Just In
- 7 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 8 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 8 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 9 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶನಿ ಜಯಂತಿಯಂದು ತಪ್ಪಿಯೂ ಈ ಕೆಲಸ ಮಾಡದಿರಿ
ಮೇ 22ರಂದು ವೈಶಾಖ ಮಾಸದ ಅಮವಾಸ್ಯೆ, ಈ ದಿನ ಶನಿ ಜಯಂತಿಯನ್ನು ಆಚರಿಸಲಾಗುವುದು. ಈ ದಿನ ಶನೇಶ್ವರ ಜನಿಸಿದ ದಿನವಾಗಿದ್ದು, ಅವನನ್ನು ಆರಾಧನೆ ಮಾಡುವುದರಿಂದ, ಕಷ್ಟಗಳು ದೂರವಾಗಿ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಈ ದಿನ ಶನಿ ದೇವನಿಗೆ ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿ, ನವರತ್ನ ಹಾರಗಳನ್ನು ಅರ್ಪಿಸಿ ಪೂಜಿಸಲಾಗುವುದು. ಎಳ್ಳೆಣ್ಣೆ ಅರ್ಪಿಸಿದರೆ ಶನಿಯ ಕೃಪೆಗೆ ಪಾತ್ರರಾಗುವಿರಿ ಹಾಗೂ ಕಷ್ಟಗಳು ದೂರವಾಗುವುದು, ಅವಮಾನಗಳು ತಪ್ಪುವುದು. ಶನಿ ಜಯಂತಿಯಂದು ಒಳಿತು ಉಂಟಾಗಲು ಕಪ್ಪು ವಸ್ತ್ರ, ಕಪ್ಪು ಧಾನ್ಯಗಳನ್ನು ದಾನ ಮಾಡಬೇಕು ಅಂತಾರೆ. ಅದೇ ಆ ದಿನ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಎಂದು ಕೂಡ ಹೇಳುತ್ತಾರೆ. ಇಲ್ಲಿ ಶನಿ ಜಯಂತಿಯಂದು ತಪ್ಪಿಯೂ ಮಾಡಬಾರದ ಕೆಲವು ಕಾರ್ಯಗಳ ಬಗ್ಗೆ ಹೇಳಿದ್ದೇವೆ. ಒಂದು ವೇಳೆ ಈ ರೀತಿ ಮಾಡಿದರೆ ಶನಿಯ ಕೋಪಕ್ಕೆ ಗುರಿಯಾಗುತ್ತೀರಿ ಜಾಗ್ರತೆ....
1. ಹಸಿದವರನ್ನು ಖಾಲಿ ಕೈಯಲ್ಲಿ ಕಳುಹಿಸುವುದು
ಬಡವರು , ನಿರ್ಗತಿಕರು ಹಸಿದ ಹೊಟ್ಟೆಯಲ್ಲಿ ಮನೆ ಮುಂದೆ ಬಂದರೆ ಅವರನ್ನು ಖಾಲಿ ಹೊಟ್ಟೆ ಹಾಗೂ ಖಾಲಿ ಕೈಯಲ್ಲಿ ಕಳುಹಿಸಬೇಡಿ. ಹಸಿದ ಹೊಟ್ಟೆ ತುಂಬಿಸಿದರೆ ಶನಿಗೆ ಖುಷಿಯಾಗುತ್ತದೆ, ಆಗ ಆತ ನಿಮ್ಮ ಕಡೆಯಿದ್ದತನ್ನ ದೃಷ್ಟಿಯನ್ನು ಬೇರೆಯೆಡೆಗೆ ತಿರುಗಿಸಿ, ನಿಮಗೆ ಕಷ್ಟ ಬರುವುದನ್ನು ತಪ್ಪಿಸುತ್ತಾನೆ.
2. ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು
ಹಿಂದೂ ಧರ್ಮದ ಶಾಸ್ತ್ರದ ಪ್ರಕಾರ ಶನಿ ಜಯಂತಿಯಂದು ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು ಅಮಂಗಳ ಎಂದು ಹೇಳಲಾಗಿದೆ. ಶನಿ ದೇವ ಹುಟ್ಟಿದ ದಿನ ಯಾರು ಇದನ್ನೆಲ್ಲಾ ಮಾಡುತ್ತಾರೋ ಅವರ ಜೊತೆಯೇ ಶನಿ ಇರುತ್ತಾನೆ, ಅಂದರೆ ಅವನಿಗೆ ಆರ್ಥಿಕ ತೊಂದರೆಗಳು ಉಂಟಾಗುವುದು. ಅಲ್ಲದೆ ಸಮಾಜದಲ್ಲಿ ಕೆಲವೊಂದು ಅವಮಾನಗಳನ್ನು ಎದುರಿಸುವ ಪರಿಸ್ಥಿತಿ ಕೂಡ ಬರಬಹುದು.
3. ಶನಿಯ ದೃಷ್ಟಿಗೆ ಬೀಳುವುದು
ಶನಿ ಜಯಂತಿಯಂದು ದರ್ಶನ ಮಾಡುವಾಗ ಆತನ ದೃಷ್ಟಿಗೆ ಬೀಳಬಾರದು ಎಂದು ಹೇಳುತ್ತಾರೆ. ಶನಿಯ ದೃಷ್ಟಿ ವಕ್ರವಾಗಿರುತ್ತದೆ. ಆದ್ದರಿಂದ ಶನಿಯ ಕಣ್ಣುಗಳನ್ನು ನೀವು ನೋಡಬೇಕು, ಇಲ್ಲದಿದ್ದರೆ ಶನಿಯ ಶಾಪ ಸಿಗುವುದು ಎಂದು ಹೇಳಲಾಗುತ್ತದೆ.
4. ಮಹಿಳೆಯರನ್ನು ನಿಂದಿಸಬಾರದು
ಶನಿ ಜಯಂತಿಯಂದು ಮಹಿಳೆಯರನ್ನು ನಿಂದಿಸುವುದು ಮಾಡಬಾರದು. ಮಹಿಳೆಯರ ಮನಸ್ಸಿಗೆ ನೋವಾದರೆ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಮಹಿಳೆಯರನ್ನು ನಿಂದಿಸಿದರೆ ಶನಿ ತನ್ನ ದೃಷ್ಟಿಯನ್ನು ನಿಮ್ಮ ಮೇಲೆ ಬೀರುತ್ತಾನೆ. ಇದರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.
5. ಹೊಸ ಬಟ್ಟೆ ಕೊಳ್ಳುವುದು, ಧರಿಸುವುದು ಮಾಡಬಾರದು
ಶನಿಯ ಹುಟ್ಟಿದ ದಿನ ಯಾವುದೇ ಹೊಸ ಬಟ್ಟೆ ಕೊಳ್ಳುವುದು, ಧರಿಸುವುದು ಮಾಡಬಾರದು, ಹೊಸ ಬಟ್ಟೆ ಧರಿಸುವುದರಿಂದ ಕೆಡಕು ಉಂಟಾಗುವುದು. ಈ ದಿನ ಕಪ್ಪು ಬಟ್ಟೆ ಧರಸಿದರೆ ಒಳ್ಳೆಯದು. ಶನಿ ದೇವನ ಮಂತ್ರ ಹೇಳುತ್ತಾ, ಉಪವಾಸವಿದ್ದು ಪೂಜೆ ಮಾಡುವುದರಿಂದ ಬದುಕಿನಲ್ಲಿದ್ದ ಕಷ್ಟಗಳು ದೂರವಾಗುವುದು.