Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಶನಿ ಜಯಂತಿಯಂದು ತಪ್ಪಿಯೂ ಈ ಕೆಲಸ ಮಾಡದಿರಿ
ಮೇ 22ರಂದು ವೈಶಾಖ ಮಾಸದ ಅಮವಾಸ್ಯೆ, ಈ ದಿನ ಶನಿ ಜಯಂತಿಯನ್ನು ಆಚರಿಸಲಾಗುವುದು. ಈ ದಿನ ಶನೇಶ್ವರ ಜನಿಸಿದ ದಿನವಾಗಿದ್ದು, ಅವನನ್ನು ಆರಾಧನೆ ಮಾಡುವುದರಿಂದ, ಕಷ್ಟಗಳು ದೂರವಾಗಿ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಈ ದಿನ ಶನಿ ದೇವನಿಗೆ ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿ, ನವರತ್ನ ಹಾರಗಳನ್ನು ಅರ್ಪಿಸಿ ಪೂಜಿಸಲಾಗುವುದು. ಎಳ್ಳೆಣ್ಣೆ ಅರ್ಪಿಸಿದರೆ ಶನಿಯ ಕೃಪೆಗೆ ಪಾತ್ರರಾಗುವಿರಿ ಹಾಗೂ ಕಷ್ಟಗಳು ದೂರವಾಗುವುದು, ಅವಮಾನಗಳು ತಪ್ಪುವುದು. ಶನಿ ಜಯಂತಿಯಂದು ಒಳಿತು ಉಂಟಾಗಲು ಕಪ್ಪು ವಸ್ತ್ರ, ಕಪ್ಪು ಧಾನ್ಯಗಳನ್ನು ದಾನ ಮಾಡಬೇಕು ಅಂತಾರೆ. ಅದೇ ಆ ದಿನ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಎಂದು ಕೂಡ ಹೇಳುತ್ತಾರೆ. ಇಲ್ಲಿ ಶನಿ ಜಯಂತಿಯಂದು ತಪ್ಪಿಯೂ ಮಾಡಬಾರದ ಕೆಲವು ಕಾರ್ಯಗಳ ಬಗ್ಗೆ ಹೇಳಿದ್ದೇವೆ. ಒಂದು ವೇಳೆ ಈ ರೀತಿ ಮಾಡಿದರೆ ಶನಿಯ ಕೋಪಕ್ಕೆ ಗುರಿಯಾಗುತ್ತೀರಿ ಜಾಗ್ರತೆ....

1. ಹಸಿದವರನ್ನು ಖಾಲಿ ಕೈಯಲ್ಲಿ ಕಳುಹಿಸುವುದು
ಬಡವರು , ನಿರ್ಗತಿಕರು ಹಸಿದ ಹೊಟ್ಟೆಯಲ್ಲಿ ಮನೆ ಮುಂದೆ ಬಂದರೆ ಅವರನ್ನು ಖಾಲಿ ಹೊಟ್ಟೆ ಹಾಗೂ ಖಾಲಿ ಕೈಯಲ್ಲಿ ಕಳುಹಿಸಬೇಡಿ. ಹಸಿದ ಹೊಟ್ಟೆ ತುಂಬಿಸಿದರೆ ಶನಿಗೆ ಖುಷಿಯಾಗುತ್ತದೆ, ಆಗ ಆತ ನಿಮ್ಮ ಕಡೆಯಿದ್ದತನ್ನ ದೃಷ್ಟಿಯನ್ನು ಬೇರೆಯೆಡೆಗೆ ತಿರುಗಿಸಿ, ನಿಮಗೆ ಕಷ್ಟ ಬರುವುದನ್ನು ತಪ್ಪಿಸುತ್ತಾನೆ.

2. ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು
ಹಿಂದೂ ಧರ್ಮದ ಶಾಸ್ತ್ರದ ಪ್ರಕಾರ ಶನಿ ಜಯಂತಿಯಂದು ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು ಅಮಂಗಳ ಎಂದು ಹೇಳಲಾಗಿದೆ. ಶನಿ ದೇವ ಹುಟ್ಟಿದ ದಿನ ಯಾರು ಇದನ್ನೆಲ್ಲಾ ಮಾಡುತ್ತಾರೋ ಅವರ ಜೊತೆಯೇ ಶನಿ ಇರುತ್ತಾನೆ, ಅಂದರೆ ಅವನಿಗೆ ಆರ್ಥಿಕ ತೊಂದರೆಗಳು ಉಂಟಾಗುವುದು. ಅಲ್ಲದೆ ಸಮಾಜದಲ್ಲಿ ಕೆಲವೊಂದು ಅವಮಾನಗಳನ್ನು ಎದುರಿಸುವ ಪರಿಸ್ಥಿತಿ ಕೂಡ ಬರಬಹುದು.

3. ಶನಿಯ ದೃಷ್ಟಿಗೆ ಬೀಳುವುದು
ಶನಿ ಜಯಂತಿಯಂದು ದರ್ಶನ ಮಾಡುವಾಗ ಆತನ ದೃಷ್ಟಿಗೆ ಬೀಳಬಾರದು ಎಂದು ಹೇಳುತ್ತಾರೆ. ಶನಿಯ ದೃಷ್ಟಿ ವಕ್ರವಾಗಿರುತ್ತದೆ. ಆದ್ದರಿಂದ ಶನಿಯ ಕಣ್ಣುಗಳನ್ನು ನೀವು ನೋಡಬೇಕು, ಇಲ್ಲದಿದ್ದರೆ ಶನಿಯ ಶಾಪ ಸಿಗುವುದು ಎಂದು ಹೇಳಲಾಗುತ್ತದೆ.

4. ಮಹಿಳೆಯರನ್ನು ನಿಂದಿಸಬಾರದು
ಶನಿ ಜಯಂತಿಯಂದು ಮಹಿಳೆಯರನ್ನು ನಿಂದಿಸುವುದು ಮಾಡಬಾರದು. ಮಹಿಳೆಯರ ಮನಸ್ಸಿಗೆ ನೋವಾದರೆ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಮಹಿಳೆಯರನ್ನು ನಿಂದಿಸಿದರೆ ಶನಿ ತನ್ನ ದೃಷ್ಟಿಯನ್ನು ನಿಮ್ಮ ಮೇಲೆ ಬೀರುತ್ತಾನೆ. ಇದರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

5. ಹೊಸ ಬಟ್ಟೆ ಕೊಳ್ಳುವುದು, ಧರಿಸುವುದು ಮಾಡಬಾರದು
ಶನಿಯ ಹುಟ್ಟಿದ ದಿನ ಯಾವುದೇ ಹೊಸ ಬಟ್ಟೆ ಕೊಳ್ಳುವುದು, ಧರಿಸುವುದು ಮಾಡಬಾರದು, ಹೊಸ ಬಟ್ಟೆ ಧರಿಸುವುದರಿಂದ ಕೆಡಕು ಉಂಟಾಗುವುದು. ಈ ದಿನ ಕಪ್ಪು ಬಟ್ಟೆ ಧರಸಿದರೆ ಒಳ್ಳೆಯದು. ಶನಿ ದೇವನ ಮಂತ್ರ ಹೇಳುತ್ತಾ, ಉಪವಾಸವಿದ್ದು ಪೂಜೆ ಮಾಡುವುದರಿಂದ ಬದುಕಿನಲ್ಲಿದ್ದ ಕಷ್ಟಗಳು ದೂರವಾಗುವುದು.



Click it and Unblock the Notifications