Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಶಿವನ ಸಿದ್ಧಿ ಪಡೆಯಲು ಶ್ರಾವಣ ಮಾಸದಲ್ಲಿ ಈ ಮಂತ್ರಗಳನ್ನು ಪಠಿಸಿ
ಇದೇ ಬರುವ ಆಗಸ್ಟ್ 9ರಿಂದ ಶ್ರಾವಣ ಮಾಸ ಆರಂಭವಾಗುವುದು. ಶಿವನಿಗೆ ವಿಶೇಷವಾದ ಈ ತಿಂಗಳಲ್ಲಿ, ಶಿವ ಮತ್ತು ಪಾರ್ವತಿ ಭಕ್ತರು ತಮ್ಮ ಆಶೀರ್ವಾದ ಪಡೆಯಲು ದೇವಸ್ಥಾನಗಳಿಗೆ ಆಗಮಿಸುತ್ತಾರೆ. ಶ್ರಾವಣತಿಂಗಳ ಸೋಮವಾರ ಅತ್ಯಂತ ಮಹತ್ವದ್ದಾಗಿದ್ದು, ಈ ಅವಧಿಯಲ್ಲಿ ಭಕ್ತರು, ವ್ರತ ಹಾಗೂ ಪೂಜೆಗಳನ್ನು ಸಲ್ಲಿಸಿ, ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಈ ಸಮಯದಲ್ಲಿ ಕೆಲವೊಂದು ಮಂತ್ರ ಪಠಿಸುವ ಮೂಲಕ ಶಿವನನ್ನು ಒಲಿಸಿಕೊಳ್ಳಬಹುದು, ಇಷ್ಟಾರ್ಥ ಸಿದ್ದಿಸಿಕೊಳ್ಳಬಹುದು.
ಶ್ರಾವಣ ಸೋಮವಾರದಂದು, ಶಿವನ ಕೃಪೆಗೆ ಪಾತ್ರರಾಗಲು ಪಠಿಸಬೇಕಾದ ಮಂತ್ರಗಳನ್ನು ಈ ಕೆಳಗೆ ನೀಡಲಾಗಿದೆ:

ಶಿವ ಮೂಲ ಮಂತ್ರ:
ಓಂ ನಮಃ ಶಿವಾಯ
ಅರ್ಥ: ಓ ಪರಮಾತ್ಮನೇ, ನನ್ನ ಆತ್ಮದಲ್ಲಿ ನೆಲೆಸಿರುವ ನಿನಗೆ ತಲೆಬಾಗುತ್ತೇನೆ.

ರುದ್ರ ಗಾಯತ್ರಿ ಮಂತ್ರ:
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ
ತನ್ನೋ ರುದ್ರಃ ಪ್ರಚೋದಯಾತ್||
ರುದ್ರ ಗಾಯತ್ರಿ ಮಂತ್ರದ ಅರ್ಥ: ದೇವರುಗಳಲ್ಲಿ ಅತ್ಯಂತ ಶಕ್ತಿಶಾಲಿ, ಆದರ್ಶ ಪುರುಷ, ಮಹಾದೇವನನ್ನು ನಾನು ಪ್ರಾರ್ಥಿಸುತ್ತೇನೆ. ಬುದ್ಧಿ ನೀಡಿ ನನ್ನನ್ನು ಆಶೀರ್ವದಿಸು ಮತ್ತು ಜ್ಞಾನದಿಂದ ನನ್ನನ್ನು ಬೆಳಗಿಸು.

ಮಹಾಮೃತ್ಯುಂಜಯ ಮಂತ್ರ:
ಓ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಶಿ-ವರ್ಧನಂ ǀ
ಉರ್ವರುಕಂ-ಇವ ಬಂಧನ ಮತ್ಯೋರ್ಮುಕಾಯ ಮಾಮಿತಿತಾ ǁ
ಅರ್ಥ: ನಾವು ನಿನ್ನನ್ನು ಧ್ಯಾನಿಸುತ್ತೇವೆ ಓಹ್ ಶಿವ. ಸಾವಿನ ಬಂಧಗಳಿಂದ ತಪ್ಪಿಸಿಕೊಳ್ಳಲು ನಮಗೆ ಸಹಾಯ ಮಾಡಿ ಮತ್ತು ಅಮರತ್ವವು ಸಾಧ್ಯವಾಗದಿದ್ದರೂ, ದಯವಿಟ್ಟು ಮೋಕ್ಷವನ್ನು ಸಾಧಿಸಲು ನಮಗೆ ಸಹಾಯ ಮಾಡಿ.

ಶಿವ ಧ್ಯಾನ ಮಂತ್ರ:
ಕರ್ಚರಂಕೃತಂ ವಾ ಕಾಯಜಂ ಕರ್ಮಜಂ ವಾ ಶ್ರವಣ್ಣಯಂಜಂ ವಾ ಮಾಂಸಂ ವಾ ಪರಧಂ |
ವಿಹಿತಂ ವಿಹಿತಂ ವಾ ಸರ್ವ ಮೆಟತ್ ಕ್ಷಮಸ್ವ ಜೈ ಜೈ ಕರುಣಾಬ್ಧೆ ಶ್ರೀ ಮಹಾದೇವ ಶಂಭೋ
ಅರ್ಥ :ಒಬ್ಬ ವ್ಯಕ್ತಿಯು ಎದುರಿಸುವ ಎಲ್ಲಾ ಒತ್ತಡ, ನಿರಾಕರಣೆ, ವೈಫಲ್ಯ, ಖಿನ್ನತೆ ಮತ್ತು ಇತರ ನಕಾರಾತ್ಮಕ ಶಕ್ತಿಗಳಿಂದ ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸಲು ಪರಮಾತ್ಮನಿಗೆ ವಿನಂತಿಸಿಕೊಳ್ಳುತ್ತಿದ್ದೇನೆ,

ರುದ್ರ ಮಂತ್ರ:
ಓಂ ನಮೋ ಭಗವತೇ ರುದ್ರಾಯ
ಅರ್ಥ : ಶಿವನ ಆಶೀರ್ವಾದ ಪಡೆಯಲು ರುದ್ರ ಮಂತ್ರವನ್ನು ಪಠಿಸಲಾಗುತ್ತದೆ ಮತ್ತು ಒಬ್ಬರ ಆಸೆಗಳನ್ನು ಈಡೇರಿಸಲು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ.



Click it and Unblock the Notifications
