Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಇನ್ನು ಸಣ್ಣ- ಪುಟ್ಟ ನೋವುಗಳಿಗೆ ವೈದ್ಯರ ಬಳಿ ಓಡಬೇಡಿ!
ದೇಹವೆಂದ ಮೇಲೆ ಅದಕ್ಕೆ ಅನಾರೋಗ್ಯ, ನೋವು ಇತ್ಯಾದಿ ಇದ್ದೇ ಇರುತ್ತದೆ. ಇದನ್ನು ಸರಿಯಾಗಿ ನಿಭಾಯಿಸಿಕೊಂಡು ಹೋದರೆ ಆಗ ಎಲ್ಲವೂ ಬಗೆಹರಿಯುತ್ತದೆ. ಆದರೆ ದೇಹವನ್ನು ಕಾಡುವ ನೋವಿನಲ್ಲಿ ಹಲವಾರು ವಿಧಗಳಿವೆ. ಕೆಲವೊಂದು ತುಂಬಾ ಕಡಿಮೆ, ಮತ್ತೆ ಕೆಲವು ತುಂಬಾ ಗಂಭೀರ ನೋವಾಗಿರುತ್ತದೆ. ಸಣ್ಣ ನೋವುಗಳು ಕೂಡ ನಮ್ಮನ್ನು ತುಂಬಾ ತೊಂದರೆಗೆ ಸಿಲುಕಿಸಬಹುದು. ಉದಾಹರಣೆಗೆ ನಿಮ್ಮ ಮೆಚ್ಚಿನ ಸಾಕು ನಾಯಿಯನ್ನು ಮುದ್ದಿಸಲು ನೀವು ಬಗ್ಗಿದಾಗ ಹಠಾತ್ ಆಗಿ ಬೆನ್ನಿನಲ್ಲಿ ಸೆಳೆತ ಉಂಟಾಗಿ ನೋವು ಕಾಣಿಸಿಕೊಳ್ಳುವುದು.
ಇಂತಹ ಸಂದರ್ಭಗಳಲ್ಲಿ ನಾವು ನೇರವಾಗಿ ವೈದ್ಯರ ಬಳಿಗೆ ಹೋಗುವ ಬದಲು ಕೆಲವೊಂದು ಮನೆಮದ್ದನ್ನು ಪ್ರಯೋಗಿಸಿ ನೋಡಬಹುದಾಗಿದೆ. ನೋವು ಕಾಣಿಸಿದ ಜಾಗಕ್ಕೆ ಮಂಜುಗಡ್ಡೆಯನ್ನು ಇಟ್ಟರೆ ಆಗ ಸ್ವಲ್ಪ ಆರಾಮವಾಗಬಹುದು. ಇದು ನಿಮ್ಮ ನೋವನ್ನು ಕಡಿಮೆ ಮಾಡಿಲ್ಲವೆಂದು ನಿಮಗನಿಸುತ್ತಿದ್ದರೆ ಆಗ ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳಿ. ನಮಗೆ ಕಿರಿಕಿರಿಯನ್ನು ಉಂಟುಮಾಡುವ ಕೆಲವೊಂದು ಸಣ್ಣ ಪುಟ್ಟ ನೋವುಗಳಿಗೆ ಇಲ್ಲಿ ಕೆಲವೊಂದು ಮನೆಮದ್ದುಗಳ ಬಗ್ಗೆ ಹೇಳಲಾಗಿದೆ..

ಅರಿಶಿನ
ಉರಿಯೂತ ನಿಮ್ಮ ನೋವಿಗೆ ಕಾರಣವಾಗಿದ್ದರೆ ಮತ್ತೆ ಎರಡು ಸಲ ಯೋಚಿಸಬೇಡಿ. ಆಹಾರದಲ್ಲಿ ಅರಿಶಿನವನ್ನು ಬಳಸಿ. ಅರಿಶಿನದಲ್ಲಿನ ಉರಿಯೂತ ನಿವಾರಣ ಗುಣಗಳು ಬಾತುಕೊಂಡಿರುವ ಭಾಗವನ್ನು ಸಹಜ ಸ್ಥಿತಿಗೆ ತರುವುದು. ಅರಿಶಿನವನ್ನು ಆಹಾರದಲ್ಲಿ ಅಥವಾ ಕಿತ್ತಳೆ ಜ್ಯೂಸ್ ನೊಂದಿಗೆ ಸೇವಿಸಿ.

ಪುದೀನ
ಹೊಟ್ಟೆ ನೋವಿಗೆ ಹೇಳಿ ಮಾಡಿಸಿದಂತಹ ಮನೆಮದ್ದು ಎಂದರೆ ಪುದೀನ. ಹೊಟ್ಟೆ ನೋವು ಕಾಣಿಸಿಕೊಂಡಾಗ ಕೆಲವು ಪುದೀನ ಎಲೆಗಳನ್ನು ಬಾಯಿಗೆ ಹಾಕಿ ಜಗಿದು ನೀರು ಕುಡಿದರೆ ನೋವು ನಿವಾರಣೆಯಾಗುವುದು.

ಲವಂಗ
ಲವಂಗವನ್ನು ಭಾರತೀಯರು ಅಡುಗೆಯಲ್ಲಿ ರುಚಿಗಾಗಿ ಬಳಸಿಕೊಳ್ಳುತ್ತಾರೆ. ಲವಂಗವು ಸಾಮಾನ್ಯ ಶೀತ, ತಲೆನೋವು, ವಾಕರಿಕೆ, ಉರಿಯೂತ ಮತ್ತು ಹಲ್ಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ.

ಆಕ್ಯೂಪಂಕ್ಚರ್
ಚೀನಾದ ಈ ಚಿಕಿತ್ಸೆಯು ದೇಹದಲ್ಲಿನ ಹಲವಾರು ನೋವುಗಳನ್ನು ನಿವಾರಿಸುತ್ತದೆ. ದೇಹದ ಕೆಲವೊಂದು ಭಾಗಕ್ಕೆ ಸೂಜಿಯನ್ನು ಚುಚ್ಚುವ ಮೂಲಕ ನೋವನ್ನು ಕಡಿಮೆ ಮಾಡುವ ಚಿಕಿತ್ಸೆ ಇದಾಗಿದೆ. ಇದನ್ನು ತಜ್ಞರು ಮಾತ್ರ ಮಾಡಬಹುದು. ನಿಮಗೆ ಇದರ ಬಗ್ಗೆ ಜ್ಞಾನವಿಲ್ಲದೆ ಇದ್ದರೆ ಪ್ರಯತ್ನಿಸಲು ಹೋಗಬೇಡಿ.

ನೀರು ಹಬ್ಬೆ ಗಿಡದ ತೊಗಟೆ
ಉರಿಯೂತದಿಂದಾಗಿ ಕೆಲವೊಂದು ನೋವುಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ನೀರು ಹಬ್ಬೆ ಗಿಡದ ತೊಗಟೆ ಒಳ್ಳೆಯ ಮದ್ದು. ಈ ಮರದ ತೊಗಟೆ ನಿಮಗೆ ಕಾಣಿಸಿದರೆ ಅದನ್ನು ಕುದಿಸಿ ಅದರ ನೀರನ್ನು ಕುಡಿಯಿರಿ. ಬೆನ್ನು ನೋವು ಮತ್ತು ತಲೆನೋವು ಬೇಗನೆ ನಿವಾರಣೆಯಾಗುವುದು.

ಹಾಗಲಕಾಯಿ
ಭಾರತೀಯರು ಹಾಗಲಕಾಯಿಯನ್ನು ವಿವಿಧ ರೂಪದಲ್ಲಿ ತಮ್ಮ ಆಹಾರದಲ್ಲಿ ಬಳಸಿಕೊಳ್ಳುತ್ತಾರೆ. ಇದು ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಕಾರಣ ಮಧುಮೇಹ ನಿಯಂತ್ರಣಕ್ಕೆ ಒಳ್ಳೆಯದು. ತ್ವಚ್ಛೆಯಲ್ಲಿನ ಗಾಯಗಳನ್ನು ನಿವಾರಿಸಲು ಇದನ್ನು ಬಳಸಬಹುದಾಗಿದೆ.

ಬಿಸಿ ಮತ್ತು ತಂಪು
ಸ್ನಾಯುಗಳ ನೋವು ನಿವಾರಿಸಲು ಮಂಜುಗಡ್ಡೆಯನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಅಲ್ಲದೆ ನೋವಿನ ಭಾಗಕ್ಕೆ ಬಿಸಿಯಾದ ವಸ್ತುವಿನಿಂದ ಮಸಾಜ್ ಮಾಡಿದರೆ ನೋವು ಮಾಯವಾಗುವುದು.



Click it and Unblock the Notifications
