Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಈಗೆಲ್ಲಾ ಸಮಸ್ಯೆಗಳು ಕಾಡಿದರೆ, 'ಶನಿ ದೇವರು' ನಿಮ್ಮ ಮೇಲೆ ಮುನಿದಿರ ಬಹುದು!
ಸೂರ್ಯಪುತ್ರನಾಗಿರುವಂತಹ ಶನಿದೇವರು ಶನಿಗ್ರಹದ ಅಧಿಪತಿ. ಕರ್ಮ ಫಲದಾತನಾಗಿರುವಂತಹ ಶನಿದೇವರು ಒಲಿದರೆ ಆ ವ್ಯಕ್ತಿಯನ್ನು ತಡೆಯುವವರು ಯಾರು ಇಲ್ಲ. ಅದೇ ಶನಿ ದೇವರು ಮುನಿದರೆ ಆಗ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ನಿರ್ಗತಿಕನಾಗಿ ಹೋಗುತ್ತಾನೆ ಎನ್ನುವ ಮಾತಿದೆ. ಹಿಂದಿನ ಕಾಲದಲ್ಲಿ ನಳ ಮಹಾರಾಜನೇ ಇದಕ್ಕೆ ಸಾಕ್ಷಿ. ಒಂದು ಸಾಮ್ರಾಜ್ಯದ ರಾಜನಾಗಿದ್ದಂತಹ ನಳಮಹಾರಾಜನು ಶನಿಯ ಮುನಿಸಿಗೆ ತುತ್ತಾಗಿ ಬಳಿಕ ತನ್ನ ಸಾಮ್ರಾಜ್ಯವನ್ನು ಕಳೆದೊಂಡು ಅಡುಗೆಯವನಾಗಿ ಕೆಲಸ ಮಾಡುವಂತಹ ಪರಿಸ್ಥಿತಿ ಬರುವುದು. ಶನಿಯು ಒಂದು ರಾಶಿಯಲ್ಲಿ ಏಳು ವರ್ಷಗಳ ತನಕ ಉಳಿಯಬಲ್ಲರು.
ಇದರಿಂದಾಗಿ ಈ ಸಮಯವನ್ನು ಧೈಯಾ ಅಥವಾ ಸಾಡೇ ಸಾತಿ ಎಂದು ಕರೆಯಲಾಗುತ್ತದೆ. ಜ್ಯೋತಿಷಿಗಳು ಜನ್ಮ ಜಾತಕವನ್ನು ನೋಡಿಕೊಂಡು ಶನಿ ಸಾಡೇಸಾತಿ ಬಗ್ಗೆ ಹೇಳುವರು. ಧೈಯಾ ಎಂದರೆ ಎರಡುವರೆ ವರ್ಷಗಳ ಕಾಲ ಶನಿಯು ನಿಮ್ಮ ರಾಶಿಯಲ್ಲಿ ಇರುವುದು ಮತ್ತು ಸಾಡೇಸಾತಿ ಎಂದರೆ ಏಳು ವರ್ಷಗಳ ಕಾಲ ಶನಿಯು ರಾಶಿಯಲ್ಲಿ ಇರುವುದು.

ನಿಮ್ಮ ಜನ್ಮ ಕುಂಡಲಿಯ ಎಷ್ಟನೇ ಮನೆಯಲ್ಲಿ ಶನಿಯು ಕುಳಿತುಕೊಂಡಿದ್ದಾನೆ ಮತ್ತು ಅವನಿಗೆ ಪರ ಹಾಗೂ ವಿರುದ್ಧವಾಗಿರುವಂತಹ ಗ್ರಹಗಳು ಯಾವ ಮನೆಗಳಲ್ಲಿ ಇವೆ ಎನ್ನುವುದನ್ನು ಆಧರಿಸಿಕೊಂಡು ನಿಮ್ಮ ರಾಶಿಗೆ ಇದು ಪರಿಣಾಮ ಬೀರುವುದು. ಶನಿಯು ಇರುವಂತಹ ಸಮಯವು ಕೆಟ್ಟದಾಗಿಯಾ ಮತ್ತು ಎಷ್ಟು ಕಾಲ ಇರಲಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಶನಿ ದೇವರು ನಿಮ್ಮ ಮೇಲೆ ಮುನಿಸಿಕೊಂಡಿದ್ದಾರೆ ಎಂದು ತಿಳಿಯುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯುವ.

ಅಶ್ವತ್ಥ ಮರ
ನಿಮ್ಮ ಮನೆಯ ಸಮೀಪ ಅಶ್ವತ್ಥ ಮರ ಬೆಳೆಯುತ್ತಲಿದ್ದರೆ ಮತ್ತು ನೀವು ಅದನ್ನು ಕಿತ್ತು ಹಾಕಿದರೂ ಮತ್ತೆ ಬೆಳೆಯುತ್ತಲಿದ್ದರೆ ಆಗ ನಿಮ್ಮ ಮೇಲೆ ಶನಿ ದೇವರು ಮುನಿಸಿಕೊಂಡಿದ್ದಾರೆ ಎಂದು ತಿಳಿಯಬೇಕು. ನೀವು ಅವರನ್ನು ಸಂತುಷ್ಟಿಗೊಳಿಸಲು ಪರಿಹಾರ ಹುಡುಕಬೇಕು.

ಗೋಡೆ ಕುಸಿಯುವುದು
ಮನೆಯ ಗೋಡೆಯು ಕುಸಿಯುವುದು ಅಥವಾ ಬಿರುಕು ಬಿಡುವುದು ಕೂಡ ಅಶುಭವೆಂದು ಪರಿಗಣಿಸಲಾಗಿದೆ. ಯಾಕೆಂದರೆ ಇದರಿಂದ ಮನೆಯಲ್ಲಿ ಕುಟುಂಬ ಸದಸ್ಯರ ಮಧ್ಯೆ ವಾಗ್ವಾದ ಹೆಚ್ಚಾಗಬಹುದು. ಮುನ್ನೆಚ್ಚರಿಕೆ ತೆಗೆದುಕೊಂಡು ಅಥವಾ ನೀವು ಇದನ್ನು ಸರಿಪಡಿಸಿದರೂ ಮನೆಯ ಗೋಡೆಯು ಕುಸಿದರೆ ಆಗ ಶನಿ ದೇವರು ನಿಮ್ಮ ಮೇಲೆ ಮುನಿಸಿಕೊಂಡಿದ್ದಾರೆ ಎಂದು ತಿಳಿಯಿರಿ.

ಜೇಡರಬಲೆ
ಮನೆಯಲ್ಲಿ ಜೇಡರಬಲೆಯು ಕಟ್ಟುವುದು ತುಂಬಾ ಅಪವಿತ್ರವೆಂದು ಪರಿಗಣಿಸಲಾಗಿದೆ. ಜೇಡರಬಲೆಯು ಯಾರು ಇಲ್ಲದೆ ಇರುವಂತಹ ಮತ್ತು ಸ್ವಚ್ಛವಾಗಿರದ ಜಾಗದಲ್ಲಿ ಮಾತ್ರ ಕಂಡುಬರುವುದು. ಇದರಿಂದ ಜೀವನದಲ್ಲಿ ಅಸಂತೋಷ ಹಾಗೂ ಅತೃಪ್ತಿ ಕಾಣಿಸಬಹುದು. ವೇದಗಳಲ್ಲಿ ಕೂಡ ಸ್ವಚ್ಛತೆ ಕಾಪಾಡಿಕೊಳ್ಳಲು ಹೇಳಿರುವುದು. ಮನೆಯಲ್ಲಿ ಜೇಡರಬಲೆ ಮತ್ತು ಜೇಡಗಳ ಸಂಖ್ಯೆಯು ಹೆಚ್ಚಾಗುತ್ತಲಿದ್ದರೆ ಇದು ಶನಿ ದೇವರು ಕುಪಿತರಾಗಿರುವ ಸೂಚನೆ. ನೀವು ಪ್ರತಿನಿತ್ಯವು ಸ್ವಚ್ಛ ಮಾಡುತ್ತಲಿದ್ದರೂ ಇದು ಬರುತ್ತಲಿದ್ದರೆ ಆಗ ಖಂಡಿತವಾಗಿಯೂ ಇದು ಶನಿ ದೇವರ ಪ್ರಭಾವ.

ಕಪ್ಪು ಬೆಕ್ಕು
ಕಪ್ಪು ಬೆಕ್ಕು ನಿಮ್ಮ ಮನೆಯನ್ನು ತನ್ನ ವಾಸಸ್ಥಾನವಾಗಿ ಮಾಡಿಕೊಂಡಿದ್ದರೆ ಆಗ ಅದು ಶನಿ ದೇವರು ಉಗ್ರ ಕೋಪದ ಪರಿಣಾಮ ಎಂದು ತಿಳಿಯಿರಿ.

ಇರುವೆ
ಇರುವೆ ಬರುವುದು ಮತ್ತೊಂದು ಅಶುಭವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯಲ್ಲಿ ಇರುವೆಗಳು ಮನೆ ಮಾಡಿದ್ದರೆ ಆಗ ನೀವು ಶನಿ ದೇವರನ್ನು ಶಾಂತಗೊಳಿಸಲು ಪ್ರಯತ್ನಿಸಬೇಕು. ಸತತ ಪ್ರಯತ್ನದ ಹೊರತಾಗಿಯೂ ನೀವು ಕೋರ್ಟ್ ವ್ಯಾಜ್ಯಗಳಲ್ಲಿ ಸೋಲುವುದು, ಬಾಸ್ ಜತೆಗೆ ಮನಸ್ತಾಪವು ಶನಿ ದೇವರು ಬೇಸರಗೊಂಡಿರುವ ಇತರ ಕೆಲವು ಲಕ್ಷಣಗಳು. ಪ್ರತಿನಿತ್ಯ ಅಥವಾ ನಿಯಮಿತವಾಗಿ ನೀವು ಸಮಸ್ಯೆಗಳನ್ನು ಎದುರಿಸುವುದು ದೊಡ್ಡ ವಿಚಾರವಲ್ಲ. ಆದರೆ ಅತಿಯಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮತ್ತು ಒಂದು ಸಮಸ್ಯೆ ಕೊನೆಗೊಳ್ಳುವ ಮೊದಲೇ ಮತ್ತೊಂದು ಸಮಸ್ಯೆಯು ಕಾಣಿಸಿಕೊಂಡರೆ ಆಗ ನೀವು ಶನಿ ದೇವರನ್ನು ಪೂಜಿಸಲು ಆರಂಬಿಸಬೇಕು ಮತ್ತು ಅವರನ್ನು ಶಾಂತಗೊಳಿಸಲು ಪ್ರಯತ್ನಿಸಬೇಕು. ಅವರು ನ್ಯಾಯದ ದೇವರು. ಒಬ್ಬ ವ್ಯಕ್ತಿಯ ಕರ್ಮಕ್ಕೆ ಅನುಸಾರವಾಗಿ ಅವರು ಫಲ ನೀಡುವರು. ಹಿಂದಿನ ಜನ್ಮದಲ್ಲಿ ಮಾಡಿರುವಂತಹ ಕೆಟ್ಟ ಕೆಲಸಗಳಿಂದ ನಿಮಗೆ ಈ ಜನ್ಮದಲ್ಲಿ ಕೆಟ್ಟದಾಗುವುದು ಮತ್ತು ಒಳ್ಳೆಯದು ಮಾಡಿದ್ದರೆ ಆಗ ಒಳ್ಳೆಯದಾಗುವುದು. ನೀವು ನ್ಯಾಯದ ದೇವರನ್ನು ಆರಾಧಿಸಿ, ಹಿಂದಿನ ಜನ್ಮ ಕರ್ಮಗಳಿಗೆ ಕ್ಷಮೆ ನೀಡಬೇಕೆಂದು ಭೇಡಿಕೊಳ್ಳಬೇಕು. ಶನಿ ದೇವರು ಭಕ್ತರ ಪ್ರಾರ್ಥನೆ ಕೇಳಿ ಅವರನ್ನು ಅರಸುವರು.



Click it and Unblock the Notifications











