Just In
- 7 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 8 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 9 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 9 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರ್ಷದ ಕೊನೆಯ ಏಕಾದಶಿ ಯಾವಾಗ? ಅದರ ಮಹತ್ವವೇನು?
ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಪ್ರಾಮುಖ್ಯತೆಯಿದ್ದು, ಈ ದಿನದಂದು ಉಪವಾಸ ಮತ್ತು ಪೂಜೆಗೆ ಬಹಳ ಪ್ರಾಶಸ್ತ್ಯವಿದೆ. ಅದೇ ರೀತಿ, 2021 ರ ಕೊನೆಯ ಏಕಾದಶಿಯು ಡಿಸೆಂಬರ್ 30ರಂದು ಬಂದಿದೆ. ಈ ಪುಷ್ಯ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಸಫಲ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು, ಶ್ರದ್ಧೆಯಿಂದ ಮಾಡುವ ಉಪವಾಸವು ಎಲ್ಲಾ ಕಾರ್ಯಗಳಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ಈ ಉಪವಾಸದ ಮಹಿಮೆಯನ್ನು ಮಹಾಭಾರತದಲ್ಲಿ ಶ್ರೀ ಕೃಷ್ಣನೇ ವಿವರಿಸಿದ್ದಾನೆ. ಸಫಲ ಏಕಾದಶಿಯ ತಿಥಿ, ಮುಹೂರ್ತ ಮತ್ತು ಪೂಜಾ ವಿಧಾನದ ಬಗ್ಗೆ ತಿಳಿಯೋಣ.
ಸಫಲ ಏಕಾದಶಿಯ ದಿನಾಂಕ, ಸಮಯ ಹಾಗೂ ಮಹತ್ವದ ಬಗ್ಗೆ ಈ ಕೆಳಗೆ ನೀಡಲಾಗಿದೆ:
ಸಫಲ ಏಕಾದಶಿ ದಿನಾಂಕ ಮತ್ತು ಸಮಯ:
ಮಾರ್ಗಶಿರ ಮಾಸದ ಕೃಷ್ಣ ಏಕಾದಶಿಯನ್ನು ಸಫಲ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಮಾಸದ ಏಕಾದಶಿಯ ದಿನಾಂಕವು ಡಿಸೆಂಬರ್ 29 ರಂದು ಸಂಜೆ 04.00 ರಿಂದ ಪ್ರಾರಂಭವಾಗುತ್ತದೆ. ಇದು ಡಿಸೆಂಬರ್ 30 ರಂದು ಮಧ್ಯಾಹ್ನ 1.30 ಕ್ಕೆ ಕೊನೆಗೊಳ್ಳುತ್ತದೆ. ಡಿಸೆಂಬರ್ 30 ರಂದು ಏಕಾದಶಿಯಂದು ಸೂರ್ಯೋದಯವಾಗುವುದರಿಂದ, ಸಫಲ ಏಕಾದಶಿಯ ಉಪವಾಸವನ್ನು ಈ ದಿನ ಮಾತ್ರ ಆಚರಿಸಲಾಗುತ್ತದೆ. ಮರುದಿನ ಡಿಸೆಂಬರ್ 31ರ ದ್ವಾದಶಿಯಂದು ಉಪವಾಸ ಅಂತ್ಯಗೊಳ್ಳಲಿದೆ.
ಏಕಾದಶಿ ತಿಥಿ ಆರಂಭ: ಡಿಸೆಂಬರ್ 29 ರಂದು ಸಂಜೆ 04.00
ಏಕಾದಶಿ ತಿಥಿ ಮುಕ್ತಾಯ: ಡಿಸೆಂಬರ್ 30 ರಂದು ಮಧ್ಯಾಹ್ನ 1.30 ಕ್ಕೆ
ಪಾರಣ ಸಮಯ: ಡಿಸೆಂಬರ್ 31ರಂದು ಬೆಳಗ್ಗೆ 06:41ರಿಂದ 08:58ರವರೆಗೆ
ಸಫಲ ಏಕಾದಶಿಯ ಮಹತ್ವ:
ಮಾರ್ಗಶಿರ-ಪುಷ್ಯ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಸಫಲಾ ಏಕಾದಶಿ ಎಂದು ಹೇಳಲಾಗುತ್ತದೆ. ಈ ಏಕಾದಶಿಯನ್ನು ಹಿಂದೂ ಪಂಚಾಂಗದಲ್ಲಿ ಸರ್ವೈಕಾದಶೀ ಎಂದು ಕರೆಯಲಾಗುತ್ತದೆ. ಇನ್ನು ಉತ್ತರ ಭಾರತದಾದ್ಯಂತ ಈ ಏಕಾದಶಿಯನ್ನು ಪುಷ್ಯ ಏಕಾದಶಿಯೆಂದೂ ಕರೆಯುತ್ತಾರೆ. ಈ ದಿನ ವಿಷ್ಣು ಮತ್ತು ಅವನ ಎಲ್ಲಾ ಅವತಾರಗಳನ್ನು ಪೂಜಿಸುವುದರಿಂದ ವಿಶೇಷ ಫಲ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಏಕಾದಶಿಯ ಎಲ್ಲಾ ಉಪವಾಸಗಳಲ್ಲಿ, ಸಫಲ ಏಕಾದಶಿಯ ಉಪವಾಸವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ನಿಜವಾದ ಶ್ರದ್ಧೆ ಮತ್ತು ನಂಬಿಕೆಯೊಂದಿಗೆ ಈ ಉಪವಾಸವನ್ನು ಆಚರಿಸುವ ಮೂಲಕ, ನಿಮಗೆ ಅದೃಷ್ಟ ಮತ್ತು ಯಶಸ್ಸು ಸಿಗುತ್ತದೆ.
ಸಫಲ ಏಕಾದಶಿಯ ಪೂಜಾ ವಿಧಾನ:
ಸಫಲ ಏಕಾದಶಿ ದಿನದಂದು ಬೆಳಗ್ಗೆ ಎದ್ದ ಸ್ನಾನ ಮಾಡಿ ನಂತರ ಉಪವಾಸ ವ್ರತವನ್ನು ಮಾಡುವುದಾಗಿ ಪ್ರತಿಜ್ಞೆ ಮಾಡಿಕೊಳ್ಳಬೇಕು.
ನಂತರ ನಿಮ್ಮ ಪೂಜಾ ಸ್ಥಳದಲ್ಲಿ ಗಂಗಾಜಲವನ್ನು ಸಿಂಪಡಿಸಿ ವಿಷ್ಣುವನ್ನು ವಿಧಿ - ವಿಧಾನಗಳ ಮೂಲಕ ಪೂಜಿಸಿ.
ತುಳಸಿ ಎಲೆಗಳು, ಧೂಪದ್ರವ್ಯ, ಅಗರಬತ್ತಿ, ವೀಳ್ಯದೆಲೆ, ಅಡಿಕೆ, ಹಳದಿ ಬಣ್ಣದ ಹಣ್ಣುಗಳು ಮತ್ತು ತೆಂಗಿನಕಾಯಿಗಳು ಭಗವಾನ್ ವಿಷ್ಣುವಿನ ಅಚ್ಚುಮೆಚ್ಚಿನ ವಸ್ತುಗಳು. ಪೂಜಿಸಿದ ನಂತರ ಇದನ್ನು ಅವರಿಗೆ ಅರ್ಪಿಸಿ.
ಈ ಶುಭ ಸಂದರ್ಭದಲ್ಲಿ ವಿಷ್ಣುವಿನೊಂದಿಗೆ ಕೃಷ್ಣನನ್ನೂ ಪೂಜಿಸಲಾಗುತ್ತದೆ.
ಈ ಸಂದರ್ಭದಲ್ಲಿ ಕೆಲವರು ತಮ್ಮ ಮನೆಯಲ್ಲಿ ಭಗವಾನ್ ಸತ್ಯನಾರಾಯಣನ ಕಥೆಯನ್ನು ಹೇಳುತ್ತಾರೆ ಹಾಗೂ ಓದುತ್ತಾರೆ.
ಉಪವಾಸದ ಕಥೆಯನ್ನು ಓದಿ ನಂತರ ಭೋಗವನ್ನು ಅರ್ಪಿಸಿ.