Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ರಕ್ತದೊತ್ತಡ ನಿಯಂತ್ರಿಸುತ್ತೆ, ಅಡುಗೆಮನೆಯ ಸಣ್ಣ ತುಂಡು 'ಶುಂಠಿ'!
ಒತ್ತಡದ ಜೀವನಶೈಲಿ, ತಿನ್ನುವ ಆಹಾರ ಮತ್ತು ನಿದ್ರಾಹೀನತೆಯಿಂದಾಗಿ ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ರಕ್ತದೊತ್ತಡದ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಹಿಂದೆ ಸುಮಾರು 50 ದಾಟಿದವರಲ್ಲಿ ಮಾತ್ರ ಇಂತಹ ಸಮಸ್ಯೆ ಕಾಣಸಿಗುತ್ತಾ ಇತ್ತು. ಕಾಲ ಬದಲಾದಂತೆ ಕಾಯಿಲೆಗಳು ಕೂಡ ಬೇಗನೆ ಆವರಿಸಿಕೊಳ್ಳಲು ಆರಂಭಿಸುತ್ತದೆ. ಅಧಿಕ ರಕ್ತದೊತ್ತಡಕ್ಕೆ ಪ್ರಮುಖ ಕಾರಣವೆಂದರೆ ಒತ್ತಡ, ನಿದ್ರಾ ಕ್ರಮದಲ್ಲಿ ಅನಿಯಮಿತ ಬದಲಾವಣೆ ಮತ್ತು ಉಪ್ಪು ಹೆಚ್ಚಿಗೆ ಇರುವಂತಹ ಆಹಾರ ಸೇವನೆ. ರಕ್ತನಾಳಗಳಿಗೆ ಅತಿಯಾದ ರಕ್ತವು ಸರಬರಾಜು ಆದಾಗ ರಕ್ತದೊತ್ತಡ ಸಂಭವಿಸುತ್ತದೆ.
ಅಧಿಕ ರಕ್ತದೊತ್ತಡವು ತುಂಬಾ ಅಪಾಯಕಾರಿ. ಹೃದಯವು ಬೇಗನೆ ರಕ್ತವನ್ನು ಪಂಪ್ ಮಾಡುವಂತಾಗುತ್ತದೆ. ಹೀಗೆ ಆಗುವುದರಿಂದ ಅಪಧಮನಿಗಳಿಗೆ ತುಂಬಾ ಭಾರ ಬೀಳುವುದು. ಇದರಿಂದ ಪಾರ್ಶ್ವವಾಯು, ಕಿಡ್ನಿ ತೊಂದರೆ ಅಥವಾ ಹೃದಯಾಘಾತವಾಗಬಹುದು. ರಕ್ತದೊತ್ತಡಕ್ಕೆ ಪ್ರಮುಖವಾಗಿ ಧೂಮಪಾನ, ಬೊಜ್ಜು, ಅತಿಯಾಗಿ ಉಪ್ಪಿನಾಂಶವಿರುವ ಆಹಾರ ಸೇವನೆ, ಆಲ್ಕೋಹಾಲ್ ಸೇವನೆ, ಒತ್ತಡ ಮತ್ತು ನಿದ್ರಾಹೀನತೆ ಪ್ರಮುಖ ಕಾರಣವಾಗಿದೆ.
ರಕ್ತದೊತ್ತಡವು ಇಂದು ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ಹಲವಾರು ವಿಧಾನಗಳಿವೆ. ರಕ್ತದೊತ್ತಡ ನಿವಾರಣೆ ಮಾಡಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ನಿಯಮಿತವಾಗಿ ಔಷಧಿ ಸೇವಿಸಬೇಕು. ಕೆಲವೊಂದು ಗಿಡಮೂಲಿಕೆಗಳು ರಕ್ತದೊತ್ತಡ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದರಲ್ಲೂ ನಾವು ದಿನನಿತ್ಯವು ಬಳಸುವಂತಹ ಶುಂಠಿ ತುಂಬಾ ಪರಿಣಾಮಕಾರಿ. ಶುಂಠಿಯನ್ನು ಯಾವ ರೀತಿ ಬಳಸಿಕೊಂಡರೆ ರಕ್ತದೊತ್ತಡ ನಿಯಂತ್ರಿಸಬಹುದು ಮತ್ತು ಯಾವುದೇ ಅಡ್ಡಪರಿಣಾಮವಿಲ್ಲದ ಈ ಮದ್ದನ್ನು ತಯಾರಿಸುವುದು ಹಾಗೂ ಬಳಸುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ಶುಂಠಿ ಮತ್ತು ಅರಿಶಿನ ಚಹಾ
ಅರಿಶಿನದಲ್ಲಿ ಇರುವಂತಹ ಕುರ್ಕ್ಯುಮಿನ್ ರಕ್ತನಾಳಗಳನ್ನು ಶಮನಗೊಳಿಸುವುದು ಮತ್ತು ಹೃದಯಕ್ಕೆ ಅಧಿಕ ರಕ್ತದೊತ್ತಡದಿಂದ ಆಗುವಂತಹ ಹಾನಿಯಿಂದ ಕಾಪಾಡುವುದು.

ಬೇಕಾಗುವ ಸಾಮಗ್ರಿಗಳು
*1 ಗ್ರೀನ್ ಟೀ ಬ್ಯಾಗ್
*1 ಚಮಚ ಶುಂಠಿ ರಸ
*¼ ಚಮಚ ಅರಿಶಿನ ಹುಡಿ
*1 ಚಮಚ ಜೇನುತುಪ್ಪ

ವಿಧಾನ
*ಸಾಮಾನ್ಯವಾಗಿ ತಯಾರಿಸುವಂತೆ ಗ್ರೀನ್ ಟೀ ತಯಾರಿಸಿ.
*ಇದಕ್ಕೆ ಶುಂಠಿ ರಸ ಮತ್ತು ಅರಿಶಿನ ಹಾಕಿಕೊಳ್ಳಿ.
*ರುಚಿಗೆ ಜೇನುತುಪ್ಪ ಹಾಕಿ ಮತ್ತು ಪ್ರತಿನಿತ್ಯ ಸೇವಿಸಿ.

ಶುಂಠಿ ಮತ್ತು ಏಲಕ್ಕಿ
ಏಲಕ್ಕಿಯಲ್ಲಿ ಅಧಿಕ ರಕ್ತದೊತ್ತಡ ನಿವಾರಣೆ ಮಾಡುವ ಗುಣಗಳು ಇವೆ ಎಂದು ಅಧ್ಯಯನಗಳು ಹೇಳಿವೆ. ಶುಂಠಿ ಜತೆಗೆ ಇದನ್ನು ಸೇರಿಸಿದಾಗ ಅದು ವೇಗ ಹಾಗೂ ತುಂಬಾ ಪರಿಣಾಮಕಾರಿಯಾಗಿರುವುದು.

ಬೇಕಾಗುವ ಸಾಮಗ್ರಿಗಳು
*1 ಚಮಚ ಜಜ್ಜಿರುವ ಏಲಕ್ಕಿ
*2-3 ಚಮಚ ತಾಜಾ ಶುಂಠಿ
*1 ಚಮಚ ಬ್ಲ್ಯಾಕ್ ಟೀ
*1 ಕಪ್ ನೀರು

ವಿಧಾನ
*ಒಂದು ಕಪ್ ನೀರಿಗೆ ಎಲ್ಲಾ ಸಾಮಗ್ರಿಗಳನ್ನು ಹಾಕಿಕೊಂಡು ಮಿಶ್ರಣ ಮಾಡಿ.
*ಚಹಾವನ್ನು ಸೋಸಿಕೊಳ್ಳಿ ಮತ್ತು ಶಮನಕಾರಿ ಗುಣ ಪಡೆಯಿರಿ.
*ಚಹಾಗೆ ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಸಿಹಿ ಮಾಡಿಕೊಳ್ಳಬಹುದು.



Click it and Unblock the Notifications











