Just In
- 7 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 8 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 8 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 9 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಂದೂ ಧರ್ಮದಲ್ಲಿ ಇವರು 'ಕೋಪಿಷ್ಠ ದೇವರು' ಎಂದೇ ಪ್ರಸಿದ್ಧಿ!
ಹಿಂದೂ ಧರ್ಮದಲ್ಲಿ ಕೆಲವು ದೇವರುಗಳು ಶಾಂತ ಮೂರ್ತಿಗಳಾದರೆ ಇನ್ನು ಕೆಲವರು ದೇವರುಗಳಿಗೆ ಕೋಪ ಜಾಸ್ತಿ. ಇಂತಹ ದೇವರುಗಳು ಕೋಪದಲ್ಲಿದ್ದಾಗ ನಿಮ್ಮ ಯಾವುದೇ ಪೂಜೆ, ಪುರಸ್ಕಾರಗಳು, ಭಕ್ತಿಯೂ ನಡೆಯಲ್ಲ...!
ಸಾವಿರಾರು ವರ್ಷಗಳಿಂದಲೂ ಇರುವಂತಹ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ ಎನ್ನುತ್ತವೆ ಪುರಾಣಗಳು. ಕೆಲವು ದೇವರುಗಳು ಭಕ್ತರ ಭಕ್ತಿಗೆ ಬೇಗನೆ ಒಲಿದರೆ ಇನ್ನು ಕೆಲವು ದೇವರುಗಳನ್ನು ಒಲಿಸಿಕೊಳ್ಳಲು ತುಂಬಾ ಕಷ್ಟಪಡಬೇಕಾಗುತ್ತದೆ. ಜಗತ್ತಿನ 'ಚಿತ್ತವನ್ನೇ ಕೆದಕುವ' ಹಿಂದೂ ಧರ್ಮದ ಆಚಾರ-ವಿಚಾರ
ಹಿಂದೂ ಧರ್ಮದಲ್ಲಿ ಕೆಲವು ದೇವರುಗಳು ಶಾಂತ ಮೂರ್ತಿಗಳಾದರೆ ಇನ್ನು ಕೆಲವರು ದೇವರುಗಳಿಗೆ ಕೋಪ ಜಾಸ್ತಿ. ಇಂತಹ ದೇವರುಗಳು ಕೋಪದಲ್ಲಿದ್ದಾಗ ನಿಮ್ಮ ಯಾವುದೇ ಪೂಜೆ, ಪುರಸ್ಕಾರಗಳು, ಭಕ್ತಿಯೂ ನಡೆಯಲ್ಲ. ಆದರೆ ಶಾಂತ ಸ್ವರೂಪಕ್ಕೆ ಬಂದಾಗ ನಿಮ್ಮ ಎಲ್ಲಾ ಇಷ್ಟಾರ್ಥಗಳು ಪೂರ್ತಿಯಾಗುತ್ತದೆ. ಹಿಂದೂ ಧರ್ಮದಲ್ಲಿ ಇರುವಂತಹ ಕೋಪಿಷ್ಠ ದೇವರುಗಳು ಯಾರು ಎಂದು ನಾವು ತಿಳಿದುಕೊಳ್ಳುವ...
ಕಾಳಿಮಾತೆ
ಕಾಳಿಮಾತೆಯನ್ನು ಹಿಂದೂಗಳು ಹೆಚ್ಚಾಗಿ ಪೂಜಿಸುತ್ತಾರೆ. ಕಾಳಿಯು ದುಷ್ಟರನ್ನು ನಾಶ ಮಾಡಿ ಭಕ್ತರಿಗೆ ಸುಖವನ್ನು ನೀಡುತ್ತಾಳೆ. ಈಕೆ ಶಿವನ ಮಡದಿ. ಆಕೆಯನ್ನು ಸಾವಿನ ದೇವತೆಯೆಂದು ಪರಿಗಣಿಸಲಾಗಿದೆ. ಕಾಳಿಯ ಅವತಾರವು ಪ್ರಾಣಿಯೊಂದರ ಚರ್ಮವನ್ನು ಸುತ್ತಿಕೊಂಡು ಕೈಯಲ್ಲಿ ತಲೆಬುರುಡೆಯನ್ನು ಇಟ್ಟುಕೊಂಡಿದ್ದಾಳೆ.
ಕಾಳಿಮಾತೆ
ಜನರ ದುಷ್ಟ ಕೃತ್ಯಗಳಿಂದ ಕೋಪಗೊಳ್ಳುವ ಆಕೆ ಇದನ್ನು ಧ್ವಂಸ ಮಾಡಿಬಿಡುತ್ತಾಳೆ. ಇದರಿಂದಾಗಿ ಡಕಾಯಿತರು ಕಾಳಿಯನ್ನು ಪೂಜಿಸುತ್ತಾರೆ. ಕಾಳಿ ಮಾತೆಯನ್ನು ಪೂಜಿಸಿದರೆ ತಮ್ಮ ದುಷ್ಕೃತ್ಯಗಳನ್ನು ಆಕೆ ಕ್ಷಮಿಸುತ್ತಾಳೆ ಎನ್ನುವ ನಂಬಿಕೆ ಅವರದ್ದಾಗಿದೆ. ಅಘೋರಿಗಳ ಮಹಾನ್ ಶಕ್ತಿಗೆ ಮೂಲ ಕಾಳಿ ಮಾತೆಯೇ?
ಶಿವ
ಒಳ್ಳೆಯ ಪತಿಯಲ್ಲಿರುವ ಮೂರ್ತಿರೂಪವೇ ಶಿವನೆಂದು ಪರಿಗಣಿಸಲಾಗಿದೆ. ಶಿವನನ್ನು ಒಲಿಸಿಕೊಳ್ಳುವುದು ತುಂಬಾ ಸುಲಭ. ಆದರೆ ಆತನಿಗೆ ಕೋಪ ಬಂದಾಗ ತಾಂಡವ ನೃತ್ಯ ಮಾಡುತ್ತಾನೆ. ಹಿಂದೂ ಪುರಾಣಗಳ ಪ್ರಕಾರ ಶಿವನಿಗೆ ಹೆಚ್ಚು ಕೋಪ ಬಂದಾಗ ಆತ ತನ್ನ ಮೂರನೇ ಕಣ್ಣನ್ನು ತೆರೆದು ಎಲ್ಲವನ್ನೂ ಧ್ವಂಸ ಮಾಡಿಬಿಡುತ್ತಾನೆ.ಮುಕ್ಕಣ್ಣ ಶಿವನ ಮೂರನೆಯ ಕಣ್ಣಿನ ರೋಚಕ ಕಹಾನಿ...
ದುರ್ಗೆ
ದುರ್ಗೆಯನ್ನು ಹಿಂದೂ ಧರ್ಮದಲ್ಲಿ ಮಾತೆಯೆಂದು ಪೂಜಿಸಲಾಗುತ್ತದೆ. ಮಹಿಷಾಸುರನನ್ನು ಕೊಂದಿರುವ ಕಾರಣದಿಂದಾಗಿ ಆಕೆಯನ್ನು ಮಹಿಷಾಸುರ ಮರ್ದಿನಿ ಎಂದು ಕರೆಯಲಾಗುತ್ತದೆ. ದುರ್ಗೆ ಶಕ್ತಿಯ ಸಂಕೇತ. ಹತ್ತು ಕೈಗಳು ಇರುವಂತಹ ದುರ್ಗೆಯ ಪ್ರತಿಯೊಂದು ಕೈಯಲ್ಲಿ ಒಂದೊಂದು ರೀತಿಯ ಆಯುಧಗಳಿವೆ. ಮಹಿಳೆಯ ಶಕ್ತಿ ಮತ್ತು ಕ್ರೋಧವನ್ನು ದುರ್ಗೆಯೆಂದು ಪರಿಗಣಿಸಲಾಗಿದೆ.
ಶನಿ ದೇವರು
ಅತ್ಯಂತ ವೇಗವಾಗಿ ಕೋಪಗೊಳ್ಳುವ ದೇವರೆಂದರೆ ಅದು ಶನಿ ದೇವರು. ಇದರಿಂದಾಗಿ ಪ್ರತಿಯೊಬ್ಬರೂ ಶನಿದೇವರನ್ನು ಪೂಜಿಸಿ ಆಶೀರ್ವಾದ ಪಡೆಯಲು ಬಯಸುತ್ತಾರೆ. ಶನಿದೇವರ ಕೋಪಕ್ಕೆ ತುತ್ತಾಗಲು ಯಾರು ಬಯಸುವುದಿಲ್ಲ. ಶನಿ ದೇವರು ಆಶೀರ್ವದಿಸಿದರೆ ಅವರು ಹೆಚ್ಚಿನ ಸುಖವನ್ನು ಪಡೆಯುತ್ತಾರೆ. ಶನಿ ಪೂಜಾ ವಿಧಿ - ಕೇಳಿ ಗೊತ್ತು, ಆಚರಿಸುವುದು ಹೇಗೆ?
ಶನಿ ದೇವರು
ಇದೇ ವೇಳೆ ಅವರ ಮೇಲೆ ಶನಿ ದೇವರು ಕೋಪಗೊಂಡರೆ ಎಲ್ಲವೂ ನಿರ್ನಾಮವಾಗುತ್ತದೆ. ಶನಿ ದೇವರನ್ನು ಕಡುನೀಲಿ ಬಣ್ಣವೆಂದು ಹೇಳಲಾಗುತ್ತದೆ. ಪ್ರತಿಯೊಂದು ಜ್ಯೋತಿಷ್ಯಶಾಸ್ತ್ರದ ಮೇಲೆ ಶನಿ ದೇವರ ಪ್ರಭಾವವಿರುತ್ತದೆ.