Latest Updates
-
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ
ಇಂದಿಗೂ ಹನುಮಂತನ ಆದರ್ಶ ಗುಣಗಳು ಇಡೀ ಜಗತ್ತಿಗೇ ಮಾದರಿ...
ಶ್ರೀರಾಮ-ಸೀತಾಮಾತೆಯನ್ನು ತನ್ನ ಹೃದಯದಲ್ಲಿ ಪೂಜಿಸುತ್ತಿದ್ದ ಹನುಮನು ಒಮ್ಮೆ ತಮ್ಮ ಎದೆಯನ್ನು ಬಗೆದು ಆ ಭಕ್ತಿಯ ಆಳವನ್ನು ಪ್ರದರ್ಶಿಸುತ್ತಾರೆ. ಇಂತಹ ಮಹಾನ್ ಪರಮಭಕ್ತನ ಜೀವನದಿಂದ ನಾವು ಸಾಮಾನ್ಯ ಮನುಷ್ಯರು ಅರಿತುಕೊಳ್ಳಬೇಕಾದ ಸಾಕಷ್ಟಿದೆ.
ಅಂಜನೀಪುತ್ರ ವೀರ ಹನುಮಾನ್ ಇಂದು ಹೆಚ್ಚಿನವರಿಗೆ ಮಾರ್ಗದರ್ಶಕರು, ಗುರುಗಳು ಎಂದೆನಿಸಿದ್ದಾರೆ. ದೇವರಾಗಿ ಅವರನ್ನು ಪೂಜಿಸುವುದು ಮಾತ್ರವಲ್ಲದೆ ಸಾಹಸ ಪರಾಕ್ರಮಗಳ ಹೆಸರು ಬಂತೆಂದರೆ ಅಲ್ಲಿ ಬರುವ ಮೊದಲ ಹೆಸರೇ ಆಂಜನೇಯ. ಯಾವುದೇ ಕುಸ್ತಿ ಅಖಾಡಾದಲ್ಲಿ ಹನುಮನನ್ನು ಪೂಜಿಸಿ ನಂತರಷ್ಟೇ ತಾಲೀಮನ್ನು ನಡೆಸುತ್ತಾರೆ. ಹೀಗೆ ಆಂಜನೇಯನು ಪ್ರತಿಯೊಬ್ಬ ಕುಸ್ತಿ ಪಟು, ಜಿಮ್ ಪಟು, ಸಾಧಕರನ್ನು ಮುನ್ನಡೆಸುವವರಾಗಿದ್ದಾರೆ. ರಾಮಾಯಣದಲ್ಲಿ ಬರುವ ಕಥೆಯಲ್ಲಿ ಹನುಮನಿಗೆ ತಮ್ಮ ಸಾಧನೆ ಪರಾಕ್ರಮಗಳ ಬಗ್ಗೆ ಅರಿವೇ ಇರುವುದಿಲ್ಲ.
ಶ್ರೀರಾಮನ ಸಂದೇಶವನ್ನು ರಾವಣನ ಬಂಧನದಲ್ಲಿರುವ ಸೀತಾ ಮಾತೆಗೆ ತಲುಪಿಸುವ ಬಗೆ ಮತ್ತು ಆಕೆಯ ಯೋಗಕ್ಷೇಮವನ್ನು ಅರಿತುಕೊಳ್ಳಲು ಯಾರನ್ನು ಕಳುಹಿಸುವುದು ಎಂಬುದಾಗಿ ಚರ್ಚೆ ನಡೆಸುವಾಗ ಎಲ್ಲರೂ ಹನುಮನ ಹೆಸರನ್ನು ಸೂಚಿಸುತ್ತಾರೆ. ಆದರೆ ಹನಮಂತನಿಗೆ ತಮ್ಮ ಶಕ್ತಿ ಸಾಮರ್ಥ್ಯದ ಮೇಲೆಯೇ ನಂಬಿಕೆ ಇರುವುದಿಲ್ಲ. ಇದರಿಂದ ಅವರು ಮೊದಲು ಹಿಂಜರಿಯುತ್ತಾರೆ. ಆದರೆ ಸುಗ್ರೀವನು ಅಂಜನೀ ಪುತ್ರನ ಗುಣಗಾನ ಅವರ ಶಕ್ತಿ ಪರಾಕ್ರಮಗಳನ್ನು ಹೊಗಳುತ್ತಾ ಹೋದಂತೆ ಬೃಹದಾಕಾರವಾಗಿ ಆಂಜನೇಯ ನಿಂತುಬಿಡುತ್ತಾರೆ.
ಕೇವಲ ಹೊಗಳಿಕೆಯಿಂದ ಉಬ್ಬಿ ಹನುಮಂತ ದೈತ್ಯ ಗಾತ್ರವನ್ನು ಪಡೆಯುವುದಿಲ್ಲ ಬದಲಿಗೆ ತನ್ನನ್ನು ತಾನು ಅಹಂಕಾರದಿಂದ ಕಂಡುಕೊಳ್ಳದೇ ಸಹೋದರ ಸುಗ್ರೀವನ ಅಕ್ಕರೆಯ ವಾತ್ಸಲ್ಯಮಯ ಹೊಗಳುವಿಕೆಯಿಂದ ಹನುಮ ತಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳುತ್ತಾರೆ.
ಹನುಮನನ್ನು ಕುರಿತ ಇಂತಹುದೇ ಮತ್ತಷ್ಟು ಕಥಾನಕಗಳನ್ನು ನಾವು ಸಂಪೂರ್ಣ ರಾಮಾಯಣದಲ್ಲಿ ಕಂಡುಕೊಳ್ಳಬಹುದಾಗಿದೆ. ತಾನು ಪರಾಕ್ರಮಶಾಲಿ ಎಂಬುದು ಅವರಿಗೆ ಗೊತ್ತಿದ್ದರೂ ಜಂಭದಿಂದ ನಡೆದುಕೊಳ್ಳದೇ ಕೊನೆಯವರೆಗೂ ಶ್ರೀರಾಮನ ಬಂಟನಾಗಿಯೇ ಅವರು ಉಳಿದುಕೊಂಡು ತಮ್ಮ ಸ್ವಾಮಿ ಪ್ರೇಮವನ್ನು ಮೆರೆಯುತ್ತಾರೆ. ಶ್ರೀರಾಮ ಮತ್ತು ಸೀತಾಮಾತೆಯನ್ನು ತನ್ನ ಹೃದಯದಲ್ಲಿ ಪೂಜಿಸುತ್ತಿದ್ದ ಹನುಮನು ಒಮ್ಮೆ ತಮ್ಮ ಎದೆಯನ್ನು ಬಗೆದು ಆ ಭಕ್ತಿಯ ಆಳವನ್ನು ಪ್ರದರ್ಶಿಸುತ್ತಾರೆ. ಇಷ್ಟೆಲ್ಲಾ ಮಹಾನ್ ಅದ್ಭುತಗಳನ್ನು ಹೊಂದಿರುವ ಸ್ವಾಮಿಯ ಜೀವನದಿಂದ ನಾವು ಸಾಮಾನ್ಯ ಮನುಷ್ಯರು ಅರಿತುಕೊಳ್ಳಬೇಕಾದ ಬೇಕಾದಷ್ಟು ಅಂಶಗಳಿವೆ. ಇಂದಿನ ಲೇಖನದಲ್ಲಿ ಅವುಗಳೇನು ಎಂಬುದನ್ನು ಅರಿತುಕೊಳ್ಳೋಣ.....

ಶಕ್ತಿ ಮತ್ತು ಮಾನವೀಯತೆ
ಬಲಶಾಲಿಯೆಂದರೆ ಅದು ಹನುಮ ಎಂಬ ಮಾತೊಂದಿದೆ. ಅದಾಗ್ಯೂ ಅವರು ಶ್ರೀರಾಮನನ್ನು ಅನುಸರಿಸುವ ಸ್ವಾಮಿ ಭಕ್ತರಾಗಿದ್ದಾರೆ. ಇದು ನಾವು ಕಲಿತುಕೊಳ್ಳಬೇಕಾದ ಪಾಠವಾಗಿದೆ. ನಮ್ಮ ಕೈಗಳಲ್ಲಿ ನಾವು ಶಕ್ತಿಯನ್ನು ಪಡೆದುಕೊಂಡಾಗ ಅಹಂಕಾರದಿಂದ ಮೆರೆಯುತ್ತೇವೆ. ಮಾನವೀಯತೆಯನ್ನು ಮರೆತುಬಿಡುತ್ತೇವೆ. ನೀವು ಶಕ್ತಿವಂತರೂ ಮತ್ತು ಬಲಾಢ್ಯರು ಎಂದೆನಿಸಿದ್ದರೂ ಮಾನವೀಯತೆಯನ್ನು ಕಳೆದುಕೊಳ್ಳದೇ ಇರುವುದು ಮುಖ್ಯವಾಗಿದೆ

ಧೈರ್ಯ
ನಮ್ಮ ಎದುರಾಳಿ ನಮ್ಮಿಂದ ಸಾವಿರ ಪಟ್ಟು ಬಲಶಾಲಿಯಾಗಿದ್ದರೂ ಅವರನ್ನು ಮಣಿಸುವುದು ಹೇಗೆ ಎಂಬುದನ್ನು ನಾವು ಹನುಮನಿಂದ ಕಲಿತುಕೊಳ್ಳಬಹುದಾಗಿದೆ. ಸೋತು ಹಿಮ್ಮೆಟ್ಟಿದರೆ ಮಾತ್ರವೇ ನಾವು ಸೋಲುತ್ತೇವೆ. ಅಂಜಿಕೆಯಿಂದ ಬಳಲಿದರೆ ಮಾತ್ರವೇ ಸೋಲು ನಮ್ಮನ್ನು ಸ್ವಾಗತಿಸುತ್ತದೆ. ಆದ್ದರಿಂದ ಎಂತಹ ಪರಿಸ್ಥಿತಿಯಲ್ಲೂ ಕೆಚ್ಚೆದೆಯಿಂದ ಹೋರಾಡಬೇಕು ಎಂಬುದನ್ನು ನಾವು ಹನುಮನಿಂದ ಕಲಿತುಕೊಳ್ಳಬಹುದಾದ ಪಾಠವಾಗಿದೆ.

ಶರಣಾಗತಿ
ನಿಜವಾದ ಶರಣಾಗತಿ ಎಂದರೆ ಅದು ಜ್ಞಾನದ ಪ್ರವೇಶವಾಗಿದೆ. ನಮ್ಮ ಸಾಧನೆಗಳಿಗಿಂತಲೂ ಮಿಗಿಲಾಗಿ ನಾವು ನಿಸರ್ಗದ ಪರಮಾತ್ಮನ ಕೈಗೊಂಬೆಯಾಗಿದ್ದೇವೆ. ಆದ್ದರಿಂದಲೇ ಪರಾಕ್ರಮಿ ಹನುಮನು ಶ್ರೀರಾಮನಿಗೆ ಶರಣಾಗತರಾಗಿದ್ದರು. ಅಹಂಕಾರದಲ್ಲಿ ಮೆರೆಯುವುದಕ್ಕಿಂತ ಶರಣಾಗತರಾಗಿ ಪ್ರೀತಿಯನ್ನು ಕಂಡುಕೊಳ್ಳೋಣ.

ಸಹಾಯ ಗುಣ
ತಮ್ಮ ಸುತ್ತಮುತ್ತಲಿನವರಿಗೆ ಸಹಾಯ ಮಾಡುವ ಅನನ್ಯ ಗುಣವನ್ನು ಹನುಮಂತ ಹೊಂದಿದ್ದರು. ರಾವಣನ ಲಂಕೆಗೆ ಹೋಗಿ ಸೀತಾಮಾತೆಯನ್ನು ಕಾಣುವ ದೊಡ್ಡ ಸಾಹಸವನ್ನು ಕೂಡ ಅವರು ಶ್ರೀರಾಮನ ಮೇಲಿದ್ದ ನಿಷ್ಠೆ, ಭಕ್ತಿ ಮತ್ತು ಸಹಾಯ ಗುಣದಿಂದ ಮಾಡಿದ್ದಾರೆ.

ಬಾಂಧವ್ಯ
ಶ್ರೀರಾಮ ಮತ್ತು ಸುಗ್ರೀವನನ್ನು ಒಂದುಗೂಡಿಸುವಲ್ಲಿ ಹನುಮನ ಪಾತ್ರ ಹಿರಿದಾದುದಾಗಿದೆ. ಬಾಂಧವ್ಯವನ್ನು ಬೆಸೆಯುವುದು ಹನುಮನಿಂದ ಕಲಿತುಕೊಳ್ಳಬಹುದಾದ ಪಾಠವಾಗಿದೆ.

ನಿರಂತರತೆ
ಲಂಕೆಯನ್ನು ತಲುಪಲು ಸಮುದ್ರವನ್ನು ದಾಟಿದ ಹನುಮನು ಗುರಿ ಮುಟ್ಟುವ ತಮ್ಮ ನಿರಂತರತೆ ಮತ್ತು ಸಾಮರ್ಥ್ಯಗಳಿಂದ ನಮಗೊಂದು ನೀತಿ ಪಾಠವಾಗಿದ್ದಾರೆ. ಕಷ್ಟಗಳಿಗೆ ಹೆದರದೇ ಸೋಲದೇ ಅದನ್ನು ಎದುರಿಸುವ ಕೆಚ್ಚೆದೆಯನ್ನು ಸ್ಥೈರ್ಯವನ್ನು ಹನುಮಾನ್ ನಮಗೆ ತೋರಿಸಿಕೊಡುತ್ತಾರೆ.



Click it and Unblock the Notifications











