Latest Updates
-
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ
ಸ್ವರ್ಗದಲ್ಲಿರುವ ನಿಮ್ಮ ಪಿತೃಗಳು ಈ ನಾಲ್ಕು ಸಂದರ್ಭಗಳಲ್ಲಿ ನಿಮ್ಮನ್ನು ಭೇಟಿಯಾಗಬಹದು!
ಆತ್ಮಕ್ಕೆ ಸಾವಿಲ್ಲ, ದೇಹಕ್ಕೆ ಮಾತ್ರ ಎನ್ನುವ ಮಾತಿದೆ. ದೇಹವು ಅಂತಿಮವಾಗಿ ಮಣ್ಣಾಗಿ ಹೋಗುವುದು. ಆದರೆ ಆತ್ಮ ಮಾತ್ರ ಹೊಸ ಜೀವನ ಪಡೆಯುವುದು ಎನ್ನುವ ಮಾತಿದೆ. ನಮ್ಮ ಹಿರಿಯರು ಸಾವಿನ ಬಳಿಕವೂ ನಮ್ಮೊಂದಿಗೆ ಇರುವರು ಎಂದು ಹೇಳಲಾಗುತ್ತದೆ. ಈ ರೀತಿಯಾಗಿ ಅವರ ಮಕ್ಕಳು ಅಥವಾ ಸಂಬಂಧಿಕರು ಮಾಡುವಂತಹ ತಪ್ಪುಗಳನ್ನು ತಿದ್ದಿ ಅವರನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡುವರು ಎನ್ನುವ ಮಾತಿದೆ.

ಇಂತಹ ಆತ್ಮಗಳಿಗೆ ದೇವರ ಸ್ಥಾನಮಾನ ಸಿಗುವುದು ಮತ್ತು ಇವುಗಳನ್ನು ಪಿತೃದೇವ ಎಂದು ಕರೆಯಲಾಗುತ್ತದೆ. ಪ್ರತೀ ವರ್ಷ ಹಿಂದೂ ಧರ್ಮದಲ್ಲಿ ಪಿತೃಗಳಿಗೆ ಪ್ರಾರ್ಥನೆ ಸಲ್ಲಿಸುವಂತಹ ಕ್ರಮವಿದೆ. ಸತ್ತ ಬಳಿಕವು ನಮ್ಮ ಹಿರಿಯರು ನಾಲ್ಕು ಸಂದರ್ಭಗಳಲ್ಲಿ ನಮ್ಮೊಂದಿಗೆ ಬರುವರು ಎಂದು ಹೇಳಲಾಗುತ್ತದೆ. ಈ ನಾಲ್ಕು ಸಂದರ್ಭಗಳು ಯಾವುದು ಎಂದು ನೀವು ಈ ಲೇಖನದಲ್ಲಿ ತಿಳಿಯಿರಿ.

ಏಕಾಂಗಿಯಾದಾಗ
ಏಕಾಂಗಿಯಾಗಿರುವಂತಹ ಸಮಯದಲ್ಲಿ ನಮ್ಮನ್ನು ಬಿಟ್ಟುಹೋಗಿರುವ ಹಿರಿಯರ ಜತೆಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಆದರೆ ನಾವು ಈ ಸಂದರ್ಭದಲ್ಲಿ ಹೆದರಬಾರದು. ಯಾಕೆಂದರೆ ಇವರು ನಮ್ಮ ಜೀವನದಲ್ಲಿ ಬೆಂಬಲ ನೀಡಲು ಕಾಣಿಸುವರು. ನಾವು ಭೀತಿಯಿಲ್ಲದೆ, ತುಂಬಾ ಸಂತೋಷವಾಗಿ ಅವರನ್ನು ನೋಡಲು ಬಯಸಿದರೆ ಖಂಡಿತವಾಗಿಯೂ ಅವರ ಉಪಸ್ಥಿತಿಯು ಕಂಡುಬರುವುದು. ಆದರೆ ಪ್ರತಿಯೊಬ್ಬರಿಗೂ ಅವರ ಉಪಸ್ಥಿತಿಯು ಗೊತ್ತಾಗದು.

ನಿದ್ರೆಯಲ್ಲಿ ಇರುವಾಗ ಅಥವಾ ಕನಸಿನಲ್ಲಿ…
ಕೆಲವು ಜನರು ನಡುರಾತ್ರಿಯಲ್ಲಿ ಎದ್ದು ತುಂಬಾ ಚುರುಕು, ತಾಜಾ ಹಾಗೂ ಚಟುವಟಿಕೆಯಿಂದ ಇರುವಂತಹ ಭಾವನೆಯಾಗುತ್ತದೆ ಎಂದು ಹೇಳುವರು. ಇದು ಸಾಮಾನ್ಯವಾಗಿ ಮುಂಜಾನೆ 3 ಗಂಟೆಯಿಂದ 5 ಗಂಟೆ ಮಧ್ಯೆ ನಡೆಯುವುದು. ಹಿರಿಯರು ನಮ್ಮನ್ನು ಭೇಟಿಯಾಗಲು ಬರುವ ವೇಳೆ ಇದು ನಡೆಯುತ್ತದೆ ಎಂದು ಹೇಳಲಾಗುತ್ತದೆ. ಅದಾಗ್ಯೂ, ನಾವು ಗಾಢನಿದ್ರೆಯಲ್ಲಿರುವಾಗ ಅವರು ನಮ್ಮನ್ನು ಭೇಟಿಯಾಗಲು ಬರುವರು ಎಂದು ಹೇಳಲಾಗುತ್ತದೆ. ಆದರೆ ಇಂತಹ ಭಾವನೆಗಳಿಗೆ ಇದು ಒಂದೇ ಕಾರಣವಲ್ಲ.

ಜೀವನದ ಸಂಕಷ್ಟದ ಸಮಯದಲ್ಲಿ
ವ್ಯಕ್ತಿಯೊಬ್ಬನು ಜೀವನದ ತುಂಬಾ ಕಠಿಣ ಸಮಯವನ್ನು ಎದುರಿಸುತ್ತಿರುವಾಗ, ಎಲ್ಲಾ ಸಮಸ್ಯೆಗಳಿಗೆ ಯಾವುದೇ ಪರಿಹಾರಗಳು ಇಲ್ಲದೆ ಇರುವಾಗ, ಯಾವುದೇ ರೀತಿಯ ನೆರವು ಸಿಗದೆ ಇರುವಾಗ ಮತ್ತು ಎಲ್ಲರೂ ಆತನ ವಿರುದ್ಧವೇ ಮಾತನಾಡುತ್ತಿರುವಾಗ ಹಿರಿಯರು ಬಂದು ನಿಮ್ಮನ್ನು ಭೇಟಿಯಾಗುವರು ಎಂದು ಹೇಳಲಾಗುತ್ತದೆ. ಇಂತಹ ಸಂಕಷ್ಟದ ಸಮಯದಲ್ಲಿ ಅವರು ಬಂದು ನೆರವಾಗುವರು ಎಂದು ಹೇಳಲಾಗುತ್ತದೆ.

ಕುಟುಂಬದ ಕಾರ್ಯಕ್ರಮದ ವೇಳೆ
ಯಾವುದೇ ರೀತಿಯ ಕುಟುಂಬದ ಕಾರ್ಯಕ್ರಮಗಳು ಇರುವಾಗ ನಾವು ಹಿರಿಯರಿಂದ ಆಶೀರ್ವಾದ ಪಡೆದುಕೊಳ್ಳಬೇಕು. ಈ ವೇಳೆ ಹಿರಿಯರು ಬಂದು ತಮ್ಮ ಮಕ್ಕಳಿಗೆ ಆಶೀರ್ವಾದ ಮಾಡುವರು ಎಂದು ಹೇಳಲಾಗುತ್ತದೆ. ಕೆಲವು ಜನರು ಇವರ ಆಗಮನವನ್ನು ಗಮನಿಸುವರು. ಆದರೆ ಎಲ್ಲರಿಗೂ ಇದು ಸಾಧ್ಯವಿಲ್ಲ. ಇವರು ಕೆಲವೇ ಕ್ಷಣಗಳಿಗಾಗಿ ಬರುವರು ಮತ್ತು ಆಶೀರ್ವಾದ ನೀಡಿ ಹೋಗುವರು ಎಂದು ಹೇಳಲಾಗುತ್ತದೆ.



Click it and Unblock the Notifications











