Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೋಳಿ ಆಚರಣೆ ಬರೀ ಬಣ್ಣದ ಹಬ್ಬ ಮಾತ್ರವಲ್ಲ!
ಬಣ್ಣದ ಓಕುಳಿಯ ಹಬ್ಬದಲ್ಲಿ ಇತರ ಹಬ್ಬದಲ್ಲಿ ಮಾಡುವಂತೆ ಯಾವುದೇ ವಿಶೇಷ ಪೂಜೆ, ಉಪವಾಸ ಅಂತ ಮಾಡುವುದಿಲ್ಲ. ಆದರೆ ಈ ಹಬ್ಬ ಬರೀ ಸಂತೋಷಕ್ಕಾಗಿ ಆಚರಿಸುವ ಹಬ್ಬವಲ್ಲ! ಈ ಹಬ್ಬದಲ್ಲಿ ಎರಡು ಮುಖ್ಯವಾದ ಆಚರಣೆಗಳಿವೆ. ಮೊದಲಿನದು ಹೋಲಿಕಾ ದಹನ್ ( ದುಷ್ಟರ ದಹನ), ಎರಡನೇಯದು ಬಣ್ಣದಲ್ಲಿ ಆಟ ಆಡುವುದು.
ಹೋಳಿ ಹಬ್ಬದ ವಿಶೇಷತೆ
ಹೋಳಿ ಹಬ್ಬದಂದು ಒಂದು ವಾರದ ಮೊದಲೇ ಮಕ್ಕಳನ್ನು ಕಳುಹಿಸಿ ರಸ್ತೆ ಹಾಗೂ ಪಾರ್ಕ್ ನಲ್ಲಿ ಬಿದ್ದಂತಹ ಮರದ ಕಡ್ಡಿಗಳನ್ನು ತರಿಸಿಡುತ್ತಾರೆ. ಇವುಗಳನ್ನು ಹೋಳಿ ಹಬ್ಬದ ಹಿಂದಿನ ದಿನ ಇವುಗಳಿಗೆ ಬೆಂಕಿ ಕೊಟ್ಟು ಭಸ್ಮ ಮಾಡಲಾಗುವುದು. ಇದನ್ನು ಹೋಲಿಕಾ ದಹನ್ ಎನ್ನುತ್ತಾರೆ.

ಹೋಲಿಕಾ ದಹನ್ ಆಚರಣೆಯ ಕತೆ
ಹಿರಣ್ಯಾ ಕಶಿಪು ರಾಜ ನಾನೇ ದೇವರು ಎಂದು ಮೆರೆಯುತ್ತಿದ್ದ. ಆದರೆ ಅವನ ಮಗ ಪ್ರಹ್ಲಾದ ನಾರಾಯಣ ದೇವರನ್ನು ಪೂಜಿಸುತ್ತಿದ್ದ. ಇದ ರಾಜನಿಗೆ ಇಷ್ಟವಾಗಲಿಲ್ಲ, ನಾರಾಯಣನನ್ನು ಪೂಜಿಸುವ ತನ್ನ ಮಗನನ್ನು ಕೊಲ್ಲಲು ತನ್ನ ತಂಗಿಯಾದ ಹೋಲಿಕಾಳ ಹತ್ತಿರ ಮಗನನ್ನುಎತ್ತಿಕೊಂಡು ಬೆಂಕಿಯಲ್ಲಿ ಕೂರಲು ಹೇಳುತ್ತಾನೆ. ಹೋಲಿಕಾ ಬೆಂಕಿ ಅವಳನ್ನು ಸುಡದಿರುವ ವರವನ್ನು ಪಡೆದಿರುತ್ತಾಳೆ. ಆದರೆ ಹೋಲಿಕಾ ದುಷ್ಟ ಮಾರ್ಗದಲ್ಲಿ ನಡೆದುಕೊಂಡಿದ್ದರಿಂದ ಅವಳು ಸುಟ್ಟು ಹೋಗುತ್ತಾಳೆ, ಪ್ರಹ್ಲಾದ ಸ್ವಲ್ಪವೂ ಹಾನಿಯಾಗದೆ ಬೆಂಕಿಯಿಂದ ಎದ್ದು ಬರುತ್ತಾನೆ. ಆದ್ದರಿಂದ ಹೋಲಿಕಾ ದಹನ್ ಬೆಂಕಿ ದುಷ್ಟರನ್ನು ಸುಡುತ್ತದೆ ಅನ್ನುವುದರ ಸಂಕೇತವಾಗಿದೆ.
ರಾಧಾ ಮತ್ತು ಕೃಷ್ಣಾ
ಈ ಹಬ್ಬದಲ್ಲಿ ರಾಧಾ ಮತ್ತು ಕೃಷ್ಣನನ್ನು ಪೂಜಿಸಲಾಗುವುದು. ಇವರ ಬಗ್ಗೆ ಹೇಳುವ ಕತೆಯಲ್ಲಿ ಮೊದಲು ಕೃಷ್ಣಾ ಮತ್ತು ರಾಧೆ ಹಾಲಿನಲ್ಲಿ ಸ್ನಾನ ಮಾಡುತ್ತಾರೆ. ನಂತರ ನೀಲಿ ಬಣ್ಣದಲ್ಲಿ ಮುಳುಗುತ್ತಾರೆ. ಬಿಳಿ ಬಣ್ಣದ ರಾಧೆಯನ್ನು ನೀಲಿ ಬಣ್ಣದಲ್ಲಿ ಮುಳುಗಿಸಬೇಕೆಂದು ಅನಿಸಿ ಕೃಷ್ಣಾ ಅವಳ ಮೇಲೆ ಬಣ್ಣ ಎರಚಿದ ಎಂದು ಹೇಳಲಾಗುತ್ತಿದೆ.
ಭಾಂಗ್
ಭಾಂಗ್ ಅನ್ನು ಹೋಳಿ ಹಬ್ಬದ ಸಮಯದಲ್ಲಿ ಕುಡಿಯುವ ಪದ್ಧತಿ ಇದೆ. ಈ ಹೋಳಿ ಪಾನೀಯಾಕ್ಕೆ ಹಾಲು ಹಾಗೂ ಡ್ರೈ ಫ್ರೂಟ್ಸ್ ಸೇರಿಸಿ ಕುಡಿಯಲಾಗುವುದು. ಇದು ಹೋಳಿಯಲ್ಲಿ ಕುಣಿದು ಕುಪ್ಪಳಿಸುವಂತೆ ನಮ್ಮನ್ನು ಉತ್ತೇಜಿಸುತ್ತದೆ.
ಕಾಮದೇವನ ಪೂಜೆ
ಉತ್ತರ ಭಾರತದಲ್ಲಿ ಹೋಳಿಗೆ ಕಾಮದೇವನ ಪೂಜೆ ಮಾಡಲಾಗುವುದು.



Click it and Unblock the Notifications