Latest Updates
-
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ!
ಕಷ್ಟ ಕಾರ್ಪಣ್ಯ ನಿವಾರಿಸುವ ಶಕ್ತಿ ಈ ಮಂತ್ರದಲ್ಲಿದೆ-ನಿತ್ಯ ಪಠಿಸಿ
ವ್ಯಕ್ತಿಯ ಜಾತಕದಲ್ಲಿ ಸೂರ್ಯನ ಸ್ಥಾನ ಮಹತ್ವವಾದದ್ದು. ಸೂರ್ಯ ಯಾವ ಸ್ಥಾನದಲ್ಲಿ ಇದ್ದಾನೆ? ಎಷ್ಟು ಪರಿಣಾಮಕಾರಿ ಎನ್ನುವುದನ್ನು ಕುಂಡಲಿ ಬಿಚ್ಚಿಡುತ್ತದೆ. ಪುರಾಣದ ಪ್ರಕಾರ ಸೂರ್ಯನು ಕಶ್ಯಪ ಮಹರ್ಷಿ ಮತ್ತು ಅದಿತಿ ದೇವಿಯ ಮಗ ಎಂದು ಹೇಳಲಾಗುತ್ತದೆ. ತಾಯಿ ಅದಿತಿಯ ನಂತರ ಸೂರ್ಯನಿಗೆ ಆದಿತ್ಯ ಎಂದು ಕರೆಯುತ್ತಿದ್ದರು ಎನ್ನಲಾಗುತ್ತದೆ. ನಿತ್ಯವೂ ಸೂರ್ಯನ ಆರಾಧನೆ ಹಾಗೂ ಶ್ಲೋಕಗಳನ್ನು ಪಠಿಸಿದರೆ ಐಶ್ವರ್ಯ, ಗೌರವ, ದೀರ್ಘಾಯುಷ್ಯ ಮತ್ತು ಯಶಸ್ಸನ್ನು ಹೊಂದಬಹುದು.
ಸೂರ್ಯೋದಯದ ಸಮಯದಲ್ಲಿ ಸೂರ್ಯನ ಆರಾಧನೆ ಹಾಗೂ ಜಪ-ತಪಗಳು ನಡೆದರೆ, ಸೂರ್ಯನು ಆಶೀರ್ವದಿಸುತ್ತಾನೆ. ಅವನ ಕೃಪೆಗೆ ಒಳಗಾದರೆ ಜೀವನದಲ್ಲಿ ಸದಾ ಸುಖಿಯಾಗಿರಬಹುದು ಎನ್ನಲಾಗುತ್ತದೆ. ಪ್ರಪಂಚದಲ್ಲಿರುವ ಪ್ರತಿಯೊಬ್ಬರೂ ಶ್ಲೋಕ ಮತ್ತು ಮಂತ್ರವನ್ನು ಪಠಿಸುವ ಅಧಿಕಾರವಿದೆ. ಮಂತ್ರಗಳನ್ನು ಹೇಳುವಾಗ ಶಬ್ದಗಳ ಉಚ್ಚಾರ ಸರಿಯಾಗಿರಬೇಕಷ್ಟೆ. ಪಠಿಸುವ ಮಾರ್ಗ ಸರಿಯಾಗಿದ್ದರೆ, ಮಾನಸಿಕ ಹಾಗೂ ದೈಹಿಕವಾಗಿ ಸಕಾರಾತ್ಮಕ ಶಕ್ತಿಯು ನಮ್ಮನ್ನು ಕಾಪಾಡುವುದು....

ಗಾಯತ್ರಿ ಮಂತ್ರದ ಸ್ಮರಣೆ
ಅಗ್ನಿ ಪುರಾಣದ ಪ್ರಕಾರ, ಸೂರ್ಯೋದಯದ ಸಂದರ್ಭದಲ್ಲಿ ಸೂರ್ಯನಿಗೆ ಗಾಯತ್ರಿ ಮಂತ್ರವನ್ನು ಜಪಿಸುತ್ತಾ, ಅಘ್ರ್ಯ ನೀಡಿದರೆ ಉತ್ತಮ ಪರಿಣಾಮವನ್ನು ಹೊಂದಬಹುದು. ಹೀಗೆ ಮಾಡುವುದರಿಂದ ಜೀವನದಲ್ಲಿ ಉತ್ತಮ ಅದೃಷ್ಟಗಳನ್ನು ಅನುಭವಿಸಬಹುದು.
ಜೀವನದ ಎಲ್ಲಾ ಕಷ್ಟ-ನೋವು ನಿವಾರಿಸುವ- ಗಾಯತ್ರಿ ಮಂತ್ರ
ದುಃಖ ನಿರ್ಮೂಲನೆ
ನಿತ್ಯವೂ ಸೂರ್ಯೋದಯದ ಸಂದರ್ಭದಲ್ಲಿ ಗಾಯತ್ರಿ ಮಂತ್ರದ ಜೊತೆಗೆ ಅಘ್ರ್ಯ ನೀಡಿದರೆ, ಜೀವನದ ಎಲ್ಲಾ ದುಃಖಗಳು ನಿವಾರಣೆಯಾಗುವುದು. ಜೊತೆಗೆ ಮಾನಸಿಕ ಶಾಂತಿ ಹೆಚ್ಚುವುದು.

ಸೂರ್ಯನೇ ಜೀವ ಶಕ್ತಿ
ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಸೂರ್ಯನೇ ಮಹಾನ್ ಶಕ್ತಿ. ಇವನ ಆರಾಧನೆ ಮತ್ತು ಮಂತ್ರಗಳನ್ನು ಹೇಳುವುದರಿಂದ ಜೀವನದಲ್ಲಿ ಎಲ್ಲಾ ಬಗೆಯ ಗೌರವ ಹಾಗೂ ಸಂಪತ್ತು ಲಭ್ಯವಾಗುವುದು.

ಗಾಯತ್ರಿ ಮಂತ್ರ ನಿಮಗಾಗಿ
ಓಂ
ಭೂರ್ಭುವಸ್ವಃ
ತತ್ಸವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್.

ಗಾಯತ್ರಿ ಮಹಾಮ೦ತ್ರದ ಭಾವಾರ್ಥ
ಓಂ ಭೂರ್ಭುವಃಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ಜಪ ಮಾಡುವ ವಿಧಾನ: "ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ" ಎಂದು ಹೇಳುತ್ತಾ ನಿಧಾನವಾಗಿ ಪ್ರಾಣವಾಯುವನ್ನು ಒಳಗೆಳೆದುಕೊಳ್ಳಬೇಕು. ಆಮೇಲೆ ಪ್ರಾಣವಾಯುವನ್ನು ನಿಧಾನವಾಗಿ ಹೊರಬಿಡುತ್ತಾ "ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್" ಮಂತ್ರ ಜಪಿಸಬೇಕು.



Click it and Unblock the Notifications