Just In
Don't Miss
- Movies ಬಯಸಿದ್ದು ಬಾಲಿವುಡ್ ಸಿನಿಮಾ, ಗೆದ್ದಿದ್ದು ತೆಲುಗು ಸಿನಿಮಾ; ಈ ನಟಿಯ ಭವಿಷ್ಯವೇನು?
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಕಸ್ಮಿಕವಾಗಿ ನಾಲಿಗೆ ಕಚ್ಚಿಕೊಂಡರೆ ತಕ್ಷಣ ಹೀಗೆ ಮಾಡಿ !!
ಇಷ್ಟವಾದ ತಿಂಡಿ ಕಣ್ಣ ಮುಂದೆಯೇ ಇದೆ. ಹೊಟ್ಟೆ ಬೇರೆ ತುಂಬಾ ಹಸಿದಿದೆ . ಎಲ್ಲೋ ಹೋಗುವ ಆತುರ ಕೂಡ ಇದೆ . ಆದಷ್ಟು ಬೇಗನೆ ತಿಂಡಿ ತಿಂದು ಒಂದು ಕಪ್ ಕಾಫಿ ಕುಡಿದು ಹೊರಡೋಣ ಎಂದು ಮನಸ್ಸಿನಲ್ಲೇ ಲೆಕ್ಕಾ ಹಾಕುತ್ತ ಇರುವಾಗಲೇ ಯಾರ ಬಳಿಯೋ ಮಾತನಾಡಿಕೊಂಡು ಅಥವಾ ತುಂಬಾ ಬೇಗನೆ ಹೊರಡಬೇಕೆಂಬ ಆತುರದಿಂದ ತಿನ್ನುತ್ತಿರಬೇಕಾದರೆ ಹಠಾತ್ತನೆ ಬಾಯಿಯೊಳಗೆ ಸಿಡಿಲು ಬಡಿದಂತಹ ಅನುಭವ . ನೋಡಿದರೆ ತಿನ್ನುವ ಆತುರದಲ್ಲಿ ನಾಲಿಗೆ ಕಡಿದುಕೊಂಡಿರುತ್ತೀರಿ.
ಇಂತಹ ಸಂದರ್ಭ ಖಂಡಿತ ನಿಮಗೆ ಒಂದಲ್ಲ ಒಂದು ಕ್ಷಣ ಎದುರಾಗಿರುತ್ತದೆ ಅಲ್ಲವೇ ? ಹೊಟ್ಟೆಗೆ ಆಹಾರ ತನ್ನ ಪಾಡಿಗೆ ಹೋಗುತ್ತಿದ್ದರೆ , ಕಣ್ಣಂಚಿನಲ್ಲಿ ಸಣ್ಣ ಹನಿಗಳು ಅವುಗಳ ಪಾಡಿಗೆ ಅವು ಜಿನುಗುತ್ತಿರುತ್ತವೆ . ಏಕೆಂದರೆ ಅಷ್ಟು ನೋವು ಕೊಡುತ್ತದೆ ಈ ನಾಲಿಗೆ ಕಚ್ಚಿಕೊಂಡಿರುವುದು . ಹೇಳುವುದಕ್ಕೂ ಆಗುವುದಿಲ್ಲ , ಬಿಡುವುದಕ್ಕೂ ಆಗುವುದಿಲ್ಲ. ಇಂತಹ ಸಮಸ್ಯೆ ಎದುರಾದಾಗ ಏನು ಮಾಡಬೇಕು ಎಂಬುದನ್ನು ಇಲ್ಲಿ ನೀಡಿದ್ದೇವೆ, ಮುಂದೆ ಓದಿ
ನಾಲಿಗೆ ಕಚ್ಚಿಕೊಂಡರೆ ತಕ್ಷಣ ನಿಮಗಿಷ್ಟವಾದ ಒಂದು ಐಸ್ ಕ್ರೀಮ್ ತಿನ್ನಿ ಅಥವಾ ಅದರ ಮೇಲೆ ಐಸ್ ಕ್ಯೂಬ್ ಇಡಿ
ಇದೊಂದು ಬಹಳ ಬೇಗನೆ ಪರಿಣಾಮಕಾರಿ ಆಗುವಂತಹ ಉಪಾಯ . ನಮ್ಮ ದೇಹದ ಯಾವುದೇ ಭಾಗ ಉರಿಯುತ್ತಿದ್ದರೆ , ಅದು ತಣ್ಣಗಾಗಬೇಕಾದರೆ ನಾವು ಮೊರೆ ಹೋಗುವುದು ಐಸ್ ಕ್ಯೂಬ್ ಗೆ . ಅದರಂತೆಯೇ ನಾಲಿಗೆ ಕಚ್ಚಿಕೊಂಡು ಉರಿಯುತ್ತಿದ್ದರೆ ತಕ್ಷಣ ಒಂದು ಐಸ್ ಕ್ರೀಮ್ ತಿಂದರೆ ನಾಲಿಗೆ ತಂಪಾಗುತ್ತದೆ ಮತ್ತು ಉರಿ ಆಗಲೀ ಅಥವಾ ನಾಲಿಗೆ ಇನ್ನಷ್ಟು ಗಾಯ ಆಗುವುದಾಗಲೀ ಆಗುವುದಿಲ್ಲ . ಐಸ್ ಕ್ರೀಮ್ ನಿಂದ ಬಾಯಿಯಲ್ಲಿ ನೀರಿನಂಶ ಹೆಚ್ಚಾಗುತ್ತದೆ . ಒಂದು ವೇಳೆ ಐಸ್ ಕ್ರೀಮ್ ಸಿಗದೇ ಇದ್ದ ಪಕ್ಷದಲ್ಲಿ ನೀವು ಜ್ಯೂಸು ಅಥವಾ ತಣ್ಣನೆಯ ಮಿನರಲ್ ವಾಟರ್ ಅನ್ನೂ ಬೇಕಾದರೂ ಸೇವಿಸಬಹುದು.
Most
Read:
ನಾಲಿಗೆಯ
ಕ್ಯಾನ್ಸರ್-ನೀವು
ತಿಳಿಯಲೇಬೇಕಾದ
ಸಂಗತಿಗಳು
ಜೇನು ತುಪ್ಪದಲ್ಲಿದೆ ನಾಲಿಗೆ ಉರಿ ಶಮನ ಮಾಡುವ ಗುಣ
ಜೇನು ತುಪ್ಪದಲ್ಲಿ ಆಂಟಿ ಬ್ಯಾಕ್ಟೇರಿಯಾಲ್ ಮತ್ತು ಆಂಟಿ ಇಂಪ್ಲಾ ಮ್ಯಾಟೋರಿ ಗುಣ ಲಕ್ಷಣ ಗಳಿದ್ದು , ಬಾಯಿಯೊಳಗಿನ ಸಣ್ಣ ಗುಳ್ಳೆಗಳಿದ್ದರೂ ಅಥವಾ ನಾಲಿಗೆ ಉಕ್ಕಿದ್ದರೂ ಇಲ್ಲವೆಂದರೆ ನಾಲಿಗೆ ಕಚ್ಚಿಕೊಂಡು ಗಾಯವಾಗಿದ್ದರೂ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ . ನಾಲಿಗೆ ಕಚ್ಚಿಕೊಂಡಿರುವ ಜಾಗಕ್ಕೆ ಸ್ವಲ್ಪ ಜೇನು ತುಪ್ಪ ಸವರಿ ಅಥವಾ ಒಂದು ಟೀ ಚಮಚ ಜೇನು ತುಪ್ಪ ಬಾಯಿಯಲ್ಲಿ ಹಾಕಿಕೊಂಡು ಗಾಯ ಆಗಿರುವ ಜಾಗದಲ್ಲಿ 10 ರಿಂದ 20 ಸೆಕೆಂಡ್ ಗಳಷ್ಟು ಕಾಲ ಇಟ್ಟುಕೊಳ್ಳಿ . ದಿನಕ್ಕೆ 2 ರಿಂದ 3 ಬಾರಿ ಈ ರೀತಿ ಮಾಡಿ ಕೇವಲ 2 ದಿನಗಳಲ್ಲಿ ಇದರ ಪ್ರಭಾವ ನಿಮಗೆ ತಿಳಿಯುತ್ತದೆ .ಆದರೆ ನೆನೆಪಿರಲಿ , ಯಾವುದೇ ಕಾರಣಕ್ಕೂ 12 ವರ್ಷದ ಒಳಗಿನ ಮಕ್ಕಳಿಗೆ ಅಪ್ಪಿ ತಪ್ಪಿಯೂ ನಾಲಿಗೆ ಕಚ್ಚಿಕೊಂಡರೆ ಇಲ್ಲವೇ ಯಾವುದೇ ಕಾರಣಕ್ಕೂ ಜೇನು ತುಪ್ಪ ವನ್ನು ತಿನ್ನಲು ಕೊಡಬೇಡಿ . ಅದು ಅವರ ಪ್ರಾಣಕ್ಕೆ ಅಪಾಯ .
ಗಟ್ಟಿ ಮೊಸರು
ಈ ಹಾಲಿನ ಉತ್ಪನ್ನ ಕೇವಲ ತಿನ್ನಲು ರುಚಿ ಮತ್ತು ದೇಹಕ್ಕೆ ಶಕ್ತಿ ಕೊಡುವುದು ಮಾತ್ರವಲ್ಲದೆ , ಕೆಲವು ಔಷಧೀಯ ಗುಣಗಳನ್ನೂ ಹೊಂದಿದೆ ಜೊತೆಗೆ ದೇಹಕ್ಕೆ ತಂಪೂ ಕೂಡ . ನೀವು ನಾಲಿಗೆ ಕಚ್ಚಿಕೊಂಡ ತಕ್ಷಣ ಒಂದು ಚಮಚದಷ್ಟು ಗಟ್ಟಿ ಮೊಸರನ್ನು ನಿಮ್ಮ ನಾಲಿಗೆಯ ಮೇಲೆ ಇಟ್ಟುಕೊಳ್ಳಿ . ಸ್ವಲ್ಪ ಹೊತ್ತು ಬಿಟ್ಟು ಅದನ್ನು ತಿನ್ನಿ . ಈ ರೀತಿ ಮಾಡುವುದರಿಂದ ನಿಮ್ಮ ನಾಲಿಗೆಯಿಂದ ಉಂಟಾಗುವ ಬಾಧೆಯಿಂದ ತಪ್ಪಿಸಿಕೊಳ್ಳಬಹುದು .
ಸಕ್ಕರೆ
ನೀವು ಕೇವಲ ಕಾಫಿ ಅಥವಾ ಟೀ ಮಾಡಲು ಉಪಯೋಗಿಸುವ ಸಕ್ಕರೆ ನಿಮ್ಮ ನಾಲಿಗೆಯ ಉರಿಗೂ ತಂಪೆರೆಯಬಲ್ಲುದು . ನಾಲಿಗೆ ಕಚ್ಚಿಕೊಂಡಿರುವ ಜಾಗಕ್ಕೆ ಒಂದು ಚಮಚದ ತುಂಬಾ ಸಕ್ಕರೆ ತೆಗೆದುಕೊಂಡು ಸುರಿದುಕೊಳ್ಳಿ . ಸಕ್ಕರೆ ಕರಗುತ್ತಾ ಹೋದಂತೆ ನಿಮ್ಮ ನಾಲಿಗೆಯ ಉರಿ ಅಥವಾ ನೋವು ಕೂಡ ಕಡಿಮೆ ಆಗುತ್ತಾ ಹೋಗುತ್ತದೆ . ಸಕ್ಕರೆಯ ಇನ್ನೊಂದು ಗುಣ ಅಂದರೆ ನಿಮ್ಮ ಬಾಯಿಯ ರುಚಿ ಒಮ್ಮೆ ಕೆಟ್ಟು ಹೋಗಿದ್ದರೆ, ಒಂದು ಚಮಚ ಸಕ್ಕರೆ ತಿಂದರೆ ಸಾಕು ಮತ್ತೆ ನಿಮ್ಮ ಬಾಯಿಯ ರುಚಿ ಮರುಕಳಿಸುತ್ತದೆ .
ಅಲೋವೆರಾ
ಮನುಷ್ಯನ ದೇಹಕ್ಕೂ ಅಲೋವೆರಾ ಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ . ಏಕೆಂದರೆ ಮನುಷ್ಯನ ತಲೆ ಕೂದಲಿನಿಂದ ಹಿಡಿದು ಕಾಲಿನ ಬೆರಳಿನವರೆಗೂ ಅಲೋವೆರಾ ಒಂದಲ್ಲಾ ಒಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ . ಅದರಲ್ಲೂ ದೇಹದ ಮೇಲಿನ ಸುಟ್ಟ ಗಾಯಗಳಿಗಂತೂ ಅಲೋವೆರಾ ಹೇಳಿ ಮಾಡಿಸಿದ ಔಷಧ . 2007 ನೇ ಇಸವಿಯಲ್ಲಿ ಬಿಡುಗಡೆಯಾದ ಒಂದು ವರದಿಯಲ್ಲಿ ಅಲೋವೆರಾ ಮೊದಲನೇ ದರ್ಜೆ ಮತ್ತು ಎರಡನೇ ದರ್ಜೆಯ ಸುಟ್ಟ ಗಾಯಗಳಿಗೂ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲುದು ಎಂದು ಉಲ್ಲೇಖಿಸಲಾಗಿದೆ . ನೀವು ನಾಲಿಗೆ ಕಚ್ಚಿಕೊಂಡ ತಕ್ಷಣ ಶುದ್ಧವಾದ ಅಲೋವೆರಾ ( ಅಲೋವೆರಾ ಗಿಡದ ಎಲೆಗಳಿಂದ ಆಗ ತಾನೆ ಸಂಗ್ರಹಿಸಿದ ) ವನ್ನು ನಿಮ್ಮ ನಾಲಿಗೆ ಗಾಯವಾಗಿರುವ ಜಾಗಕ್ಕೆ ಇಟ್ಟುಕೊಂಡರೆ ಸಾಕು , ಅದರಲ್ಲಿರುವ ಲೋಳೆ ರಸ ಗಾಯವನ್ನು ಬೇಗನೆ ಮಾಗುವಂತೆ ಮಾಡುತ್ತದೆ ನೋವನ್ನೂ ಕಡಿಮೆ ಮಾಡುತ್ತದೆ .
Most Read: ಬಿಸಿ ಆಹಾರ ಸೇವಿಸಿ ನಾಲಗೆ ಸುಟ್ಟುಕೊಂಡ್ರಾ..? ಇಲ್ಲಿದೆ ಪರಿಹಾರ
ಪುದೀನಾ ಸೊಪ್ಪಿನ ಎಲೆಗಳು
ಪುದೀನಾ ಸೊಪ್ಪಿನಲ್ಲಿ " ಮೆಂಥಾಲ್ " ಅಂಶವಿದೆ . ನಮಗೆ ನಿಮಗೆ ತಿಳಿದಿರುವ ಹಾಗೆ ಇದಕ್ಕೆ ಆಂಟಿ ಬ್ಯಾಕ್ಟೀರಿಯಲ್ ಗುಣವಿದ್ದು , ನಾಲಿಗೆಯ ಗಾಯ ಇನ್ನಷ್ಟು ಹರಡದಂತೆ ತಡೆಯುತ್ತದೆ . ನಾಲಿಗೆಯ ಉರಿ ಕಡಿಮೆ ಆಗಿ ಊತ ಬರುವುದನ್ನು ತಪ್ಪಿಸುತ್ತದೆ . ನಿಮ್ಮ ಬಳಿಯಲ್ಲಿ ಪುದೀನಾ ಟೂತ್ ಪೇಸ್ಟ್ ಅಥವಾ ಪುದೀನಾ ಟೀ ಅಥವಾ ಪುದೀನಾ ಚಾಕಲೇಟ್ ಲಭ್ಯವಿದ್ದರೆ ಯಾವುದೇ ಅನುಮಾನವಿಲ್ಲದೆ ನಾಲಿಗೆಯ ಉರಿ ಶಮನಕ್ಕೆ ಉಪಯೋಗಿಸಬಹುದು
ನಾಲಿಗೆ ಕಚ್ಚಿಕೊಂಡ ಸಮಯದಲ್ಲಿ ನಿಮಗೆ ಕೆಲವೊಂದು ಟಿಪ್ಸ್
*ದಯಮಾಡಿ ಯಾವುದೇ ಬಿಸಿಯಾದ ಪಾನೀಯಗಳನ್ನು ಕುಡಿಯಬೇಡಿ .
*ಆಮ್ಲದ ಅಂಶವಿರುವ ಮತ್ತು ಸಿಟ್ರಸ್ ಅಂಶವಿರುವ ಆಹಾರಗಳಿಂದ ಆದಷ್ಟು ದೂರವಿರಿ .
*ಮಸಾಲೆಯುಕ್ತ ಆಹಾರಗಳನ್ನು ಸೇವಿಸಲೇಬೇಡಿ . ಇದು ಉರಿಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು .
*ನಿಮ್ಮ ಬಾಯಿಯ ಸ್ವಸ್ತತೆಯನ್ನು ಮತ್ತು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ .
*ನಿಮಗೆ ಮೇಲಿನ ಯಾವುದೇ ಪದ್ಧತಿಗಳಿಂದ ಪರಿಹಾರ ಸಿಗದೇ ಇದ್ದ ಪಕ್ಷದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದನ್ನು ಮಾತ್ರ ಮರೆಯಬೇಡಿ