Latest Updates
-
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ!
ರಾಧೆಯ ಹುಟ್ಟು ಹೇಗೆ ಆಯಿತು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ
ಹಿಂದೂ ಪುರಾಣಗಳಲ್ಲಿ ಶ್ರೀಕೃಷ್ಣ ದೇವರು ಮತ್ತು ರಾಧೆಯ ಪ್ರೇಮದ ಬಗ್ಗೆ ತುಂಬಾ ಉಲ್ಲೇಖವಿದೆ. ಅದರಲ್ಲೂ ಈಗಲೂ ತುಂಬಾ ಪರಿಶುದ್ಧ ಆಗಿರುವ ಪ್ರೇಮಕ್ಕೆ ರಾಧೆ ಹಾಗೂ ಕೃಷ್ಣನ ಪ್ರೀತಿ ಎಂದು ಹೆಸರಿಡುವರು. ಇವರಿಬ್ಬರು ಪ್ರೇಮವು ಇಂದು ವಿಶ್ವದೆಲ್ಲೆಡೆಯಲ್ಲೂ ಚಿರಪರಿಚಿತವಾಗಿದೆ. ಶ್ರೀಕೃಷ್ಣನು ವಿಷ್ಣು ದೇವರ ಅವತಾರವಾದರೆ, ರಾಧೆಯನ್ನು ಲಕ್ಷ್ಮೀ ದೇವಿಯ ಅವತಾರ ಎಂದು ನಂಬಲಾಗುತ್ತದೆ. ಪ್ರತಿಯೊಬ್ಬರಿಗೂ ಕೃಷ್ಣ ಹುಟ್ಟಿನ ಕಥೆಯ ಬಗ್ಗೆ ಖಂಡಿತವಾಗಿಯೂ ತಿಳಿದಿರುವುದು.
ಆದರೆ ನಾವು ಈ ಲೇಖನದಲ್ಲಿ ಹೇಳಲು ಹೊರಟಿರುವುದು ರಾಧೆಯ ಜನ್ಮದ ಕಥೆಯ ಬಗ್ಗೆ. ಕೃಷ್ಣ ದೇವರು ಮತ್ತು ರಾಧೆಯ ಹಿಂದಿನ ಜೀವನದ ಘಟನೆಯೊಂದು ಇದಕ್ಕೆ ಸುಳಿವನ್ನು ನೀಡುತ್ತಲಿದೆ. ಬ್ರಹ್ಮ ವೈವರ್ತ ಪುರಾಣದ ಪ್ರಕಾರ ಕೃಷ್ಣ ದೇವರು ಮತ್ತು ರಾಧೆಯು ತಮ್ಮ ಹಿಂದಿನ ಜನ್ಮದಲ್ಲಿ ದೈವಿಕ ಜೋಡಿಯಾಗಿದ್ದರು. ದೈವಿಕ ಜೋಡಿ ಎಂದರೆ ಇಲ್ಲಿ ವಿಷ್ಣು ದೇವರು ಮತ್ತು ಲಕ್ಷ್ಮೀ ದೇವಿ ಎಂದು ಹೇಳಲಾಗುತ್ತದೆ. ಅವತಾರವು ತುಂಬಾ ಭಿನ್ನವಾಗಿರುವುದು ಮತ್ತು ಅದು ಅವರ ಮೂಲ ರೂಪವಲ್ಲವೆಂದು ಇನ್ನೊಂದು ಮೂಲಗಳು ಹೇಳುತ್ತವೆ.

ರಾಧೆಯ ಜನ್ಮದಿನವನ್ನು ರಾಧಾ ಅಷ್ಟಮಿ ಎಂದು ಆಚರಿಸಲಾಗುವುದು
ಪುರಾಣದ ಪ್ರಕಾರ ಭಾದ್ರಪದ ತಿಂಗಳು ಅಷ್ಟಮಿ ತಿಥಿಯಲ್ಲಿ ರಾಧೆಯು ಜನಿಸಿದಳು. ಈ ದಿನವನ್ನು ರಾಧಾ ಅಷ್ಟಮಿ ಎಂದು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಇದು ಕೃಷ್ಣ ದೇವರ ಜನ್ಮಕ್ಕೆ ತುಂಬಾ ಸಮಾನವಾಗಿದೆ. ಯಾಕೆಂದರೆ ರಾಧೆ ಕೂಡ ತನ್ನ ತಾಯಿಯ ಗರ್ಭದಿಂದ ಜನ್ಮ ಪಡೆದಿಲ್ಲ. ಇದರಿಂದಾಗಿ ಆಕೆ ಜನ್ಮ ಪಡೆದಿಲ್ಲ ಮತ್ತು ಸಾಯುವುದು ಇಲ್ಲ ಎಂದು ಹೇಳಲಾಗುತ್ತದೆ. ಇದರಿಂದಾಗಿ ಆಕೆ ಲಕ್ಷ್ಮೀ ದೇವಿಯ ರೂಪದಲ್ಲಿ ಅಮರಳಾಗಿರುವಳು.

ರಾಧೆ ಕೃಷ್ಣ ದೇವರನ್ನು ವಿರ್ಜಾದೊಂದಿಗೆ ನೋಡಿದರು
ತನ್ನ ಹಿಂದಿನ ಜನ್ಮದಲ್ಲಿ ರಾಧೆಯು ಕೃಷ್ಣ ದೇವರು ಪತ್ನಿಯಾಗಿದ್ದರು. ಒಂದು ಘಟನೆಯಲ್ಲಿ ಕೃಷ್ಣ ದೇವರು ಉದ್ಯಾನದಲ್ಲಿ ವಿರ್ಜಾಳೊಂದಿಗೆ ಕುಳಿತಿರುವುದು ರಾಧೆಗೆ ಕಾಣಿಸುವುದು. ವಿರ್ಜಾ ಕೃಷ್ಣ ದೇವರ ಮತ್ತೊಬ್ಬಳು ಪತ್ನಿಯಾಗಿರುವರು. ಇದನ್ನು ನೋಡಿದ ರಾಧೆಗೆ ತುಂಬಾ ಅಸೂಹೆ ಉಂಟಾಗುವುದು ಮತ್ತು ಕೃಷ್ಣ ದೇವರ ಬಗ್ಗೆ ಬೇಸರ ಮೂಡುವುದು. ಕೋಪಗೊಂಡಿರುವ ರಾಧೆಯು ಇದನ್ನು ಖಂಡಿಸುವರು.ಇದನ್ನು ಕೃಷ್ಣನ ಸ್ನೇಹಿತ ಶ್ರೀದಾಮಾನಿಗೆ ಸಹಿಸಲು ಆಗುವುದಿಲ್ಲ. ಇದಕ್ಕೆ ಪ್ರತಿಯಾಗಿ ಆತ ರಾಧೆಯೊಂದಿಗೆ ಜಗಳಕ್ಕೆ ಇಳಿಯುತ್ತಾನೆ. ಇದರಿಂದ ತುಂಬಾ ನೊಂದ ರಾಧೆಯು ಆತನಿಗೆ ಶಾಪ ನೀಡಿ, ನೀನು ರಾಕ್ಷಸನ ಮನೆಯಲ್ಲಿ ಹುಟ್ಟು ಎಂದು ಹೇಳುವರು. ಇದರಿಂದ ನೊಂದ ಶ್ರೀದಾಮಾ ಕೂಡ ರಾಧೆಗೆ ಶಾಪವನ್ನು ನೀಡಿ, ನೀವು ಕೂಡ ಭೂಮಿ ಮೇಲೆ ಸಾಮಾನ್ಯ ಜನರಂತೆ ವಾಸಿಸು ಎಂದು ಶಪಿಸುತ್ತಾನೆ.

ರಾಧೆ ಮತ್ತು ಶ್ರೀದಾಮನ ಮರುಜನ್ಮ
ರಾಧೆಯ ಶಾಪಕ್ಕೆ ಒಳಗಾದ ಶ್ರೀದಾಮನು ಶಂಕಚೂರ ಎನ್ನುವ ರಾಕ್ಷಸನಾಗಿ ಮರುಜನ್ಮ ಪಡೆಯುತ್ತಾನೆ. ರಾಧೆಯು ತನಗೆ ಸಿಕ್ಕಿದ ಶಾಪದಿಂದಾಗಿ ವೃಷಭಾನು ಮತ್ತು ಆತನ ಪತ್ನಿ ಕೃತಿಯ ಮಗಳಾಗಿ ಜನಿಸುವರು. ಅದಾಗ್ಯೂ, ಆಕೆ ತನ್ನ ತಾಯಿ ಗರ್ಭದಿಂದ ಜನ್ಮ ಪಡೆಯಲಿಲ್ಲ. ಹೆಣ್ಣು ಮಗುವಿಗೆ ಕೃತಿಯು ಜನ್ಮ ನೀಡಿದ ಬಳಿಕ ಆಕೆಯ ದೇಹದೊಳಗೆ ರಾಧೆಯು ಪ್ರವೇಶ ಮಾಡಿದಳು ಎಂದು ಹೇಳಲಾಗುತ್ತದೆ. ತಾಯಿ ಗರ್ಭದಿಂದ ಜನಿಸದೆ ಇರುವ ಕಾರಣದಿಂದಾಗಿ ರಾಧೆಯನ್ನು ಅಯೊನಿಜಾ ಎಂದೂ ಕರೆಯಲಾಗುತ್ತದೆ.

ಮರುಜನ್ಮಕ್ಕೆ ರಾಧೆಯನ್ನು ಕೃಷ್ಣ ದೇವರು ತಯಾರು ಮಾಡಿದರು
ತನಗೆ ಸಿಕ್ಕಿದ ಶಾಪದಿಂದಾಗಿ ರಾಧೆಯು ತುಂಬಾ ದುಃಖದಲ್ಲಿದ್ದಳು. ಇದನ್ನು ತಿಳಿದ ಕೃಷ್ಣ ದೇವರು ರಾಧೆಗೆ ಸಮಾಧಾನ ಪಡಿಸಿದರು. ನೀವು ವೃಷಭಾನು ಮತ್ತು ಕೃತಿಯ ಮಗಳಾಗಿ ಜನಿಸಲಿದ್ದಿ ಎಂದು ಹೇಳುತ್ತಾರೆ. ವಸುದೇವ ಮತ್ತು ದೇವಕಿಯ ಮಗನಾಗಿ ನಾನು ಜನಿಸಲಿದ್ದೇನೆ ಎಂದು ಕೃಷ್ಣ ದೇವರು ಆಕೆಗೆ ಹೇಳುವರು. ಇದರಿಂದಾಗಿ ಮುಂದಿನ ಜನ್ಮದಲ್ಲಿ ಅವರು ಪ್ರೇಮಿಗಳಾದರು. ಆದರೂ ಅವರು ಮರುಜನ್ಮದಲ್ಲಿ ಕೂಡ ಬೇರ್ಪಡುವರು. ಮಾನವ ಜನ್ಮದಲ್ಲಿ ಅವರು ಬೇರ್ಪಟ್ಟಿದ್ದಾರೆ. ಆದರೆ ದೈವಿಕವಾಗಿ ಅವರು ಒಂದಾಗಿಯೇ ಇರುವರು.



Click it and Unblock the Notifications