Latest Updates
-
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ?
ಮನೆಮದ್ದು: ಕಿವಿನೋವಿಗೆ ಹಳ್ಳಿ ಮದ್ದು, ತ್ವರಿತ ಸಾಂತ್ವನ
ಕಣ್ಣು, ಕಿವಿ ಮತ್ತು ಮೂಗು ಈ ಮೂರು ಅಂಗಗಳು ಸರಿಯಾಗಿ ಕೆಲಸ ಮಾಡದೆ ಇದ್ದರೆ ಅದರಿಂದ ನಮ್ಮ ದೈನಂದಿನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಚಿತ. ಈ ಮೂರು ಅಂಗಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಇದು ನಮ್ಮ ದೇಹದ ಹೊರಭಾಗದಲ್ಲಿರುವುದರಿಂದ ವಾತಾವರಣದಲ್ಲಿ ಆಗುವಂತಹ ಪ್ರತಿಯೊಂದು ಏರುಪೇರನ್ನು ಇದು ಎದುರಿಸಬೇಕಾಗುತ್ತದೆ.
ಈ ಲೇಖನದಲ್ಲಿ ಕಿವಿ ನೋವಿನ ಬಗ್ಗೆ ತಿಳಿದುಕೊಳ್ಳುವ. ಕಿವಿ ನೋವು ಆರಂಭವಾದರೆ ಅದರ ನೋವನ್ನು ಸಹಿಸುವುದು ಅಸಾಧ್ಯವಾಗಿರುತ್ತದೆ. ಕಿವಿ ನೋವಿನಿಂದ ತಲೆನೋವು, ಮುಖನೋವು, ನಿಶ್ಯಕ್ತಿ ಇತ್ಯಾದಿ ಕಾಣಿಸಿಕೊಳ್ಳುತ್ತದೆ. ಧೂಳು, ಬ್ಯಾಕ್ಟೀರಿಯಾ ಸೋಂಕು, ಸಾಮಾನ್ಯ ಶೀತ, ಅತಿಯಾದ ಮೇಣ ಶೇಖರಣೆ, ಉರಿಯೂತ, ಗಂಟಲು ನೋವು ಇತ್ಯಾದಿ ಕಿವಿ ನೋವನ್ನುಂಟು ಮಾಡುವುದು.

ಸಾಮಾನ್ಯವಾಗಿ ಬರುವಂತಹ ಕಿವಿ ನೋವನ್ನು ನಿವಾರಿಸಲು ನೈಸರ್ಗಿಕವಾಗಿ ಮಾಡುವಂತಹ ಮನೆಮದ್ದನ್ನು ಬಳಸಬಹುದು. ಆದರೆ ಕಿವಿ ನೋವು ಅತಿಯಾಗಿದ್ದರೆ ವೈದ್ಯರನ್ನು ಭೇಟಿಯಾಗಿ ಅವರಿಂದ ಚಿಕಿತ್ಸೆ ಪಡೆಯುವುದು ಸೂಕ್ತ. ಈ ಮನೆಮದ್ದನ್ನು ಪ್ರಯೋಗಿಸುವ ಮೊದಲು ವೈದ್ಯರ ಸಲಹೆ ಪಡೆದರೆ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು
ತುಳಸಿ ಎಲೆಯ ರಸ- 1 ಚಮಚ
ಈರುಳ್ಳಿ ರಸ- 1 ಚಮಚ ಈರುಳ್ಳಿ: ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯಕ್ಕೆ ಪನ್ನೀರು!
ಈ ಮನೆಮದ್ದನ್ನು ಸರಿಯಾದ ಪ್ರಮಾಣದಲ್ಲಿ ನಿಯಮಿತವಾಗಿ ಬಳಸಿದರೆ ಕಿವಿ ನೋವನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು. ಈ ಮನೆಮದ್ದನ್ನು ಬಳಸುವುದರೊಂದಿಗೆ ವೈದ್ಯರಿಂದ ಔಷಧಿಯನ್ನು ಪಡೆಯುವುದು ಸೂಕ್ತ.
ತುಳಸಿಯಲ್ಲಿರುವ ಕೆಲವೊಂದು ಕಿಣ್ವಗಳು ಪ್ರಬಲವಾಗಿರುವ ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ. ಇದು ಕಿವಿಯ ಒಳಗಡೆ ಊತವನ್ನು ಕಡಿಮೆ ಮಾಡಿ ನೋವು ನಿವಾರಿಸುವುದು. ಈರುಳ್ಳಿಯಲ್ಲಿ ಅಲ್ಲಿಯುಮ್ ಎನ್ನುವ ಅಂಶವಿದ್ದು, ಇದು ಸೋಂಕು ಮತ್ತು ಕಿವಿಯ ನೋವನ್ನು ತಡೆಯುತ್ತದೆ.
ಮನೆಮದ್ದು ತಯಾರಿಸುವ ಮತ್ತು ಬಳಸುವ ವಿಧಾನ
*ಹೇಳಿದಷ್ಟು ಪ್ರಮಾಣದ ಸಾಮಗ್ರಿಯನ್ನು ಒಂದು ಕಪ್ ಗೆ ಹಾಕಿಕೊಳ್ಳಿ.
*ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಇದರ ಎರಡು ಹನಿಯಷ್ಟನ್ನು ಒಂದು ಡ್ರಾಪರ್ ಗೆ ಹಾಕಿಕೊಂಡು ಅದನ್ನು ನಿಧಾನವಾಗಿ ಕಿವಿಗೆ ಬಿಡಿ.
*ಕಿವಿ ನೋವು ಇರುವಾಗ ಮಾತ್ರ ಇದನ್ನು ಬಳಸಿ. ದಿನದಲ್ಲಿ ಒಂದು ಸಲ ಮಾತ್ರ ಇದನ್ನು ಬಳಸಿ.
*ಬಳಸುವ ಮೊದಲು ವೈದ್ಯರ ಸಲಹೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

