For Quick Alerts
ALLOW NOTIFICATIONS  
For Daily Alerts

ವಿಸ್ಮಯ ನಗರಿ: ದೇವಸ್ಥಾನದ ಹಿಂದಿರುವ 'ಧನಾತ್ಮಕ ಶಕ್ತಿ'

By Manu
|

ವಿಶ್ವದಲ್ಲಿ ಅತ್ಯಂತ ಪುರಾತನ ಸಂಸ್ಕೃತಿಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ದೇಶಗಳಲ್ಲಿ ಭಾರತ ಪ್ರಮುಖವಾಗಿದೆ, ಎಂಬುದು ಎಲ್ಲರಿಗೂ ಗೊತ್ತಿರುವ ವಿವಾರವೇ. ಅದರಲ್ಲೂ ಸಾವಿರಾರು ವರ್ಷ ಪುರಾತನ ದೇವಾಲಯ ಮತ್ತು ಆರಾಧನಾ ಕೇಂದ್ರಗಳನ್ನು ಭಾರತ ಈಗಲೂ ಉಳಿಸಿಕೊಂಡು ಬಂದಿವೆ. ಇದಕ್ಕೆ ಉತ್ತಮ ಉಹಾಹರಣೆ ತಮಿಳುನಾಡು.

ನಮಗೆಲ್ಲಾ ಗೊತ್ತಿರಬಹುದು, ಹಿಂದಿನ ಕಾಲದಲ್ಲಿ ಮನೆಯ ಹಿರಿಯರು, ಸಾವಿರಾರು ವರುಷಗಳ ಪುರಾತನ ದೇಗುಲಗಳಿಗೆ ಭೇಟಿ ನೀಡಿ ತಮ್ಮ ಇಷ್ಟದೇವರಿಗೆ ಪೂಜೆ ಸಲ್ಲಿಸಿ ದೇವರಿಂದ ರಕ್ಷಣೆ ಮತ್ತು ಅನುಗ್ರಹವನ್ನು ಅಪೇಕ್ಷಿಸುವುದನ್ನು ನಮ್ಮ ಮನೆಯ ಹಿರಿಯರಿಂದ ಕೇಳಿರುತ್ತೇವೆ. ದೇವಾಲಯ ಪ್ರವೇಶಿಸುವ ಮುನ್ನ ಈ ನಿಯಮಗಳೆಲ್ಲಾ ನೆನಪಿರಲಿ...

ಆದರೆ, ಇದರ ಮಹತ್ವ ಅರಿಯದ ಯುವಜನತೆಗೆ ಇದೊಂದು ಸಮಯ ಪೋಲು ಮಾಡುವ ಬೂಟಾಟಿಕೆ ಎಂದು ಅನ್ನಿಸಬಹುದು. ಆದರೆ ವೈಜ್ಞಾನಿಕವಾಗಿ ಪರೀಕ್ಷಿಸಿದ ಬಳಿಕ ಈ ವಿಧಿಯಲ್ಲಿ ನಿಜವಾಗಿಯೂ ಪ್ರಯೋಜನವಿದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತವೆ. ಹಾಗಾದರೆ ಇದರ ಹಿಂದಿರುವ ಧನಾತ್ಮಕ ಶಕ್ತಿಗಳಾವುದು ಎಂಬುದನ್ನು ಮುಂದೆ ಓದಿ...

ಭಾರತದ ದೇಗುಲಗಳು

ಭಾರತದ ದೇಗುಲಗಳು

ಭಾರತದ ಹೆಚ್ಚಿನ ದೇಗುಲಗಳು ಗುಡ್ಡದ ತುದಿಯಲ್ಲಿ, ಬಟಾಬಯಲಿನಲ್ಲಿ, ಸಮುದ್ರ ತೀರದಲ್ಲಿ, ನದಿ ತೀರದಲ್ಲಿ ಹಾಗೂ ಎತ್ತರದ ಸ್ಥಳಗಳಲ್ಲಿಯೇ ನಿರ್ಮಿಸಲ್ಪಟ್ಟಿವೆ. ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ದೇವಾಲಯವನ್ನು ನಿರ್ಮಿಸುವ ಮೊದಲು ಈ ಸ್ಥಳದ ಅಕ್ಕಪಕ್ಕ ಸದಾ ಧನಾತ್ಮಕ ಶಕ್ತಿ ಪ್ರವಹಿಸುತ್ತಿದೆ ಎಂದು ಖಾತರಿಪಡಿಸಿಕೊಂಡ ಬಳಿಕವೇ ಅಲ್ಲಿ ದೇವಾಲಯದ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತಿತ್ತಂತೆ... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಭಾರತದ ದೇಗುಲಗಳು

ಭಾರತದ ದೇಗುಲಗಳು

ವೈಜ್ಞಾನಿಕವಾಗಿ ಈ ಸ್ಥಳಗಳನ್ನು ಅವಲೋಕಿಸಿದಾಗ ಭೂಮಿಯ ಆಯಸ್ಕಾಂತೀಯ ಅಲೆಗಳು ಮತ್ತು ವಿದ್ಯುತ್ ಅಲೆಗಳು ಉತ್ತರ ಧ್ರುವದಿಂದ ದಕ್ಷಿಣ ಧೃವದತ್ತ ಯಾವುದೇ ಅಡೆತಡೆಯಿಲ್ಲದೇ ಈ ದೇಗುಲದ ಮೂಲಕ ಹಾದು ಹೋಗುತ್ತಿದೆ, ಎಂದು ಸಮೀಕ್ಷೆಗಳು ಈಗಾಗಲೇ ದೃಢಪಡಿಸಿವೆ.

ಪಾದರಕ್ಷೆಗಳು

ಪಾದರಕ್ಷೆಗಳು

ಯಾವುದೇ ದೇವಸ್ಥಾನದಲ್ಲಿ ಪಾದರಕ್ಷೆಗಳೊಂದಿಗೆ ಯಾರಿಗೂ ಪ್ರವೇಶವಿಲ್ಲ. ಬರಿಗಾಲಿನಲ್ಲಿಯೇ ದೇವಸ್ಥಾನದ ಒಳಗಡಿಯಿಡಬೇಕು. ದೇವಸ್ಥಾನದ ಒಳಗೆ ಬರಿಗಾಲಿನಲ್ಲಿ ನಡೆದಾಡಿದಾಗ ನೆಲದಲ್ಲಿ ಸಂಗ್ರಹವಾಗಿದ್ದ ಶಕ್ತಿ ದೇಹಕ್ಕೆ ಪ್ರವಹಿಸಿ ಮನಸ್ಸು ಮತ್ತು ದೇಹಗಳನ್ನು ಉತ್ತಮ ಸ್ವಾಸ್ಥ್ಯದಲ್ಲಿಡುತ್ತವೆ ಮತ್ತು ಧನಾತ್ಮಕ ಚಿಂತನೆಗೆ ನೆರವಾಗುತ್ತದೆ, ಎಂದು ಸಮೀಕ್ಷೆಗಳು ಈಗಾಗಲೇ ದೃಢಪಡಿಸಿವೆ.

ಕರ್ಪೂರದ ಆರತಿ

ಕರ್ಪೂರದ ಆರತಿ

ಪೂಜಾಕಾಲದಲ್ಲಿ ಪ್ರತಿಯೊ೦ದು ವಿಧಿಯನ್ನೂ ಕೂಡ ಆಧ್ಯಾತ್ಮಿಕ ವಿಜ್ಞಾನದ ನಿಯಮಾನುಸಾರವಾಗಿ ನಡೆಸುವುದು ಅತೀ ಪ್ರಮುಖವಾದ ವಿಚಾರವಾಗಿದೆ. ಇದಕ್ಕೆ ಉತ್ತಮ ಉದಾಹರಣೆ, ದೇವರಿಗೆ ಪೂಜಿಸುವ ಕರ್ಪೂರದ ಆರತಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕರ್ಪೂರದ ಆರತಿ

ಕರ್ಪೂರದ ಆರತಿ

ಗರ್ಭಗುಡಿಯ ಭಾಗವನ್ನು ಕತ್ತಲಾಗಿರಿಸಿ ಕರ್ಪೂರ ಮತ್ತು ದೀವಟಿಗೆಗಳ ಬೆಳಕಿನಲ್ಲಿ ವಿಗ್ರಹವನ್ನು ನೋಡುವಂತೆ ಸ್ಥಾಪಿಸಲಾಗಿರುತ್ತದೆ. ಇದರಿಂದ ಕಡಿಮೆ ಬೆಳಕಿನಲ್ಲಿ ವಿಗ್ರಹವನ್ನು ಗಮನಿಸುವ ಪ್ರಯತ್ನದಲ್ಲಿ ಕಣ್ಣುಗಳ ಪಾಪೆಗಳು ಹಿಗ್ಗಿ ಉತ್ತಮವಾದ ವ್ಯಾಯಾಮವನ್ನು ಪಡೆಯುತ್ತವೆ.

ಮಂದಿರಗಳಲ್ಲಿ ಹೂವಿನ ಮಹತ್ವ

ಮಂದಿರಗಳಲ್ಲಿ ಹೂವಿನ ಮಹತ್ವ

ಪೂಜೆಯಲ್ಲಿ ಹೂವು ಮತ್ತು ಹೂವಿನ ದಳಗಳಿಗೆ ವಿಶೇಷ ಮಹತ್ವವಿದೆ. ಹೂವುಗಳು ಸ್ವಚ್ಛ, ಕೋಮಲ ಹಾಗೂ ಸುವಾಸನೆಯಿಂದ ಕೂಡಿರುತ್ತವೆ. ಅಷ್ಟೇ ಅಲ್ಲದೆ, ದೇವರ ಗರ್ಭಗುಡಿಯಲ್ಲಿರುವ, ಅಗರಬತ್ತಿ, ಕರ್ಪೂರ ಮೊದಲಾದವುಗಳ ಸುವಾಸನೆ ಮಂದಿರದಲ್ಲಿ ತುಂಬಿದ್ದು ಇದು ನಾಸಿಕಗಳ ಗ್ರಹಣಶಕ್ತಿಯನ್ನು ಚುರುಕುಗೊಳಿಸುತ್ತವೆ.

ಗರ್ಭಗುಡಿಯ ಸುತ್ತ ಸುತ್ತುಬರುವುದು....

ಗರ್ಭಗುಡಿಯ ಸುತ್ತ ಸುತ್ತುಬರುವುದು....

ಪೂಜೆಯ ಬಳಿಕ ಗರ್ಭಗುಡಿಯ ಸುತ್ತ ಸುತ್ತುಬರುವುದು, ಹಿಂದೂ ಧರ್ಮದಲ್ಲಿ ಧಾರ್ಮಿಕ ವಿಧಿಯಾಗಿದೆ, ಈ ವಿಧಿಯ ವೈಜ್ಞಾನಿಕ ಕಾರಣವನ್ನು ಅವಲೋಕಿಸಿದರೆ ಇದಕ್ಕೂ ಆಯಸ್ಕಾಂತೀಯ ಅಲೆ ಕಾರಣವಾಗಿರುವುದು ಕಂಡುಬರುತ್ತದೆ. ಅಷ್ಟೇ ಅಲ್ಲದೆ, ಇದರಿಂದ ಮಾನಸಿಕ ಶಾಂತಿ ಮನದಲ್ಲಿ ನೆಲೆಸಲು ಸಾಧ್ಯವಾಗುತ್ತದೆ.

English summary

Is there any scientific reason behind any temple?

There are hundreds of temples all over India in different size, shape and locations but not all of them are considered to be in the Vedic way. Generally, the temples are located in a place where earth's magnetic waves pass through. In simple terms, these temples are located strategically at a place where the positive energy is abundantly available from the magnetic wave distribution of north/ south pole thrust.
X
Desktop Bottom Promotion