Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಶನಿ ಜಯಂತಿಯಂದು ತಪ್ಪಿಯೂ ಈ ಕೆಲಸ ಮಾಡದಿರಿ
ಮೇ 22ರಂದು ವೈಶಾಖ ಮಾಸದ ಅಮವಾಸ್ಯೆ, ಈ ದಿನ ಶನಿ ಜಯಂತಿಯನ್ನು ಆಚರಿಸಲಾಗುವುದು. ಈ ದಿನ ಶನೇಶ್ವರ ಜನಿಸಿದ ದಿನವಾಗಿದ್ದು, ಅವನನ್ನು ಆರಾಧನೆ ಮಾಡುವುದರಿಂದ, ಕಷ್ಟಗಳು ದೂರವಾಗಿ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಈ ದಿನ ಶನಿ ದೇವನಿಗೆ ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿ, ನವರತ್ನ ಹಾರಗಳನ್ನು ಅರ್ಪಿಸಿ ಪೂಜಿಸಲಾಗುವುದು. ಎಳ್ಳೆಣ್ಣೆ ಅರ್ಪಿಸಿದರೆ ಶನಿಯ ಕೃಪೆಗೆ ಪಾತ್ರರಾಗುವಿರಿ ಹಾಗೂ ಕಷ್ಟಗಳು ದೂರವಾಗುವುದು, ಅವಮಾನಗಳು ತಪ್ಪುವುದು. ಶನಿ ಜಯಂತಿಯಂದು ಒಳಿತು ಉಂಟಾಗಲು ಕಪ್ಪು ವಸ್ತ್ರ, ಕಪ್ಪು ಧಾನ್ಯಗಳನ್ನು ದಾನ ಮಾಡಬೇಕು ಅಂತಾರೆ. ಅದೇ ಆ ದಿನ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಎಂದು ಕೂಡ ಹೇಳುತ್ತಾರೆ. ಇಲ್ಲಿ ಶನಿ ಜಯಂತಿಯಂದು ತಪ್ಪಿಯೂ ಮಾಡಬಾರದ ಕೆಲವು ಕಾರ್ಯಗಳ ಬಗ್ಗೆ ಹೇಳಿದ್ದೇವೆ. ಒಂದು ವೇಳೆ ಈ ರೀತಿ ಮಾಡಿದರೆ ಶನಿಯ ಕೋಪಕ್ಕೆ ಗುರಿಯಾಗುತ್ತೀರಿ ಜಾಗ್ರತೆ....

1. ಹಸಿದವರನ್ನು ಖಾಲಿ ಕೈಯಲ್ಲಿ ಕಳುಹಿಸುವುದು
ಬಡವರು , ನಿರ್ಗತಿಕರು ಹಸಿದ ಹೊಟ್ಟೆಯಲ್ಲಿ ಮನೆ ಮುಂದೆ ಬಂದರೆ ಅವರನ್ನು ಖಾಲಿ ಹೊಟ್ಟೆ ಹಾಗೂ ಖಾಲಿ ಕೈಯಲ್ಲಿ ಕಳುಹಿಸಬೇಡಿ. ಹಸಿದ ಹೊಟ್ಟೆ ತುಂಬಿಸಿದರೆ ಶನಿಗೆ ಖುಷಿಯಾಗುತ್ತದೆ, ಆಗ ಆತ ನಿಮ್ಮ ಕಡೆಯಿದ್ದತನ್ನ ದೃಷ್ಟಿಯನ್ನು ಬೇರೆಯೆಡೆಗೆ ತಿರುಗಿಸಿ, ನಿಮಗೆ ಕಷ್ಟ ಬರುವುದನ್ನು ತಪ್ಪಿಸುತ್ತಾನೆ.

2. ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು
ಹಿಂದೂ ಧರ್ಮದ ಶಾಸ್ತ್ರದ ಪ್ರಕಾರ ಶನಿ ಜಯಂತಿಯಂದು ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು ಅಮಂಗಳ ಎಂದು ಹೇಳಲಾಗಿದೆ. ಶನಿ ದೇವ ಹುಟ್ಟಿದ ದಿನ ಯಾರು ಇದನ್ನೆಲ್ಲಾ ಮಾಡುತ್ತಾರೋ ಅವರ ಜೊತೆಯೇ ಶನಿ ಇರುತ್ತಾನೆ, ಅಂದರೆ ಅವನಿಗೆ ಆರ್ಥಿಕ ತೊಂದರೆಗಳು ಉಂಟಾಗುವುದು. ಅಲ್ಲದೆ ಸಮಾಜದಲ್ಲಿ ಕೆಲವೊಂದು ಅವಮಾನಗಳನ್ನು ಎದುರಿಸುವ ಪರಿಸ್ಥಿತಿ ಕೂಡ ಬರಬಹುದು.

3. ಶನಿಯ ದೃಷ್ಟಿಗೆ ಬೀಳುವುದು
ಶನಿ ಜಯಂತಿಯಂದು ದರ್ಶನ ಮಾಡುವಾಗ ಆತನ ದೃಷ್ಟಿಗೆ ಬೀಳಬಾರದು ಎಂದು ಹೇಳುತ್ತಾರೆ. ಶನಿಯ ದೃಷ್ಟಿ ವಕ್ರವಾಗಿರುತ್ತದೆ. ಆದ್ದರಿಂದ ಶನಿಯ ಕಣ್ಣುಗಳನ್ನು ನೀವು ನೋಡಬೇಕು, ಇಲ್ಲದಿದ್ದರೆ ಶನಿಯ ಶಾಪ ಸಿಗುವುದು ಎಂದು ಹೇಳಲಾಗುತ್ತದೆ.

4. ಮಹಿಳೆಯರನ್ನು ನಿಂದಿಸಬಾರದು
ಶನಿ ಜಯಂತಿಯಂದು ಮಹಿಳೆಯರನ್ನು ನಿಂದಿಸುವುದು ಮಾಡಬಾರದು. ಮಹಿಳೆಯರ ಮನಸ್ಸಿಗೆ ನೋವಾದರೆ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಮಹಿಳೆಯರನ್ನು ನಿಂದಿಸಿದರೆ ಶನಿ ತನ್ನ ದೃಷ್ಟಿಯನ್ನು ನಿಮ್ಮ ಮೇಲೆ ಬೀರುತ್ತಾನೆ. ಇದರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

5. ಹೊಸ ಬಟ್ಟೆ ಕೊಳ್ಳುವುದು, ಧರಿಸುವುದು ಮಾಡಬಾರದು
ಶನಿಯ ಹುಟ್ಟಿದ ದಿನ ಯಾವುದೇ ಹೊಸ ಬಟ್ಟೆ ಕೊಳ್ಳುವುದು, ಧರಿಸುವುದು ಮಾಡಬಾರದು, ಹೊಸ ಬಟ್ಟೆ ಧರಿಸುವುದರಿಂದ ಕೆಡಕು ಉಂಟಾಗುವುದು. ಈ ದಿನ ಕಪ್ಪು ಬಟ್ಟೆ ಧರಸಿದರೆ ಒಳ್ಳೆಯದು. ಶನಿ ದೇವನ ಮಂತ್ರ ಹೇಳುತ್ತಾ, ಉಪವಾಸವಿದ್ದು ಪೂಜೆ ಮಾಡುವುದರಿಂದ ಬದುಕಿನಲ್ಲಿದ್ದ ಕಷ್ಟಗಳು ದೂರವಾಗುವುದು.



Click it and Unblock the Notifications
