Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಶ್ರಾವಣ ಮಾಸದಲ್ಲಿ ಮಾಡಬೇಕಾದ ಮತ್ತು ಮಾಡಲೇಬಾರದ ಕೆಲಗಳಿವು
ಹಿಂದೂ ಸಂಪ್ರದಾಯದಲ್ಲಿ ಶುಭ ಕಾರ್ಯಗಳನ್ನು ಮಾಡಲು ಶ್ರಾವಣ ಮಾಸ ಅತ್ಯಂತ ಶುಭ, ಈ ತಿಂಗಳ ಎಲ್ಲಾ ದಿನಗಳನ್ನು ಅತ್ಯಂತ ಸಮೃದ್ಧವೆಂದು ಪರಿಗಣಿಸಲಾಗುತ್ತದೆ ಎಂಬ ನಂಬಿಕೆ ಇದೆ. ಶಿವನಿಗೆ ಮೀಸಲಾದ ಈ ಮಾಸದಲ್ಲಿ ಶಿವನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎನ್ನಲಾಗುತ್ತದೆ.

ಶ್ರಾವಣ ಪೂರ್ಣಿಮಾ ಅಥವಾ ಶ್ರಾವಣ ಮಾಸದ ಹುಣ್ಣಿಮೆ ದಿನವು ವಿಷ್ಣು ಅಥವಾ ಶ್ರಾವಣ ನಕ್ಷತ್ರದ ಅಥವಾ ಜನ್ಮ ನಕ್ಷತ್ರದೊಂದಿಗೆ ಸೇರಿಕೊಳ್ಳುತ್ತದೆ, ಆದ್ದರಿಂದ ಇದನ್ನು ಶ್ರಾವಣ ಮಾಸ ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ಪ್ರತಿ ಸೋಮವಾರ ಶ್ರಾವಣ ಸೋಮವಾರ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಇಂಥಾ ಶುಭ ಮಾಸದಲ್ಲಿ ನಾವು ಕೆಲವು ಕೆಲಸಗಳನ್ನು ಮಾಡಲೇಬೇಕಾಗಿದ್ದು, ಇನ್ನು ಕೆಲವು ಕೆಲಸಗಳನ್ನು ಮಾಡಲೇಬಾರದು ಎನ್ನಲಾಗುತ್ತದೆ. ಯಾವೆಲ್ಲಾ ಕೆಲಸಗಳನ್ನು ಮಾಡಬೇಕು ಹಾಗೂ ಯಾವುದನ್ನು ಮಾಡಬಾರದು ಇಲ್ಲಿದೆ ಪಟ್ಟಿ:
ಶ್ರಾವಣ ಮಾಸದಲ್ಲಿ ಮಾಡಬೇಕಾದ ಕೆಲಸಗಳು
1. * ಶಿವನನ್ನು ಮೆಚ್ಚಿಸಲು ಭಕ್ತರು ಉಪವಾಸ ಮಾಡುತ್ತಾರೆ: ಈ ಇಡೀ ತಿಂಗಳಲ್ಲಿ ಉಪವಾಸ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
* ಭಕ್ತರು ಮುಂಜಾನೆ ಎದ್ದು, ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ, ಹಾಲು, ತುಪ್ಪ, ಮೊಸರು, ಗಂಗಾಜಲ ಮತ್ತು ಜೇನುತುಪ್ಪದ ಮಿಶ್ರಣವನ್ನು ಪಂಚಾಮೃತ ಎಂದು ಕರೆಯುವ ಬಿಲ್ವ ಎಲೆಗಳನ್ನು ಶಿವನಿಗೆ ನೀಡುವುದು ಅತ್ಯಗತ್ಯ. ಈ ಸಮಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳು, ಹಣ್ಣುಗಳು ಮತ್ತು ಇತರ ಉಪವಾಸಅನುಮೋದಿತ ವಸ್ತುಗಳನ್ನು ಸೇವಿಸಬಹುದು.
2. * ಎಲ್ಲಾ ಶ್ರಾವಣ ಸೋಮವಾರಗಳಲ್ಲೂ ಉಪವಾಸ, ವಿಶೇಷವಾಗಿ ಮದುವೆಯಾಗದ ಮಹಿಳೆಯರಿಗೆ ಒಳ್ಳೆಯ ವರ ಸಿಗಲು ಉಪವಾಸ ಮಾಡಿದರೆ ಶ್ರೇಷ್ಠ ಎನ್ನಲಾಗುತ್ತದೆ. * ರುದ್ರಾಕ್ಷವು ಶಿವನಿಗೆ ಸಾಂಕೇತಿಕವಾಗಿರುವುದರಿಂದ, ಈ ಮಾಸದಲ್ಲಿ ರುದ್ರಾಕ್ಷವನ್ನು ಧರಿಸುವುದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
* ಭಗವಾನ್ ಶಿವನ ಭಕ್ತರು ವರ್ಷದ ಈ ಸಮಯದಲ್ಲಿ ರುದ್ರಾಕ್ಷಿಯನ್ನು ಧರಿಸಿ ಆತನನ್ನು ಮೆಚ್ಚಿಸುತ್ತಾರೆ. ಭಕ್ತರು ಶಿವನನ್ನು ಮೆಚ್ಚಿಸಲು ರುದ್ರಾಕ್ಷ ಮಾಲೆಯೊಂದಿಗೆ ಜಪ ಮಾಡಿದರೆ ಒಳ್ಳೆಯದು.
3. * ಪಂಚಾಮೃತ, ಬಿಲ್ವ ಎಲೆಗಳು, ಗಂಗಾಜಲ, ಧಾತುರ, ಜೇನುತುಪ್ಪ ಅಥವಾ ಸಕ್ಕರೆ ಮತ್ತು ವಿಭೂತಿಯನ್ನು ಶಿವನಿಗೆ ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
* ಮಂಗಳ ಗೌರಿ ವ್ರತವನ್ನು ಈ ತಿಂಗಳಲ್ಲಿ ವಿವಾಹಿತ ಮಹಿಳೆಯರು ತಮ್ಮ ಮನೆಗಳ ಆರೋಗ್ಯ ಮತ್ತು ಏಳಿಗೆಗಾಗಿ ಮಾಡುತ್ತಾರೆ.
4. * ಶ್ರಾವಣ ಮಾಸದಲ್ಲಿ ಶಿವ ಮಂತ್ರವನ್ನು ಪಠಿಸುವುದು ಶಿವನನ್ನು ಮೆಚ್ಚಿಸುವಲ್ಲಿ ಅತ್ಯಂತ ಫಲಪ್ರದವಾಗಿದೆ.
ಓಂ ವಂದೇ ದೇವ ಉಮಾ ಪತಿ ಸರ್ಗುರು ವಂದೇ ಜಗತ್ಕಾರಣಂ
ವಂದೇ ಪನ್ನಗಭೂಷಣ ಮೃಗಧರ ವಂದೇ ಪಶು ಪತಿಂ
ವಂದೇ ಸೂರ್ಯ ಶಶಾಂಕ ವಹ್ನಿ ನಯನಂ ವಂದೇ ಮುಕುಂದ ಪ್ರಿಯಂ
ವಂದೇ ಭಕ್ತ ಜನ-ಆಶ್ರಯ ಚ ವರದಂ ವಂದೇ ಶಿವ-ಶಂಕರಂ
* ಈ ಸಮಯದಲ್ಲಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವುದು ಬಹಳ ಮುಖ್ಯ.
ಓಂ ತ್ರ್ಯಯಂಬಕಂ ಯಜ್ಮಹೇ ಸುಗಂಧಿ ಪುಷ್ಠಿ ವರ್ಧನಂ ಉರ್ವಾರುಕಮೀವ ಬಂಧನಾತ್ ಮೃತ್ಯುರೊರ್ಮುಕ್ಶಯ ಮಮ್ರಿತಾತ್
5. * ಏಕ ಭಕ್ತಿ ಭೋಜನವನ್ನು ಅನುಸರಿಸುವುದು ಅಥವಾ ದಿನಕ್ಕೆ ಒಂದೇ ಹೊತ್ತಿನ ಊಟ ಅಥವಾ ನಖತ ವ್ರತವನ್ನು ಮಾಡುವುದು, ಅಂದರೆ ಹಗಲಿನಲ್ಲಿ ಉಪವಾಸ ಮಾಡುವುದು ಮತ್ತು ರಾತ್ರಿಯಲ್ಲಿ ಪ್ರಸಾದ ಅಥವಾ ಹಣ್ಣುಗಳನ್ನು ಸೇವಿಸುವುದು ಅತ್ಯಂತ ಲಾಭದಾಯಕ ಮತ್ತು ಪುಣ್ಯದಾಯಕ.
* ಉಪವಾಸ ಮಾಡುವಾಗ ಸಂಕಲ್ಪವನ್ನು ತೆಗೆದುಕೊಳ್ಳಿ. ನಿಮ್ಮ ಉತ್ತಮ ಸಾಮರ್ಥ್ಯದಲ್ಲಿ ಈ ವ್ರತವನ್ನು ಮಾಡಲು ನಿಮ್ಮನ್ನು ಸಮರ್ಪಿಸಿಕೊಳ್ಳಿ.
6. * ಪ್ರತಿ ಸೋಮವಾರ ಎರಡು ಬಾರಿ ಶಿವನ ಪೂಜೆ ಮಾಡಿ.
* ಸೋಮವಾರದಂದು ಶ್ರಾವಣ ಸೋಮವಾರ ವ್ರತ ಕಥೆಯನ್ನು ಓದಿ. ಈ ಕಥೆಯು ಭಗವಾನ್ ಶಿವನ ಜೀವನದಿಂದ ಶಾಶ್ವತತೆಯ ಪ್ರಯಾಣದ ಸಂಕೇತವಾಗಿದೆ.
* ಉಪವಾಸ ಮಾಡುವಾಗ ಓಂ ನಮಃ ಶಿವಾಯತ ಎಂದು ಪಠಿಸಿ.
ಶ್ರಾವಣಮಾಸದಲ್ಲಿ ಯಾವುದನ್ನು ಮಾಡಬಾರದು?
7. * ಈ ಪುಣ್ಯ ತಿಂಗಳಲ್ಲಿ ಮಾಂಸವನ್ನು ಸೇವಿಸಬೇಡಿ.
* ಈ ತಿಂಗಳಲ್ಲಿ ಮದ್ಯಪಾನ ಮಾಡಬಾರದು, ವಿಶೇಷವಾಗಿ ಶಿವನನ್ನು ಪೂಜಿಸುತ್ತಿದ್ದರೆ ಮತ್ತು ಉಪವಾಸಗಳನ್ನು ಆಚರಿಸುತ್ತಿದ್ದರೆ ಮದ್ಯ ನಿಷಿದ್ಧ.
* ಈ ತಿಂಗಳಲ್ಲಿ ಶೇವ್ ಮಾಡುವುದನ್ನು ಮತ್ತು ಕ್ಷೌರ ತಪ್ಪಿಸಬೇಕು ಎಂದು ನಂಬಲಾಗಿದೆ.
* ಪುರಾಣಗಳು ಮತ್ತು ಪೌರಾಣಿಕ ಕಥೆಗಳ ಪ್ರಕಾರ, ಜನರು ಶ್ರಾವಣ ಮಾಸದಲ್ಲಿ ಬಿಳಿಬದನೆ ಮತ್ತು ಬದನೆಯನ್ನು ಸೇವಿಸುವುದನ್ನು ತಪ್ಪಿಸಬೇಕು. ಈ ತಿಂಗಳಲ್ಲಿ ಜನರು ಯಾವುದೇ ಜೀವಿಗೆ ಹಾನಿ ಮಾಡಬಾರದು.
8. * ಉಪವಾಸ ಆರಂಭಿಸಿದರೆ ನಡುವೆ ಉಪವಾಸವನ್ನು ಮುರಿಯಬೇಡಿ. ಒಮ್ಮೆ ಪ್ರಾರಂಭಿಸಿದ ನಂತರ, ಅದರ ನಡುವೆ ಉಪವಾಸವನ್ನು ಮುರಿಯುವುದು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ.
* ಕೆಟ್ಟ ಮಾತು, ಕೆಟ್ಟ ವರ್ತನೆ, ಕೆಟ್ಟ ಕೆಲಸಗಳನ್ನು ಮಾಡಬೇಡಿ.



Click it and Unblock the Notifications







