Latest Updates
-
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ?
ಸಡನ್ ಆಗಿ ಕಣ್ಣಿಗೆ ಗಾಯವಾದರೆ- ಪ್ರಥಮ ಚಿಕಿತ್ಸೆ ಹೀಗಿರಲಿ
ಕಣ್ಣಿದ್ದರೆ ಇಡೀ ಪ್ರಪಂಚವೇ ಬೆಳಕು. ಅದೇ ಕಣ್ಣಿಲ್ಲವೆಂದಾದರೆ ಕತ್ತಲೂ ಆವರಿಸಿದಂತೆ. ದೇಹದಲ್ಲಿರುವ ಅತೀ ಸೂಕ್ಷ್ಮ ಅಂಗಗಳಲ್ಲಿ ಕಣ್ಣು ಮೊದಲನೇಯದ್ದಾಗಿದೆ. ಕಣ್ಣನ್ನು ತುಂಬಾ ಎಚ್ಚರಿಕೆಯಿಂದ ಕಾಪಾಡಿಕೊಳ್ಳುವುದು ಅಗತ್ಯ. ಆದರೆ ಅಪಾಯವೆನ್ನುವುದು ಹೇಳಿಕೇಳಿ ಬರುವುದಿಲ್ಲ. ಕಣ್ಣಿಗೂ ಕೆಲವೊಂದು ಸಲ ಗಾಯಗಳಾಗಬಹುದು. ಆದರೆ ಇಂತಹ ಸಮಯದಲ್ಲಿ ನಮಗೆ ಕೆಲವೊಂದು ಪ್ರಥಮ ಚಿಕಿತ್ಸೆಗಳು ತಿಳಿದಿದ್ದರೆ ಅದರಿಂದ ಮುಂದೆ ಆಗಬಹುದಾದ ದೊಡ್ಡ ಅಪಾಯವನ್ನು ತಡೆಯಬಹುದಾಗಿದೆ.

ಕಣ್ಣಿಗೆ ಸಣ್ಣ ಗಾಯವಾದರೂ ಅದನ್ನು ಕಡೆಗಣಿಸಿದರೆ ಮುಂದೆ ದೃಷ್ಟಿಯೇ ಕಳಕೊಳ್ಳುವಂತಹ ಸಂದರ್ಭ ಬರಬಹುದು. ವೆಲ್ಡರ್ ಮತ್ತು ಗ್ರೈಡಿಂಗ್ ಮೆಷಿನ್ಗಳಲ್ಲಿ ಕೆಲಸ ಮಾಡುವಂತವರಿಗೆ ಇಂತಹ ಅಪಾಯಗಳು ಹೆಚ್ಚು. ಇದನ್ನು ತಡೆಯಲು ಯಾವಾಗಲೂ ಕಣ್ಣಿಗೆ ಗ್ಲಾಸ್ ಹಾಕಿಕೊಂಡೇ ಕೆಲಸ ಮಾಡಬೇಕು. ಇದರಿಂದ ಬರುವಂತಹ ಅಪಾಯವನ್ನು ತಡೆಗಟ್ಟಬಹುದಾಗಿದೆ.
ಕಣ್ಣಿಗೆ ಗಾಯವಾದಾಗ ಯಾವ ರೀತಿಯ ಪ್ರಥಮ ಚಿಕಿತ್ಸೆ ನೀಡಬಹುದು ಎನ್ನುವ ಬಗ್ಗೆ ಆರೋಗ್ಯ ತಜ್ಞರು ಕೆಲವೊಂದು ಮಾಹಿತಿಗಳನ್ನು ನೀಡಿದ್ದಾರೆ. ಇದನ್ನು ತಿಳಿದುಕೊಂಡು ಮುಂದುವರಿದರೆ ದೊಡ್ಡ ಅಪಾಯವನ್ನು ತಡೆಯಬಹುದು. ನೆನಪಿರಲಿ ಮಧುಮೇಹ ಕಣ್ಣನ್ನೂ ಬಾಧಿಸುತ್ತದೆ!
ಕಣ್ಣಿಗೆ ಗಾಯವಾದಾಗ ಕಂಡುಬರುವ ಸಾಮಾನ್ಯ ಲಕ್ಷಣಗಳು
*ನೋವು
*ದೃಷ್ಟಿ ಮಂದುವಾಗುವುದು
*ನೀರು ಬರುವುದು
*ಕಣ್ಣು ತೆರೆಯಲು ಕಷ್ಟವಾಗುವುದು
ಬಾಹ್ಯ ವಸ್ತುಗಳು ಕಣ್ಣು ಸೇರುವುದರಿಂದ ಆಗುವ ತೊಂದರೆಗಳು
ಬಾಹ್ಯ ವಸ್ತುಗಳಾದ ಕಸ, ಕಬ್ಬಿಣದ ಚೂರು ಅಥವಾ ಗಾಜಿನ ಚೂರು ಕಣ್ಣನ್ನು ಸೇರಿದಾಗ ಏನು ಮಾಡಬೇಕು?
•ಕಣ್ಣನ್ನು ತಿಕ್ಕಬೇಡಿ
•ಕಣ್ಣಿನ ಬಿಳಿಯ ಭಾಗದಲ್ಲಿ ಯಾವುದೇ ಕಸ ಕಾಣುತ್ತಿದೆಯಾ ಎಂದು ನೋಡಿ.
•ಕಸ ಕಂಡರೆ ಮೇಲಿನ ರೆಪ್ಪೆಯನ್ನು ಕೆಳಗೆ ಮಾಡಿಕೊಂಡು ಸತತವಾಗಿ ಕಣ್ಣು ಮುಚ್ಚಿರಿ ಮತ್ತು ತೆರೆಯಿರಿ.
•ಕಸ ಹೊರಗೆ ಬರಲು ತಂಪಾದ ನೀರಿನಿಂದ ಕಣ್ಣನ್ನು ತೊಳೆಯಿರಿ.
•ಪಿನ್, ಉಗುರು ಮತ್ತು ಬೆರಳನ್ನು ಕಸ ತೆಗೆಯಲು ಬಳಸಬೇಡಿ.
•ಇದರಿಂದ ಯಾವುದೇ ಪ್ರಯೋಜವಾಗದಿದ್ದರೆ ಕಣ್ಣಿಗೆ ಬ್ಯಾಂಡೇಜ್ ಹಾಕಿಕೊಂಡು ನೇರವಾಗಿ ವೈದ್ಯರ ಬಳಿ ಹೋಗಿ.
•ಕಣ್ಣಿನ ಕಪ್ಪು ಭಾಗದಲ್ಲಿ ಕಸ ಕುಳಿತ್ತಿದ್ದರೆ ನೇರವಾಗಿ ವೈದ್ಯರ ಬಳಿಗೆ ತೆರಳಿ ಅದನ್ನು ತೆಗೆಸಿಕೊಳ್ಳಿ. ದಣಿದ ಕಣ್ಣುಗಳಿಗೆ, ತ್ವರಿತ ಸಾಂತ್ವನ ನೀಡುವ ಮನೆಮದ್ದು
ರಾಸಾಯನಿಕಗಳ ಪ್ರವೇಶ
*ಮನೆಯಲ್ಲಿ ಅಥವಾ ಬೇರೆ ಕಡೆ ಕೆಲಸ ಮಾಡುವಾಗ ಯಾವುದಾದರೂ ರಾಸಾಯನಿಕ ಕಣ್ಣಿನೊಳಗೆ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಮಯದಲ್ಲಿ ತುಂಬಾ ತಾಳ್ಮೆ ವಹಿಸಬೇಕು ಮತ್ತು ಕಣ್ಣು ಮುಚ್ಚಬಾರದು.
*ಕಣ್ಣು ಮುಚ್ಚಿದರೆ ರಾಸಾಯನಿಕವು ಮತ್ತಷ್ಟು ಹಾನಿಯುಂಟು ಮಾಡುವ ಸಾಧ್ಯತೆಯಿದೆ.
*ರಾಸಾಯನಿಕ ಬಿದ್ದ ತಕ್ಷಣ ಕಣ್ಣು ಮುಚ್ಚದೆ ಸುಮಾರು 15ರಿಂದ 30 ನಿಮಿಷ ಕಾಲ ಕಣ್ಣನ್ನು ತೊಳೆಯುತ್ತಾ ಇರಿ.
*ಈ ರೀತಿಯಾದಾಗ ವೈದ್ಯಕೀಯ ನೆರವು ಪಡೆಯಿರಿ.
*ಕಣ್ಣನ್ನು ಉಜ್ಜಿಕೊಳ್ಳಬೇಡಿ ಮತ್ತು ಬ್ಯಾಂಡೇಜ್ ಹಾಕಬೇಡಿ. ಕಣ್ಣಿನ ದೃಷ್ಟಿ ಸಾಮರ್ಥ್ಯ ಕಾಪಾಡಲು ಆಯುರ್ವೇದ ಟಿಪ್ಸ್
ಕಣ್ಣಿಗೆ ಏನಾದರೂ ಬಡಿದಾಗ
*ಮಕ್ಕಳು ಆಟವಾಡುತ್ತಿರುವಾಗ ಕಣ್ಣಿಗೆ ಚೆಂಡು ಬಂದು ಬಡಿಯುವುದು ಸಾಮಾನ್ಯ ಮತ್ತು ಗಾಳಿಯಲ್ಲಿ ಏನಾದರೂ ಬಂದು ದೊಡ್ಡವರ ಕಣ್ಣಿಗೆ ಬಡಿಯಬಹುದು.
*ಈ ರೀತಿಯಾದಾಗ ಲಘುವಾಗಿ ಕಣ್ಣನ್ನು ತಂಪಾದ ಬಟ್ಟೆಯಿಂದ ಒತ್ತಿಕೊಳ್ಳಿ.
*ಮರುದಿನ ಬಿಸಿ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಕಣ್ಣಿಗೆ ಒತ್ತಿಕೊಳ್ಳಬಹುದು.
*ಕಣ್ಣು ತೆರೆಯಲು ಕಷ್ಟವಾಗುತ್ತಿದ್ದರೆ, ದೃಷ್ಟಿ ಸರಿಯಾಗಿರದಿದ್ದರೆ ಅಥವಾ ನೋವಿದ್ದರೆ ವೈದ್ಯರನ್ನು ತಕ್ಷಣ ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



