Just In
- 1 hr ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 2 hrs ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 4 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 4 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- News ಹಾಸನದಲ್ಲಿ ಬಿಜೆಪಿಯ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ: ಮತ್ತೆ ಸಂಕಷ್ಟದಲ್ಲಿ ದಳಪತಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಗ್ಗಿ ಸಂಕ್ರಾಂತಿ 2020: ಪೂಜೆಗೆ ಶುಭ ಮುಹೂರ್ತ ಹಾಗೂ ದಿನದ ವಿಶೇಷತೆ
ಸಂಕ್ರಾಂತಿ ಸೂರ್ಯ ದೇವನಿಗೆ ಅರ್ಪಿತವಾದ ಹಬ್ಬ. ಈ ದಿನ ಸೂರ್ಯ ತನ್ನ ಪಥವನ್ನು ಬದಲಿಸುವ ಸಂಕೇತವಾಗಿ ಉತ್ತರಾಯಣ ಮಕರ ಸಂಕ್ರಾಂತಿ ಹಾಗೂ ದಕ್ಷಿಣಾಯನ ಮಕರ ಸಂಕ್ರಾಂತಿ ಎಂದು ಆಚರಣೆ ಮಾಡುವುದು ರೂಢಿಯಲ್ಲಿದೆ. 2020 ಸಾಲಿನಲ್ಲಿ ಮಕರ ಸಂಕ್ರಾಂತಿಯನ್ನು ಜನವರಿ 15ರಂದು ಬುಧವಾರ ದೇಶಾದ್ಯಣತ ಆಚರಿಸುತ್ತಾರೆ.
ದಕ್ಷಿಣ ಭಾರತದಲ್ಲಿ ಸಂಕ್ರಾಂತಿ ಹಬ್ಬದ ಮರುದಿನ ಕೃಷ್ಣನನ್ನು ಪೂಜಿಸುವ ಸಂಪ್ರದಾಯ ಸಹ ಇದೆ. ಕಾರಣ ಮಕರ ಸಂಕ್ರಾಂತಿಯ ನಂತರದ ದಿನವೇ ಶ್ರೀ ಕೃಷ್ಣ ಪರಮಾತ್ಮ ಗೋವರ್ಧನ ಗಿರಿಯನ್ನು ಎತ್ತಿದ್ದ, ಆದ ಕಾರಣ ಮರುದಿನ ಕೃಷ್ಣನ ಪೂಜೆಯನ್ನು ಮಾಡಲಾಗುತ್ತದೆ.
ಫಸಲು ಪಡೆದ ಹರ್ಷದಲ್ಲಿ ರೈತರು
ಇದೇ ಸಮಯದಲ್ಲಿ ರೈತರು ತಮ್ಮ ಬೆಳೆಗಳನ್ನು ಬೆಳೆದು ಫಸಲವನ್ನು ಪಡೆಯುತ್ತಾರೆ. ಆದ್ದರಿಂದ ಈ ಹಬ್ಬದಲ್ಲಿ ಗೆಣಸು, ಕಡಲೆಕಾಯಿ, ಅವರೇಕಾಯಿ, ಎಳ್ಳು, ಬೆಲ್ಲ, ಇವುಗಳನ್ನು ದೇವರಿಗೆ ಇಟ್ಟು ಪೂಜೆ ಮಾಡುವುದು. ಹಸುಗಳಿಗೆ ಕಿಚ್ಚು ಹಾಯಿಸುವುದನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದಂತೆ ಆಚರಿಸುತ್ತಾರೆ. ಹಿಂದಿನಿಂದಲೂ ಬಂದ ಸಂಪ್ರದಾಯವಾಗಿದೆ.
2020 ಜನವರಿ 15ರಂದು ಪೂಜೆ ಮಾಡಲು ಶುಭ ಮುಹೂರ್ತ
ಮಕರ ಸಂಕ್ರಾಂತಿ ಪುಣ್ಯ ಕಾಲ: ಬೆಳಿಗ್ಗೆ 7:15 ರಿಂದ ಸಂಜೆ 5:46 ರವರೆಗೆ
ಮಕರ ಸಂಕ್ರಾಂತಿ ಪುಣ್ಯ ಕಾಲ: ಬೆಳಿಗ್ಗೆ 7:15 ರಿಂದ ಬೆಳಿಗ್ಗೆ 9ರವರೆಗೆ
ಸಂಕ್ರಾಂತಿ ದಿನ ಮಾಡುವ ವಿಧಿ-ವಿಧಾನಗಳು
* ಸೂರ್ಯ ಹುಟ್ಟುವ ಮುನ್ನವೇ ಎದ್ದು ಪುಣ್ಯ ಜಲದಲ್ಲಿ ಸ್ನಾನ ಮಾಡುವುದು
* ಮನೆ ಮುಂದೆ ಆಕರ್ಷಕವಾದ ಬಣ್ಣಗಳಿಂದ ತುಂಬಿದ ರಂಗೋಲಿ ಹಾಕುವುದು
* ಮಡಿಯಿಂದ ಪೂಜಾ ವಿಧಿ-ವಿಧಾನಗಳನ್ನು ಮಾಇ, ಸೂರ್ಯ ದೇವನಿಗೆ ವಂದಿಸುವುದು
* ಪ್ರಸಾದವಾಗಿ ಸಿಹಿ ಹಾಗೂ ಖಾರ ಪೊಂಗಲ್ ತಯಾರಿಸಿ ಹಂಚುವುದು
* ಎಳ್ಳು-ಬೆಲ್ಲ ತಯಾರಿಸಿ ಎಲ್ಲರ ಮನೆಗೆ ಕೊಟ್ಟು ಸಿಹಿ ಮಾತುಗಳನ್ನು ಆಡುವುದು
* ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸುವುದು
ಯಾವ ರಾಜ್ಯದಲ್ಲಿ ಹೇಗೆ ಆಚರಣೆ?
ಸಂಪ್ರದಾಯ ಅಚರಣೆಯ ಪದ್ಧತಿ ವಿಭಿನ್ನವಾದರೂ ಮಕರ ಸಂಕ್ರಾಂತಿಯನ್ನು ಇಡೀ ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಆಯಾ ಆಚರಣೆಗೆ ತಕ್ಕಂತೆ, ಅಲ್ಲಿನ ದೇಶಿಯ ಭಾಷೆಗಳಲ್ಲಿ ಭಿನ್ನವಾಗಿ ಕರೆದರೂ ಈ ಹಬ್ಬ ಎಲ್ಲ ರಾಜ್ಯದಲ್ಲೂ ಸೂರ್ಯದ ಪತ ಬದಲಾವಣೆಯ ಸಂಕೇತವಾಗಿಯೇ ಆಚರಿಸಲಾಗುತ್ತದೆ.
* ಕರ್ನಾಟಕದಲ್ಲಿ ಸಂಕ್ರಾಂತಿ ಅಥವಾ ಮಕರ ಸಂಕ್ರಾಂತಿ ಎಂಬ ಹೆಸರಿನಿಂದ ಆಚರಿಸುವುದು ವಾಡಿಕೆ.
* ತಮಿಳುನಾಡಿನಲ್ಲಿ ಇದು ಅತ್ಯಂತ ಪ್ರಮುಖವಾದ ಹಬ್ಬವಾಗಿದೆ. ಇಲ್ಲಿ ಪೊಂಗಲ್ ಎಂದು ಈ ಹಬ್ಬ ಆಚರಿಸುತ್ತಾರೆ. ಅಲ್ಲದೇ ನಾಲ್ಕು ದಿನಗಳ ಕಾಲ ಸಾಕಷ್ಟು ಸಂಭ್ರಮ ಸಡಗರದಿಂದ ಈ ಹಬ್ಬವನ್ನು ಆಚರಿಸುತ್ತಾರೆ.
* ಆಂಧ್ರಪ್ರದೇಶದಲ್ಲಿ ಪೆದ್ದ ಪಂಡುಗ ಎಂದು ಸಂಕ್ರಾಂತಿಯನ್ನು ಆಚರಿಸುತ್ತಾರೆ. ಇಲ್ಲಿ ಸಹ ತಮಿಳುನಾಡಿನಂತೆ 4 ದಿನಗಳ ಕಾಲ ಆಚರಿಸಲಾಗುತ್ತದೆ.
* ಗುಜರಾತ್ನಲ್ಲಿ ಉತ್ತರಾಯಣ ಎಂದು ಆಚರಿಸುತ್ತಾರೆ.
* ಅಸ್ಸಾಂನಲ್ಲಿ ಮಾಘ ಬಿಹು ಅಥವಾ ಭೋಗಾಲಿ ಎಂಬ ಹೆಸರಿನಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.
* ಪಂಜಾಬ್ನಲ್ಲಿ ಈ ಹಬ್ಬವನ್ನು ಲೋಹ್ರಿ ಎಂದು ಆಚರಿಸುತ್ತಾರೆ.