣ ಬನ್ನಿ:

ಧಾರ್ಮಿಕ ಕಾರಣಗಳು
ಹಿಂದೂ ಧರ್ಮದ ಬಹುತೇಕ ಪೂಜೆ, ಹಬ್ಬಗಳಲ್ಲಿ ಮಾಂಸಾಹಾರ ಸೇವನೆ ನಿರ್ಬಂಧವಾಗಿದೆ. ದೇವರಿಗೆ ಸಾತ್ವಿಕ ಆಹಾರವನ್ನಷ್ಟೇ ಅರ್ಪಿಸಲಾಗುವುದು, ಈ ತಿಂಗಳಿನಲ್ಲಿ ನಾಗರ ಪಂಚಮಿ, ಕೃಷ್ಣ ಜ್ನಮಾಷ್ಟಮಿ, ರಕ್ಷಾ ಬಂಧನ, ವರ ಮಹಾಲಕ್ಷ್ಮಿ ಹೀಗೆ ಅನೇಕ ಹಬ್ಬಗಳಿವೆ, ಈ ಕಾರಣದಿಂದಾಗಿ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡುವುದು ತರವಲ್ಲ.

ವೈಜ್ಞಾನಿಕ ಕಾರಣಗಳು
ಈ ತಿಂಗಳಿನಲ್ಲಿ ಸೂರ್ಯನ ಕಿರಣಗಳು ಮೈ ಮೇಲೆ ಬೀಳುವುದು ಕಡಿಮೆ, ಇದರಿಂದ ನಮ್ಮ ಜೀರ್ಣಕ್ರಿಯೆ ದುರ್ಬಲವಾಗಿರುತ್ತೆ, ಆದ್ದರಿಂದ ಮಾಂಸಾಹಾರ ಸೇವನೆ ಮಾಡಿದಾಗ ಜೀರ್ಣಕ್ರಿಯೆಗೆ ಕಷ್ಟವಾಗುವುದು, ಇದರಿಂದಾಗಿ ಶ್ರಾವಣ ಮಾಸದಲ್ಲಿ ಲಘು ಆಹಾರ ಸೇವನೆ ಒಳ್ಳೆಯದು. ಅಲ್ಲದೆ ಪ್ರಾಣಿಗಳ ಮಾಂಸದಲ್ಲಿ ಈ ಸಮಯದಲ್ಲಿ ಬ್ಯಾಕ್ಟಿರಿಯಾ, ವೈರಸ್ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು, ಇಂಥ ಆಹಾರ ಸೇವನೆ ಮಾಡಿದಾಗ ಅನಾರೋಗ್ಯ ಉಂಟಾಗುವುದು. ಇದರಿಂದ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಒಳ್ಳೆಯದಲ್ಲ.

ಇತರ ಕಾರಣಗಳು
ಇನ್ನು ಮಳೆಗಾಲದಲ್ಲಿ ಮೀನು ಮತ್ತಿತರ ಜಲಚರಗಳು ಹಾಗೂ ಪ್ರಾಣಿಗಳು ಸಂತಾನೋತ್ಪತ್ತಿ ಮಾಡುವ ಸಮಯ. ಅವುಗಳನ್ನು ಈ ಸಮಯದಲ್ಲಿ ಹಿಡಿದು ತಿಂದರೆ ಸಂತಿತಿ ಕಡಿಮೆಯಾಗುವುದು, ಇದರಿಂದ ಪ್ರಕೃತಿಯಲ್ಲಿ ಅಸಮತೋಲನವಾಗುವುದು. ಈ ಕಾರಣದಿಂದ ಕೂಡ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಒಳ್ಳೆಯದಲ್ಲ ಎಂದು ಹೇಳಲಾಗುವುದು.



Click it and Unblock the Notifications