For Quick Alerts
ALLOW NOTIFICATIONS  
For Daily Alerts

ಸ್ವಯಂ ಡಾಕ್ಟರ್ ಆಗಲು ಹೋಗಬೇಡಿ! ಇಲ್ಲಾಂದ್ರೆ ಇಂತಹ ಅಪಾಯಗಳು ಎದುರಾಗಬಹುದು

|

ಈಗಿನ ಆಧುನಿಕ ಯುಗದಲ್ಲಿ " ಅಂತರ್ಜಾಲ " ಅಥವಾ " ಇಂಟರ್ನೆಟ್ " ನಮ್ಮ ಬೆಸ್ಟ್ ಫ್ರೆಂಡ್ . ಕೈಯಲ್ಲೊಂದು ಸ್ಮಾರ್ಟ್ ಫೋನ್ ಇದ್ದರೆ ಸಾಕು .ಯಾರೂ ಬೇಡ , ಏನೂ ಬೇಡ . ಇಡೀ ಪ್ರಪಂಚವೇ ನಮ್ಮ ಅಂಗೈಯಲ್ಲಿ . ಮನುಷ್ಯ ಬೆಳೆದಂತೆಲ್ಲಾ ತಂತ್ರಜ್ಞಾನ ಕೂಡ ಬೆಳೆಯಲಾರಂಭಿಸಿದೆ . ಎಷ್ಟರ ಮಟ್ಟಿಗೆ ಅಂದರೆ ನಮಗೆ ಯಾವುದೇ ಸಮಸ್ಯೆ ಎದುರಾದರೂ ನಾವು ಇನ್ನೊಬ್ಬರ ಬಳಿಗೆ ಹೋಗಿ ಅವರನ್ನು ಹುಡುಕಿ , ಕಂಡು ಅವರಲ್ಲಿ ಸಲಹೆ ಕೇಳುವ ತಾಳ್ಮೆಯಾಗಲಿ ಯೋಚನೆಯಾಗಲೀ ನಮಗೆ ಎಂದಿಗೂ ಬರುವುದೇ ಇಲ್ಲ . ಎಲ್ಲದಕ್ಕೂ ಸೆಲ್ ಫೋನ್ ನ ಮೊರೆ ಹೋಗುತ್ತೇವೆ .

ಅದೂ ಅಷ್ಟೇ ನಮ್ಮನ್ನು ಒಂದು ಕ್ಷಣವೂ ಬಿಟ್ಟಿರುವುದಿಲ್ಲ . ಅಷ್ಟೊಂದು ನಂಟು - ಭಾಂದವ್ಯ ನಮ್ಮಿಬ್ಬರ ಮದ್ಯೆ . ಹೀಗಿರುವಾಗ ನಮಗೆ ಏನಾದರೂ ಸ್ವಲ್ಪ ತಲೆನೋವು , ನೆಗಡಿ ಅಥವಾ ಕೆಮ್ಮು ಇಂತಹ ಯಾವುದಾದರೂ ಸಣ್ಣ ಪುಟ್ಟ ಕಾಯಿಲೆ ಬಂದರೆ ಬಿಡುತ್ತೇವೆಯೇ ? ಅದಕ್ಕೂ ಫೋನ್ ನಲ್ಲೆ ಉತ್ತರ ಸದಾ ಸಿದ್ದ . ಏಕೆಂದರೆ ಬಿಡುವಿಲ್ಲದ ಸಮಯ , ಕೆಲಸದ ಒತ್ತಡ ಅಥವಾ ನಾವು ರೂಢಿಸಿಕೊಂಡಿರುವ ನಮ್ಮ ಜೀವನ ಶೈಲಿಯೋ ಏನೋ ನಮ್ಮನ್ನು ಡಾಕ್ಟರ್ ಬಳಿ ಹೋಗುವುದಕ್ಕೂ ಬಿಡದೆ ಪರಿಹಾರಕ್ಕಾಗಿ ಸ್ಮಾರ್ಟ್ ಫೋನ್ ನ ಮುಂದೆ ಕೂರಿಸುತ್ತದೆ . ಈಗಂತೂ ಜನ ಯಾವ ಮಟ್ಟಿಗೆ ಅಂತರ್ಜಾಲದ ಮೊರೆ ಹೋಗಿದ್ದಾರೆ ಎಂದರೆ ಯಾವುದೇ ದೊಡ್ಡ ಕಾಯಿಲೆಗೂ ಸಹ ವೈದ್ಯರ ಬಳಿಗೆ ಹೋಗಲು ನಿರ್ಲಕ್ಷ್ಯ ಮಾಡಿ ಇಂಟರ್ನೆಟ್ ನಲ್ಲಿ ಯಾರೋ ಪೋಸ್ಟ್ ಮಾಡಿರುವ ಸಲಹೆ ನೋಡಿ ಅದನ್ನೇ ಅನುಸರಿಸುತ್ತಾರೆ ಕೂಡ .

ಕ್ಷಣಾರ್ಧದಲ್ಲಿ ನಮಗೆ ಉತ್ತರವನ್ನು ಕೊಡುವ ತಂತ್ರಜ್ಞಾನ ನಂಬಬಹುದೇ?

ಕ್ಷಣಾರ್ಧದಲ್ಲಿ ನಮಗೆ ಉತ್ತರವನ್ನು ಕೊಡುವ ತಂತ್ರಜ್ಞಾನ ನಂಬಬಹುದೇ?

ನಾವು ಎಷ್ಟೇ ವಿದ್ಯಾವಂತರಾದರೂ ನಮ್ಮಲ್ಲಿ ಏನೆಲ್ಲಾ ಸಲಕರಣೆ ಸೌಕರ್ಯಗಳಿದ್ದರೂ ಕ್ಷಣಾರ್ಧದಲ್ಲಿ ನಮಗೆ ಉತ್ತರವನ್ನು ಕೊಡುವ ತಂತ್ರಜ್ಞಾನ ನಿಜಕ್ಕೂ ನಮ್ಮ ಬದುಕಿಗೆ ಒಳ್ಳೆಯದಾ ? ನಾವೂ ನೀವು ಇದರ ಮೇಲೆ ಇಷ್ಟೊಂದು ಅವಲಂಬಿತರಾಗಬೇಕೇ ? ಖಂಡಿತ ಇಲ್ಲ . ಯಾಕೆಂದರೆ ನಮ್ಮ ಬಗ್ಗೆ ನಮಗೆ ಎಷ್ಟೇ ತಿಳಿದಿದ್ದರೂ ನಮ್ಮ ದೇಹದ ನಿಜವಾದ ಗುಣ ಲಕ್ಷಣ , ಅದರ ಆ ಕ್ಷಣದ ಆರೋಗ್ಯ ಸ್ಥಿತಿ ತಿಳಿಯುವುದು ವೈದ್ಯರು ನಮ್ಮನ್ನು ಎದುರಿಗೆ ಕಣ್ಣಾರೆ ಕಂಡು ಪರೀಕ್ಷಿಸಿದಾಗ . ಅವರು ಅವರ ವೈದ್ಯಕೀಯ ವೃತ್ತಿಯ ಅನುಭವದಿಂದ ಅದಕ್ಕೆ ಸರಿಯಾದ ಔಷಧಗಳನ್ನು ಕೊಟ್ಟು ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತಾರೆ . ಅದನ್ನು ಬಿಟ್ಟು ಯಾವುದೋ ವೆಬ್ಸೈಟ್ ಅನ್ನು ನೋಡಿ ಅದರಲ್ಲಿ ಯಾರೋ ಕೊಟ್ಟಿರುವ ಸಲಹೆಯನ್ನು ಓದಿ ಯಾವುದೋ ಕಾಯಿಲೆಗೆ ಇನ್ನಾವುದೋ ಔಷಧಿಗಳನ್ನು ತೆಗೆದುಕೊಂಡರೆ ಬಂದಿರುವ ಕಾಯಿಲೆ ಇನ್ನಷ್ಟು ಉಲ್ಬಣಗೊಳ್ಳುತ್ತದೆಯೇ ಹೊರತು ನಾವು ಮಾತ್ರ ಮೊದಲಿನಂತಾಗುವುದಿಲ್ಲ.ಹಾಗಾದರೆ ನಾವು ಈ ರೀತಿ ನಮಗೆ ನಾವೇ ವೈದ್ಯರಾಗಲು ಹೊರಟಾಗ ಆಗುವ ದುಷ್ಪರಿಣಾಮಗಳ ಬಗ್ಗೆ ಸ್ವಲ್ಪ ಗಮನ ಹರಿಸೋಣವೇ .

ತಪ್ಪಾದ ರೋಗ ನಿರ್ಣಯ

ತಪ್ಪಾದ ರೋಗ ನಿರ್ಣಯ

"ಆಸ್ಪತ್ರೆಗೆ ಸುಮ್ಮನೆ ನೆಗಡಿ ಎಂದು ಹೋದರೆ ವೈದ್ಯರು ಇಪ್ಪತ್ತೆಂಟು ಟೆಸ್ಟ್ ಗಳಿಗೆ ಬರೆದುಕೊಡುತ್ತಾರೆ . ಅವರಿಗೆ ಫೀಸೂ ಕೊಟ್ಟು ಯಾರಪ್ಪಾ ಅಷ್ಟೊಂದು ಟೆಸ್ಟ್ ಮಾಡಿಸೋರು . ಅದಕ್ಕೆಲ್ಲಾ ಸಮಯ ತಾನೇ ಎಲ್ಲಿದೆ ? ಅದರ ಬದಲು ಇಂಟರ್ನೆಟ್ ನಲ್ಲಿ ಸಿಗುವ ಸಲಹೆಯಂತೆ ಮನೆ ಬಳಿಯಿರುವ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆಗೆಳನ್ನು ತೆಗೆದುಕೊಂಡರೆ ಅಷ್ಟೇ ಸಾಕು . ಕಾಯಿಲೆ ವಾಸಿ " . ಇದು ಈಗಿನ ಜನರ ಮನಸ್ಥಿತಿ . ಇದರಿಂದ ಯಾರಿಗೇನೂ ತೊಂದರೆ ಇಲ್ಲ ನಿಜ . ಸಮಯ , ಹಣ ಎಲ್ಲವೂ ಉಳಿತಾಯವೇ . ಆದರೆ ಆ ಕ್ಷಣ ವಾಸಿಯಾದ ನೆಗಡಿ ಮುಂದೆಲ್ಲೋ ನಿಮ್ಮನ್ನು ಅಡ್ಡಡ್ಡ ಮಲಗಿಸಿದರೆ ? ಹೌದು . ಒಂದು ಸಣ್ಣ ಖಾಯಿಲೆಯಾದರೂ ಸರಿ . ಅದಕ್ಕೆ ತನ್ನದೇ ಆದ ಗುಣ ಲಕ್ಷಣಗಳಿರುತ್ತವೆ . ಅದಕ್ಕೇ ವೈದ್ಯರು ಇಪ್ಪತ್ತೆಂಟು ಟೆಸ್ಟ್ ಗಳಿಗೆ ಬರೆದು ಕೊಡುವುದು ಮತ್ತು ಮುಂದೆ ಬರುವ ದೊಡ್ಡ ಕಾಯಿಲೆಯನ್ನು ಆರಂಭದಲ್ಲೇ ತಡೆಗಟ್ಟುವುದು . ಒಂದು ಉದಾಹರಣೆ ತೆಗೆದುಕೊಂಡು ಹೇಳಬೇಕೆಂದರೆ , ಒಂದು ವೇಳೆ ನೀವು ವಿಪರೀತ ಬಾಯಾರಿಕೆಯಿಂದ ಬಳಲುತ್ತಿದ್ದರೆ ಅದನ್ನು ಕಡೆಗಣಿಸಿ ಒಂದು ಲೋಟ ನೀರು ಕುಡಿದು ಸುಮ್ಮನಾದೀರಿ ಜೋಕೆ !!! ಅದು ಸಕ್ಕರೆ ಕಾಯಿಲೆ ಅಂದರೆ " ಡಯಾಬಿಟಿಸ್ " ನ ಲಕ್ಷಣವಾಗಿದ್ದರೂ ಇರಬಹುದು .

ಒಂದು ಕ್ಷಣ ನಿಮ್ಮನ್ನೇ ದಾರಿ ತಪ್ಪಿಸುವಂತಹ ನಿಮ್ಮ ತೀರ್ಮಾನ

ಒಂದು ಕ್ಷಣ ನಿಮ್ಮನ್ನೇ ದಾರಿ ತಪ್ಪಿಸುವಂತಹ ನಿಮ್ಮ ತೀರ್ಮಾನ

ಇದು ಹೇಗೆಂದರೆ " ಇಲಿ ಹೋದರೆ ಹುಲಿಯೇ ಹೋಯಿತು " ಎಂಬಂತೆ . ಉದಾಹರಣೆಗೆ ಹೈಪರ್ ಥೈರಾಯಿಡ್ , ಮೈಗ್ರಾಯ್ನ್ ತಲೆನೋವು ಎಂಬಂತಹ ಲಕ್ಷಣಗಳು ಮಾನಸಿಕ ರೋಗ ಲಕ್ಷಣಗಳಂತೆ ಕಂಡರೂ ಅವು ನಿಜಕ್ಕೂ ಮಾನಸಿಕ ಖಾಯಿಲೆಗೆ ಸಂಬಂಧ ಪಟ್ಟವಾಗಿರುವುದಿಲ್ಲ . ಆದರೆ ಮನುಷ್ಯ ಅದರಿಂದ ನಿಜವಾಗಿಯೂ ಬಳಲುತ್ತಾನೋ ಇಲ್ಲವೋ ಗೊತ್ತಿಲ್ಲ , ಆದರೆ ಇಂಟರ್ನೆಟ್ ನಲ್ಲಿ ತನಗೆ ಪ್ರಸ್ತುತ ಕಾಡುತ್ತಿರುವ ರೋಗ ಲಕ್ಷಣಗಳನ್ನು ತಾಳೆ ಹಾಕಿ ಅದರಿಂದ ಬಂದ ಉತ್ತರ ಕಂಡು ಅದರ ಬಗ್ಗೆಯೇ ಯೋಚನೆ ಮಾಡಿ ಮಾಡಿ ನಿಜವಾಗಿಯೂ ಹುಚ್ಚನಾಗಿ ಬಿಡುತ್ತಾನೆ . ಇದು ಇಂಟರ್ನೆಟ್ ನಮ್ಮನ್ನು ದಾರಿ ತಪ್ಪಿಸುತ್ತಿರುವ ರೀತಿ .

ಆಸ್ಪಿರಿನ್ ಔಷಧದ ಪ್ರತಿನಿತ್ಯ ಸೇವನೆ

ಆಸ್ಪಿರಿನ್ ಔಷಧದ ಪ್ರತಿನಿತ್ಯ ಸೇವನೆ

ಯಾರಿಗೆ ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸುವ ಲಕ್ಷಣ ಹೆಚ್ಚಿರುತ್ತದೋ ಅಂತಹವರಿಗೆ ಮಾತ್ರ ವೈದ್ಯರು ಅವರ ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಆಸ್ಪಿರಿನ್ ಮಾತ್ರೆಗಳನ್ನು ಶಿಫಾರಸ್ಸು ಮಾಡುತ್ತಾರೆ ಅದೂ ಷರತ್ತುಭದ್ಧವಾಗಿ . ಕೆಲವರು ತಮ್ಮಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ನಿರೋಧಕತೆಯನ್ನು ಸ್ವಾಭಾವಿಕವಾಗಿಯೇ ಹೊಂದಿರುತ್ತಾರೆ .ಅಂಥವರಿಗೆ ಆಸ್ಪಿರಿನ್ ನ ದಿನ ನಿತ್ಯ ಸೇವನೆಯಿಂದ ಹೊಟ್ಟೆಯಲ್ಲಿ ರಕ್ತ ಸ್ರಾವ ವಾಗುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ ಆದ್ದರಿಂದ ರೋಗ ಲಕ್ಷಣಗಳಿದ್ದ ಮಾತ್ರಕ್ಕೆ ವೈದ್ಯರನ್ನು ಕೂಡ ಸಂಪರ್ಕಿಸದೇ ಯಾವುದೇ ತಪ್ಪು ನಿರ್ಣಯಕ್ಕೆ ಬಂದು ಆಸ್ಪಿರಿನ್ ತೆಗೆದುಕೊಂಡರೆ ಆಗುವ ಅನಾಹುತಕ್ಕೆ ಅವರೇ ನೇರ ಹೊಣೆಗಾರರು ನಿಜ ತಾನೇ ?

ಮಾನಸಿಕ ಆತಂಕ ದೂರ ಮಾಡಿಕೊಳ್ಳಲು ಔಷಧಿ ತೆಗೆದುಕೊಳ್ಳುತ್ತಿದ್ದೀರಾ ? ಹಾಗಾದರೆ ಥಟ್ಟನೆ ಬಿಡಬೇಡಿ

ಮಾನಸಿಕ ಆತಂಕ ದೂರ ಮಾಡಿಕೊಳ್ಳಲು ಔಷಧಿ ತೆಗೆದುಕೊಳ್ಳುತ್ತಿದ್ದೀರಾ ? ಹಾಗಾದರೆ ಥಟ್ಟನೆ ಬಿಡಬೇಡಿ

ನಮ್ಮ ಮಾನಸಿಕ ಸ್ಥಿತಿಯೇ ಹಾಗೆ . ನಾವು ಒಂದೆರಡು ದಿನ ಮಾತ್ರೆ ಅಥವಾ ಔಷಧ ತೆಗೆದುಕೊಂಡು ನಮ್ಮ ದೇಹಕ್ಕೆ ಸ್ವಲ್ಪ ಆರಾಮಾಗಿದೆ ಅನಿಸಿದ ಕೂಡಲೇ ಮಾತ್ರೆ ತೆಗೆದುಕೊಳ್ಳುವುದನ್ನು ಬಿಟ್ಟುಬಿಡುತ್ತೇವೆ . ಅದು ತಪ್ಪು . ವೈದ್ಯರು ನಮ್ಮನ್ನು ಪರೀಕ್ಷೆ ಮಾಡಿ ನಮ್ಮ ದೇಹ ಸ್ಥಿತಿಯನ್ನು ಗಮನಿಸಿ ಎಷ್ಟು ದಿನ ಔಷಧ ತೆಗೆದುಕೊಂಡರೆ ಇವರು ಹುಷಾರಾಗುತ್ತಾರೆ ಎಂದು ಅರಿವಾದ ಮೇಲೆಯೇ ನಿರ್ದಿಷ್ಟ ಅವಧಿಗೆ ಸರಿಯಾಗಿ ಮಾತ್ರೆ ಗಳನ್ನು ಬರೆದಿರುತ್ತಾರೆ . ಆದರೆ ಮಾತ್ರೆ ತೆಗೆದುಕೊಂಡ ಮೇಲೆ ಖಾಯಿಲೆ ಕಡಿಮೆ ಆಗಲೇ ಬೇಕಲ್ಲವೇ ? ಒಂದೆರಡು ದಿನಕ್ಕೆ ಅದರ ಲಕ್ಷಣ ತೋರಿಸಿರುತ್ತದೆ ಅಷ್ಟೇ . ಅದನ್ನೇ ನಾವು ಪೂರ್ತಿ ಗುಣ ಆಗಿದ್ದೇವೆ ಎಂದು ಹೇಗೆ ಅಂದುಕೊಳ್ಳಲು ಸಾಧ್ಯ ? ಅದರಲ್ಲೂ ಮಾನಸಿಕ ಒತ್ತಡ ಅಥವಾ ಆತಂಕ ದೂರ ಮಾಡಿಕೊಳ್ಳಲು ಔಷಧ ತೆಗೆದುಕೊಳ್ಳುತ್ತಿದ್ದರೆ ಬಹಳ ಎಚ್ಚರದಿಂದ ಇರಬೇಕು . ಇಂತಹ ಔಷಧಗಳನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬರಬೇಕೇ ಹೊರತು ಒಮ್ಮೆಲೇ ಬಿಟ್ಟರೆ ತುಂಬಾ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಬೇಕಾದೀತು . ಎಚ್ಚರ !!!

Most Read: ಮೆಡಿಕಲ್‌ಗಳ ಔಷಧಿ ಸೇವಿಸುವ ಮುಂಚೆ ಸ್ವಲ್ಪ ಆಲೋಚಿಸಿ!

ಹೊಸದಾಗಿ ಶುರುವಾದ ಸೋಂಕಿಗೆ ಹಳೆಯ ಆಂಟಿಬಯೋಟಿಕ್ ಉಪಯೋಗಿಸಲೇಬೇಡಿ

ಹೊಸದಾಗಿ ಶುರುವಾದ ಸೋಂಕಿಗೆ ಹಳೆಯ ಆಂಟಿಬಯೋಟಿಕ್ ಉಪಯೋಗಿಸಲೇಬೇಡಿ

ನಮಗೇನಾದರೂ ಸುಟ್ಟ ಗಾಯಗಳಾಗಿದ್ದರೆ ಅಥವಾ ಚರ್ಮ ಸ್ವಲ್ಪ ಕಟ್ ಆಗಿದ್ದರೆ ನಾವು ಮಾಡುವ ಮೊದಲ ಕೆಲಸ ಅದಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು . ಅದು ಯಾವುದರಿಂದ ? ಮನೆಯಲ್ಲಿ ಮೊದಲೇ ತಂದಿಟ್ಟುಕೊಂಡಿರುವ ಆಂಟಿಬಯೋಟಿಕ್ ಔಷಧದಿಂದ . ಇದು ನಿಜಕ್ಕೂ ತುಂಬಾ ಅಪಾಯಕಾರಿ . ಒಂದೊಂದು ಆಂಟಿಬಯೋಟಿಕ್ ಒಂದೊಂದು ರೋಗಗಳಿಗೆ ಮತ್ತು ನಿರ್ಧಿಷ್ಟ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ . ಎಲ್ಲಾ ಕೆಲಸಕ್ಕೂ ಒಂದೇ ಆಯುಧ ಎಂಬಂತೆ ವೈದ್ಯರನ್ನು ಕಾಣದೆ ಇಲ್ಲಿ ನಾವು ಎಡವಿದರೆ ಆಗಿರುವ ಸೋಂಕು ಇನ್ನಷ್ಟು ದೊಡ್ಡದಾಗುತ್ತದೆ .

ಓ . ಟಿ . ಸಿ . ಅಥವಾ

ಓ . ಟಿ . ಸಿ . ಅಥವಾ " ಓವರ್ ದಿ ಕೌಂಟರ್ ಮೆಡಿಸಿನ್ " ಗಳ ಬಗ್ಗೆ ಎಚ್ಚರಿಕೆ ವಹಿಸಿ

ಜನರು ತಮಗೆ ಸ್ವಲ್ಪ ತಲೆನೋವು , ನೆಗಡಿ , ಶೀತ ಹಾಗು ಜ್ವರ ಇಂತಹ ಸಾಧಾರಣ ಸಮಸ್ಯೆಗಳಿಗೆ ಕ್ಲಿನಿಕ್ ಗೆ ಹೋಗುವ ಬದಲು ಮೆಡಿಕಲ್ ಶಾಪ್ಗಳ ಕಡೆ ಮುಖ ಮಾಡುತ್ತಾರೆ . ಅಲ್ಲಿ ಕೊಡುವ ಹತ್ತಿಪ್ಪತ್ತು ರೂಪಾಯಿಗಳ ಮಾತ್ರೆಗಳನ್ನು ತೆಗೆದುಕೊಂಡು ಅದರಲ್ಲಿರುವ ಲೇಬಲ್ ಸಹ ಓದದೇ ಇದರಿಂದ ತಮಗೇನೂ ತೊಂದರೆ ಆಗುವುದಿಲ್ಲ ಎಂದು ತಿಳಿದು ಬಂದಿರುವ ಸಮಸ್ಯೆಯನ್ನು ಸರಿಪಡಿಸಿಕೊಳ್ಳುತ್ತಾರೆ . ಆದರೆ ಜ್ವರ ವಾಸಿಯಾಗದೆ ಹೋದ ಪಕ್ಷದಲ್ಲಿ ಈ ರೀತಿಯ ಔಷಧ ಅದಾಗಲೇ ಅವರ ದೇಹದಲ್ಲಿ ತನ್ನ ಕೆಲಸ ಶುರುಮಾಡಿರುತ್ತದಾದ್ದರಿಂದ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿ ಅವರು ಕೊಡುವ ಔಷಧಗಳನ್ನು ತೆಗೆದುಕೊಂಡರೆ ಎರಡೂ ಔಷಧಗಳು ಒಂದಕ್ಕೊಂದು ರಿಯಾಕ್ಷನ್ ಆಗಿ ಆ ವ್ಯಕ್ತಿಯ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಯಾವುದೇ ಸಂದೇಹವಿಲ್ಲ .

ಜ್ವರ ಬಂದರೆ ಭೇದಿ ಮಾತ್ರೆ . ಅದರಿಂದ ಖಂಡಿತಾ ನಿಮ್ಮ ಪರಲೋಕದ ಯಾತ್ರೆ

ಜ್ವರ ಬಂದರೆ ಭೇದಿ ಮಾತ್ರೆ . ಅದರಿಂದ ಖಂಡಿತಾ ನಿಮ್ಮ ಪರಲೋಕದ ಯಾತ್ರೆ

ನಿಮಗೆ ಅತಿಸಾರ , ಭೇದಿ ಜೊತೆಗೆ ರಕ್ತ ಬೀಳುವುದು ಇವುಗಳ ಜೊತೆಗೆ ಜ್ವರದ ಲಕ್ಷಣವೇನಾದರೂ ಕಂಡುಬಂದರೆ ಬರೀ ಭೇದಿ ನಿಲ್ಲುವ ಮಾತ್ರೆ ತೆಗೆದುಕೊಂಡು ಸುಮ್ಮನಾದೀರಿ ಎಚ್ಚರ !!! ಅದು ಬೇರೆ ಯಾವ ರೋಗದ ಲಕ್ಷಣವೋ ಯಾರಿಗೆ ಗೊತ್ತು . ವೈದ್ಯರ ಬಳಿ ಹೋಗುವುದನ್ನು ಮಾತ್ರ ನಿರ್ಲಕ್ಷಿಸಬೇಡಿ . ನೋಡಿದಿರಲ್ಲ ನಿಮಗೆ ನೀವೇ ಡಾಕ್ಟರ್ ಆಗಲು ಹೊರಟರೆ ಏನೆಲ್ಲಾ ಅನರ್ಥವಾಗುತ್ತದೆ ಎಂದು . ಇಷ್ಟಲ್ಲದೆ ದೊಡ್ಡವರು ವೈದ್ಯರನ್ನು ದೇವರಿಗೆ ಹೋಲಿಸಿ " ವೈದ್ಯೋ ನಾರಾಯಣೀ ಹರಿ " ಎಂದು ಸುಮ್ಮನೆ ಹೇಳಿದ್ದಾರೆಯೇ ?

English summary

risks of self-diagnosis

In this digital era, where every information is available to us at the touch of a button, we like to think of ourselves as an expert in every matter. Even when it comes to our health, the first thing we do after falling sick is to look for symptoms on Google rather than visiting a doctor. We find the Internet more convenient, but sometimes the information available online can be misleading.Self -diagnosis is always a bad idea no matter what website you refer to. It often leads to the incorrect conclusion and we end up taking the wrong medication, which can have serious side-effects.
Story first published: Monday, April 15, 2019, 16:04 [IST]
X
Desktop Bottom Promotion