Just In
- 6 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 6 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 7 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 9 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆಮ್ಮದಿಯ ಸುಖನಿದ್ದೆ ಬೇಕೇ? ಗುಲಾಬಿದಳಗಳನ್ನು ಪ್ರಯತ್ನಿಸಿ
ಸುಖವಾದ ನಿದ್ದೆ, ಅಂದರೆ ತಡೆರಹಿತವಾದ ಎಂಟು ಗಂಟೆಗಳ ನಿದ್ದೆಯಿಂದಲೇ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಇದಕ್ಕೂ ಕಡಿಮೆ ಅಥವಾ ತಡೆತಡೆದು ಬರುವ ನಿದ್ದೆಯಿಂದ ವಿಶ್ರಾಂತಿಯೂ ಅರೆಬರೆಯಾಗಿ ಮರುದಿನ ಎದ್ದ ಬಳಿಕ ಮಂಪರು ಆವರಿಸಿರುತ್ತದೆ. ತಡೆ ತಡೆಯಾಗಿ ಬರುವ ನಿದ್ದೆಗೆ ಹಲವು ಕಾರಣಗಳಿವೆ. ಮುಖ್ಯವಾಗಿ ನಿಮ್ಮ ಯಾವುದೋ ಒಂದು ಅಭ್ಯಾಸ ಅಥವಾ ಮಲಗುವ ಮುನ್ನ ಸೇವಿಸಿದ್ದ ಆಹಾರಗಳು.
ಮಾನಸಿಕ
ಕ್ಷೋಭೆ,
ಒತ್ತಡ,
ದುಃಖ,
ಖಿನ್ನತೆಗಳೂ
ನಿದ್ರಾರಾಹಿತ್ಯಕ್ಕೆ
ಕಾರಣವಾಗುತ್ತವೆ.
ಕೆಲವರಿಗೆ
ಅವರ
ರೋಗದಿಂದ
ಎದುರಾಗುವ
ನೋವು
ಸುಖನಿದ್ದೆಗೆ
ಅಡ್ಡಿಪಡಿಸುತ್ತದೆ.
ನಿದ್ದೆ
ಸುಖಕರವಾಗಿರಲು
ಲಾಲಿ
ಹಾಡುವುದರ
ಜೊತೆಗೆ
ಹಲವುಮನೆಮದ್ದುಗಳೂ
ಇವೆ.
ಮಲಗುವ
ಮುನ್ನ
ಒಂದು
ಲೋಟ
ಬಿಸಿ
ಹಾಲು
ಕುಡಿಯುವುದು,
ಪಾದಗಳಿಗೆ
ಮಸಾಜ್
ಮಾಡುವುದು
ಮೊದಲಾದವು
ಪರಿಣಾಮಕಾರಿ
ವಿಧಾನಗಳು.
ನಿದ್ದೆಗೆ ನಮ್ಮ ಘ್ರಾಣಶಕ್ತಿಯೂ ಪೂರಕ ಎಂದು ಇತ್ತೀಚೆಗೆ ಕಂಡುಕೊಳ್ಳಲಾಗಿದೆ. ಅಂದರೆ ಕೆಲವು ಸುವಾಸನೆಗಳು ಮೆದುಳಿಗೆ ಅಹ್ಲಾದಕರ ಅನುಭವ ನೀಡಿ ಉತ್ತಮ ನಿದ್ದೆ ಹಾಗೂ ಕೆಲವು ರೋಗಗಳಿಗೆ ಶಮನವನ್ನೂ ನೀಡುತ್ತವೆ. ವಿಶ್ವದ ಕೆಲವೆಡೆಗಳಲ್ಲಿ ಇದನ್ನು ಬಹಳ ಹಿಂದಿನಿಂದಲೇ ಒಂದು ಚಿಕಿತ್ಸಾ ವಿಧಾನವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇತ್ತೀಚೆಗೆ ವೈದ್ಯವಿಜ್ಞಾನವೂ ಇದನ್ನು ಒಂದು ಪರಿಣಾಮಕಾರಿ ಪದ್ದರಿ ಎಂದು ಒಪ್ಪಿಕೊಂಡು ಅರೋಮಾಥೆರಪಿ ಎಂಬ ವಿಭಾವನ್ನು ಪ್ರಾರಂಭಿಸಿದೆ. ಗುಲಾಬಿ ಹೂವಿನ ದಳಗಳು ನಿದ್ದೆ ಬರಿಸಲು ಸಮರ್ಥವಾಗಿವೆ. ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ
ಇದರ ಸುವಾಸನೆಗೆ ಒತ್ತಡವನ್ನು ನಿವಾರಿಸುವ, ಸ್ನಾಯುಗಳ ಸೆಡೆತವನ್ನು ನಿವಾರಿಸುವ, ಕಾಮೋತ್ತೇಜಕ, ಕಲ್ಮಶ ನಿವಾರಕ ಮತ್ತು ವಿಶೇಷವಾಗಿ ಸಮ್ಮೋಹನಗೊಳಿಸುವ ಶಕ್ತಿ ಇದೆ. ಇದರ ದಳಗಳನ್ನು ಭಟ್ಟಿ ಇಳಿಸಿ ಪಡೆಯುವ ಸುವಾಸನಾ ದ್ರವವನ್ನು ಮೆದುಳಿಗೆ ಸಾಂತ್ವಾನಗೊಳಿಸುವ ಔಷಧದ ರೂಪದಲ್ಲಿಯೂ ಬಳಸಬಹುದು. ಪ್ರಸ್ತುತ ನಿದ್ದೆ ಸರಿಯಾಗಿ ಬರದೇ ಇದ್ದರೆ ವೈದ್ಯರು diazepam ಎಂಬ ಔಷಧಿಯನ್ನು ನೀಡುತ್ತಿದ್ದರು.
ಇದು ಸ್ನಾಯುಗಳನ್ನು ಸಡಿಲಗೊಳಿಸಿ ಒತ್ತಡ ನಿವಾರಿಸುವ ಗುಣದಿಂದ ನಿದ್ದೆ ಬರಿಸಲು ಸಾಧ್ಯವಾಗುತ್ತಿತ್ತು. ಆದರೆ ಗುಲಾಬಿಯ ಸುವಾಸನೆಗೆ ಇದಕ್ಕಿಂತಲೂ ಉತ್ತಮ ಗುಣಗಳಿದ್ದು ಯಾವುದೇ ಅಡ್ಡಪರಿಣಾಮವಿಲ್ಲದೇ ಸುಖನಿದ್ದೆಗೆ ಜಾರಲು ಸಾಧ್ಯ. ಇದರ ಸುವಾಸನೆಯಲ್ಲಿರುವ ಕಣಗಳಲ್ಲಿ ಆತಂಕ ಕಡಿಮೆಗೊಳಿಸುವ ಶಕ್ತಿಯಿದೆ. ಅಷ್ಟೇ ಅಲ್ಲ, ದಳಗಳನ್ನು ಹಸಿಯಾಗಿ ಸೇವಿಸಿ ನಿದ್ದೆಗೆ ಜಾರಿದಾದ ಸುಖನಿದ್ದೆ ಮತ್ತು ಕನಸುಗಳು ಬೀಳುತ್ತವೆ ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ. ನಿದ್ದೆಯೆಂಬ ಅಮೂಲ್ಯ ವರಕ್ಕಿರುವ ಕರಾಮತ್ತೇನು?
ಗುಲಾಬಿ
ದಳಗಳನ್ನು
ಬಳಸುವ
ಬಗೆ
ಹೇಗೆ?
ಗುಲಾಬಿ
ಹೂವಿನ
ದಳಗಳನ್ನು
ಪ್ರತ್ಯೇಕಿಸಿ
ಇಡಿ.
ನಿದ್ದೆಯ
ಸಮಯಕ್ಕೂ
ಕೊಂಚ
ಹೊತ್ತಿನ
ಮುನ್ನ
ಇದನ್ನು
ಕುದಿಯುತ್ತಿರುವ
ನೀರಿಗೆ
ಹಾಕಿ
ಬರುವ
ಸುವಾಸನೆಯನ್ನು
ಆಘ್ರಾಣಿಸಿ.
ಈ
ನೀರು
ಮಂಚದ
ಪಕ್ಕದಲ್ಲಿಯೇ
ಇದ್ದು
ಸುವಾಸನೆ
ಬೀರುತ್ತಿರಲಿ.
ಇನ್ನೂ
ಹೆಚ್ಚಿನ
ಪರಿಣಾಮಕ್ಕಾಗಿ
ಗುಲಾಬಿ
ಟೀ
ಸೇವಿಸಿ
ಅಥವಾ
ಗುಲಾಬಿ
ಹೂವಿನ
ಒಣದಳಗಳನ್ನು
ಬಿಸಿಹಾಲಿನಲ್ಲಿ
ಬೆರೆಸಿ
ಕುಡಿದು
ಕೊಂಚ
ಹೊತ್ತಿನ
ಬಳಿಕ
ಮಲಗಿ.
ಒಂದು
ವೇಳೆ
ಮಾನಸಿಕ
ಒತ್ತಡ,
ತಲೆನೋವು
ಮೊದಲಾದ
ತೊಂದರೆಯಿಂದ
ನಿದ್ದೆ
ಬರುತ್ತಿಲ್ಲವಾದರೆ
ಮಾರುಕಟ್ಟೆಯಲ್ಲಿ
ದೊರಕುವ
ಗುಲಾಬಿ
ಹೂವಿನ
ಅವಶ್ಯಕ
ತೈಲದ
ಕೆಲವು
ಹನಿಗಳನ್ನು
ಹಣೆಯ
ಪಕ್ಕ
ಮತ್ತು
ಹಣೆಯ
ಮೇಲೆ
ಹಚ್ಚಿ
ಮಲಗಿ,
ಸುಖನಿದ್ದೆ
ಪಡೆಯಿರಿ.