Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇದಕ್ಕೇ ಹೇಳುವುದು ಜೇನು ತುಪ್ಪ ಮತ್ತು ದಾಲ್ಚಿನ್ನಿ ಒಳ್ಳೆಯ ಸಂಯೋಜನೆ ಎಂದು
ನಮ್ಮ ನಿಮ್ಮ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳಲ್ಲಿ ದಾಲ್ಚಿನ್ನಿ ಕೂಡ ಒಂದು . ಕೇವಲ ಪಲಾವ್ ಮಾಡಲಿಕ್ಕೆ ಅಥವಾ ಇನ್ನಾವುದೋ ರುಚಿಕರ ತಿಂಡಿ ಮಾಡುವುದಕ್ಕೆ ಮಾತ್ರ ದಾಲ್ಚಿನ್ನಿ ಉಪಯೋಗವಾಗದೆ ನಮ್ಮ ಅರೋಗ್ಯ ರಕ್ಷಣೆಗೂ ಸಹ ಉಪಯೋಗಕ್ಕೆ ಬರುತ್ತದೆ . ಅದರಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ . ಪ್ರಾಚೀನ ಪದ್ಧತಿಯಲ್ಲೂ ಖಾಯಿಲೆ ವಾಸಿ ಮಾಡಲು ಅರೋಗ್ಯ ಪಂಡಿತರು ದಾಲ್ಚಿನ್ನಿಯನ್ನು ಇತರ ಸಾಮಗ್ರಿಗಳೊಡನೆ ಬಳಸುತ್ತಿದ್ದರು ಎಂಬ ಉಲ್ಲೇಖವಿದೆ . ಹಾಗೆ ಜೇನು ತುಪ್ಪ . ನೆನೆಸಿಕೊಂಡರೆ ಬಾಯಿ ಚಪ್ಪರಿಸಿಕೊಳ್ಳುತ್ತೇವೆ . ಅಷ್ಟೊಂದು ಸಿಹಿ .
ಅಷ್ಟೊಂದು ಇಷ್ಟ ಕೂಡ . ಜೇನು ತುಪ್ಪ ತಿನ್ನಲು ಮಾತ್ರ ರುಚಿ ಅಲ್ಲದೆ ಇದರಲ್ಲೂ ಅನೇಕ ಔಷಧೀಯ ಪ್ರಯೋಜನಗಳಿವೆ . ಕೆಮ್ಮಿಗೆ ಕಫಕ್ಕೆ ನೆಗಡಿಗೆ ಜ್ವರಕ್ಕೆ ಹೀಗೆ ಮನುಷ್ಯನಿಗೆ ಬರುವ ಸಾಮಾನ್ಯ ಖಾಯಿಲೆಗಳಿಗೆ ಜೇನು ತುಪ್ಪ ಒಂದು ರೀತಿಯ ಮನೆ ಮದ್ದು ಎಂದರೆ ನೀವು ನಂಬಲೇಬೇಕು . ಹಾಗಾದರೆ ಜೇನು ತುಪ್ಪ ಮತ್ತು ದಾಲ್ಚಿನ್ನಿ ಎರಡನ್ನೂ ಒಟ್ಟಿಗೆ ಸೇರಿಸಿದರೆ ಏನೆಲ್ಲಾ ಉಪಯೋಗವಿದೆ ಮತ್ತು ಯಾವ ಯಾವ ಕಾಯಿಲೆಗಳಿಗೆ ಭದ್ರ ಕೋಟೆಯಂತೆ ಕೆಲಸ ಮಾಡುತ್ತದೆ ಎಂಬುದನ್ನು ಈಗ ನೋಡೋಣ

ಚರ್ಮದ ಮೇಲಿನ ಮೊಡವೆಗೆ ಒಳ್ಳೆ ಆಯಿಂಟ್ಮೆಂಟ್
ಸಾಮಾನ್ಯವಾಗಿ ವಯಸ್ಕರಲ್ಲಿ ಕಾಡುವ ಸಮಸ್ಯೆ ಈ ಮುಖದ ಮೇಲಿನ ಮೊಡವೆಗಳು . ಇದರಿಂದ ಕೆಟ್ಟದ್ದೇನೂ ಆಗದಿದ್ದರೂ ನೋಡಲು ಮಾತ್ರ ಮುಜುಗರ ಹುಟ್ಟಿಸುತ್ತದೆ . ಇವುಗಳಿಂದ ಯಾವಾಗ ನಮಗೆ ಬಿಡುಗಡೆ ಎಂದು ಯುವಕ ಯುವತಿಯರು ಮೂಗು ಮುರಿಯುತ್ತಾರೆ . ಮೆಡಿಕಲ್ ಶಾಪ್ ಗಳಲ್ಲಿ ಅನೇಕ ರೀತಿಯ ಮುಲಾಮುಗಳಿಗೆ ಹಣ ವೆಚ್ಚ ಮಾಡುತ್ತಾರೆ . ಆದರೂ ಪ್ರಯೋಜನ ಅಷ್ಟಕ್ಕಷ್ಟೇ . ಆದ್ದರಿಂದ ಮನೆಯಲ್ಲೇ ಸಿಗುವ ಈ ವಸ್ತುಗಳಿಂದ ತಯಾರು ಮಾಡಿದ ಔಷಧಿಯನ್ನು ಒಮ್ಮೆ ಟ್ರೈ ಮಾಡಿ . ಒಂದು ಟೀ ಸ್ಪೂನ್ ದಾಲ್ಚಿನ್ನಿಯ ಪುಡಿಗೆ ಮೂರು ಚಮಚ ಜೇನು ತುಪ್ಪ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ . ನಂತರ ಮುಖವನ್ನು ತೊಳೆದು ರಾತ್ರಿ ಮಲಗುವ ಸಮಯದಲ್ಲಿ ಈ ಪೇಸ್ಟ್ ಅನ್ನು ಮೋಡವೆಗಳ ಮೇಲೆ ಹಚ್ಚಿ ಬೆಳಗಿನವರೆಗೂ ಹಾಗೆ ಬಿಡಿ . ಹೀಗೆ ಎರಡು ಮೂರು ದಿನ ಮಾಡಿ . ಕ್ರಮೇಣ ಮೊಡವೆಗಳು ಮಾಯವಾಗುತ್ತಾ ಬರುತ್ತವೆ . ಈ ರೀತಿ ತಯಾರು ಮಾಡಿದ ಮುಲಾಮು ಕೇವಲ ಮೊಡವೆಗಳಿಗಷ್ಟೇ ಅಲ್ಲದೆ ಎಕ್ಸೀಮ , ಹುಳುಕಡ್ಡಿ ಮತ್ತು ಇನ್ನಿತರೇ ಚರ್ಮ ರೋಗಗಳಿಗೂ ದಿವ್ಯ ಔಷಧಿ .

ಯಥೇಚ್ಛವಾದ ರೋಗ ನಿರೋಧಕ ಶಕ್ತಿ
ಹೌದು ಜೇನು ತುಪ್ಪ ಮತ್ತು ದಾಲ್ಚಿನ್ನಿಯಲ್ಲಿ ಅಡಕವಾಗಿರುವ ಗುಣಗಳಲ್ಲಿ ರೋಗ ನಿರೋಧಕ ಶಕ್ತಿಯೂ ಕೂಡ ಇದೆ . ಪ್ರತಿದಿನ ಈ ಮಿಶ್ರಣವನ್ನು ಸೇವಿಸುತ್ತಾ ಬಂದಿದ್ದೆ ಆದರೆ ನಮ್ಮ ದೇಹಕ್ಕೆ ನಾವೇ ಸೈನಿಕರಿದ್ದಂತೆ . ಹೊರಗಿನ ಬೇರೆ ಯಾವ ಬ್ಯಾಕ್ಟೀರಿಯಾ ಮತ್ತು ವೈರಸ್ ನಮ್ಮ ಮೇಲೆ ದಾಳಿ ಮಾಡಲು ಸಾಧ್ಯವಾಗುವುದಿಲ್ಲ . ಏಕೆಂದರೆ ಇವುಗಳಲ್ಲಿರುವ ಆಂಟಿ ಆಕ್ಸಿಡಂಟ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳು ಬ್ಯಾಕ್ಟೀರಿಯಾ ವೈರಸ್ ಗಳನ್ನು ತಡೆದು ನಮ್ಮ ದೇಹಕ್ಕೆ ಕಿಂಚಿತ್ತೂ ಹಾನಿಯಾಗದಂತೆ ನೋಡಿಕೊಳ್ಳುತ್ತದೆ . ಜೊತೆಗೆ ನಮ್ಮ ದೇಹದ ಜೀರ್ಣ ವ್ಯವಸ್ಥೆಯನ್ನು ವೃದ್ಧಿಗೊಳಿಸಿ ಹೊಟ್ಟೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನೂ ಸರಿಪಡಿಸುತ್ತದೆ . ಜೇನು ತುಪ್ಪ ಮತ್ತು ದಾಲ್ಚಿನ್ನಿಯ ಮಿಶ್ರಣ ಕರುಳಿನ ಭಾಧೆಗೂ ರಾಮಬಾಣ ಎಂಬ ಮಾತಿದೆ .

ಮೂಳೆಗಳ ನೋವಿಗೆ ಈ ಮುಲಾಮು ರಾಮಬಾಣ
ವಯಸ್ಸಾದವರಲ್ಲಿ ಕಾಡುವ ಸಾಮಾನ್ಯ ಖಾಯಿಲೆ ಈ ಕೀಲು ನೋವು , ಮಂಡಿ ನೋವು . ರಾತ್ರಿಯಾದರೆ ಸಾಕು ನೋವಿಗೆ ನಿದ್ದೆಯೇ ಬರುವುದಿಲ್ಲ. ನೋವು ನಿವಾರಕ ಔಷಧಿಗಳನ್ನು ತೆಗೆದುಕೊಂಡು ಸಾಕಾಗಿ ಹೋಗಿರುತ್ತದೆ . ಆದರೂ ನೋವು ಮಾತ್ರ ಕಡಿಮೆ ಆಗಿರುವುದಿಲ್ಲ. ಅಂತಹವರು ಈ ಸುಲಭ ವಿಧಾನವನ್ನು ಅನುಸರಿಸಬಹುದು . ಉಗುರು ಬೆಚ್ಚಿಗಿನ ನೀರಿಗೆ ಒಂದು ಟೀ ಚಮಚ ಜೇನು ತುಪ್ಪ ಮತ್ತು ಅಷ್ಟೇ ಪ್ರಮಾಣದ ದಾಲ್ಚಿನ್ನಿ ಪುಡಿಯನ್ನು ಹಾಕಿ ಪೇಸ್ಟ್ ತಯಾರಿಸಿಕೊಂಡು ನೋವಿರುವ ಜಾಗಕ್ಕೆ ಮೆತ್ತಗೆ ಮಸಾಜ್ ಮಾಡಿ.ಈ ತರಹದ ಸಂಧಿವಾತಕ್ಕೆ ೨:೧ ಪ್ರಮಾಣದಲ್ಲಿ ಜೇನು ತುಪ್ಪ ಮತ್ತು ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಬಿಸಿನೀರಿನಲ್ಲಿ ಬೆರಸಿ ಕುಡಿಯಬಹುದು .

ಹೃದಯದ ತೊಂದರೆ ತೀರಾ ಕಡಿಮೆ :
ನಿಮಗೆ ಗೊತ್ತಿರುವ ಹಾಗೆ ಹೃದಯದ ಕಾಯಿಲೆ ಒಮ್ಮೆ ಬಂದರೆ ಜೀವನ ಪೂರ್ತಿ ಭಯದಲ್ಲೇ ಬದುಕಬೇಕು . ಇನ್ನು ಆ ಭಯ ಬೇಡ . ಏಕೆಂದರೆ ದಾಲ್ಚಿನ್ನಿ ಮತ್ತು ಜೇನು ತುಪ್ಪ ಇದೆಯಲ್ಲಾ . ಮೂರು ಟೀ ಸ್ಪೂನ್ ದಾಲ್ಚಿನ್ನಿ ಪುಡಿ ಗೆ ಎರಡು ಟೀ ಚಮಚ ಜೇನು ತುಪ್ಪ ಬೆರೆಸಿ ಚೆನ್ನಾಗಿ ಕಲಸಿ ಅದನ್ನು ನೀವು ಬೆಳಗ್ಗೆ ಸಂಜೆ ಕುಡಿಯುವ ಟೀ ಜೊತೆಗೆ ಮಿಶ್ರ ಮಾಡಿ ಪ್ರತಿದಿನ ಕುಡಿಯುತ್ತಾ ಬನ್ನಿ . ನಿಮ್ಮ ರಕ್ತದಲ್ಲಿನ ಕೊಬ್ಬಿನ ಅಂಶ ತಾನಾಗಿಯೇ ಕಡಿಮೆ ಆಗುತ್ತದೆ . ಹೃದಯದ ಆರ್ಟರಿ ಯಲ್ಲಿ ಅಧಿಕ ಕೊಬ್ಬಿನ ಅಂಶದಿಂದ ಪ್ಲೇಕ್ ಎನ್ನುವ ಪದರ ಉಂಟಾಗಿ ರಕ್ತ ಸರಾಗವಾಗಿ ಹರಿಯಲು ತೊಂದರೆ ಉಂಟಾಗುತ್ತಿರುತ್ತವೆ . ಇದರಿಂದಲೇ ಹೃದಯಾಘಾತ ಸಂಭವಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ . ಆದರೆ ಇನ್ನು ಮುಂದೆ ಆ ಸಮಸ್ಯೆ ಇರುವುದಿಲ್ಲ ಬಿಡಿ .

ಮೂತ್ರಕೋಶದ ಇನ್ಫೆಕ್ಷನ್ ದೂರ
ಬಹಳ ಜನಕ್ಕೆ ಮೂತ್ರ ಕೋಶದಲ್ಲಿ ಇನ್ಫೆಕ್ಷನ್ ಕಂಡು ಬಂದು ಹೇಳಲಿಕ್ಕಾಗದೆ ಒದ್ದಾಡುತ್ತಿರುತ್ತಾರೆ . ಇದಕ್ಕೆ ಕಾರಣ ಮೂತ್ರಕೋಶದ ಸೂಕ್ಶ್ಮಾಣು ಜೀವಿಗಳು . ಇವುಗಳನ್ನು ನಾಶಪಡಿಸಬೇಕಾದರೆ ಇರುವ ಸುಲಭ ಮದ್ದೆಂದರೆ ಉಗುರು ಬೆಚ್ಚಗಿನ ನೀರಿಗೆ ಒಂದು ಟೀ ಚಮಚದಷ್ಟು ದಾಲ್ಚಿನ್ನಿ ಪುಡಿ ಮತ್ತು ಅರ್ಧ ಟೀ ಚಮಚದಷ್ಟು ಜೇನು ತುಪ್ಪವನ್ನು ಹಾಕಿ ಕುಡಿದರೆ ಸಾಕು.

ತೂಕ ಕಡಿಮೆ ಮಾಡಿಕೊಳ್ಳಲು ಇನ್ನು ಮುಂದೆ ಕಷ್ಟ ಪಡಬೇಕಿಲ್ಲ
ತುಂಬಾ ದಪ್ಪವಿರುವವರಿಗೆ ನಾವು ಯಾವಾಗ ಸಣ್ಣಗಾಗುತ್ತೇವೆ ಎಂಬ ಚಿಂತೆ ಸದಾ ಕಾಡುತ್ತಿರುತ್ತದೆ . ಏಕೆಂದರೆ ದಪ್ಪವಾಗುವುದು ಸುಲಭ. ಅದೇ ಮತ್ತೆ ಸಣ್ಣ ಆಗಬೇಕೆಂದರೆ ಬಹಳ ಕಷ್ಟ ಪಡಬೇಕು . ಈಗಾಗಲೇ ತುಂಬಾ ದುಡ್ಡು ಖರ್ಚು ಮಾಡಿ ಸುಸ್ತಾಗಿದ್ದರೆ , ಈ ಸುಲಭ ಉಪಾಯ ನಿಮಗೆ ಸಹಾಯಕ್ಕೆ ಬರಬಹುದು. ಜೇನುತುಪ್ಪಕ್ಕೆ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಬಿಸಿನೀರಿನಲ್ಲಿ ದಿನಕ್ಕೆ ಮೂರು ಬಾರಿ ಕುಡಿದರೆ ತ್ವರಿತ ಗತಿಯಲ್ಲಿ ಫಲಿತಾಂಶ ಕಂಡು ಬರುತ್ತದೆ .

ಬಾಯಿಯ ದುರ್ವಾಸನೆ ದೂರವಾಗುತ್ತದೆ
ಬಾಯಿಯ ದುರ್ವಾಸನೆ ಎಲ್ಲರಿಗೂ ಕಿರಿಕಿರಿಯೇ . ಮಾತನಾಡಲು ಆಗುವುದಿಲ್ಲ , ಜೊತೆಯಲ್ಲಿ ಕುಳಿತು ತಿನ್ನುವುದಕ್ಕಾಗುವುದಿಲ್ಲ . ಆದರೆ ಇದಕ್ಕೆ ಕೇವಲ ಹಲ್ಲುಜ್ಜದಿರುವುದೇ ಕಾರಣವಲ್ಲ . ಕೀಟಾಣುಗಳೂ ಇದರಲ್ಲಿ ಮಹತ್ತರ ಪಾತ್ರ ವಹಿಸುತ್ತವೆ . ಹಾಗಿದ್ದರೆ ಮೊದಲು ಆ ಕೀಟಾಣುಗಳನ್ನು ಕೊಲ್ಲಬೇಕಲ್ಲವೇ . ಅದಕ್ಕಿದೆ ಸರಳ ಉಪಾಯ . ಜೇನು ತುಪ್ಪ ಮತ್ತು ದಾಲ್ಚಿನ್ನಿಯ ಪೇಸ್ಟ್ ಅನ್ನು ಹಲ್ಲು ವಸಡು ಮತ್ತು ಬಾಯಿಯ ಒಳಗಡೆ ರಾತ್ರಿ ಮಲಗುವ ಮುಂಚೆ ಸವರಿ ಮಲಗಿಕೊಳ್ಳಿ . ಇದರಿಂದ ಬಹು ಬೇಗನೆ ಇದಕ್ಕೆ ಪರಿಹಾರ ಕಂಡು ಕೊಳ್ಳಬಹುದು .

ಶೀತ , ನೆಗಡಿ ಮತ್ತು ಕೆಮ್ಮು ಎಲ್ಲವೂ ದೂರ
ಆಂಟಿ ಬ್ಯಾಕ್ಟೇರಿಯಾಲ್ , ಆಂಟಿ ವೈರಲ್ ಮತ್ತು ಆಂಟಿ ಮೈಕ್ರೋಬಿಯಲ್ ಈ ಎಲ್ಲಾ ಔಷಧೀಯ ಗುಣಗಳು ಯಾವುದಾದರೂ ಒಂದರಲ್ಲಿ ಒಟ್ಟಿಗೆ ಸಿಗುತ್ತದೆ ಎಂದರೆ ಅದು ಜೇನು ತುಪ್ಪ ಮತ್ತು ದಾಲ್ಚಿನ್ನಿಯಲ್ಲಿ ಮಾತ್ರ . ಶೀತಕ್ಕೆ ಸಂಭಂದ ಪಟ್ಟಿರುವ ಕೀಟಾಣುಗಳನ್ನು ಹೊಡೆದೋಡಿಸಲು ಇಷ್ಟು ಸಾಲದೇ . ಶೀತ ಆದ ತಕ್ಷಣ ಈ ಮಿಶ್ರಣವನ್ನು ತೆಗೆದುಕೊಂಡರೆ ಖಂಡಿತ ಪರಿಹಾರ ಕಂಡು ಕೊಳ್ಳಬಹುದು .



Click it and Unblock the Notifications