Just In
- 24 min ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 1 hr ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 3 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 4 hrs ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
Don't Miss
- Automobiles Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು: ಎಷ್ಟು ಮಂದಿಯ ಬಳಿ ಆಕ್ಟೀವಾ, ಶೈನ್ ಇದೆ ಹೇಳಿ?
- Movies ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
- News India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪ್ಪಿನ ಸತ್ಯಾಗ್ರಹ ಆರಂಭವಾದ ದಿನಕ್ಕೆ ಇಂದಿಗೆ 75 ವರ್ಷ: ಈ ಕುರಿತಾದ ಆಸಕ್ತಿದಾಯಕ ಸಂಗತಿಗಳು
ಮಹಾತ್ಮ ಗಾಂಧಿ ಬ್ರಿಟಿಷರ ವಿರುದ್ಧ್ ನಡೆಸಿದ ಅಹಿಂಸಾತ್ಮಕ ಉಪ್ಪಿನ ಚಳುವಳಿಗೆ ಇಂದಿಗೆ ೭೫ ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಐತಿಹಾಸಿಕ ಘಟನೆಯನ್ನು ಮೆಲುಕು ಹಾಕುವ ಕಾರ್ಯವನ್ನು ಈ ಲೇಖನದ ಮೂಲಕ ಮಾಡಿದ್ದೇವೆ.
ಉಪ್ಪಿನ ಉತ್ಪಾದನೆಯಲ್ಲಿ ಬ್ರಿಟಿಷ್ ಏಕಸ್ವಾಮ್ಯದ ವಿರುದ್ಧ ದಂಡಿ ಮಾರ್ಚ್ ಅಥವಾ ದಾಂಡಿ ಸತ್ಯಾಗ್ರಹವನ್ನು ಮಾರ್ಚ್ 12, 1930 ರಂದು ಮಹಾತ್ಮ ಗಾಂಧಿ ಪ್ರಾರಂಭಿಸಿದರು. ಇವರು ಐತಿಹಾಸಿಕ ದಂಡಿ ಮಾರ್ಚ್ ಅನ್ನು ಗುಜರಾತ್ನ ಅಹಮದಾಬಾದ್ನ ಸಬರಮತಿ ಆಶ್ರಮದಿಂದ ಉಪ್ಪು ತಯಾರಿಸುವ ಕರಾವಳಿ ತೀರದ ದಂಡಿ ಗ್ರಾಮದವರೆಗೂ ಮುನ್ನಡೆಸಿದರು. ಈ ದಂಡಿ ತಲುಪಲು ಅವನರಿಗೆ 24 ದಿನಗಳು ಬೇಕಾಯಿತು. ಕೇವಲ ೭೮ ಸ್ವಯಂ ಸೇವಕರೊಂದಿಗೆ ಆರಂಭವಾದ ಈ ಚಳುವಳಿಯಲ್ಲಿ ದಾರಿಯುದ್ದಕ್ಕೂ ಸಾವಿರಾರು ಜನರು ಸೇರಿಕೊಂಡರು. ಉಪ್ಪಿನ ಕಾನೂನುಗಳ ವಿರುದ್ಧ ಕಾನೂನು ಅಸಹಕಾರ ಚಳವಳಿಯಲ್ಲಿ ಈ ಚಳುವಳಿ ಮಹತ್ವದ ಪಾತ್ರ ವಹಿಸಿದೆ.
ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಕೋಲಾಹಲವನ್ನು ಸೃಷ್ಟಿಸಿದ ಈ ಐತಿಹಾಸಿಕ ಚಳವಳಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ.
1. ದಂಡಿ ಮಾರ್ಚ್ ಮಾರ್ಚ್ 12 ರಂದು ಪ್ರಾರಂಭವಾಯಿತು ಮತ್ತು ಏಪ್ರಿಲ್ 6, 1930 ರಂದು ಅಂದ್ರೆ 24 ದಿನಗಳ ನಂತರ ಕೊನೆಗೊಂಡಿತು. ಇದು 4 ಜಿಲ್ಲೆಗಳು ಮತ್ತು 48 ಗ್ರಾಮಗಳ ಮೂಲಕ ಗಾಂಧೀಜಿಯವರ ಸಬರಮತಿ ಆಶ್ರಮದಿಂದ ದಂಡಿಗೆ ಹಾದುಹೋಯಿತು.
2. ಬ್ರಿಟಿಷ್ ಆಡಳಿತವು ಪರಿಚಯಿಸಿದ ಉಪ್ಪಿನ ಕಾನೂನನ್ನು ವಿರೋಧಿಸುವ ಸಲುವಾಗಿ ಮಹಾತ್ಮ ಗಾಂಧಿಯವರು ಈ ಮೆರವಣಿಗೆಯನ್ನು ನಡೆಸಿದರು. ಈ ಕಾನೂನಿನ ಪ್ರಕಾರ, ಭಾರತೀಯರಿಗೆ ಉಪ್ಪು ಉತ್ಪಾದನೆ ಅಥವಾ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿತ್ತು. ಬ್ರಿಟಿಷರು ಉಪ್ಪಿನ ತಯಾರಿಕೆಯ ಮೇಲೆ ಏಕಸ್ವಾಮ್ಯವನ್ನು ಚಲಾಯಿಸುವುದಲ್ಲದೆ, ಭಾರಿ ಉಪ್ಪು ತೆರಿಗೆಯನ್ನೂ ವಿಧಿಸಿದ್ದರು. ಆದರೆ, ಗಾಂಧೀಜಿ ದಂಡಿ ಸಮುದ್ರ ತೀರದಲ್ಲಿ ಉಪ್ಪನ್ನು ಉತ್ಪಾದಿಸುವ ಮೂಲಕ ಈ ಕಾನೂನನ್ನು ಮುರಿದರು.
3. ಮೆರವಣಿಗೆಯಲ್ಲಿ ಸಾವಿರಾರು ಜನರು ಸೇರಿಕೊಂಡರು ಮತ್ತು ವ್ಯಾಪಕವಾದ ಮಾಧ್ಯಮ ಪ್ರಸಾರದ ಮೂಲಕ ಭಾರತೀಯ ಸ್ವಾತಂತ್ರ್ಯ ಚಳವಳಿಯತ್ತ ವಿಶ್ವದ ಗಮನ ಸೆಳೆದರು.
4. ಮೇ 4, 1930 ರಂದು ಮಧ್ಯರಾತ್ರಿಯಲ್ಲಿ ಅಕ್ರಮವಾಗಿ ಉಪ್ಪು ಉತ್ಪಾದಿಸಿದ್ದಕ್ಕಾಗಿ ಗಾಂಧೀಜಿ ಅವರನ್ನು ಬಂಧಿಸಲಾಯಿತು.
5. ಉಪ್ಪು ತೆರಿಗೆ ವಿರುದ್ಧದ ಆಂದೋಲನವನ್ನು ಸುಮಾರು ಒಂದು ವರ್ಷ ಮುಂದುವರೆಸಲಾಯಿತು ಮತ್ತು ಸುಮಾರು 60,000 ಭಾರತೀಯರನ್ನು ಜೈಲಿಗೆ ಹಾಕಲಾಯಿತು.
6. ಉಪ್ಪು ಸತ್ಯಾಗ್ರಹವು ಬ್ರಿಟಿಷರ ಬಟ್ಟೆ ಮತ್ತು ಸರಕುಗಳನ್ನು ಬಹಿಷ್ಕರಿಸಲು ಕಾರಣವಾಯಿತು.
7. ಭಾರತೀಯರು ಭೂ ಆದಾಯ, ಚೌಕಿದಾರ್ ತೆರಿಗೆ ಮತ್ತು ಇತರವುಗಳನ್ನು ಒಳಗೊಂಡಂತೆ ಇತರ ಕಾನೂನುಗಳನ್ನು ವಿರೋಧಿಸಲು ಪ್ರಾರಂಭಿಸಿದರು.
8. 1920-22ರ ಅಸಹಕಾರ ಚಳವಳಿಯ ನಂತರ ಬ್ರಿಟಿಷರಿಗೆ ಸವಾಲು ಮಾಡುವಲ್ಲಿ ಈ ಮೆರವಣಿಗೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಇದು ಜನವರಿ 26, 1930 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ ಘೋಷಣೆಯನ್ನು ನೇರವಾಗಿ ಅನುಸರಿಸಿತು.