Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಶನಿ ಜಯಂತಿಯಂದು ತಪ್ಪಿಯೂ ಈ ಕೆಲಸ ಮಾಡದಿರಿ
ಮೇ 22ರಂದು ವೈಶಾಖ ಮಾಸದ ಅಮವಾಸ್ಯೆ, ಈ ದಿನ ಶನಿ ಜಯಂತಿಯನ್ನು ಆಚರಿಸಲಾಗುವುದು. ಈ ದಿನ ಶನೇಶ್ವರ ಜನಿಸಿದ ದಿನವಾಗಿದ್ದು, ಅವನನ್ನು ಆರಾಧನೆ ಮಾಡುವುದರಿಂದ, ಕಷ್ಟಗಳು ದೂರವಾಗಿ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಈ ದಿನ ಶನಿ ದೇವನಿಗೆ ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿ, ನವರತ್ನ ಹಾರಗಳನ್ನು ಅರ್ಪಿಸಿ ಪೂಜಿಸಲಾಗುವುದು. ಎಳ್ಳೆಣ್ಣೆ ಅರ್ಪಿಸಿದರೆ ಶನಿಯ ಕೃಪೆಗೆ ಪಾತ್ರರಾಗುವಿರಿ ಹಾಗೂ ಕಷ್ಟಗಳು ದೂರವಾಗುವುದು, ಅವಮಾನಗಳು ತಪ್ಪುವುದು. ಶನಿ ಜಯಂತಿಯಂದು ಒಳಿತು ಉಂಟಾಗಲು ಕಪ್ಪು ವಸ್ತ್ರ, ಕಪ್ಪು ಧಾನ್ಯಗಳನ್ನು ದಾನ ಮಾಡಬೇಕು ಅಂತಾರೆ. ಅದೇ ಆ ದಿನ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಎಂದು ಕೂಡ ಹೇಳುತ್ತಾರೆ. ಇಲ್ಲಿ ಶನಿ ಜಯಂತಿಯಂದು ತಪ್ಪಿಯೂ ಮಾಡಬಾರದ ಕೆಲವು ಕಾರ್ಯಗಳ ಬಗ್ಗೆ ಹೇಳಿದ್ದೇವೆ. ಒಂದು ವೇಳೆ ಈ ರೀತಿ ಮಾಡಿದರೆ ಶನಿಯ ಕೋಪಕ್ಕೆ ಗುರಿಯಾಗುತ್ತೀರಿ ಜಾಗ್ರತೆ....

1. ಹಸಿದವರನ್ನು ಖಾಲಿ ಕೈಯಲ್ಲಿ ಕಳುಹಿಸುವುದು
ಬಡವರು , ನಿರ್ಗತಿಕರು ಹಸಿದ ಹೊಟ್ಟೆಯಲ್ಲಿ ಮನೆ ಮುಂದೆ ಬಂದರೆ ಅವರನ್ನು ಖಾಲಿ ಹೊಟ್ಟೆ ಹಾಗೂ ಖಾಲಿ ಕೈಯಲ್ಲಿ ಕಳುಹಿಸಬೇಡಿ. ಹಸಿದ ಹೊಟ್ಟೆ ತುಂಬಿಸಿದರೆ ಶನಿಗೆ ಖುಷಿಯಾಗುತ್ತದೆ, ಆಗ ಆತ ನಿಮ್ಮ ಕಡೆಯಿದ್ದತನ್ನ ದೃಷ್ಟಿಯನ್ನು ಬೇರೆಯೆಡೆಗೆ ತಿರುಗಿಸಿ, ನಿಮಗೆ ಕಷ್ಟ ಬರುವುದನ್ನು ತಪ್ಪಿಸುತ್ತಾನೆ.

2. ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು
ಹಿಂದೂ ಧರ್ಮದ ಶಾಸ್ತ್ರದ ಪ್ರಕಾರ ಶನಿ ಜಯಂತಿಯಂದು ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು ಅಮಂಗಳ ಎಂದು ಹೇಳಲಾಗಿದೆ. ಶನಿ ದೇವ ಹುಟ್ಟಿದ ದಿನ ಯಾರು ಇದನ್ನೆಲ್ಲಾ ಮಾಡುತ್ತಾರೋ ಅವರ ಜೊತೆಯೇ ಶನಿ ಇರುತ್ತಾನೆ, ಅಂದರೆ ಅವನಿಗೆ ಆರ್ಥಿಕ ತೊಂದರೆಗಳು ಉಂಟಾಗುವುದು. ಅಲ್ಲದೆ ಸಮಾಜದಲ್ಲಿ ಕೆಲವೊಂದು ಅವಮಾನಗಳನ್ನು ಎದುರಿಸುವ ಪರಿಸ್ಥಿತಿ ಕೂಡ ಬರಬಹುದು.

3. ಶನಿಯ ದೃಷ್ಟಿಗೆ ಬೀಳುವುದು
ಶನಿ ಜಯಂತಿಯಂದು ದರ್ಶನ ಮಾಡುವಾಗ ಆತನ ದೃಷ್ಟಿಗೆ ಬೀಳಬಾರದು ಎಂದು ಹೇಳುತ್ತಾರೆ. ಶನಿಯ ದೃಷ್ಟಿ ವಕ್ರವಾಗಿರುತ್ತದೆ. ಆದ್ದರಿಂದ ಶನಿಯ ಕಣ್ಣುಗಳನ್ನು ನೀವು ನೋಡಬೇಕು, ಇಲ್ಲದಿದ್ದರೆ ಶನಿಯ ಶಾಪ ಸಿಗುವುದು ಎಂದು ಹೇಳಲಾಗುತ್ತದೆ.

4. ಮಹಿಳೆಯರನ್ನು ನಿಂದಿಸಬಾರದು
ಶನಿ ಜಯಂತಿಯಂದು ಮಹಿಳೆಯರನ್ನು ನಿಂದಿಸುವುದು ಮಾಡಬಾರದು. ಮಹಿಳೆಯರ ಮನಸ್ಸಿಗೆ ನೋವಾದರೆ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಮಹಿಳೆಯರನ್ನು ನಿಂದಿಸಿದರೆ ಶನಿ ತನ್ನ ದೃಷ್ಟಿಯನ್ನು ನಿಮ್ಮ ಮೇಲೆ ಬೀರುತ್ತಾನೆ. ಇದರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

5. ಹೊಸ ಬಟ್ಟೆ ಕೊಳ್ಳುವುದು, ಧರಿಸುವುದು ಮಾಡಬಾರದು
ಶನಿಯ ಹುಟ್ಟಿದ ದಿನ ಯಾವುದೇ ಹೊಸ ಬಟ್ಟೆ ಕೊಳ್ಳುವುದು, ಧರಿಸುವುದು ಮಾಡಬಾರದು, ಹೊಸ ಬಟ್ಟೆ ಧರಿಸುವುದರಿಂದ ಕೆಡಕು ಉಂಟಾಗುವುದು. ಈ ದಿನ ಕಪ್ಪು ಬಟ್ಟೆ ಧರಸಿದರೆ ಒಳ್ಳೆಯದು. ಶನಿ ದೇವನ ಮಂತ್ರ ಹೇಳುತ್ತಾ, ಉಪವಾಸವಿದ್ದು ಪೂಜೆ ಮಾಡುವುದರಿಂದ ಬದುಕಿನಲ್ಲಿದ್ದ ಕಷ್ಟಗಳು ದೂರವಾಗುವುದು.



Click it and Unblock the Notifications