Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೆಗಡಿಯೇ ಪ್ಲೀಸ್ ದೂರ ಇರು, ಈ ತಪ್ಪು ನಾನು ಮಾಡೋಲ್ಲ!
'ಬುಗಡಿಯಂಥ ವಸ್ತ(ಒಡವೆ) ಇಲ್ಲ, ನೆಗಡಿಯಂತ ಜಡ್ಡಿಲ್ಲ'. ಉತ್ತರ ಕರ್ನಾಟಕದ ಈ ಗಾದೆನುಡಿ ಕೇಳಿದ್ದೀರಾ? ಅಂದರೆ ಬುಗಡಿಯಂಥ ಸುಂದರ ಒಡವೆಯಿಲ್ಲ, ನೆಗಡಿಯಂಥ ರೋಗವಿಲ್ಲ ಎಂದರ್ಥ. ವಾರಪೂರ್ತಿ ಕಛೇರಿ ಕೆಲಸ ಮಾಡಿ, ಅಬ್ಬ ಈ ವೀಕೆಂಡಾದ್ರೂ ಸ್ವಲ್ಪ ಎಲ್ಲಾದರೂ ಸುತ್ತಿ ಸುಧಾರಿಸಿಕೊಳ್ಳೋಣ ಎಂದುಕೊಂಡಿರುತ್ತೀರಿ, ಆದರೆ ಧುತ್ತನೆ ಶುಕ್ರವಾರ ರಾತ್ರಿ ಗಂಟಲು ಕೆರೆತ ಶುರುವಾದರೆ ಎಷ್ಟು ಕೋಪ ಬರಲಿಕ್ಕಿಲ್ಲ ಹೇಳಿ?
ಏನು ಬರೀ ನೆಗಡಿಯಲ್ವ ಹೋಗುತ್ತೆ ಬಿಡು ಅನ್ನಬೇಡಿ, ಉಲ್ಬಣಗೊಂಡು ಜ್ವರ ಕೂಡ ಕಾಣಿಸಿಕೊಳ್ಳಬಹುದು. ನಿಮ್ಮ ಕಾರ್ಯಕ್ರಮವೆಲ್ಲ ಕ್ಯಾನ್ಸಲ್ ಆಗಿ, ಮನೆಯವರೆಲ್ಲರ ಮೂಡ್ ಆಫ್ ಅಲ್ವಾ?
ನೆಗಡಿಯಿಂದ ಅನುಭವಿಸದ ತೊಂದೆರೆಗಳಿವೆಯೆ? ಕೋಲ್ಡ್ರಿಂಕ್ಸ್ ಕುಡಿಯಲಾಗಲ್ಲ, ಕರಿದ ತಿಂಡಿ ದೂರವಿಡಬೇಕು, ಅಷ್ಟೇ ಅಲ್ಲ ಏರ್ ಕಂಡಿಶನ್ ತಡೆಯಲು ಸಾಧ್ಯವೇ ಇಲ್ಲ. ಸುಸ್ತು, ತಲೆನೋವು, ಸೀನು, ಜ್ವರ, ಮೈ-ಕೈ ನೋವುಗಳು ವ್ಯಕ್ತಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತದೆ.

ನೆಗಡಿ ಹರಡುವ ರೋಗಾಣುಗಳು ಒಂದಲ್ಲ ಎರಡಲ್ಲ ಸಾವಿರಾರು ತರಹದ್ದಿವೆ. ಇವು ನೀರಿನಿಂದ ಇಲ್ಲವೆ ಗಾಳಿಯಿಂದ ನಮ್ಮ ದೇಹ ಸೇರಿಕೊಳ್ಳಬಹುದು. ನೆಗಡಿಗೆ ಹಲವಾರು ಕಾರಣಗಳಿವೆ, ಪ್ರಮುಖವಾದ್ದವೆಂದರೆ ಅತಿಯಾದ ಶೀತ ಪದಾರ್ಥಗಳ ಸೇವನೆ, ಸ್ವಚ್ಛತೆ ಇರದ ಸ್ಥಳಗಳಲ್ಲಿ ಊಟ ಮಾಡುವದು, ಈಗಾಗಲೆ ನೆಗಡಿ ಪೀಡಿತ ವ್ಯಕ್ತಿಯ ಜೊತೆಗಿನ ಸಂಪರ್ಕ ಇತ್ಯಾದಿ.
ಕೆಲವರಿಗೆ ನೆಗಡಿ ತನ್ನಷ್ಟಕ್ಕೆ ತಾನೇ ಗುಣಮುಖವಾದರೆ, ಇನ್ನು ಕೆಲವರಿಗೆ ಆಂಟಿಬೈಯೊಟಿಕ್ಸ್ ತೆಗೆದುಕೊಳ್ಳಲೇ ಬೇಕಾಗುತ್ತದೆ. ಅದು ಅವರವರ ರೋಗನಿರೋಧಕತೆಯ ಸಾಮರ್ಥ್ಯದ ಮೇಲೆ ಅವಲಂಬಿಸಿದೆ. ನಮಗೇ ಅರಿವಿಲ್ಲದೆ ನಾವು ಮಾಡುವ ಕೆಲವೊಂದು ತಪ್ಪು ಅಭ್ಯಾಸಗಳಿಂದಲೂ ನೆಗಡಿ ಬರುತ್ತದೆಯೆಂದರೆ ನಂಬುವಿರಾ? ಇದು ಸತ್ಯ, ಬೇಕೆಂದರೆ ಓದಿ ನೋಡಿ ನಿಮಗೇ ಗೊತ್ತಾಗುತ್ತದೆ.
ಮೇಲಿಂದ ಮೇಲೆ ಕೈ ತೊಳೆಯದೆ ಇರುವುದು
ನಮಗೇ ಗೊತ್ತಾಗದಂತೆ ಅನೇಕ ರೋಗಾಣುಗಳು ನಮ್ಮ ಕೈಗೆ ಅಂಟಿಕೊಂಡಿರುತ್ತವೆ. ಅದೇ ಕೈಗಳಿಂದ ಮೂಗು, ಬಾಯಿ ಒರೆಸಿಕೊಂಡಾಗ ಕೈಯಲ್ಲಿನ ರೋಗಾಣುಗಳು ದೇಹವನ್ನು ಸೇರಿ ನೆಗಡಿಗೆ ಆಹ್ವಾನ ನೀಡುತ್ತವೆ.
ಕಛೇರಿ ಮತ್ತು ಅಪಾರ್ಟ್ಮೆಂಟ್ಗಳಲ್ಲಿ ಲಿಫ್ಟ್ ಉಪಯೋಗಿಸುವದು
ಲಿಫ್ಟ್ ಒಂದು ಚಿಕ್ಕ ಡಬ್ಬಿಯಂತಿರುತ್ತದೆ. ಇದರಲ್ಲಿ ಜನರು ಒಬ್ಬಿರಿಗೊಬ್ಬರು ಅತ್ಯಂತ ಸನಿಹದಲ್ಲಿ ನಿಲ್ಲಬೇಕಾಗುತ್ತದೆ. ಯಾರಾದರು ಶೀತ ಬಂದಿರುವ ವ್ಯಕ್ತಿಯ ಬಳಿ ನಿಂತುಕೊಂಡರೆ ಸಾಕು, ಲಿಫ್ಟ್ನಿಂದ ಹೊರಬರುವಾಗ ನೀವು ಸೀನುತ್ತಿರುತ್ತೀರ.
ಸಾಕಷ್ಟು ವ್ಯಾಯಾಮ ಮಾಡದಿರುವದು
ವ್ಯಾಯಾಮದಿಂದ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈಗಿನ ಅವಸರದ ಜೀವನದಲ್ಲಿ ಯಾರಿಗೂ ವ್ಯಾಯಾಮಕ್ಕೆ ಪುರುಸೊತ್ತೇ ಇಲ್ಲ. ಹೀಗಿರುವಾಗ ರೋಗ ನಿರೋಧಕತೆ ಕಡಿಮೆಯಾಗಿ, ಬೇಗ ನೆಗಡಿಯ ಸೋಂಕಿಗೆ ಒಳಗಾಗಬೇಕಾಗುತ್ತದೆ.
ಪಾದಗಳು ತಣ್ಣಗಾಗುವದು
ಚಳಿಗಾಲ ಮತ್ತು ಮಳೆಗಾಲದಲ್ಲಿ ಪಾದಗಳ ಜೋಪಾನ ಅತಿ ಮುಖ್ಯ. ಪಾದಗಳಿಗೆ ತಂಪೇರಿದರೆ, ಇಡೀ ದೇಹಕ್ಕೆ ತಂಪು ಏರುತ್ತದೆ. ಇದರಿಂದ ಬೇಗನೆ ನೆಗಡಿಯ ಸೋಂಕಾಗುವದು. ಆದ್ದರಿಂದ ಸಾಕ್ಸ್ ಅಥವ ಸ್ಟಾಕಿಂಗ್ಸ್ ಹಾಕಿಕೊಂಡು ಪಾದಗಳ ಜೋಪಾನ ಮಾಡಬೇಕು.
ಮದ್ಯಪಾನ ಸೇವನೆ
ಮದ್ಯಪಾನದ ಅಭ್ಯಾಸವೇ ಕೆಟ್ಟದ್ದು. ಅದರಲ್ಲೂ ನೀವು ದಿನನಿತ್ಯ ಸ್ವಲ್ಪ ಮದ್ಯಪಾನ ಮಾಡಿದರೂ ಸಾಕು, ರೋಗ ನಿರೋಧಕತೆ ಕಡಿಮೆಗೊಂಡು ಬೇಗನೆ ನೆಗಡಿಯ ಸೋಂಕಿಗೆ ಒಳಗಾಗುತ್ತೀರ. ಈ ಮೇಲೆ ಹೇಳಿದ ಐದು ವಿಚಾರಗಳ ಕಾಳಜಿ ತೆಗೊದುಕೊಂಡರೆ ಸಾಕು, ನೆಗಡಿ ನಿಮ್ಮ ತಂಟೆಗೆ ಬಂದರೆ ಕೇಳಿ. ಈ ಸಣ್ಣ ಪುಟ್ಟ ಒಳ್ಳೆಯ ಹವ್ಯಾಸಗಳನ್ನು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ರೂಢಿ ಮಾಡಿಸಿಬಿಟ್ಟರೆ ವೈದ್ಯರ ಭೇಟಿ ಮಾಡುವದು ಕಡಿಮೆಯಾಗುತ್ತದೆಯಲ್ಲವೆ??
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



