Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಕಷ್ಟ ಕಾರ್ಪಣ್ಯ ನಿವಾರಿಸುವ ಶಕ್ತಿ ಈ ಮಂತ್ರದಲ್ಲಿದೆ-ನಿತ್ಯ ಪಠಿಸಿ
ವ್ಯಕ್ತಿಯ ಜಾತಕದಲ್ಲಿ ಸೂರ್ಯನ ಸ್ಥಾನ ಮಹತ್ವವಾದದ್ದು. ಸೂರ್ಯ ಯಾವ ಸ್ಥಾನದಲ್ಲಿ ಇದ್ದಾನೆ? ಎಷ್ಟು ಪರಿಣಾಮಕಾರಿ ಎನ್ನುವುದನ್ನು ಕುಂಡಲಿ ಬಿಚ್ಚಿಡುತ್ತದೆ. ಪುರಾಣದ ಪ್ರಕಾರ ಸೂರ್ಯನು ಕಶ್ಯಪ ಮಹರ್ಷಿ ಮತ್ತು ಅದಿತಿ ದೇವಿಯ ಮಗ ಎಂದು ಹೇಳಲಾಗುತ್ತದೆ. ತಾಯಿ ಅದಿತಿಯ ನಂತರ ಸೂರ್ಯನಿಗೆ ಆದಿತ್ಯ ಎಂದು ಕರೆಯುತ್ತಿದ್ದರು ಎನ್ನಲಾಗುತ್ತದೆ. ನಿತ್ಯವೂ ಸೂರ್ಯನ ಆರಾಧನೆ ಹಾಗೂ ಶ್ಲೋಕಗಳನ್ನು ಪಠಿಸಿದರೆ ಐಶ್ವರ್ಯ, ಗೌರವ, ದೀರ್ಘಾಯುಷ್ಯ ಮತ್ತು ಯಶಸ್ಸನ್ನು ಹೊಂದಬಹುದು.
ಸೂರ್ಯೋದಯದ ಸಮಯದಲ್ಲಿ ಸೂರ್ಯನ ಆರಾಧನೆ ಹಾಗೂ ಜಪ-ತಪಗಳು ನಡೆದರೆ, ಸೂರ್ಯನು ಆಶೀರ್ವದಿಸುತ್ತಾನೆ. ಅವನ ಕೃಪೆಗೆ ಒಳಗಾದರೆ ಜೀವನದಲ್ಲಿ ಸದಾ ಸುಖಿಯಾಗಿರಬಹುದು ಎನ್ನಲಾಗುತ್ತದೆ. ಪ್ರಪಂಚದಲ್ಲಿರುವ ಪ್ರತಿಯೊಬ್ಬರೂ ಶ್ಲೋಕ ಮತ್ತು ಮಂತ್ರವನ್ನು ಪಠಿಸುವ ಅಧಿಕಾರವಿದೆ. ಮಂತ್ರಗಳನ್ನು ಹೇಳುವಾಗ ಶಬ್ದಗಳ ಉಚ್ಚಾರ ಸರಿಯಾಗಿರಬೇಕಷ್ಟೆ. ಪಠಿಸುವ ಮಾರ್ಗ ಸರಿಯಾಗಿದ್ದರೆ, ಮಾನಸಿಕ ಹಾಗೂ ದೈಹಿಕವಾಗಿ ಸಕಾರಾತ್ಮಕ ಶಕ್ತಿಯು ನಮ್ಮನ್ನು ಕಾಪಾಡುವುದು....

ಗಾಯತ್ರಿ ಮಂತ್ರದ ಸ್ಮರಣೆ
ಅಗ್ನಿ ಪುರಾಣದ ಪ್ರಕಾರ, ಸೂರ್ಯೋದಯದ ಸಂದರ್ಭದಲ್ಲಿ ಸೂರ್ಯನಿಗೆ ಗಾಯತ್ರಿ ಮಂತ್ರವನ್ನು ಜಪಿಸುತ್ತಾ, ಅಘ್ರ್ಯ ನೀಡಿದರೆ ಉತ್ತಮ ಪರಿಣಾಮವನ್ನು ಹೊಂದಬಹುದು. ಹೀಗೆ ಮಾಡುವುದರಿಂದ ಜೀವನದಲ್ಲಿ ಉತ್ತಮ ಅದೃಷ್ಟಗಳನ್ನು ಅನುಭವಿಸಬಹುದು.
ಜೀವನದ ಎಲ್ಲಾ ಕಷ್ಟ-ನೋವು ನಿವಾರಿಸುವ- ಗಾಯತ್ರಿ ಮಂತ್ರ
ದುಃಖ ನಿರ್ಮೂಲನೆ
ನಿತ್ಯವೂ ಸೂರ್ಯೋದಯದ ಸಂದರ್ಭದಲ್ಲಿ ಗಾಯತ್ರಿ ಮಂತ್ರದ ಜೊತೆಗೆ ಅಘ್ರ್ಯ ನೀಡಿದರೆ, ಜೀವನದ ಎಲ್ಲಾ ದುಃಖಗಳು ನಿವಾರಣೆಯಾಗುವುದು. ಜೊತೆಗೆ ಮಾನಸಿಕ ಶಾಂತಿ ಹೆಚ್ಚುವುದು.

ಸೂರ್ಯನೇ ಜೀವ ಶಕ್ತಿ
ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಸೂರ್ಯನೇ ಮಹಾನ್ ಶಕ್ತಿ. ಇವನ ಆರಾಧನೆ ಮತ್ತು ಮಂತ್ರಗಳನ್ನು ಹೇಳುವುದರಿಂದ ಜೀವನದಲ್ಲಿ ಎಲ್ಲಾ ಬಗೆಯ ಗೌರವ ಹಾಗೂ ಸಂಪತ್ತು ಲಭ್ಯವಾಗುವುದು.

ಗಾಯತ್ರಿ ಮಂತ್ರ ನಿಮಗಾಗಿ
ಓಂ
ಭೂರ್ಭುವಸ್ವಃ
ತತ್ಸವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್.

ಗಾಯತ್ರಿ ಮಹಾಮ೦ತ್ರದ ಭಾವಾರ್ಥ
ಓಂ ಭೂರ್ಭುವಃಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ಜಪ ಮಾಡುವ ವಿಧಾನ: "ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ" ಎಂದು ಹೇಳುತ್ತಾ ನಿಧಾನವಾಗಿ ಪ್ರಾಣವಾಯುವನ್ನು ಒಳಗೆಳೆದುಕೊಳ್ಳಬೇಕು. ಆಮೇಲೆ ಪ್ರಾಣವಾಯುವನ್ನು ನಿಧಾನವಾಗಿ ಹೊರಬಿಡುತ್ತಾ "ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್" ಮಂತ್ರ ಜಪಿಸಬೇಕು.



Click it and Unblock the Notifications