Latest Updates
-
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ
ಹೊಟ್ಟೆಯ ಕ್ಯಾನ್ಸರ್ ತಡೆಯುವ ಶಕ್ತಿ ಚಿನ್ನದ ದೇವತೆ ಅರಿಶಿನದಲ್ಲಿದೆ!
ಭಾರತೀಯರು ಹಾಗೂ ಆಯುರ್ವೇದವು ಪುರಾತನ ಕಾಲದಿಂದಲೂ ಉಪಯೋಗಿಸಿಕೊಂಡು ಬಂದಿರುವಂತಹ ಗಿಡಮೂಲಿಕೆ ಅರಿಶಿನವು ಇಂದು ಔಷಧೀಯ ರೂಪದಲ್ಲಿ ತುಂಬಾ ಜನಪ್ರಿಯವಾಗಿದೆ. ಆಯುರ್ವೇದದಲ್ಲಿ ಅರಿಶಿನವನ್ನು ಔಷಧಿಯ ರೂಪದಲ್ಲಿ ಹಿಂದಿನ ಕಾಲದಿಂದಲೂ ಬಳಸಿಕೊಂಡು ಬರಲಾಗುತ್ತಿತ್ತು. ಭಾರತೀಯರು ಪ್ರತಿಯೊಂದು ಅಡುಗೆಗೂ ಇದನ್ನು ಬಳಸುವರು. ಯಾವುದೇ ಭಾರತೀಯರ ಮನೆಗೆ ಹೋದರೂ ಅರಿಶಿನ ಪುಡಿ ಅಥವಾ ಅರಿಶಿನ ಕೊಂಬು ಸಿಗುವುದು. ಇದರಿಂದ ಸಿಗುವಂತಹ ಆರೋಗ್ಯ ಗುಣಗಳನ್ನು ತಿಳಿದುಕೊಂಡು ವಿದೇಶಿಯರು ಕೂಡ ಬಳಸಲು ಆರಂಭಿಸಿರುವರು.

ಇತ್ತೀಚೆಗೆ ನಡೆಸಿರುವಂತಹ ಒಂದು ಅಧ್ಯಯನದ ಪ್ರಕಾರ ಅರಿಶಿನವು ಹೊಟ್ಟೆಯ ಕ್ಯಾನ್ಸರ್ ಅನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಹೊಟ್ಟೆಯ ಕ್ಯಾನ್ಸರ್ ನ ಚಿಕಿತ್ಸೆಗೆ ಕೂಡ ಇದು ನೆರವಾಗುವುದು. ಇದರಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ಚಿಕಿತ್ಸಕ ಗುಣ ಹೊಂದಿದೆ ಎಂದು ಸ್ಯಾನ್ ಪೌಲೊ ಯೂನಿವರ್ಸಿಟಿ ಮತ್ತು ಬ್ರೆಜಿಲ್ನ ಪಾರಾ ಫೆಡರಲ್ ಯೂನಿವರ್ಸಿಟಿಯ ಸಂಶೋಧಕರು ಹೇಳಿರುವರು.
ಹೊಟ್ಟೆಯ ಕ್ಯಾನ್ಸರ್ ಅನ್ನು ತಡೆಯುವ ಮತ್ತು ಅದಕ್ಕೆ ಚಿಕಿತ್ಸೆ ನೀಡುವಂತಹ ಕೆಲವೊಂದು ವಸ್ತುಗಳ ಬಗ್ಗೆ ವಿಜ್ಞಾನಿಗಳು ನೀಡಿರುವ ಮಾಹಿತಿಯನ್ನು ಸಂಗ್ರಹಿಸಿಕೊಂಡು ಅಧ್ಯಯನ ನಡೆಸಿದ ವೇಳೆ ಕರ್ಕ್ಯುಮಿನ್ ಇದರಲ್ಲಿ ಒಂದು ಎಂದು ಸಾಬೀತು ಆಗಿದೆ ಎಂದು ಯುಎಫ್ ಪಿಎ ಪ್ರಾಧ್ಯಾಪಕ ಡೇನಿಯಲ್ ಕ್ವಿರೊಜ್ ಕ್ಯಾಲ್ಕಾಗ್ನೊ ತಿಳಿಸಿರುವರು.
ಸಂಶೋಧಕರು ಕಂಡು ಕೊಂಡಿರುವ ಪ್ರಕಾರ ಕೊಲೆಕ್ಯಾಲ್ಸಿಫೆರೊಲ್ (ವಿಟಮಿನ್ ಡಿಯ ಒಂದು ವರ್ಗ) ರೆಸ್ವೆರಾಟ್ರೊಲ್ (ಪಾಲಿಫಿನಾಲ್) ಮತ್ತು ಕ್ವೆರ್ಸೆಟಿನ್ ಕೂಡ ಹೊಟ್ಟೆಯ ಕ್ಯಾನ್ಸರ್ ಅನ್ನು ತಡೆಯುವಂತಹ ಶಕ್ತಿಯನ್ನು ನೀಡುವುದು. ಯಾಕೆಂದರೆ ಇದರಲ್ಲಿ ಹಿಸ್ಟೊನ್ ಚಟುವಟಿಕೆ ನೈಸರ್ಗಿಕವಾಗಿ ನಿಯಂತ್ರಿಸುವ ಗುಣಗಳು ಇವೆ. ಹಿಸ್ಟೋನ್ ಎನ್ನುವುದು ಕೋಶಗಳಲ್ಲಿ ಇರುವಂತಹ ಪ್ರೋಟೀನ್ ಆಗಿದ್ದು, ಇದು ಡಿಎನ್ ಎ ಸಂಯೋಜಿಸಲು ನೆರವಾಗುವುದು.
ಕೇವಲ ಕರ್ಕ್ಯುಮಿನ್ ಮಾತ್ರಲ್ಲದೆ ಇತರ ಕೆಲವೊಂದು ಅಂಶಗಳು ಕೂಡ ಹಿಸ್ಟೊನ್ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕೊಲೆಕ್ಯಾಲ್ಸಿಫೆರೊಲ್, ರೆಸ್ವೆರಾಟ್ರೊಲ್ ಆಗಿದ್ದು, ಇವುಗಳು ದ್ರಾಕ್ಷಿಯ ಬೀಜ ಮತ್ತು ಕೆಂಪು ವೈನ್ನಲ್ಲಿ ಕಂಡುಬರುವುದು. ಕ್ವೆರ್ಸೆಟಿನ್ ಎನ್ನುವ ಅಂಶವು ಸೇಬು, ಬ್ರಾಕೋಲಿ, ಈರುಳ್ಳಿಯಲ್ಲಿ ಕಂಡುಬರುವುದು. ಗಾರ್ಸಿನಾಲ್ ಎನ್ನುವುದು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಇದು ಕೆಲವೊಂದು ಮರಗಳಲ್ಲಿ ಕಂಡುಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



