Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
Diwali 2022: ದೀಪಾವಳಿಯಂದು ಈ ವಸ್ತುಗಳನ್ನು ದಾನ ಮಾಡಿದರೆ ಅಶುಭ, ಲಕ್ಷ್ಮಿ ಕೋಪಗೊಳ್ಳುತ್ತಾಳೆ
ಲಕ್ಷ್ಮಿ ದೇವಿಯನ್ನು ಆರಾಧಿಸುವ ದೀಪಾವಳಿ ಹಬ್ಬ ಎಂದರೆ ಸಂಬಂಧಿಕರು, ಸ್ನೇಹಿತರಿಗೆ ಉಡುಗೊರೆಗಳನ್ನು ಕೊಡುವುದು ಹಾಗೂ ಪಡೆಯುವುದು ಹಬ್ಬದ ಪ್ರಮುಖ ಆಚರಣೆ. ಜನರು ದೀಪಾವಳಿಗೆ ಹಲವು ದಿನಗಳ ಮೊದಲೇ ಈ ಉಡುಗೊರೆಗಳ ತಯಾರಿ ಆರಂಭಿಸುತ್ತಾರೆ. ಈ ಕೊಡುಗೆಗಳನ್ನು ನೀಡುವಾಗ ಹಾಗೂ ಪಡೆಯುವಾಗ ಬಹಳ ಎಚ್ಚರಿಕೆಯಿಂದಿರಬೇಕು.
ಏಕೆಂದರೆ ದೀಪಾವಳಿ ಹಬ್ಬದಲ್ಲಿ ಆರಾದಿಸುವ ದೇವಿ ಲಕ್ಷ್ಮಿ ಬಹಳ ಕಟ್ಟುನಿಟ್ಟಿನ, ಶುದ್ಧತೆಯನ್ನು ಬಯಸುವ ದೇವಿ. ಉಡುಗೊರೆ ನೀಡುವಾಗ ನಾವು ಮಾಡುವ ಅಪಚಾರದಿಂದ ಲಕ್ಷ್ಮಿದೇವಿಗೆ ಸಿಟ್ಟು ಬರಬಹುದು.
ಜ್ಯೋತಿಶಾಸ್ತ್ರ ಹಾಗೂ ವಾಸ್ತು ಶಾಸ್ತ್ರದಲ್ಲಿ ಅಂತಹ ಕೆಲವು ವಿಷಯಗಳನ್ನು ಹೇಳಲಾಗಿದೆ, ದೀಪಾವಳಿಯ ಸಮಯದಲ್ಲಿ ಯಾವುದನ್ನು ದಾನವಾಗಿ ನೀಡಬಾರದು ಮುಂದೆ ನೋಡೋಣ:

ಕರವಸ್ತ್ರ ಅಥವಾ ಸುಗಂಧ ದ್ರವ್ಯ
ದೀಪಾವಳಿಯಂದು ಯಾರಿಗೂ ಕರವಸ್ತ್ರ ಅಥವಾ ಸುಗಂಧ ದ್ರವ್ಯಗಳನ್ನು ನೀಡುವುದನ್ನು ವಾಸ್ತುಶಾಸ್ತರ ನಿಷೇಧಿಸುತ್ತದೆ. ಯಾರಾದರೂ ಇದನ್ನು ಮಾಡಿದರೆ, ಅದು ಅವನ ಶುಕ್ರನನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, ಉಡುಗೊರೆಯಾಗಿ ಸುಗಂಧವನ್ನು ನೀಡುವ ಮೂಲಕ, ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪೊರಕೆ
ವಿಶೇಷವಾಗಿ ದೀಪಾವಳಿಯಂದು ಪೊರಕೆಯನ್ನು ಎಂದಿಗೂ ದಾನ ಮಾಡಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ಪೊರಕೆಯನ್ನು ದಾನ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಮತ್ತು ಇದರಿಂದ ಮನೆಗಳಲ್ಲಿ ಬಡತನ ಎದುರಾಗುತ್ತದೆ.

ದೀಪದ ಎಣ್ಣೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೀಪಾವಳಿ ಸಮಯದಲ್ಲಿ ಬಳಸಿದ ಎಣ್ಣೆಯನ್ನು ಎಂದಿಗೂ ದಾನ ಮಾಡಬೇಡಿ. ಇದರಿಂದ ಶನಿದೇವ ಸಿಟ್ಟಾಗುತ್ತಾನೆ ಎನ್ನಲಾಗಿದ್ದು, ಒಮ್ಮೆ ಶನಿಗ್ರಹ ಕೋಪಗೊಂಡರೆ ಇಡೀ ಮನೆಗೆ ಸಮಸ್ಯೆ.

ಹರಿದ ಪುಸ್ತಕಗಳನ್ನು ದಾನ ಮಾಡಬೇಡಿ
ಮಹಿಳೆಯರು ದೀಪಾವಳಿಗೆ ಬಂದು ತಮ್ಮ ಮನೆಯಲ್ಲಿ ಇಟ್ಟಿರುವ ಹಳೆಯ ಮತ್ತು ಮುರಿದ ವಸ್ತುಗಳನ್ನು ಕಸದ ಬುಟ್ಟಿಗೆ ನೀಡುತ್ತಾರೆ. ಪ್ರತಿ ಪುಸ್ತಕಗಳನ್ನು ದಾನ ಮಾಡುವಾಗ, ಹರಿದ ಪುಸ್ತಕಗಳನ್ನು ದಾನ ಮಾಡುವುದರಿಂದ ಕಲಿಕೆ ಕಡಿಮೆಯಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಪ್ಲಾಸ್ಟಿಕ್ ವಸ್ತು
ಎಂದಿಗೂ ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡಬೇಡಿ. ಅದರಲ್ಲೂ ದೀಪಾವಳಿ ಸಮಯದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡುವುದರಿಂದ ವ್ಯಾಪಾರ ಅಥವಾ ಉದ್ಯೋಗ ನಷ್ಟವಾಗುತ್ತದೆ.

ಗಾಜಿನ ಸಾಮಾನುಗಳನ್ನು ನೀಡಬೇಡಿ
ಜ್ಯೋತಿಷ್ಯದಲ್ಲಿ ಗಾಜು ಒಡೆಯುವುದನ್ನು ಕೆಟ್ಟದಾಗಿ ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಯು ಗಾಜಿನಿಂದ ಮಾಡಿದ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದನ್ನು ತಡೆಯಬೇಕು. ಏಕೆಂದರೆ ಅವುಗಳು ಮುರಿಯುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇಷ್ಟೇ ಅಲ್ಲ, ಸ್ವೀಕರಿಸುವವ ಮತ್ತು ಕೊಡುವ ಇಬ್ಬರಿಗೂ ತೊಂದರೆಯಾಗಬಹುದು.

ಪಾದರಕ್ಷೆಗಳು
ದೀಪಾವಳಿಯಂದು ಶೂ ಮತ್ತು ಚಪ್ಪಲಿಯನ್ನು ಉಡುಗೊರೆಯಾಗಿ ನೀಡಬಾರದು. ವಾಸ್ತು ತಜ್ಞರ ಪ್ರಕಾರ, ತಪ್ಪಾಗಿಯೂ ಇದನ್ನು ಮಾಡಿದರೆ, ಅವರ ಸಂತೋಷ ಮತ್ತು ಸಮೃದ್ಧಿ ದೂರವಾಗುತ್ತದೆ, ಆರ್ಥಿಕ ಸಮಸ್ಯೆಗಳು ಸುತ್ತುವರೆಯಬಹುದು. ಅಲ್ಲದೆ ನಿಮ್ಮ ಅದೃಷ್ಟವನ್ನು ಇತರರಿಗೆ ಹಸ್ತಾಂತರಿಸಿದಂತೆ.



Click it and Unblock the Notifications











