Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ವಿಶ್ವ ರೋಸ್ ದಿನ 2021: ಕ್ಯಾನ್ಸರ್ ರೋಗಿಗಳಲ್ಲಿ ಭರವಸೆಯ ಕಿರಣ ಮೂಡಿಸಿದ್ದ ರೋಸ್
ಸೆಪ್ಟೆಂಬರ್ 22ನ್ನು ವಿಶ್ವ ರೋಸ್ ದಿನವನ್ನಾಗಿ ಆಚರಿಸಲಾಗುವುದು. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರ ಬದುಕಿನಲ್ಲಿ ಭರವಸೆಯ ಆಶಾ ಕಿರಣ ತುಂಬಲು ಈ ದಿನವನ್ನು ಆಚರಿಸಲಾಗುವುದು.

ಕ್ಯಾನ್ಸರ್ ಕಾಯಿಲೆ ಬಂದ ಮೇಲೆ ಪ್ರತಿ ಕ್ಷಣ ಅದರ ವಿರುದ್ಧ ಹೋರಾಡಬೇಕಾಗುತ್ತದೆ. ಕಣ್ಣಿನ ಮುಂದೆ ಸಾವು ನರ್ತನ ಮಾಡುತ್ತಿದ್ದರೂ ಧೃತಿಗೆಡದೆ ಅದನ್ನು ಸೋಲಿಸಲು ಪ್ರಯತ್ನಿಸಬೇಕಾಗಿದೆ. ಕ್ಯಾನ್ಸರ್ ಬಂದಾಗ ಮಾಡುವ ಚಿಕಿತ್ಸೆ, ಕೀಮೋಥೆರಪಿ ಇವೆಲ್ಲದಕ್ಕಿಂತ ಬೇಕಾಗಿರುವುದು ಮನೋಧೈರ್ಯ. ಈ ಕಾಯಿಲೆಯನ್ನು ಗೆಲ್ಲುತ್ತೇನೆ ಎಂಬ ಮನೋಧೈರ್ಯ ಇದ್ದವರು ಗುಣಮುಖರಾದ ಎಷ್ಟೂ ಉದಾಹರಣೆಗಳಿವೆ. ಆದ್ದರಿಮದ ಅವರಿಗೆ ಧೈರ್ಯ ತುಂಬಬೇಕು, ಅವರ ಮನಸ್ಸಿನಲ್ಲಿ ಭರವಸೆಯ ಆಶಾ ಕಿರಣ ಮೂಡಿಸಬೇಕು. ಹೀಗೆ ಅವರ ಬದುಕಿನಲ್ಲಿ ಭರವಸೆ ತುಂಲು, ಧೈರ್ಯ ತುಂಬಲು ಈ ದಿನವನ್ನು ಆಚರಿಸಲಾಗುವುದು.
ವಿಶ್ವ ರೋಸ್ ದಿನ ಆಚರಿಸುವುದರ ಹಿಂದೆ ಮನ ಮಿಡಿಯುವ ಕತೆಯಿದೆ. ಕೆನಡಾದ ಮೆಲಿಂಡಾ ರೋಸ್ ಎನ್ನುವ 12 ವರ್ಷದ ಬಾಲಕಿಗೆ ಆಸ್ಕಿನ್ ಟ್ಯೂಮರ್ ಇರುವುದು ತಿಳಿದು ಬಂತು. ಇದೊಂದು ಅಪರೂಪದ ಬ್ಲಡ್ ಕ್ಯಾನ್ಸರ್ನ ವಿಧವಾಗಿದೆ. ಇನ್ನೇನು ಆಕೆ ಬದುಕಿರುವುದು ಕೆಲವೇ ದಿನಗಳಷ್ಟೇ ಎಂದು ವೈದ್ಯರು ತಿಳಿಸಿದರು. ಆಕೆಯ ಸುತ್ತ ಇರುವವವರಿಗೆ ಇನ್ನೇನು ಕೆಲವೇ ದಿನಗಳಲ್ಲಿ ರೋಸ್ ನಮ್ಮನ್ನು ಬಿಟ್ಟು ಅಗಲುತ್ತಾಳೆ ಎಂಬ ನೋವು ಕಾಡಿತ್ತು. ಆದರೆ ಆಕೆ ಮಾತ್ರ ಬದುಕಿದ್ದ ಪ್ರತಿ ಕ್ಷಣವೂ ಕ್ಯಾನ್ಸರ್ ವಿರುದ್ಧ ನಗು-ನಗುತ್ತಾ ಹೋರಾಡಿದಳು. ತನ್ನ ಸುತ್ತ ಇರುವವರಲ್ಲಿಯೂ ಭರವಸೆಯನ್ನು ತುಂಬುವ ಪ್ರಯತ್ನ ಮಾಡುತ್ತಿದ್ದಳು.
ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವಾಗ ಈ ನೋವು ಮರೆಯಲು ಅನೇಕ ಕವನಗಳನ್ನು ಬರೆದಳು, ಸ್ಪೂರ್ತಿ ತುಂಬುವ ಲೆಟರ್ಗಳನ್ನು ಬರೆದಳು, ಕ್ಯಾನ್ಸರ್ ರೋಗಿಗಳಿಗೆ ಇ-ಮೇಲ್ ಮಾಡಿ ಧೈರ್ಯ ತುಂಬುತ್ತಿದ್ದಳು... ತಾನು ಕೊನೆಯುಸಿರು ಎಳೆಯುವವರಿಗೂ ಧೈರ್ಯದಿಂದಲೇ ಅದರ ವಿರುದ್ಧ ಹೋರಾಡಿದಳು, ಅವಳ ಆ ದಿಟ್ಟ ಹೋರಾಟವನ್ನು ಸ್ಮರಿಸಿ, ಇತರ ಕ್ಯಾನ್ಸರ್ ರೋಗಿಗಳಲ್ಲಿ ಧೈರ್ಯ ತುಂಬವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುವುದು.
ಈ ದಿನ ಕ್ಯಾನ್ಸರ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹೂ ಕೊಟ್ಟು ಅವರಲ್ಲಿ ಧೈರ್ಯ, ಭರವಸೆ ತುಂಬುವ ಪ್ರಯತ್ನ ಮಾಡಲಾಗುವುದು. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರಿಗೆ ಸ್ಪೆಷಲ್ ಕಾರ್ಡ್ ನೀಡಿ ಅವರ ಮೇಲೆ ನಮಗಿರುವ ಪ್ರೀತಿಯನ್ನು ವ್ಯಕ್ತ ಪಡಿಸಲಾಗುವುದು.
ಕ್ಯಾನ್ಸರ್ ಎಂಬುವುದು ಮಾರಕ ಕಾಯಿಲೆಯಾದರೂ ಇದನ್ನು ಗೆದ್ದವರೂ ನಮ್ಮ ನಡುವೆ ಇದ್ದಾರೆ, ಅದಕ್ಕೆ ಕಾರಣ ಅವರಿಗೆ ಸಿಕ್ಕ ಆರೈಕೆ ಹಾಗೂ ಪ್ರೀತಿ. ಕ್ಯಾನ್ಸರ್ ಗೆಲ್ಲಲು ಮನೋಸ್ಥೈರ್ಯವನ್ನು ತುಂಬಿ ಅವರ ಬದುಕಿನಲ್ಲಿ ಭರವಸೆ ಮೂಡಿಸುವುದೇ ಈ ದಿನದ ಉದ್ದೇಶವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.
ಕ್ಯಾನ್ಸರ್ ಆರಂಭದಲ್ಲಿಯೇ ಪತ್ತೆಯಾದರೆ ಗುಣ ಮುಖರಾಗುತ್ತಾರೆ. ಸ್ಟೇಜ್ 3ಯಲ್ಲಿ ಪತ್ತೆಯಾದರೆ ಗುಣಮುಖರಾಗುವುದು ಸ್ವಲ್ಪ ಕಷ್ಟ. ಆದರೆ ಚಿಕಿತ್ಸೆ ಕೊಡಿಸಿದರೆ ಕೆಲವು ತಿಂಗಳು ಅಥವಾ ವರ್ಷಗಳವರೆಗೆ ಬದುಕುಳಿಯುವಂತೆ ಮಾಡಬಹುದು.
ಹೌದು, ಸಾವಿರರು ಕೇಸುಗಳಲ್ಲ ಈ ರೀತಿಯಾಗಿದೆ. ಕ್ಯಾನ್ಸರ್ ಗಡ್ಡೆಗಳು ಕಂಡು ಬಂದು ಯಾವುದೇ ಚಿಕಿತ್ಸೆಯಿಲ್ಲದೆ ಸ್ವಲ್ಪ ಸಮಯದ ಬಳಿಕ ಪರೀಕ್ಷೆ ಮಾಡಿದಾಗ ಅದು ಮಾಯವಾಗಿರುವುದು ಅನೇಕ ಕೇಸ್ಗಳಲ್ಲಿ ಕಂಡು ಬಂದಿದೆ.



Click it and Unblock the Notifications











