Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಬೇತಾಳದಂತೆ ಕಾಡುವ ಸಿಡುಬು ರೋಗಕ್ಕೆ ಬೇವಿನ ಚಿಕಿತ್ಸೆ
ನೀವು ಚಿಕ್ಕ ಮಕ್ಕಳಿದ್ದಾಗ ನಿಮಗೆ ಸಿಡುಬು ರೋಗ ಬಂದಾಗ ನಿಮ್ಮ ಪೋಷಕರು ಬೇವಿನ ಎಲೆಯನ್ನು ತಂದು ನಿಮಗೆ ಸ್ನಾನ ಮಾಡಿಸಿರುವುದು ನಿಮಗೆ ನೆನಪಿಗೆ ಬಂದಿರಬೇಕಲ್ಲವೇ? ಹೌದು, ಅಂದಿಗೂ, ಇಂದಿಗು, ಎಂದೆಂದಿಗೂ ಬೇವು ಸಿಡುಬಿಗೆ ಮೊದಲು ದೊರೆಯುವ ದಿವ್ಯೌಷಧಿಯಾಗಿರುತ್ತದೆ. ಈ ಬೇವನ್ನು ನೀವು ಸಿಡುಬಿಗೆ ಬಳಸಿದಲ್ಲಿ, ಸಿಡುಬು ಹೆಚ್ಚು ವ್ಯಾಪಿಸುವುದನ್ನು ತಡೆಯಬಹುದು. ಜೊತೆಗೆ ಸಿಡುಬು ಸಾಂಕ್ರಮಿಕವಾಗಿ ಹರಡದಂತೆ ತಡೆಯಲು ಬೇವನ್ನು ಬಳಸುತ್ತಾರೆ.

ಬೇವನ್ನು ತ್ವಚೆಯ ಮೇಲೆ ಲೇಪಿಸಿ ತುಂಬಾ ಹೊತ್ತು ಬಿಡುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ತುರಿಕೆ ಬಂದಾಗ ಬೇವಿನ ಎಲೆಯ ಪೇಸ್ಟ್ ತಯಾರಿಸಿ, ಅದನ್ನು ಲೇಪಿಸಿ, ಒಣಗಲು ಬಿಡಲಾಗುತ್ತದೆ. ಈ ಪ್ರಕ್ರಿಯೆಯನ್ನು ರೋಗಿಯು ಬೇವಿನ ಎಲೆಯ ಸ್ನಾನ ಮಾಡಿದ ಮೇಲೆ ನಂತರ ಲೇಪಿಸಲಾಗುತ್ತದೆ.
ನೀವು ಚಿಕ್ಕ ಮಕ್ಕಳಿದ್ದಾಗ ನಿಮಗೆ ಸಿಡುಬು ರೋಗ ಬಂದಾಗ ನಿಮ್ಮ ಪೋಷಕರು ಬೇವಿನ ಎಲೆಯನ್ನು ತಂದು ನಿಮಗೆ ಸ್ನಾನ ಮಾಡಿಸಿರುವುದು ನಿಮಗೆ ನೆನಪಿಗೆ ಬಂದಿರಬೇಕಲ್ಲವೇ? ಹೌದು, ಅಂದಿಗ, ಇಂದಿಗು, ಎಂದೆಂದಿಗೂ ಬೇವು ಸಿಡುಬಿಗೆ ಮೊದಲು ದೊರೆಯುವ ದಿವ್ಯೌಷಧಿಯಾಗಿರುತ್ತದೆ. ಈ ಬೇವನ್ನು ನೀವು ಸಿಡುಬಿಗೆ ಬಳಸಿದಲ್ಲಿ, ಸಿಡುಬು ಹೆಚ್ಚು ವ್ಯಾಪಿಸುವುದನ್ನು ತಡೆಯಬಹುದು. ಜೊತೆಗೆ ಸಿಡುಬು ಸಾಂಕ್ರಮಿಕವಾಗಿ ಹರಡದಂತೆ ತಡೆಯಲು ಬೇವನ್ನು ಬಳಸುತ್ತಾರೆ.
ಬೇವನ್ನು ತ್ವಚೆಯ ಮೇಲೆ ಲೇಪಿಸಿ ತುಂಬಾ ಹೊತ್ತು ಬಿಡುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ತುರಿಕೆ ಬಂದಾಗ ಬೇವಿನ ಎಲೆಯ ಪೇಸ್ಟ್ ತಯಾರಿಸಿ, ಅದನ್ನು ಲೇಪಿಸಿ, ಒಣಗಲು ಬಿಡಲಾಗುತ್ತದೆ. ಈ ಪ್ರಕ್ರಿಯೆಯನ್ನು ರೋಗಿಯು ಬೇವಿನ ಎಲೆಯ ಸ್ನಾನ ಮಾಡಿದ ಮೇಲೆ ನಂತರ ಲೇಪಿಸಲಾಗುತ್ತದೆ. ಬನ್ನಿ ಬೇವಿನ ಎಲೆಯನ್ನು ಹೇಗೆ ಬಳಸಲಾಗುತ್ತದೆ ಎಂದು ತಿಳಿಯೋಣ
ಬೇವಿನ ಎಲೆಯ ಸ್ನಾನ
ಬೇವಿನ ಎಲೆಯ ಪೇಸ್ಟ್ ಅನ್ನು ಬಳಸುವ ಮುನ್ನ ಮೊದಲು ಬೇವಿನ ಎಲೆಯನ್ನು ಹಾಕಿದ ಬಿಸಿ ನೀರಿನಿಂದ ಸ್ನಾನ ಮಾಡಬೇಕಾಗುತ್ತದೆ. ಇದಕ್ಕಾಗಿ ಒಂದು ಬಕೆಟಿನಲ್ಲಿ ಬೆಚ್ಚಗಿನ ನೀರು ಹಾಕಿಕೊಳ್ಳಿ, ಅದಕ್ಕೆ ಬೇವಿನ ಎಲೆಗಳನ್ನು ಮಿಶ್ರಣ ಮಾಡಿ. ಈ ಎಲೆಗಳು 10 ನಿಮಿಷ ನೆನೆಯಲು ಬಿಡಿ. ಈ ನೀರಿನಿಂದ ದಿನಕ್ಕೆ ಒಂದು ಬಾರಿ ಸ್ನಾನ ಮಾಡಿ ಸಿಡುಬಿನಿಂದ ಮುಕ್ತರಾಗಿ.
ಬೇವಿನ ಎಲೆಯ ಪೇಸ್ಟ್
ಬೇವಿನ ಎಲೆಯ ಪೇಸ್ಟ್ ಆರೋಗ್ಯಕ್ಕೆ ಮತ್ತು ತ್ವಚೆಗೆ ಒಳ್ಳೆಯದು. ಇದು ತ್ವಚೆಗೆ ತಂಪನ್ನು ನೀಡುತ್ತದೆ. ಸ್ವಲ್ಪ ಬೇವಿನ ಎಲೆಯನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನೇರವಾಗಿ ಸಿಡುಬಿನ ಗುಳ್ಳೆಗಳು ಅಥವಾ ಭಾದಿತ ತ್ವಚೆಯ ಮೇಲೆ ಲೇಪಿಸಿ. ಈ ಪೇಸ್ಟ್ ಸ್ವಲ್ಪ ತುರಿಕೆಯನ್ನುಂಟು ಮಾಡಬಹುದು. ಆದರೆ ನಿಮ್ಮ ತ್ವಚೆ ಗುಣ ಮುಖವಾಗಲು ಇದು ಅತ್ಯಾವಶ್ಯಕ.
ಬೇವಿನ ರಸ
ಪೇಸ್ಟ್ ಬಳಸಲು ನಿಮಗೆ ಇಷ್ಟವಾಗದಿದ್ದಲ್ಲಿ, ಬೇವಿನ ರಸವನ್ನು ಮಾಡಿಕೊಳ್ಳಿ. ಈ ರಸವನ್ನು ನಿಮ್ಮ ತ್ವಚೆಗೆ ಲೇಪಿಸಿ. ಈ ರಸವನ್ನು ಪೇಸ್ಟ್ ಮಾಡಿದ ನಂತರ ಮಾಡಿಕೊಳ್ಳಬಹುದು. ಈ ರಸದಲ್ಲಿ ತ್ವಚೆಗೆ ಪ್ರಯೋಜನಕಾರಿಯಾದ ಹಲವಾರು ಅಂಶಗಳು ಇರುತ್ತವೆ. ಇವು ಕಲೆಗಳನ್ನು ಸಹ ನಿವಾರಿಸುತ್ತವೆ ಮತ್ತು ಇನ್ಫೆಕ್ಷನ್ ಹರಡುವುದನ್ನು ಸಹ ತಡೆಯುತ್ತವೆ.
ಬೇವಿನ ಎಲೆಯ ಮೇಲೆ ಮಲಗಿ
ಕೊನೆಯದಾಗಿ ತಜ್ಞರ ಸಲಹೆ ಏನೆಂದರೆ, ಸಿಡುಬು ಬಂದವರು ಬೇವಿನ ಎಲೆಯ ಮಲಗಿ ಎಂಬುದು. ತೆಳುವಾದ ಬಟ್ಟೆಗಳನ್ನು ಧರಿಸಿ, ಬೇವಿನ ಎಲೆಯ ಮೇಲೆ ಮಲಗುವುದರಿಂದ, ತ್ವಚೆಗೆ ನೈಸರ್ಗಿಕವಾಗಿ ರಸವು ಲೇಪನವಾಗುತ್ತದೆ. ಇದು ನಿಮ್ಮ ತ್ವಚೆಯು ಮತ್ತಷ್ಟು ಸುಧಾರಿಸಲು ನೆರವಾಗುತ್ತದೆ. ಈ ಮೇಲಿನ ಚಿಕಿತ್ಸೆಯ ವಿಧಾನವನ್ನು ಪಾಲಿಸಿದರೆ ನಿಮ್ಮ ತ್ವಚೆಯಿಂದ ಸಿಡುಬಿನ ಕಲೆಗಳು ಮತ್ತು ಸಿಡುಬು ಎರಡು ಹೊರಟು ಹೋಗುತ್ತವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


