Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ನೀರಿನ ರುಚಿ ಹೆಚ್ಚಿಸಲು ಈ ವಿಧಾನಗಳನ್ನು ಬಳಸಿ
ಶುದ್ಧ ಕುಡಿಯುವ ನೀರು ಈಗೊಂದು ಚಾಲೆಂಜ್ ನಂತಾಗಿದೆ. ಶುದ್ಧ ಕುಡಿಯುವ ನೀರಿಗೂ ಕಾಸು ಕೊಡಬೇಕಾಗಿರುವ ಪರಿಸ್ಥಿತಿ ಸಿಟಿ ಮಂದಿಯದ್ದು. ಅಯ್ಯೋ ಸರಿಯಾಗಿ ನೀರೇ ಬರಲ್ಲ ಕಣ್ರೀ, ನಮ್ ಮನೆಲಿ ಕುಡಿಯೋ ನೀರನ್ನು ವಾರಕ್ಕೊಮ್ಮೆ ತರಿಸಿಕೊಳ್ತೀವಿ. ನೀರಿಗೂ ದುಡ್ಡು ಕೊಡಬೇಕಾದ್ರೆ ಬೇಜಾರಾಗುತ್ತೆ ಅಂತ ಹೆಂಗಸರು ಯಾರೋ ಆಪ್ತರ ಬಳಿ ಹೇಳಿಕೊಳ್ತಾ ಇರುತ್ತಾರೆ.. ಶುದ್ಧ ಕುಡಿಯೋ ನೀರು ಅಂತ ಯಾವುದೋ ಬಾಟಲಿಯಲ್ಲಿ ಶರಾ ಬರೆದಿದ್ರೆ, ಅದನ್ನೇ ಹೌದು ಅಂತ ನಂಬಿ ಕೊಂಡುಕೊಳ್ಳುವವರಿದ್ದಾರೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೀರಿನ ರುಚಿಯ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಕಡಿಮೆ ಮಂದಿಯೇ. ಆದ್ರೆ ಹೆಲ್ತ್ ಕಾನ್ಶಿಯಸ್ ಆಗಿರುವವರು ಸ್ವಲ್ಪ ಕುಡಿಯೋ ನೀರಿನ ಬಗ್ಗೆ ತಲೆಕೆಡಿಸಿಕೊಂಡಿರುತ್ತಾರೆ. ಕೆಲವರಿಗೆ ಕುಡಿಯೋ ನೀರು ಎಷ್ಟು ರುಚಿಯಾಗಿರುತ್ತೆ ಅನ್ನೋದೇ ತಿಳಿದಿರಲಿಕ್ಕಿಲ್ಲ. ನೀರು ಬಣ್ಣವಿಲ್ಲದ್ದು, ರುಚಿ ಇಲ್ಲದ್ದು ಅಂತಲೇ ಭಾವಿಸಿರ್ತಾರೆ. ಆದ್ರೆ ನೀರಿಗೂ ಒಂದು ರುಚಿಯಿರುತ್ತೆ. ಆದ್ರೆ ಈಗಿನ ಕುಡಿಯೋ ನೀರು ಸತ್ವವನ್ನು
ಮಾತ್ರವಲ್ಲ, ರುಚಿಯನ್ನೂ ಕಳೆದುಕೊಂಡು ಬಿಟ್ಟಿದೆ. ಹಾಗಾಗಿ ವಾಟರ್ ಪ್ಯೂರಿಫೈಯರ್ ಬೇಕೇಬೇಕು ಅನ್ನುವಂತಾಗಿದೆ. ವಾಟರ್ ಪ್ಯೂರಿಫೈಯರ್ ಇಲ್ಲದೇ ಇದ್ರೆ ಕಾಯಿಲೆ ಗ್ಯಾರೆಂಟಿ ಅನ್ನುವ ನಂಬಿಕೆ ಹಲವರದ್ದು. ಆದ್ರೆ ಖಂಡಿತ ಒಂದಷ್ಟು ನೀರಿನ ರುಚಿ ಹೆಚ್ಚಿಸುವ ಮಾರ್ಗಗಳಿವೆ. ಕೇವಲ ರುಚಿ ಮಾತ್ರ ಅಲ್ಲ ಈ ಮಾರ್ಗಗಳು ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತೆ. ಹಾಗಾದ್ರೆ ನೀರಿನ ರುಚಿ ಹೆಚ್ಚಿಸಲು ಏನು ಮಾಡಬೇಕು. ಮುಂದೆ ಓದಿ..
ಲಾವಂಚದ ಬೇರು
ಕುಡಿಯುವ ನೀರಿಗೆ ನಾಲ್ಕೈದು ಬೇರು ಲಾವಂಚವನ್ನು ಹಾಕಿಡಿ. ಲಾವಂಚದ ಬೇರು ಆಯುರ್ವೇದಿಯ ಸತ್ವಗಳನ್ನು ಒಳಗೊಂಡಿದ್ದು ನೀರಿನ ರುಚಿ ಹೆಚ್ಚಿಸೋದು ಮಾತ್ರವಲ್ಲ. ಲಾವಂಚದ ಬೇರಿನ ಸತ್ವಗಳು ನೀರಿನಲ್ಲಿ ಸೇರಿ, ಅವು ನಿಮ್ಮ ದೇಹದ ಹಲವು ಕಾಯಿಲೆಗಳಿಗೆ ಪರಿಹಾರ ನೀಡಬಲ್ಲದು. ಲಾವಂಚದ ಬೇರು ಬೆರೆಸಿದ ನೀರು ಕುಡಿಯಲು ಶುದ್ಧವಾಗಿರುವುದು ಮಾತ್ರವಲ್ಲ, ದೇಹಕ್ಕೆ ತಂಪು ಫೀಲ್ ನೀಡುತ್ತೆ. ಜೊತೆಗೆ ಜಂತುಹುಳುವಿನ ಸಮಸ್ಯೆಯಿಂದ ಹೊಟ್ಟೆ ಕೆಟ್ಟಿದ್ದರೆ ಲಾವಂಚದ ಬೇರು ಸೇರಿಸಿದ ನೀರು ಸೇವಿಸೋದ್ರಿಂದ ಆ ಸಮಸ್ಯೆ ನಿವಾರಣೆಯಾಗಲಿದೆ.

ತುಳಸಿ ದಳ
ನೀರು ಕುದಿಸಿ ಆರಿಸುವ ಸಂದರ್ಭದಲ್ಲಿ ಒಂದೆರಡು ತುಳಸಿ ದಳಗಳನ್ನು ಹಾಕಿಡಿ. ತುಳಸಿ ನೀರಿನಲ್ಲಿರುವ ಕೀಟಾಣುಗಳನ್ನು ಕೊಲ್ಲುತ್ತೆ ಮತ್ತು ನಿಮ್ಮ ದೇಹಕ್ಕೂ ಉತ್ತಮ ಪರಿಣಾಮಗಳನ್ನು ಒದಗಿಸಲಿದೆ. ತುಳಸಿಯ ಸತ್ವದಿಂದಾಗಿ ನೀರು ಕೂಡ ರುಚಿಯಾಗುತ್ತೆ. ಯಾವ ಪ್ಯೂರಿಫೈಯರ್ ಕಡಿಮೆ ಏನಿಲ್ಲ ಅನ್ನುತ್ತೆ ನೀರನ್ನು ಶುದ್ಧೀಕರಿಸುವ ತಾಕತ್ತು ತುಳಸಿ ದಳಗಳಿಗಿದೆ. ಅದೇ ಕಾರಣಕ್ಕೆ ಅಲ್ಲವೇ ತುಳಿಸಿಗೆ ದೇವರ ಸ್ಥಾನದಲ್ಲಿಟ್ಟು ಪೂಜಿಸೋದು.
ತಾಮ್ರದ ಪಾತ್ರೆಯಲ್ಲಿಡಿ
ಹಣ್ಣಿನ ರಸ ಸೇರಿಸಿ ಸೇವಿಸಿ
ನೀರು ತುಂಬಾ ಸಪ್ಪೆ ಅನ್ನಿಸುತ್ತಿದೆ. ಕುಡಿಯೋಕೆ ಮನಸ್ಸಾಗಲ್ಲ ಅನ್ನುವವರು ಯಾವುದಾದ್ರೂ ಹಣ್ಣಿನ ರಸವನ್ನು ನೀರಿನೊಂದಿಗೆ ಬೆರಿಸಿ ಸೇವಿಸಿ. ಒಂದು ರೀತಿ ಜ್ಯೂಸ್ ಅಂತ ಹೇಳಿದ್ರೂ ತಪ್ಪಾಗಲಿಕ್ಕಿಲ್ಲ. ಫ್ಲೇವರ್ ಗಾಗಿ ಸೇರಿಸುವ ಹಣ್ಣಿನ ರಸ, ನಿಮ್ಮ ಆರೋಗ್ಯದ ದಷ್ಟಿಯಿಂದಲೂ ಒಳ್ಳೆಯದು. ಉದಾಹರಣೆಗೆ ಲಿಂಬೆಹಣ್ಣಿನ ರಸವನ್ನು ಸೇರಿಸಿ ಶರಬತ್ತಿನ ರೀತಿಯಲ್ಲಿ ನೀರನ್ನು ಸೇವಿಸಬಹುದು. ಸಿಟ್ರಸ್ ಫ್ರೂಟ್ ಗಳು ಮಾತ್ರವಲ್ಲ ಇತರೆ ಯಾವುದೇ ಹಣ್ಣುಗಳನ್ನು ಕೂಡ ಬಳಕೆ ಮಾಡಬಹುದು. ಆದ್ರೆ ಹಣ್ಣಿನ ರಸ ಸೇರಿಸುವ ನೆಪದಲ್ಲಿ ಹೆಚ್ಚು ಸಕ್ಕರೆಯ ಅಂಶ ನಿಮ್ಮ ದೇಹಕ್ಕೆ ಸೇರದಂತೆ ನೋಡಿಕೊಳ್ಳಿ. ಹೆಚ್ಚು ಸಕ್ಕರೆ ಸೇವಿಸೋದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆಗಳು ಹೆಚ್ಚಿರುತ್ತೆ.
ಪುದೀನಾ ದಳಗಳನ್ನು ಸೇರಿಸಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

