Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು, ಜ್ವರ ತಡೆಗಟ್ಟಲು ಕಷಾಯ
ಮಳೆಗಾಲದಲ್ಲಿ ಕೆಮ್ಮು, ಶೀತ, ಸಾಮಾನ್ಯ ಜ್ವರ ಈ ರೀತಿಯ ತೊಂದರೆಗಳು ಕಂಡು ಬರುವುದು ಸಹಜ. ಆದರೆ ಇಂಥ ಸಮಸ್ಯೆಗಳು ಕಂಡು ಬಂದಾಗ ಒಂದೋ ಮನೆಮದ್ದು ಮಾಡುವುದು, ಇಲ್ಲಾ ಆಸ್ಪತ್ರೆಗೆ ಹೋಗಿ ಆ್ಯಂಟಿ ಬಯೋಟಿಕ್ ತಂದು ಸೇವಿಸಿದರೆ ಕಡಿಮೆಯಾಗುವುದು.

ಆದರೆ ಈ ವರ್ಷ ಕೊರೊನಾದಿಂದಾಗಿ ಪರಿಸ್ಥಿತಿ ತುಂಬಾ ಭಿನ್ನವಾಗಿದೆ. ಇಂಥ ಸಾಮಾನ್ಯ ಸಮಸ್ಯೆ ಕಮಡು ಬಂದರೂ ಅದು ಕೋವಿಡ್-19 ಲಕ್ಷಣಗಳಿರಬಹುದೇ ಎಂಬ ಭಯ ಶುರುವಾಗುತ್ತದೆ. ಇನ್ನು ಸಣ್ಣ-ಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗಲು ಜನ ಭಯಪಡುತ್ತಿದ್ದಾರೆ.
ಮಳೆಗಾಲದಲ್ಲಿ ಡೆಂಗ್ಯೂ, ಟೈಫಾಯ್ಡ್, ಕಾಲರಾ ಈ ರೀತಿಯ ಗಂಭೀರ ಸಮಸ್ಯೆಯೂ ಕಾಡಬಹುದು. ಆದ್ದರಿಂದ ಮಳೆಗಾಲದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸಬೇಕು, ಸೊಳ್ಳೆಗಳು ಕಚ್ಚದಂತೆ ಮುನ್ನೆಚ್ಚರಿಕೆವಹಿಸಬೇಕು, ಮಕ್ಕಳಿಗೆ ತುಂಬು ತೋಳಿನ ಬಟ್ಟೆಗಳನ್ನು ಧರಿಸಬೇಕು.
ಈ ಲೇಖನದಲ್ಲಿ ನಾವು ಆಯುಷ್ ನೀಡಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಕಷಾಯದ ರೆಸಿಪಿ ನೀಡಿದ್ದೇವೆ. ಇದು ಕೆಮ್ಮು, ಶೀತ, ಸಾಮಾನ್ಯ ಜ್ವರ ಕಡಿಮೆ ಮಾಡುವ ಪರಿಣಾಮಕಾರಿಯಾದ ಮನೆಮದ್ದಾಗಿದೆ:

ಆಯುಷ್ ಹೇಳಿದ ಕಷಾಯ (Kadha)ಮಾಡುವುದು ಹೇಗೆ?
ಈ ಕಷಾಯವನ್ನು ಗಿಡಮೂಲಿಕೆ ಹಾಕಿ ತಯಾರಿಸಲಾಗುವುದು. ಇದನ್ನು ಮಹಾಸುದರ್ಶನ್ ಕ್ವಾತ್, ಮಹಾಮಂಜಿಸ್ತಡಿ ಕ್ವಾತ್, ಭೂನಿಂಬಾಡಿ ಕ್ವಾತ್, ದಾಶ್ಮೂಲ್ ಕ್ವಾತ್, ಪುನರ್ಣವಾಸ್ತಕ್ ಕ್ವಾತ್, ವರುಣಡಿ ಕ್ವಾತ್ ಮತ್ತು ರಸ್ನಸಪ್ತಕ್ ಕ್ವಾತ್ ಹಾಕಿ ತಯಾರಿಸಲಾಗುವುದು.
ಈ ಹರ್ಬಲ್ ಡಿಕಾಷನ್ ಅನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿಯಬೇಕು. ಈ ಕಷಾಯದಿಂದ ಈ ರೀತಿಯ ಪ್ರಯೋಜನಗಳನ್ನು ಪಡೆಯಬಹುದು:

1. ಮಳೆಗಾಲದ ಜ್ವರ, ಅಲರ್ಜಿ ಸಮಸ್ಯೆ ಕಡಿಮೆಯಾಗುವುದು
ಇದರಲ್ಲಿರುವ ಒಣ ಶುಂಠಿ, ತುಳಸಿ, ಲವಂಗ ಹಾಗೂ ಗಿಡ ಮೂಲಿಕೆಗಳು ಕೆಮ್ಮು, ಜ್ವರ, ಗಂಟಲು ಕೆರೆತ ಕಡಿಮೆ ಮಾಡಲು ಸಹಕಾರಿ.

2. ಹೆಪಟಿಕ್ ಆರೋಗ್ಯ ಹೆಚ್ಚಿಸುತ್ತದೆ
ಈ ಕಷಾಯ ಕುಡಿಯುವುದರಿಂದ ಕಿಡ್ನಿ, ಲಿವರ್ ಆರೋಗ್ಯ ಕೂಡ ಹೆಚ್ಚಿಸುತ್ತದೆ. ಇನ್ನು ಅರಿಶಿಣ ಕಾಮಲೆ, ಅಜೀರ್ಣ, ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳು ತಡೆಗಟ್ಟುವಲ್ಲಿಯೂ ಕೂಡ ಸಹಕಾರಿ. ಈ ಕಷಾಯದಲ್ಲಿರುವ ಪುನರ್ವಸ್ತಕ್ ಕ್ವಾತ್ ಕಿಡ್ನಿ ಹಾಗೂ ಲಿವರ್ ಆರೋಗ್ಯ ವೃದ್ಧಿಸುತ್ತದೆ.

3. ಇತರ ಆರೋಗ್ಯ ಸಮಸ್ಯೆ ಕೂಡ ನಿವಾರಿಸುತ್ತದೆ
ಕೆಲವೊಂದು ಹೃದಯ ಸಂಬಂಧಿ ಸಮಸ್ಯೆಗಳು, ಹೈಪರ್ ಅಸಿಡಿಟಿ, ತಲೆನೋವು, ಗ್ಯಾಸ್ಟ್ರಿಕ್, ವಾಂತಿ ಮುಂತಾದ ಸಮಸ್ಯೆಗಳು ಕೂಡ ಈ ಕಷಾಯ ಕುಡಿಯುವುದರಿಂದ ಕಡಿಮೆಯಾಗುವುದು. ಈ ಕಷಾಯ ಒಟ್ಟು ಮೊತ್ತ ಆರೋಗ್ಯ ವೃದ್ಧಿಸುತ್ತದೆ.

4. ಮೂತ್ರ ಸೋಂಕು ನಿವಾರಣೆ
ಈ ಕಷಾಯ ಕುಡಿಯುವುದರಿಂದ ಮೂತ್ರ ಸೋಂಕು ಕೂಡ ಕಡಿಮೆಯಾಗುವುದು. ವರುಣಾದಿ ಕ್ವಾತ್ ತೆಗೆದುಕೊಳ್ಳುವುದರಿಂದ ನೀವು ಮತ್ತು ಊತ ಕಡಿಮೆಯಾಗುತ್ತದೆ. ಇದು UTI ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ.

5. ಮೂಳೆ ಹಾಗೂ ಸ್ನಾಯುಗಳ ಆರೋಗ್ಯ ವೃದ್ಧಿಸುತ್ತದೆ
ಕೆಲವೊಂದು ಆಯುರ್ವೇದ ಕಷಾಯಗಳು ಮೂಳೆ ಹಾಗೂ ಸ್ನಾಯುಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಸಂಧಿವಾತ, ಮೂಳೆ, ಸ್ನಾಯುಗಳಲ್ಲಿ ನೋವು ಇದ್ದಾಗ ದಶಮೂಲ ತೆಗೆದುಕೊಳ್ಳುವುದು ಒಳ್ಳೆಯದು.
ಇಲ್ಲಿ ಕೆಲವೊಂದು ಕಷಾಯ ಮಾಡುವ ರೆಸಿಪಿ ನೀಡಿದ್ದೇವೆ ನೋಡಿ

ತುಳಸಿ ಕಷಾಯ
- ಒಂದು ಮುಷ್ಠಿಯಷ್ಟು ಕೃಷ್ಣ ತುಳಸಿಯನ್ನು ತೆಗೆದುಕೊಳ್ಳಿ
- ತುಳಸಿಯನ್ನು ತೊಳೆದು ಕಾಳು ಮೆಣಸು ಹಾಗೂ ಶುಂಠಿ ಜೊತೆ ರುಬ್ಬಿ
- ನಂತರ ಇದನ್ನು 2 ಲೀಟರ್ ನೀರಿಗೆ ಹಾಕಿ ಕುದಿಸಿ, ನೀರು ಒಂದು ಲೀಟರ್ ಆಗುವಷ್ಟು ಹೊತ್ತು ಕುದಿಸಿ, ನಂತರ ಸೋಸಿ, ಸ್ವಲ್ಪ ಜೇನು ಸೇರಿಸಿ ಕುಡಿಯಿರಿ.
- ಒಂದು ಕಪ್ ನೀರಿಗೆ ಅರ್ಧ ಚಮಚ ಚಕ್ಕೆ ಪುಡಿ ಹಾಕಿ ಚೆನ್ನಾಗಿ ಕುದಿಸಿ.
- ಆ ನೀರಿಗೆ ಜೇನು ಹಾಕಿ ಕುಡಿಯಿರಿ.
- ಅಮೃತ ಬಳ್ಳಿ ಎಲೆಯನ್ನು ರುಬ್ಬಿ, ಅರ್ಧ ಚಮಚ ಪೇಸ್ಟ್ ಅನ್ನು 1 ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ನಂತರ ತಣ್ಣಗಾದ ಮೇಲೆ ಕುಡಿಯಿರಿ.ಇದು ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಿಸುತ್ತದೆ.ಸಲಹೆ: ಈ ಕಷಾಯಗಳನ್ನು ದಿನದಲ್ಲಿ ಒಮ್ಮೆ ತಯಾರಿಸಿಟ್ಟರೆ ಬೇಕಾದಾಗ ಬಿಸಿ ಮಾಡಿ ಕುಡಿಯಿರಿ.
- ದಿನದಲ್ಲಿ ಎರಡು ಲೋಟಕ್ಕಿಂತ ಹೆಚ್ಚು ಕಷಾಯ ಕುಡಿಯಬೇಡಿ.
- ಇದು ಹೆಚ್ಚಾಗಿ ಕುಡಿದರೆ ಶುಂಠಿ, ತುಳಸಿ ಇವುಗಳಿಂದಾಗಿ ಎದೆ ಉರಿ, ಕಾಲು ಉರಿ ಸಮಸ್ಯೆ ಕಂಡು ಬರುವುದು
- ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಡಿ.

ಚಕ್ಕೆ ಕಷಾಯ
ಅಮೃತ ಬಳ್ಳಿಯ ಕಷಾಯ




Click it and Unblock the Notifications