Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಹೋಳಿ ಆಚರಣೆ ಬರೀ ಬಣ್ಣದ ಹಬ್ಬ ಮಾತ್ರವಲ್ಲ!
ಬಣ್ಣದ ಓಕುಳಿಯ ಹಬ್ಬದಲ್ಲಿ ಇತರ ಹಬ್ಬದಲ್ಲಿ ಮಾಡುವಂತೆ ಯಾವುದೇ ವಿಶೇಷ ಪೂಜೆ, ಉಪವಾಸ ಅಂತ ಮಾಡುವುದಿಲ್ಲ. ಆದರೆ ಈ ಹಬ್ಬ ಬರೀ ಸಂತೋಷಕ್ಕಾಗಿ ಆಚರಿಸುವ ಹಬ್ಬವಲ್ಲ! ಈ ಹಬ್ಬದಲ್ಲಿ ಎರಡು ಮುಖ್ಯವಾದ ಆಚರಣೆಗಳಿವೆ. ಮೊದಲಿನದು ಹೋಲಿಕಾ ದಹನ್ ( ದುಷ್ಟರ ದಹನ), ಎರಡನೇಯದು ಬಣ್ಣದಲ್ಲಿ ಆಟ ಆಡುವುದು.
ಹೋಳಿ ಹಬ್ಬದ ವಿಶೇಷತೆ
ಹೋಳಿ ಹಬ್ಬದಂದು ಒಂದು ವಾರದ ಮೊದಲೇ ಮಕ್ಕಳನ್ನು ಕಳುಹಿಸಿ ರಸ್ತೆ ಹಾಗೂ ಪಾರ್ಕ್ ನಲ್ಲಿ ಬಿದ್ದಂತಹ ಮರದ ಕಡ್ಡಿಗಳನ್ನು ತರಿಸಿಡುತ್ತಾರೆ. ಇವುಗಳನ್ನು ಹೋಳಿ ಹಬ್ಬದ ಹಿಂದಿನ ದಿನ ಇವುಗಳಿಗೆ ಬೆಂಕಿ ಕೊಟ್ಟು ಭಸ್ಮ ಮಾಡಲಾಗುವುದು. ಇದನ್ನು ಹೋಲಿಕಾ ದಹನ್ ಎನ್ನುತ್ತಾರೆ.

ಹೋಲಿಕಾ ದಹನ್ ಆಚರಣೆಯ ಕತೆ
ಹಿರಣ್ಯಾ ಕಶಿಪು ರಾಜ ನಾನೇ ದೇವರು ಎಂದು ಮೆರೆಯುತ್ತಿದ್ದ. ಆದರೆ ಅವನ ಮಗ ಪ್ರಹ್ಲಾದ ನಾರಾಯಣ ದೇವರನ್ನು ಪೂಜಿಸುತ್ತಿದ್ದ. ಇದ ರಾಜನಿಗೆ ಇಷ್ಟವಾಗಲಿಲ್ಲ, ನಾರಾಯಣನನ್ನು ಪೂಜಿಸುವ ತನ್ನ ಮಗನನ್ನು ಕೊಲ್ಲಲು ತನ್ನ ತಂಗಿಯಾದ ಹೋಲಿಕಾಳ ಹತ್ತಿರ ಮಗನನ್ನುಎತ್ತಿಕೊಂಡು ಬೆಂಕಿಯಲ್ಲಿ ಕೂರಲು ಹೇಳುತ್ತಾನೆ. ಹೋಲಿಕಾ ಬೆಂಕಿ ಅವಳನ್ನು ಸುಡದಿರುವ ವರವನ್ನು ಪಡೆದಿರುತ್ತಾಳೆ. ಆದರೆ ಹೋಲಿಕಾ ದುಷ್ಟ ಮಾರ್ಗದಲ್ಲಿ ನಡೆದುಕೊಂಡಿದ್ದರಿಂದ ಅವಳು ಸುಟ್ಟು ಹೋಗುತ್ತಾಳೆ, ಪ್ರಹ್ಲಾದ ಸ್ವಲ್ಪವೂ ಹಾನಿಯಾಗದೆ ಬೆಂಕಿಯಿಂದ ಎದ್ದು ಬರುತ್ತಾನೆ. ಆದ್ದರಿಂದ ಹೋಲಿಕಾ ದಹನ್ ಬೆಂಕಿ ದುಷ್ಟರನ್ನು ಸುಡುತ್ತದೆ ಅನ್ನುವುದರ ಸಂಕೇತವಾಗಿದೆ.
ರಾಧಾ ಮತ್ತು ಕೃಷ್ಣಾ
ಈ ಹಬ್ಬದಲ್ಲಿ ರಾಧಾ ಮತ್ತು ಕೃಷ್ಣನನ್ನು ಪೂಜಿಸಲಾಗುವುದು. ಇವರ ಬಗ್ಗೆ ಹೇಳುವ ಕತೆಯಲ್ಲಿ ಮೊದಲು ಕೃಷ್ಣಾ ಮತ್ತು ರಾಧೆ ಹಾಲಿನಲ್ಲಿ ಸ್ನಾನ ಮಾಡುತ್ತಾರೆ. ನಂತರ ನೀಲಿ ಬಣ್ಣದಲ್ಲಿ ಮುಳುಗುತ್ತಾರೆ. ಬಿಳಿ ಬಣ್ಣದ ರಾಧೆಯನ್ನು ನೀಲಿ ಬಣ್ಣದಲ್ಲಿ ಮುಳುಗಿಸಬೇಕೆಂದು ಅನಿಸಿ ಕೃಷ್ಣಾ ಅವಳ ಮೇಲೆ ಬಣ್ಣ ಎರಚಿದ ಎಂದು ಹೇಳಲಾಗುತ್ತಿದೆ.
ಭಾಂಗ್
ಭಾಂಗ್ ಅನ್ನು ಹೋಳಿ ಹಬ್ಬದ ಸಮಯದಲ್ಲಿ ಕುಡಿಯುವ ಪದ್ಧತಿ ಇದೆ. ಈ ಹೋಳಿ ಪಾನೀಯಾಕ್ಕೆ ಹಾಲು ಹಾಗೂ ಡ್ರೈ ಫ್ರೂಟ್ಸ್ ಸೇರಿಸಿ ಕುಡಿಯಲಾಗುವುದು. ಇದು ಹೋಳಿಯಲ್ಲಿ ಕುಣಿದು ಕುಪ್ಪಳಿಸುವಂತೆ ನಮ್ಮನ್ನು ಉತ್ತೇಜಿಸುತ್ತದೆ.
ಕಾಮದೇವನ ಪೂಜೆ
ಉತ್ತರ ಭಾರತದಲ್ಲಿ ಹೋಳಿಗೆ ಕಾಮದೇವನ ಪೂಜೆ ಮಾಡಲಾಗುವುದು.



Click it and Unblock the Notifications