Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ನೆಮ್ಮದಿಯ ಸುಖನಿದ್ದೆ ಬೇಕೇ? ಗುಲಾಬಿದಳಗಳನ್ನು ಪ್ರಯತ್ನಿಸಿ
ಸುಖವಾದ ನಿದ್ದೆ, ಅಂದರೆ ತಡೆರಹಿತವಾದ ಎಂಟು ಗಂಟೆಗಳ ನಿದ್ದೆಯಿಂದಲೇ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಇದಕ್ಕೂ ಕಡಿಮೆ ಅಥವಾ ತಡೆತಡೆದು ಬರುವ ನಿದ್ದೆಯಿಂದ ವಿಶ್ರಾಂತಿಯೂ ಅರೆಬರೆಯಾಗಿ ಮರುದಿನ ಎದ್ದ ಬಳಿಕ ಮಂಪರು ಆವರಿಸಿರುತ್ತದೆ. ತಡೆ ತಡೆಯಾಗಿ ಬರುವ ನಿದ್ದೆಗೆ ಹಲವು ಕಾರಣಗಳಿವೆ. ಮುಖ್ಯವಾಗಿ ನಿಮ್ಮ ಯಾವುದೋ ಒಂದು ಅಭ್ಯಾಸ ಅಥವಾ ಮಲಗುವ ಮುನ್ನ ಸೇವಿಸಿದ್ದ ಆಹಾರಗಳು.
ಮಾನಸಿಕ ಕ್ಷೋಭೆ, ಒತ್ತಡ, ದುಃಖ, ಖಿನ್ನತೆಗಳೂ ನಿದ್ರಾರಾಹಿತ್ಯಕ್ಕೆ ಕಾರಣವಾಗುತ್ತವೆ. ಕೆಲವರಿಗೆ ಅವರ ರೋಗದಿಂದ ಎದುರಾಗುವ ನೋವು ಸುಖನಿದ್ದೆಗೆ ಅಡ್ಡಿಪಡಿಸುತ್ತದೆ. ನಿದ್ದೆ ಸುಖಕರವಾಗಿರಲು ಲಾಲಿ ಹಾಡುವುದರ ಜೊತೆಗೆ ಹಲವುಮನೆಮದ್ದುಗಳೂ ಇವೆ. ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲು ಕುಡಿಯುವುದು, ಪಾದಗಳಿಗೆ ಮಸಾಜ್ ಮಾಡುವುದು ಮೊದಲಾದವು ಪರಿಣಾಮಕಾರಿ ವಿಧಾನಗಳು.

ನಿದ್ದೆಗೆ ನಮ್ಮ ಘ್ರಾಣಶಕ್ತಿಯೂ ಪೂರಕ ಎಂದು ಇತ್ತೀಚೆಗೆ ಕಂಡುಕೊಳ್ಳಲಾಗಿದೆ. ಅಂದರೆ ಕೆಲವು ಸುವಾಸನೆಗಳು ಮೆದುಳಿಗೆ ಅಹ್ಲಾದಕರ ಅನುಭವ ನೀಡಿ ಉತ್ತಮ ನಿದ್ದೆ ಹಾಗೂ ಕೆಲವು ರೋಗಗಳಿಗೆ ಶಮನವನ್ನೂ ನೀಡುತ್ತವೆ. ವಿಶ್ವದ ಕೆಲವೆಡೆಗಳಲ್ಲಿ ಇದನ್ನು ಬಹಳ ಹಿಂದಿನಿಂದಲೇ ಒಂದು ಚಿಕಿತ್ಸಾ ವಿಧಾನವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇತ್ತೀಚೆಗೆ ವೈದ್ಯವಿಜ್ಞಾನವೂ ಇದನ್ನು ಒಂದು ಪರಿಣಾಮಕಾರಿ ಪದ್ದರಿ ಎಂದು ಒಪ್ಪಿಕೊಂಡು ಅರೋಮಾಥೆರಪಿ ಎಂಬ ವಿಭಾವನ್ನು ಪ್ರಾರಂಭಿಸಿದೆ. ಗುಲಾಬಿ ಹೂವಿನ ದಳಗಳು ನಿದ್ದೆ ಬರಿಸಲು ಸಮರ್ಥವಾಗಿವೆ. ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ
ಇದರ ಸುವಾಸನೆಗೆ ಒತ್ತಡವನ್ನು ನಿವಾರಿಸುವ, ಸ್ನಾಯುಗಳ ಸೆಡೆತವನ್ನು ನಿವಾರಿಸುವ, ಕಾಮೋತ್ತೇಜಕ, ಕಲ್ಮಶ ನಿವಾರಕ ಮತ್ತು ವಿಶೇಷವಾಗಿ ಸಮ್ಮೋಹನಗೊಳಿಸುವ ಶಕ್ತಿ ಇದೆ. ಇದರ ದಳಗಳನ್ನು ಭಟ್ಟಿ ಇಳಿಸಿ ಪಡೆಯುವ ಸುವಾಸನಾ ದ್ರವವನ್ನು ಮೆದುಳಿಗೆ ಸಾಂತ್ವಾನಗೊಳಿಸುವ ಔಷಧದ ರೂಪದಲ್ಲಿಯೂ ಬಳಸಬಹುದು. ಪ್ರಸ್ತುತ ನಿದ್ದೆ ಸರಿಯಾಗಿ ಬರದೇ ಇದ್ದರೆ ವೈದ್ಯರು diazepam ಎಂಬ ಔಷಧಿಯನ್ನು ನೀಡುತ್ತಿದ್ದರು.
ಇದು ಸ್ನಾಯುಗಳನ್ನು ಸಡಿಲಗೊಳಿಸಿ ಒತ್ತಡ ನಿವಾರಿಸುವ ಗುಣದಿಂದ ನಿದ್ದೆ ಬರಿಸಲು ಸಾಧ್ಯವಾಗುತ್ತಿತ್ತು. ಆದರೆ ಗುಲಾಬಿಯ ಸುವಾಸನೆಗೆ ಇದಕ್ಕಿಂತಲೂ ಉತ್ತಮ ಗುಣಗಳಿದ್ದು ಯಾವುದೇ ಅಡ್ಡಪರಿಣಾಮವಿಲ್ಲದೇ ಸುಖನಿದ್ದೆಗೆ ಜಾರಲು ಸಾಧ್ಯ. ಇದರ ಸುವಾಸನೆಯಲ್ಲಿರುವ ಕಣಗಳಲ್ಲಿ ಆತಂಕ ಕಡಿಮೆಗೊಳಿಸುವ ಶಕ್ತಿಯಿದೆ. ಅಷ್ಟೇ ಅಲ್ಲ, ದಳಗಳನ್ನು ಹಸಿಯಾಗಿ ಸೇವಿಸಿ ನಿದ್ದೆಗೆ ಜಾರಿದಾದ ಸುಖನಿದ್ದೆ ಮತ್ತು ಕನಸುಗಳು ಬೀಳುತ್ತವೆ ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ. ನಿದ್ದೆಯೆಂಬ ಅಮೂಲ್ಯ ವರಕ್ಕಿರುವ ಕರಾಮತ್ತೇನು?
ಗುಲಾಬಿ ದಳಗಳನ್ನು ಬಳಸುವ ಬಗೆ ಹೇಗೆ?
ಗುಲಾಬಿ ಹೂವಿನ ದಳಗಳನ್ನು ಪ್ರತ್ಯೇಕಿಸಿ ಇಡಿ. ನಿದ್ದೆಯ ಸಮಯಕ್ಕೂ ಕೊಂಚ ಹೊತ್ತಿನ ಮುನ್ನ ಇದನ್ನು ಕುದಿಯುತ್ತಿರುವ ನೀರಿಗೆ ಹಾಕಿ ಬರುವ ಸುವಾಸನೆಯನ್ನು ಆಘ್ರಾಣಿಸಿ. ಈ ನೀರು ಮಂಚದ ಪಕ್ಕದಲ್ಲಿಯೇ ಇದ್ದು ಸುವಾಸನೆ ಬೀರುತ್ತಿರಲಿ. ಇನ್ನೂ ಹೆಚ್ಚಿನ ಪರಿಣಾಮಕ್ಕಾಗಿ ಗುಲಾಬಿ ಟೀ ಸೇವಿಸಿ ಅಥವಾ ಗುಲಾಬಿ ಹೂವಿನ ಒಣದಳಗಳನ್ನು ಬಿಸಿಹಾಲಿನಲ್ಲಿ ಬೆರೆಸಿ ಕುಡಿದು ಕೊಂಚ ಹೊತ್ತಿನ ಬಳಿಕ ಮಲಗಿ. ಒಂದು ವೇಳೆ ಮಾನಸಿಕ ಒತ್ತಡ, ತಲೆನೋವು ಮೊದಲಾದ ತೊಂದರೆಯಿಂದ ನಿದ್ದೆ ಬರುತ್ತಿಲ್ಲವಾದರೆ ಮಾರುಕಟ್ಟೆಯಲ್ಲಿ ದೊರಕುವ ಗುಲಾಬಿ ಹೂವಿನ ಅವಶ್ಯಕ ತೈಲದ ಕೆಲವು ಹನಿಗಳನ್ನು ಹಣೆಯ ಪಕ್ಕ ಮತ್ತು ಹಣೆಯ ಮೇಲೆ ಹಚ್ಚಿ ಮಲಗಿ, ಸುಖನಿದ್ದೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
