Just In
- 14 min ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 13 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 13 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 14 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
Don't Miss
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭೂಮಿಗೆ ನಾವು ಹೀಗೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತೆ, ಸಂಪತ್ತು ಹೆಚ್ಚಿಸುತ್ತೆ
ಇಂದು ಇಡೀ ಜಗತ್ತಿಗೆ ಎದುರಾಗಿರುವ ಸಮಸ್ಯೆ ಎಂದರೆ ಜಾಗತಿಕ ತಾಪಮಾನ ಹೆಚ್ಚುತ್ತಿರುವುದು. ನಾಗರೀಕರಣ ಹೆಚ್ಚಾದಂತೆ ಕಾಡುಗಳು ಮಾಯವಾಗಿ ಕಾಂಕ್ರೇಟ್ ರಸ್ತೆ, ಕಟ್ಟಗಳು ತಲೆ ಎತ್ತಿವೆ. ಇರುವ ಅಲ್ಪ-ಸ್ವಲ್ಪ ಕಾಡು ಕೂಡ ಬೆಂಕಿ ಬಿದ್ದು, ಮನುಷ್ಯನ ದಾಳಿಯಿಂದಾಗಿ ನಶಿಸಿ ಹೋಗುತ್ತಿದೆ.
ಕಾಡು ಅಳಿದರೆ ಮನುಷ್ಯನಿಗೆ ಉಳಿಗಾಲವಿಲ್ಲ ಎಂಬ ಸತ್ಯ ಗೊತ್ತಿದ್ದರೂ ಮನುಷ್ಯ ಮಾತ್ರ ತನ್ನ ದುರಾಸೆಗೆ, ಈ ಕ್ಷಣ ಬದುಕಲು ಮುಂದಿನ ಪೀಳಿಗೆ ಬಗ್ಗೆ ಯೋಚಿಸಿದೆ ಕಾಡನ್ನು ನಾಶಪಡಿಸುತ್ತಿದ್ದಾನೆ. ಕಾಡು ಸಮೃದ್ಧಿಯಾಗಿದ್ದರೆ ಮಾತ್ರ ನಾವು ಸಮೃದ್ಧಿಯಾಗಿರುತ್ತೇವೆ. ಆದ್ದರಿಂದ ಭೂಮಿರ ರಕ್ಷಣೆ ಕುರಿತು ಅರಿವು ಮುಡಿಸಲು ಏಪ್ರಿಲ್ 22ನ್ನು ಭೂಮಿ ದಿನವನ್ನಾಗಿ ಆಚರಿಸುತ್ತೇವೆ. ಈ ದಿನಕ್ಕೆ ಗೂಗಲ್ ಡೂಡಲ್ ಮಾಡಿದ ವೀಡಿಯೋವೊಂದು ತುಂಬಾನೇ ಗಮನ ಸೆಳೆದಿದೆ. ಅಷ್ಟು ಮಾತ್ರವಲ್ಲ ಇದರಂತೆ ನಾವು ಮಾಡಿದ್ದೇ ಆದರೆ ನಮ್ಮನ್ನು ಸಲುಹುತ್ತಿರುವ ಭೂಮಿಗೆ ನಾವು ಮಾಡುತ್ತಿರುವ ಕೃತಜ್ಞತೆ ಆಗಿದೆ.
ಗೂಗಲ್ ಡೂಡಲ್ನ ಸುಂದರ ವೀಡಿಯೋದಲ್ಲಿ ಒಂದು ದೊಡ್ಡ ಮರದ ಕೆಳಗಡೆ ಒಬ್ಬ ಮಹಿಳೆ ಬುಕ್ ಓದುತ್ತಾ ಇರುತ್ತಾಳೆ. ಅವಳ ಮಗಳು ಒಂದು ಚಿಕ್ಕ ಗಿಡ ತೆಗೆದುಕೊಂಡು ಹೋಗಿ ನೆಡುತ್ತಾಳೆ, ಅವಳು ವಯಸ್ಸಾಗುವಾಗ ಆ ಮರ ಬೆಳೆದಿರುತ್ತದೆ, ಅವಳ ಮುಂದಿನ ಪೀಳಿಗೆ ಅಲ್ಲಿಗೆ ಬರುತ್ತದೆ, ಅವನು ಒಂದು ಮರ ನೆಡುತ್ತಾನೆ, ಅದು ದೊಡ್ಡದಾಗುತ್ತದೆ, ಹೀಗೆ ಪೀಳಿಗೆಯಿಂದ ಪೀಳಿಗೆಗೆ ಮರ ನೆಡುವುದು ಮುದುವರೆಯತ್ತೆ ಭೂಮಿ ಹಚ್ಚ ಹಸಿರಾಗಿ ಸುಂದರವಾಗಿರುತ್ತದೆ.
ಜೀವನದಲ್ಲಿ ಪ್ರತಿಯೊಬ್ಬರು ಒಂದು ಗಿಡ ನೆಟ್ಟು ಬೆಳೆಸಿದರೆ ಸಾಕು ವನ್ಯಸಿರಿ ಸಮೃದ್ಧಿಯಾಗಿರುತ್ತದೆ.