Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು!
ವರ್ಷದ ಕೊನೆಯ ಏಕಾದಶಿ ಯಾವಾಗ? ಅದರ ಮಹತ್ವವೇನು?
ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಪ್ರಾಮುಖ್ಯತೆಯಿದ್ದು, ಈ ದಿನದಂದು ಉಪವಾಸ ಮತ್ತು ಪೂಜೆಗೆ ಬಹಳ ಪ್ರಾಶಸ್ತ್ಯವಿದೆ. ಅದೇ ರೀತಿ, 2021 ರ ಕೊನೆಯ ಏಕಾದಶಿಯು ಡಿಸೆಂಬರ್ 30ರಂದು ಬಂದಿದೆ. ಈ ಪುಷ್ಯ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಸಫಲ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು, ಶ್ರದ್ಧೆಯಿಂದ ಮಾಡುವ ಉಪವಾಸವು ಎಲ್ಲಾ ಕಾರ್ಯಗಳಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ಈ ಉಪವಾಸದ ಮಹಿಮೆಯನ್ನು ಮಹಾಭಾರತದಲ್ಲಿ ಶ್ರೀ ಕೃಷ್ಣನೇ ವಿವರಿಸಿದ್ದಾನೆ. ಸಫಲ ಏಕಾದಶಿಯ ತಿಥಿ, ಮುಹೂರ್ತ ಮತ್ತು ಪೂಜಾ ವಿಧಾನದ ಬಗ್ಗೆ ತಿಳಿಯೋಣ.
ಸಫಲ ಏಕಾದಶಿಯ ದಿನಾಂಕ, ಸಮಯ ಹಾಗೂ ಮಹತ್ವದ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಸಫಲ ಏಕಾದಶಿ ದಿನಾಂಕ ಮತ್ತು ಸಮಯ:
ಮಾರ್ಗಶಿರ ಮಾಸದ ಕೃಷ್ಣ ಏಕಾದಶಿಯನ್ನು ಸಫಲ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಮಾಸದ ಏಕಾದಶಿಯ ದಿನಾಂಕವು ಡಿಸೆಂಬರ್ 29 ರಂದು ಸಂಜೆ 04.00 ರಿಂದ ಪ್ರಾರಂಭವಾಗುತ್ತದೆ. ಇದು ಡಿಸೆಂಬರ್ 30 ರಂದು ಮಧ್ಯಾಹ್ನ 1.30 ಕ್ಕೆ ಕೊನೆಗೊಳ್ಳುತ್ತದೆ. ಡಿಸೆಂಬರ್ 30 ರಂದು ಏಕಾದಶಿಯಂದು ಸೂರ್ಯೋದಯವಾಗುವುದರಿಂದ, ಸಫಲ ಏಕಾದಶಿಯ ಉಪವಾಸವನ್ನು ಈ ದಿನ ಮಾತ್ರ ಆಚರಿಸಲಾಗುತ್ತದೆ. ಮರುದಿನ ಡಿಸೆಂಬರ್ 31ರ ದ್ವಾದಶಿಯಂದು ಉಪವಾಸ ಅಂತ್ಯಗೊಳ್ಳಲಿದೆ.
ಏಕಾದಶಿ ತಿಥಿ ಆರಂಭ: ಡಿಸೆಂಬರ್ 29 ರಂದು ಸಂಜೆ 04.00
ಏಕಾದಶಿ ತಿಥಿ ಮುಕ್ತಾಯ: ಡಿಸೆಂಬರ್ 30 ರಂದು ಮಧ್ಯಾಹ್ನ 1.30 ಕ್ಕೆ
ಪಾರಣ ಸಮಯ: ಡಿಸೆಂಬರ್ 31ರಂದು ಬೆಳಗ್ಗೆ 06:41ರಿಂದ 08:58ರವರೆಗೆ

ಸಫಲ ಏಕಾದಶಿಯ ಮಹತ್ವ:
ಮಾರ್ಗಶಿರ-ಪುಷ್ಯ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಸಫಲಾ ಏಕಾದಶಿ ಎಂದು ಹೇಳಲಾಗುತ್ತದೆ. ಈ ಏಕಾದಶಿಯನ್ನು ಹಿಂದೂ ಪಂಚಾಂಗದಲ್ಲಿ ಸರ್ವೈಕಾದಶೀ ಎಂದು ಕರೆಯಲಾಗುತ್ತದೆ. ಇನ್ನು ಉತ್ತರ ಭಾರತದಾದ್ಯಂತ ಈ ಏಕಾದಶಿಯನ್ನು ಪುಷ್ಯ ಏಕಾದಶಿಯೆಂದೂ ಕರೆಯುತ್ತಾರೆ. ಈ ದಿನ ವಿಷ್ಣು ಮತ್ತು ಅವನ ಎಲ್ಲಾ ಅವತಾರಗಳನ್ನು ಪೂಜಿಸುವುದರಿಂದ ವಿಶೇಷ ಫಲ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಏಕಾದಶಿಯ ಎಲ್ಲಾ ಉಪವಾಸಗಳಲ್ಲಿ, ಸಫಲ ಏಕಾದಶಿಯ ಉಪವಾಸವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ನಿಜವಾದ ಶ್ರದ್ಧೆ ಮತ್ತು ನಂಬಿಕೆಯೊಂದಿಗೆ ಈ ಉಪವಾಸವನ್ನು ಆಚರಿಸುವ ಮೂಲಕ, ನಿಮಗೆ ಅದೃಷ್ಟ ಮತ್ತು ಯಶಸ್ಸು ಸಿಗುತ್ತದೆ.

ಸಫಲ ಏಕಾದಶಿಯ ಪೂಜಾ ವಿಧಾನ:
ಸಫಲ ಏಕಾದಶಿ ದಿನದಂದು ಬೆಳಗ್ಗೆ ಎದ್ದ ಸ್ನಾನ ಮಾಡಿ ನಂತರ ಉಪವಾಸ ವ್ರತವನ್ನು ಮಾಡುವುದಾಗಿ ಪ್ರತಿಜ್ಞೆ ಮಾಡಿಕೊಳ್ಳಬೇಕು.
ನಂತರ ನಿಮ್ಮ ಪೂಜಾ ಸ್ಥಳದಲ್ಲಿ ಗಂಗಾಜಲವನ್ನು ಸಿಂಪಡಿಸಿ ವಿಷ್ಣುವನ್ನು ವಿಧಿ - ವಿಧಾನಗಳ ಮೂಲಕ ಪೂಜಿಸಿ.
ತುಳಸಿ ಎಲೆಗಳು, ಧೂಪದ್ರವ್ಯ, ಅಗರಬತ್ತಿ, ವೀಳ್ಯದೆಲೆ, ಅಡಿಕೆ, ಹಳದಿ ಬಣ್ಣದ ಹಣ್ಣುಗಳು ಮತ್ತು ತೆಂಗಿನಕಾಯಿಗಳು ಭಗವಾನ್ ವಿಷ್ಣುವಿನ ಅಚ್ಚುಮೆಚ್ಚಿನ ವಸ್ತುಗಳು. ಪೂಜಿಸಿದ ನಂತರ ಇದನ್ನು ಅವರಿಗೆ ಅರ್ಪಿಸಿ.
ಈ ಶುಭ ಸಂದರ್ಭದಲ್ಲಿ ವಿಷ್ಣುವಿನೊಂದಿಗೆ ಕೃಷ್ಣನನ್ನೂ ಪೂಜಿಸಲಾಗುತ್ತದೆ.
ಈ ಸಂದರ್ಭದಲ್ಲಿ ಕೆಲವರು ತಮ್ಮ ಮನೆಯಲ್ಲಿ ಭಗವಾನ್ ಸತ್ಯನಾರಾಯಣನ ಕಥೆಯನ್ನು ಹೇಳುತ್ತಾರೆ ಹಾಗೂ ಓದುತ್ತಾರೆ.
ಉಪವಾಸದ ಕಥೆಯನ್ನು ಓದಿ ನಂತರ ಭೋಗವನ್ನು ಅರ್ಪಿಸಿ.



Click it and Unblock the Notifications