Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ರಕ್ತದೊತ್ತಡ ನಿಯಂತ್ರಿಸುತ್ತೆ, ಅಡುಗೆಮನೆಯ ಸಣ್ಣ ತುಂಡು 'ಶುಂಠಿ'!
ಒತ್ತಡದ ಜೀವನಶೈಲಿ, ತಿನ್ನುವ ಆಹಾರ ಮತ್ತು ನಿದ್ರಾಹೀನತೆಯಿಂದಾಗಿ ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ರಕ್ತದೊತ್ತಡದ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಹಿಂದೆ ಸುಮಾರು 50 ದಾಟಿದವರಲ್ಲಿ ಮಾತ್ರ ಇಂತಹ ಸಮಸ್ಯೆ ಕಾಣಸಿಗುತ್ತಾ ಇತ್ತು. ಕಾಲ ಬದಲಾದಂತೆ ಕಾಯಿಲೆಗಳು ಕೂಡ ಬೇಗನೆ ಆವರಿಸಿಕೊಳ್ಳಲು ಆರಂಭಿಸುತ್ತದೆ. ಅಧಿಕ ರಕ್ತದೊತ್ತಡಕ್ಕೆ ಪ್ರಮುಖ ಕಾರಣವೆಂದರೆ ಒತ್ತಡ, ನಿದ್ರಾ ಕ್ರಮದಲ್ಲಿ ಅನಿಯಮಿತ ಬದಲಾವಣೆ ಮತ್ತು ಉಪ್ಪು ಹೆಚ್ಚಿಗೆ ಇರುವಂತಹ ಆಹಾರ ಸೇವನೆ. ರಕ್ತನಾಳಗಳಿಗೆ ಅತಿಯಾದ ರಕ್ತವು ಸರಬರಾಜು ಆದಾಗ ರಕ್ತದೊತ್ತಡ ಸಂಭವಿಸುತ್ತದೆ.
ಅಧಿಕ ರಕ್ತದೊತ್ತಡವು ತುಂಬಾ ಅಪಾಯಕಾರಿ. ಹೃದಯವು ಬೇಗನೆ ರಕ್ತವನ್ನು ಪಂಪ್ ಮಾಡುವಂತಾಗುತ್ತದೆ. ಹೀಗೆ ಆಗುವುದರಿಂದ ಅಪಧಮನಿಗಳಿಗೆ ತುಂಬಾ ಭಾರ ಬೀಳುವುದು. ಇದರಿಂದ ಪಾರ್ಶ್ವವಾಯು, ಕಿಡ್ನಿ ತೊಂದರೆ ಅಥವಾ ಹೃದಯಾಘಾತವಾಗಬಹುದು. ರಕ್ತದೊತ್ತಡಕ್ಕೆ ಪ್ರಮುಖವಾಗಿ ಧೂಮಪಾನ, ಬೊಜ್ಜು, ಅತಿಯಾಗಿ ಉಪ್ಪಿನಾಂಶವಿರುವ ಆಹಾರ ಸೇವನೆ, ಆಲ್ಕೋಹಾಲ್ ಸೇವನೆ, ಒತ್ತಡ ಮತ್ತು ನಿದ್ರಾಹೀನತೆ ಪ್ರಮುಖ ಕಾರಣವಾಗಿದೆ.
ರಕ್ತದೊತ್ತಡವು ಇಂದು ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ಹಲವಾರು ವಿಧಾನಗಳಿವೆ. ರಕ್ತದೊತ್ತಡ ನಿವಾರಣೆ ಮಾಡಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ನಿಯಮಿತವಾಗಿ ಔಷಧಿ ಸೇವಿಸಬೇಕು. ಕೆಲವೊಂದು ಗಿಡಮೂಲಿಕೆಗಳು ರಕ್ತದೊತ್ತಡ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದರಲ್ಲೂ ನಾವು ದಿನನಿತ್ಯವು ಬಳಸುವಂತಹ ಶುಂಠಿ ತುಂಬಾ ಪರಿಣಾಮಕಾರಿ. ಶುಂಠಿಯನ್ನು ಯಾವ ರೀತಿ ಬಳಸಿಕೊಂಡರೆ ರಕ್ತದೊತ್ತಡ ನಿಯಂತ್ರಿಸಬಹುದು ಮತ್ತು ಯಾವುದೇ ಅಡ್ಡಪರಿಣಾಮವಿಲ್ಲದ ಈ ಮದ್ದನ್ನು ತಯಾರಿಸುವುದು ಹಾಗೂ ಬಳಸುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ಶುಂಠಿ ಮತ್ತು ಅರಿಶಿನ ಚಹಾ
ಅರಿಶಿನದಲ್ಲಿ ಇರುವಂತಹ ಕುರ್ಕ್ಯುಮಿನ್ ರಕ್ತನಾಳಗಳನ್ನು ಶಮನಗೊಳಿಸುವುದು ಮತ್ತು ಹೃದಯಕ್ಕೆ ಅಧಿಕ ರಕ್ತದೊತ್ತಡದಿಂದ ಆಗುವಂತಹ ಹಾನಿಯಿಂದ ಕಾಪಾಡುವುದು.

ಬೇಕಾಗುವ ಸಾಮಗ್ರಿಗಳು
*1 ಗ್ರೀನ್ ಟೀ ಬ್ಯಾಗ್
*1 ಚಮಚ ಶುಂಠಿ ರಸ
*¼ ಚಮಚ ಅರಿಶಿನ ಹುಡಿ
*1 ಚಮಚ ಜೇನುತುಪ್ಪ

ವಿಧಾನ
*ಸಾಮಾನ್ಯವಾಗಿ ತಯಾರಿಸುವಂತೆ ಗ್ರೀನ್ ಟೀ ತಯಾರಿಸಿ.
*ಇದಕ್ಕೆ ಶುಂಠಿ ರಸ ಮತ್ತು ಅರಿಶಿನ ಹಾಕಿಕೊಳ್ಳಿ.
*ರುಚಿಗೆ ಜೇನುತುಪ್ಪ ಹಾಕಿ ಮತ್ತು ಪ್ರತಿನಿತ್ಯ ಸೇವಿಸಿ.

ಶುಂಠಿ ಮತ್ತು ಏಲಕ್ಕಿ
ಏಲಕ್ಕಿಯಲ್ಲಿ ಅಧಿಕ ರಕ್ತದೊತ್ತಡ ನಿವಾರಣೆ ಮಾಡುವ ಗುಣಗಳು ಇವೆ ಎಂದು ಅಧ್ಯಯನಗಳು ಹೇಳಿವೆ. ಶುಂಠಿ ಜತೆಗೆ ಇದನ್ನು ಸೇರಿಸಿದಾಗ ಅದು ವೇಗ ಹಾಗೂ ತುಂಬಾ ಪರಿಣಾಮಕಾರಿಯಾಗಿರುವುದು.

ಬೇಕಾಗುವ ಸಾಮಗ್ರಿಗಳು
*1 ಚಮಚ ಜಜ್ಜಿರುವ ಏಲಕ್ಕಿ
*2-3 ಚಮಚ ತಾಜಾ ಶುಂಠಿ
*1 ಚಮಚ ಬ್ಲ್ಯಾಕ್ ಟೀ
*1 ಕಪ್ ನೀರು

ವಿಧಾನ
*ಒಂದು ಕಪ್ ನೀರಿಗೆ ಎಲ್ಲಾ ಸಾಮಗ್ರಿಗಳನ್ನು ಹಾಕಿಕೊಂಡು ಮಿಶ್ರಣ ಮಾಡಿ.
*ಚಹಾವನ್ನು ಸೋಸಿಕೊಳ್ಳಿ ಮತ್ತು ಶಮನಕಾರಿ ಗುಣ ಪಡೆಯಿರಿ.
*ಚಹಾಗೆ ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಸಿಹಿ ಮಾಡಿಕೊಳ್ಳಬಹುದು.



Click it and Unblock the Notifications