Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಕೃಷ್ಣ ಜನ್ಮಾಷ್ಠಮಿ 2022: ಕೃಷ್ಣನ ಪೂಜೆಯನ್ನು ರಾಶಿಯ ಪ್ರಕಾರ ಹೀಗೆ ಪೂಜಿಸಿದರೆ ಶುಭಫಲ ನಿಮ್ಮದಾಗುತ್ತದೆ
ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣ ಹುಟ್ಟಿದ ದಿನ, ಈ ದಿನದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಶ್ವದಾದ್ಯಂತ ಭಕ್ತರು ಆಚರಿಸುತ್ತಾರೆ. ಈ ವರ್ಷ, ಆಗಸ್ಟ್ 19 ರಂದು ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಕೃಷ್ಣನಿಗೆ ಪ್ರಿಯವಾದ ತಿಂಡಿಗಳಿಂದ ಅಲಂಕರಿಸಿ, ಭಕ್ತರು ಉಪವಾಸವನ್ನು ಮಾಡುತ್ತಾ ಇಡೀ ದಿನ ಕೃಷ್ಣನನ್ನು ಆರಾಧಿಸುತ್ತಾರೆ.

ಜ್ಯೋತಿಷ್ಯದ ಪ್ರಕಾರ ಕೃಷ್ಣ ಜನ್ಮಾಷ್ಟಮಿಯಂದು ಪ್ರತಿಯೊಂದು ರಾಶಿಯವರು ಕೃಷ್ಣನನ್ನು ಭಜಿಸುವ, ಪ್ರಾರ್ಥಿಸುವ, ಪೂಜಿಸುವ ಬಗೆ ಭಿನ್ನವಾಗಿದೆ. ಲೌಕಿಕ ತೊಂದರೆಗಳನ್ನು ತೊಡೆದುಹಾಕಲು ಹಾಗೂ ಇಷ್ಟಾರ್ಥಗಳ ಈಡೇರಿಸಲು ಪ್ರತಿಯೊಂದು ರಾಶಿಯವರು ಕೃಷ್ಣನನ್ನು ಹೀಗೆ ಪೂಜಿಸಿದರೆ ಒಳ್ಳೆಯದು ಎಂದು ಹೇಳಲಾಗಿದೆ. ಹೇಗೆ ಮುಂದೆ ನೋಡೋಣ:

ಮೇಷ ರಾಶಿ
ಜನ್ಮಾಷ್ಟಮಿಯ ದಿನ ಮೇಷ ರಾಶಿಯವರು ಗಂಗಜಾಲದೊಂದಿಗೆ ಗೋಪಾಲನ ಅಭಿಷೇಕವನ್ನು ಮಾಡಬೇಕು ಜೊತೆಗೆ, ಹನುಮಂತನಿಗೆ ನಿಮ್ಮ ಪ್ರಾರ್ಥನೆಯನ್ನು ಸಲ್ಲಿಸಿ. ಕೃಷ್ಣನಿಗೆ ಹಾಲು, ಲಡ್ಡು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಬೇಕು ಮತ್ತು ತುಳಸಿ ದಳಗಳಿಂದ ಕೃಷ್ಣನನ್ನು ಪೂಜಿಸಿ. ಬೆಲ್ಲ ಮತ್ತು ಗೋಧಿಯನ್ನು ದಾನ ಮಾಡಿ. ಹನುಮಾನ್ ಚಾಲೀಸವನ್ನು ನೂರು ಬಾರಿ ಪಠಿಸಿ ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸಿ. ಪೂಜಿಸಬೇಕಾದರೆ ಈ ಮಂತ್ರವನ್ನು ಪಠಿಸಬೇಕು.
ಮಂತ್ರ - ಓಂ ನಮೋ ಭಗವತೇ ವಾಸುದೇವಾಯ ನಮ:

ವೃಷಭ ರಾಶಿ
ಜನ್ಮಾಷ್ಟಮಿಯಂದು ವೃಷಭ ರಾಶಿಯವರು ಶ್ರೀಕೃಷ್ಣನ ಅಭಿಷೇಕವನ್ನು ಪಂಚಾಮೃತದೊಂದಿಗೆ ಮಾಡಬೇಕು. ಪವಿತ್ರ ಭಗವದ್ಗೀತೆಯ ಹದಿಮೂರನೆಯ ಅಧ್ಯಾಯವನ್ನು ಓದಬೇಕು. ಅವರು ಶ್ರೀ ಸೂತ್ರವನ್ನು ಪಠಿಸಬೇಕು ಮತ್ತು ಅಕ್ಕಿ ಮತ್ತು ಸಕ್ಕರೆಯನ್ನು ದಾನ ಮಾಡಬೇಕು. ಅವರು ಹಸುಗಳಿಗೆ ಆಹಾರವನ್ನು ನೀಡಬಹುದು ಮತ್ತು ಸಂಕೀರ್ತನೆ ಮಾಡುವ ಮೂಲಕ ಶ್ರೀ ಕೃಷ್ಣನ ಹೆಸರನ್ನು ಜಪಿಸಬೇಕು. ಶ್ರೀಕೃಷ್ಣನಿಗೆ ಕೊಳಲನ್ನು ಅರ್ಪಿಸಿ. ಈ ಮಂತ್ರವನ್ನು 11 ಬಾರಿ ಕಮಲದ ಜಪಮಾಲೆಯಿಂದ ಜಪಿಸಬೇಕು.
ಮಂತ್ರ - "ಶ್ರೀರಾಧಕಷ್ಣ ಶರಣಂ ಮಮ".

ಮಿಥುನ ರಾಶಿ
ಜನ್ಮಾಷ್ಟಮಿಯ ದಿನ ಮಿಥುನ ರಾಶಿಯವರು ಶ್ರೀಕೃಷ್ಣನಿಗೆ ಅಭಿಷೇಕವನ್ನು ಮಾಡಬೇಕು ಮತ್ತು ಸಿಹಿತಿಂಡಿಗಳು ಮತ್ತು ಬಾಳೆಹಣ್ಣುಗಳನ್ನು ಅರ್ಪಿಸಬೇಕು. ಮತ್ತು ಕೆಳಗೆ ನೀಡಿರುವ ಮಂತ್ರವನ್ನು ಸ್ಪಾಟಿಕ್ ಮಾಲೆಯಲ್ಲಿ ಪಠಿಸಬೇಕು. ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸಿ. ಬಡವರಿಗೆ ಮತ್ತು ಅಗತ್ಯವಿರುವವರಿಗೆ ಹೆಸರು ಬೇಳೆಯನ್ನು ದಾನ ಮಾಡಿ. ಈ ದಿನ ನೀವು ಹಸಿದವರಿಗೆ ಆಹಾರವನ್ನು ನೀಡಿದರೆ ಒಳ್ಳೆಯದಾಗುತ್ತದೆ. ಶ್ರೀಕೃಷ್ಣನಿಗೆ ಬೆಳ್ಳಿಯಿಂದ ಮಾಡಿದ ಆಭರಣವನ್ನು ಅರ್ಪಿಸಿ.
ಮಂತ್ರ - "ಶ್ರೀರಾಧೆಯೇ ಸ್ವಾಹ"

ಕರ್ಕ ರಾಶಿ
ಜನ್ಮಾಷ್ಟಮಿಯಂದು ಕರ್ಕ ರಾಶಿಯವರು ಶ್ರೀಕೃಷ್ಣನ ಅಭಿಷೇಕವನ್ನು ತುಪ್ಪದೊಂದಿಗೆ ಮಾಡಬೇಕು ಮತ್ತು ದುರ್ಗಾ ಸಪ್ತಶತಿಯನ್ನು ಪಠಿಸಿ. ಅಕ್ಕಿಯನ್ನು ದಾನ ಮಾಡಿ. ಶ್ರೀಕೃಷ್ಣನಿಗೆ ನವಿಲನ್ನು ಅರ್ಪಿಸಿ. ಹಸಿ ತೆಂಗಿನಕಾಯಿ, ಸಿಹಿಯನ್ನು ಅರ್ಪಿಸುವಾಗ ಈ ಮಂತ್ರವನ್ನು ಐದು ಬಾರಿ ಪಠಿಸಬೇಕು.
ಮಂತ್ರ - "ಶ್ರೀರಾಧಿವಲ್ಲಭಾಯ ನಮ:"

ಸಿಂಹ ರಾಶಿ
ಕೃಷ್ಣನ ಜನ್ಮದಿನದಂದು ಸಿಂಹ ರಾಶಿಯ ಸ್ಥಳೀಯವರು ಗಂಗಾಜಲ ಮತ್ತು ಜೇನುತುಪ್ಪದೊಂದಿಗೆ ಭಗವಂತನ ಅಭಿಷೇಕವನ್ನು ನಡೆಸಬೇಕು. ಬೆಲ್ಲ ಮತ್ತು ಗೋಧಿಯನ್ನು ದಾನ ಮಾಡಿ. ಸಿಹಿತಿಂಡಿಗಳು, ದಾಳಿಂಬೆ ಮತ್ತು ಬೆಲ್ಲವನ್ನು ಮುರಳೀಧರನಿಗೆ ಅರ್ಪಿಸಬೇಕು. ಶ್ರೀಕೃಷ್ಣನಿಗೆ ಚಿನ್ನದ ಕಿರೀಟವನ್ನು ಅರ್ಪಿಸಿ. ಆದಿತ್ಯ ಸ್ತೋತ್ರವನ್ನು ಬೆಳಿಗ್ಗೆ ಮೂರು ಬಾರಿ ಪಠಿಸಿ. ಪೂಜೆಯ ವೇಳೆ ಈ ಮಂತ್ರವನ್ನು ತಪ್ಪದೇ ಪಠಿಸಿ.
ಮಂತ್ರ - "ಓಂ ವೈಷ್ಣವೇ ನಮಃ"

ಕನ್ಯಾ ರಾಶಿ
ಜನ್ಮಾಷ್ಟಮಿಯ ದಿನ, ಕನ್ಯಾರಾಶಿ ರಾಶಿಯವರು ಹಾಲಿನಲ್ಲಿ ತುಪ್ಪ ಸೇರಿಸಿ ಭಗವಂತನ ಅಭಿಷೇಕವನ್ನು ಮಾಡಬೇಕು. ನಂತರ, ಹಣ್ಣುಗಳು, ಹಾಲಿನ ಸಿಹಿತಿಂಡಿಗಳು, ಪೇರಳೆಗಳನ್ನು ನೀಡಿ. ವಿಷ್ಣು ಸಹಸ್ರನಾಮವನ್ನು ಪಠಿಸುವುದರ ಜೊತೆಗೆ, ರಾಮ ರಕ್ಷಸ್ತೋತ್ರವನ್ನು ಪಠಿಸಿ. ಅಗತ್ಯವಿರುವವರಿಗೆ ಆಹಾರವನ್ನು ದಾನ ಮಾಡಿ. ಶ್ರೀಕೃಷ್ಣನಿಗೆ ಬೆಳ್ಳಿ ಕಿವಿಯೋಲೆ ಅರ್ಪಿಸಿ. ಪೂಜೆಯ ವೇಳೆ ಈ ಮಂತ್ರವನ್ನು 11 ಬಾರಿ ಪಠಿಸಿ.
ಮಂತ್ರ - "ಶ್ರೀ ರಾಧಾಯೈ ಸ್ವಾಹಿ".

ತುಲಾ ರಾಶಿ
ತುಲಾ ರಾಶಿಯವರು ಕೃಷ್ಣನ ಜನ್ಮದಿನದಂದು ಸಕ್ಕರೆ ಮತ್ತು ಹಾಲಿನೊಂದಿಗೆ ಭಗವಂತನ ಅಭಿಷೇಕವನ್ನು ಮಾಡಬೇಕು. ಗವಾನ್ ವಿಷ್ಣು ಮತ್ತು ಲಕ್ಷ್ಮಿಯನ್ನು ಪೂಜಿಸಿ. ಬಡವರಿಗೆ ಬಟ್ಟೆಗಳನ್ನು ದಾನ ಮಾಡಿ. ಶ್ರೀಕೃಷ್ಣನಿಗೆ ಬೆಳ್ಳಿಯ ಕೊಳಲನ್ನು ಅರ್ಪಿಸಿ. ಬಾಳೆಹಣ್ಣು ಮತ್ತು ಹಾಲಿನ ಸಿಹಿ ಖಾದ್ಯವನ್ನು ಗೋಪಾಲನಿಗೆ ಅರ್ಪಿಸುವಾಗ ಈ ಮಂತ್ರವನ್ನು 11 ಬಾರಿ ಪಠಿಸಬೇಕು.
ಮಂತ್ರ - "ಓಂ ಶ್ರೀ ಕೃಷ್ಣ"

ವೃಶ್ಚಿಕ ರಾಶಿ
ಜನ್ಮಾಷ್ಟಮಿಯ ದಿನ ವೃಶ್ಚಿಕ ರಾಶಿಯವರು ಶ್ರೀಕೃಷ್ಣನ ಅಭಿಷೇಕವನ್ನು ಪಂಚಾಮೃತದಿಂದ ಮಾಡಬೇಕು. ಭಗವದ್ಗೀತೆಯ ಹನ್ನೆರಡನೆಯ, ಹದಿನೆಂಟನೆಯ ಅಧ್ಯಾಯ ಮತ್ತು ರಾಮಾಯಣದ ಸುಂದರಕಾಂಡವನ್ನು ಓದಿ. ಗೋಧಿಯನ್ನು ದಾನ ಮಾಡಿ. ಮಾಧವನಿಗೆ ಗುಲಾಬ್ ಜಾಮೂನ್, ಬೆಲ್ಲದ ಸಿಹಿತಿಂಡಿಗಳು, ತೆಂಗಿನಕಾಯಿಯಿಂದ ಮಾಡಿದ ಪ್ರಸಾದವನ್ನು ಅರ್ಪಿಸಬೇಕು ಮತ್ತು ಈ ಮಂತ್ರವನ್ನು 11 ಬಾರಿ ಪಠಿಸಬೇಕು.
ಮಂತ್ರ - "ಶ್ರೀವೃಂದಾವನೇಶ್ವರಿ ರಾಧಾಯೈ ನಮಃ".

ಧನು ರಾಶಿ
ಜನ್ಮಾಷ್ಟಮಿಯಂದು ಧನು ರಾಶಿಯವರು ಶ್ರೀಕೃಷ್ಣನ ಅಭಿಷೇಕವನ್ನು ಹಾಲು ಮತ್ತು ಜೇನುತುಪ್ಪದೊಂದಿಗೆ ಮಾಡಬೇಕು. ಭಗವದ್ಗೀತೆಯನ್ನು ಓದಿ. ಆಧ್ಯಾತ್ಮಿಕ ಪುಸ್ತಕಗಳನ್ನು ದಾನ ಮಾಡಿ. ಶ್ರೀ ಕೃಷ್ಣನಿಗೆ ಹಳದಿ ಬಟ್ಟೆಗಳನ್ನು ಅರ್ಪಿಸಿ. ಹಳದಿ ಹಣ್ಣುಗಳಿಂದ ಮಾಡಿದ ಸಿಹಿತಿಂಡಿಗಳನ್ನು ಗೋಪಾಲನಿಗೆ ಅರ್ಪಿಸಬೇಕು. ಕೆಳಗೆ ನೀಡಿರುವ ಮಂತ್ರವನ್ನು 5 ಬಾರಿ ಜಪಿಸಬೇಕು.
ಮಂತ್ರ - "ಓಂ ನಮೋ ನಾರಾಯಣಾಯ".

ಮಕರ ರಾಶಿ
ಕೃಷ್ಣನ ಜನ್ಮ ವಾರ್ಷಿಕೋತ್ಸವದಂದು ಗಂಗಾಜಲದೊಂದಿಗೆ ಭಗವಂತನ ಅಭಿಷೇಕವನ್ನು ಮಾಡಬೇಕು. ಶನಿ ದೇವನು ಶ್ರೀ ಕೃಷ್ಣನ ಭಕ್ತನಾಗಿರುವುದರಿಂದ ಶನಿ ಬೀಜ್ ಮಂತ್ರವನ್ನು ಪಠಿಸಿ. ರಾಮಾಯಣದ ಸುಂದರಕಾಂಡ ಮತ್ತು ಭಗವದ್ಗೀತೆಯನ್ನು ಓದಿ. ಸಿಹಿತಿಂಡಿಗಳು, ಗುಲಾಬ್ ಜಾಮೂನ್ ಮತ್ತು ದ್ರಾಕ್ಷಿಯನ್ನು ನೈವೇದ್ಯಕ್ಕೆ ಇಡಿ. 5 ಬಾರಿ ಈ ಮಂತ್ರವನ್ನು ಪಠಿಸಿ.
ಮಂತ್ರ - "ಓಂ ಶ್ರೀ ಗೋಪಿಜನವಲ್ಲಭಾಯ ನಮಃ".

ಕುಂಭ ರಾಶಿ
ಜನ್ಮಾಷ್ಟಮಿಯ ದಿನ, ಕುಂಭ ರಾಶಿಯವರು ಶ್ರೀಕೃಷ್ಣನ ಅಭಿಷೇಕವನ್ನು ಪಂಚಾಮೃತದೊಂದಿಗೆ ಮಾಡಬೇಕು. ಭಗವದ್ಗೀತೆಯ ಐದನೇ ಮತ್ತು ಹದಿನೆಂಟನೆಯ ಅಧ್ಯಾಯಗಳನ್ನು ಓದಿ. ವಿಷ್ಣು ಸಹಸ್ರನಾಮವನ್ನು ಪಠಿಸಿ. ಎಳ್ಳು ಮತ್ತು ಆಹಾರವನ್ನು ದಾನ ಮಾಡಿ. ಶ್ರೀಕೃಷ್ಣನಿಗೆ ಬೆಳ್ಳಿ ಕಿರೀಟವನ್ನು ಅರ್ಪಿಸಿ. ಕಂದು ಬಣ್ಣದ ಸಿಹಿತಿಂಡಿಗಳು, ಪಂಚಾಮೃತವನ್ನು ಅರ್ಪಿಸಬೇಕು. ಹಾಗೆಯೇ, ಕೆಳಗೆ ನೀಡಿರುವ ಮಂತ್ರವನ್ನು 11 ಬಾರಿ ಪಠಿಸಬೇಕು.
ಮಂತ್ರ - "ಓಂ ನಮೋ ಭಗವತೇ ವಾಸುದೇವಾಯ ನಮಃ".

ಮೀನ ರಾಶಿ
ಜನ್ಮಾಷ್ಟಮಿಯ ದಿನ ಮೀನ ರಾಶಿಯವರು ಪಂಚಾಮೃತದೊಂದಿಗೆ ಶ್ರೀಕೃಷ್ಣನ ಅಭಿಷೇಕವನ್ನು ಮಾಡಬೇಕು. ಅರಳಿ ಮರವನ್ನು ಏಳು ಬಾರಿ ಸುತ್ತಿ. ಶ್ರೀಕೃಷ್ಣನಿಗೆ ಹಳದಿ ಬಟ್ಟೆ, ಕೊಳಲು ಮತ್ತು ನವಿಲು ಗರಿ ಅರ್ಪಿಸಿ. ಕೆಳಗೆ ನೀಡಿರುವ ಮಂತ್ರವನ್ನು ಪಠಿಸುವಾಗ ಏಲಕ್ಕಿ ಮತ್ತು ತೆಂಗಿನಕಾಯಿಗಳಿಂದ ಮಾಡಿದ ಸಿಹಿತಿಂಡಿಗಳನ್ನು ಭಗವಂತನಿಗೆ ಅರ್ಪಿಸಬೇಕು.
ಮಂತ್ರ - "ಓಂ ಶ್ರೀ ಗೋಕುಲನಾಥಾಯ ನಮಃ".



Click it and Unblock the Notifications











