Latest Updates
-
ಬಿಸಿಲಿಗೆ ಬಾಲ್ಕನಿ ಗಿಡಗಳು ಬಾಡುತ್ತಿವೆಯೇ? ಈ 5 ಸರಳ ಟ್ರಿಕ್ಸ್ ಬಳಸಿ ಗಿಡಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಿ! -
ಹಾಲಿನ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಹಾಳಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಈ ಪರ್ಯಾಯ ಆಹಾರಗಳೇ ದಾರಿ! -
ರೆಡ್ ಕಾರ್ಪೆಟ್ ಮೇಲೆ ಸದ್ದು ಮಾಡುತ್ತಿರುವ 'ಸೀರೆ-ಗೌನ್' ಮ್ಯಾಜಿಕ್: 2026ರ ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ಆರೋಗ್ಯ ಹಾಳಾಗದಂತೆ ವರ್ಕೌಟ್ ಮಾಡಲು ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದರೆ ಅಪಾಯ! -
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ!
ಸರಳ ರೆಸಿಪಿ: ರಾತ್ರಿ ಬೆಳಗಾಗುವುದರೊಳಗೆ 'ಒಣ ಕೆಮ್ಮು' ಮಾಯ!
ಬೇಸಿಗೆಕಾಲದಲ್ಲಿ ಹೆಚ್ಚಿನವರಿಗೆ ಒಣ ಕೆಮ್ಮಿನ ಸಮಸ್ಯೆ ಕಂಡು ಬರುತ್ತದೆ. ದೂಳಿನ ಅಲರ್ಜಿ ಇರುವವರೆಗೆ ಈ ರೀತಿಯ ಕೆಮ್ಮು ಕಂಡು ಬರುತ್ತದೆ.... ಚಿಂತಿಸದಿರಿ ಅದಕ್ಕೆಂದೇ ಸಿಂಪಲ್ ಮನೆಮದ್ದು ನೀಡಿದ್ದೇವೆ, ಪ್ರಯತ್ನಿಸಿ ನೋಡಿ..
ಕೆಮ್ಮಿದವರಿಗೂ ಸುತ್ತಮುತ್ತಲಿನವರಿಗೂ ಕಿರಿಕಿರಿ ಮಾಡುವ ಒಣಕೆಮ್ಮು ಸುಲಭವಾಗಿ ಹೋಗುವುದಿಲ್ಲ. ಏಕೆಂದರೆ ಗಂಟಲ ಒಳಭಾಗ, ಎದೆಯ ಮೇಲ್ಭಾಗದಲ್ಲಿ ಸಂಗ್ರಹವಾಗಿರುವ ಸೋಂಕು ಅತಿ ಹೆಚ್ಚು ಸಾಂದ್ರತೆ ಹೊಂದಿರುವ ಕಾರಣ ಗಟ್ಟಿಯಾಗಿ ಅಂಟಿಕೊಂಡಿದ್ದು ತುರಿಕೆ ಮೂಡಿಸುತ್ತದೆ. ಎಷ್ಟು ಕೆಮ್ಮಿದರೂ ಕಫ ಬರದೇ ಇರುವುದಕ್ಕೇ 'ಒಣ'ಎಂಬ ಪದವನ್ನು ಬಳಸಲಾಗಿದೆ. ಬಹುತೇಕ ಎಲ್ಲರೂ ಈ ಒಣಕೆಮ್ಮನ್ನು ಒಮ್ಮೆಯಾದರೂ ಅನುಭವಿಸಿಯೇ ಇರುತ್ತಾರೆ. ಮಧ್ಯರಾತ್ರಿ ಕಾಡುವ ಕೆಮ್ಮು, ಏನು ಮಾಡಬೇಕು?
ಒಣಕೆಮ್ಮು ಪ್ರಾರಂಭವಾದ ಬಳಿಕ ಇದನ್ನು ನಿಲ್ಲಿಸಲು ಮತ್ತು ಇದರಿಂದ ಬಿಡುಗಡೆ ಪಡೆಯಲು ಎಲ್ಲರೂ ಯತ್ನಿಸುತ್ತಾರೆ. ಆದರೆ ಇವೆರಡೂ ಅಷ್ಟು ಸುಲಭವಲ್ಲ. ನೂರು ಜನರಿರುವ ನಡುವೆ ಕೆಲವರಾದರೂ ನಡುನಡುವೆ ಒಣಕೆಮ್ಮನ್ನು ಕೆಮ್ಮುತ್ತಾ ಇರುವುದನ್ನು ಖಂಡಿತಾ ಗಮನಿಸಬಹುದು. ಇದರ ನಿವಾರಣೆಗೆ ಸುಲಭವಾದ ನೈಸರ್ಗಿಕ ಮನೆಮದ್ದೊಂದು ಲಭ್ಯವಿದೆ. ಹತ್ತೇ ಹತ್ತು ನಿಮಿಷದಲ್ಲಿ ಜ್ವರ, ಶೀತ, ಕೆಮ್ಮು-ಮಂಗಮಾಯ!
ಒಣಕೆಮ್ಮಿಗೆ ಕೆಲವಾರು ಕಾರಣಗಳಿವೆ. ವೈರಸ್ಸುಗಳ ಸೋಂಕು ಹೆಚ್ಚಾದಾಗ ಹೆಚ್ಚಿನ ಕಫವನ್ನು ದೇಹದ ರೋಗ ನಿರೋಧಕ ವ್ಯವಸ್ಥೆ ಮಾಡಿರುತ್ತದೆ. ಈ ಕಫದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಿಳಿರಕ್ತಕಣಗಳು ಸತ್ತು ಒಣಗುವುದೇ ಕಫ ಗಟ್ಟಿಯಾಗಲು ಪ್ರಮುಖ ಕಾರಣ. ಈ ಕಫವನ್ನು ನಿವಾರಿಸಲು ದೇಹ ಯತ್ನಿಸುವುದೇ ಒಣಕೆಮ್ಮಿಗೆ ಮೂಲ. ಒಂದು ವೇಳೆ ವೈರಸ್ ಧಾಳಿ ಅಥವಾ ಫ್ಲೂ ಜ್ವರದ ಪರಿಣಾಮವಾಗಿ ಒಣಕಫವಾಗಿದ್ದರೆ ಒಂದೇ ರಾತ್ರಿಯಲ್ಲಿ ನಿವಾರಿಸಲು ಈ ಮನೆಮದ್ದು ಅತ್ಯಂತ ಸಮರ್ಥವಾಗಿದೆ....

ಬೇಕಾಗುವ ಸಾಮಾಗ್ರಿಗಳು
#1. ಆರು ಒಣ ಖರ್ಜೂರಗಳನ್ನು ತೆಗೆದುಕೊಳ್ಳಿ

ಬೇಕಾಗುವ ಸಾಮಾಗ್ರಿಗಳು
#2. ಅರ್ಧ ಲೀಟರ್ ಹಾಲನ್ನು ಪಾತ್ರೆಯಲ್ಲಿ ಸಂಗ್ರಹಿಸಿ

ಬೇಕಾಗುವ ಸಾಮಾಗ್ರಿಗಳು
#3. ಹಾಲನ್ನು ಕುದಿಸಿ. ಖರ್ಜೂರಗಳನ್ನು ತೆರೆದು ಬೀಜ ನಿವಾರಿಸಿ ಕುದಿಯಲು ಪ್ರಾರಂಭವಾದ ಹಾಲಿಗೆ ಬೆರೆಸಿ

ಬೇಕಾಗುವ ಸಾಮಾಗ್ರಿಗಳು
#4 ಹಾಲು ಉಕ್ಕಿಹೋಗದಂತೆ ಉರಿಯನ್ನು ಅತಿ ಚಿಕ್ಕದಾಗಿಸಿ ಮುಂದಿನ ಇಪ್ಪತ್ತರಿಂದ ಮೂವತ್ತು ನಿಮಿಷಗಳವರೆಗೆ ಬಿಸಿ ಮಾಡಿ

ಬೇಕಾಗುವ ಸಾಮಾಗ್ರಿಗಳು
#5 ಬಳಿಕ ಈ ಹಾಲನ್ನು ಕುಡಿಯಲು ಸಾಧ್ಯವಾಗುವಷ್ಟು ತಣಿಸಿ ಒಂದು ಕಪ್ ಕುಡಿಯಿರಿ. ಒಣಕೆಮ್ಮು ಕಡಿಮೆಯಾಗುವವರೆಗೆ ದಿನಕ್ಕೆ ಮೂರು ಬಾರಿ ಪುನರಾವರ್ತಿಸಿ.



Click it and Unblock the Notifications