Just In
- 1 hr ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 3 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 3 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 17 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
Don't Miss
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಪಲ್ ಸಿಡೆರ್ ವಿನೆಗರ್- ಕಿಡ್ನಿ ಕಲ್ಲಿನ ಸಮಸ್ಯೆಗೆ ರಾಮಬಾಣ
ಮೂತ್ರಪಿಂಡದಲ್ಲಿ ಕಲ್ಲುಗಳು (ಕಿಡ್ನಿ ಸ್ಟೋನ್)ಸೇರಿಕೊಳ್ಳುವುದು ಎಂದರೆ, ಅದರಲ್ಲಿ ಖನಿಜಾಂಶ ಮತ್ತು ಆಮ್ಲದ ಕಲ್ಲುಗಳು ಸೇರಿಕೊಳ್ಳುವುದು ಎಂದರ್ಥ. ಇವುಗಳು ಕಾಣಿಸಿಕೊಂಡರೆ ಅದನ್ನು ಹೊಂದಿರುವವರಿಗೆ ಮಾತ್ರ ಗೊತ್ತು ಅದು ಅದೆಂತಹ ವೇದನೆಯನ್ನು ನೀಡುತ್ತದೆ ಎಂದು. ಎಂತಹ ಗಟ್ಟಿ ಆಳನ್ನು ಸಹ ಮೆತ್ತಗೆ ಮಾಡಿಬಿಡುವಂತಹ, ಜೀವವನ್ನು ಹಿಂಡಿ ಹಾಕುವಂತಹ ಅಸಾಧ್ಯ ವೇದನೆಯನ್ನು ಈ ಕಲ್ಲುಗಳು ನೀಡುತ್ತದೆ.
ಹಾಗೆಂದು ಈ ಕಲ್ಲುಗಳು ಮೂತ್ರಪಿಂಡಕ್ಕೆ ಯಾವುದೇ ಹಾನಿಯನ್ನು ಮಾಡುವುದಿಲ್ಲವಾದರು, ಇವುಗಳನ್ನು ನಿರ್ಮೂಲ ಮಾಡದಿದ್ದರೆ, ಮೂತ್ರ ಸರಾಗವಾಗಿ ಹರಿದು ಬರಲು ಇರುವ ನಾಳವನ್ನು ಇದು ಮುಚ್ಚಿ ಬಿಡುತ್ತವೆ. ಆಗ ಈ ಕಲ್ಲುಗಳನ್ನು ತೆಗೆಯಲು ಶಸ್ತ್ರ ಚಿಕಿತ್ಸೆಯೊಂದೆ ಉಳಿದಿರುವ ಮಾರ್ಗವಾಗಿರುತ್ತದೆ. ಇವುಗಳನ್ನು ಕರಗಿಸಲು ಹಲವಾರು ಮನೆ ಮದ್ದುಗಳು ಸಹ ಇವೆ. ತಂಪು ಪಾನೀಯ ಕುಡಿದರೆ ಕಿಡ್ನಿ ಹಾಳಾಗುವುದೇ?
ಅದರಲ್ಲಿ
ಆಪಲ್
ಸೈಡರ್
ವಿನೆಗರ್ಗೆ
ಅಗ್ರ
ಸ್ಥಾನವನ್ನು
ನೀಡಬಹುದು.
ಇದು
ಮೂತ್ರಪಿಂಡದಲ್ಲಿರುವ
ಕಲ್ಲುಗಳನ್ನು
ಪರಿಣಾಮಕಾರಿಯಾಗಿ
ನಿವಾರಿಸು
ಗುಣಗಳನ್ನು
ಪಡೆದಿರುತ್ತದೆ.
ಮೂತ್ರಪಿಂಡದಲ್ಲಿ
ಕಂಡು
ಬರುವ
ಕಲ್ಲುಗಳನ್ನು
ನಿವಾರಿಸಲು
ಆಪಲ್
ಸೈಡರ್
ವಿನೆಗರ್
ಅನ್ನು
ಬಳಸಿಕೊಳ್ಳಲು
ಹಲವಾರು
ಮಾರ್ಗಗಳು
ಇವೆ.
ಹಾಗಾಗಿ
ಇಂದು
ಬೋಲ್ಡ್ಸ್ಕೈ
ನಿಮಗಾಗಿ
ಮೂತ್ರಪಿಂಡದಲ್ಲಿರುವ
ಕಲ್ಲುಗಳನ್ನು
ನಿವಾರಿಸಲು
ಆಪಲ್
ಸೈಡರ್
ವಿನೆಗರ್
ಅನ್ನು
ಹೇಗೆ
ಬಳಸಿಕೊಳ್ಳಬಹುದು
ಎಂದು
ತಿಳಿಸಿಕೊಡುತ್ತಿದೆ.
ಮುಂದೆ
ಓದಿ....
ಕಿಡ್ನಿ
ಕಲ್ಲಿನ
ಸಮಸ್ಯೆಗೆ
ಗಿಡಮೂಲಿಕೆಗಳ
ನಲ್ಮೆಯ
ಆರೈಕೆ
ವಿನೆಗರ್ ಮತ್ತು ನೀರು
ಇದು ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ನಿವಾರಿಸಿಕೊಳ್ಳಲು ಇರುವ ಅತ್ಯುತ್ತಮ ವಿಧಾನವಾಗಿದೆ. ಎರಡು ಚಮಚ ವಿನೆಗರ್ಗೆ ಎಂಟು ಔನ್ಸ್ ನೀರನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ದಿನವೂ ಸೇವಿಸುತ್ತಿದ್ದರೆ, ನಿಮ್ಮ ಮೂತ್ರಪಿಂಡದಲ್ಲಿರುವ ಕಲ್ಲುಗಳು ನಿವಾರಣೆಯಾಗುತ್ತವೆ. ಇದರ ಜೊತೆಗೆ ಸಾಧ್ಯವಾದಷ್ಟು ನೀರನ್ನು ಸೇವಿಸಿ, ಇದು ನಿಮ್ಮ ದೇಹದಲ್ಲಿರುವ ಟಾಕ್ಸಿನ್ಗಳನ್ನು ಹೊರಹಾಕುತ್ತದೆ.
ವಿನೆಗರ್, ನೀರು ಮತ್ತು ಬೇಕಿಂಗ್ ಸೋಡಾ
ವಿನೆಗರ್ ಅನ್ನು ಬೇಕಿಂಗ್ ಸೋಡಾದ ಜೊತೆಗೆ ಬೆರೆಸಿದಾಗ ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ನಿವಾರಿಸಲು ಅತ್ಯುತ್ತಮ ಔಷಧಿಯಾಗುತ್ತದೆ. ಸೋಡಾದಲ್ಲಿರುವ ಆಲ್ಕಾಲೈಜಿಂಗ್ ಪರಿಣಾಮವು ದೇಹದಲ್ಲಿರುವ ಆಮ್ಲವನ್ನು ತೆಗೆದು ಹಾಕುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ವಿನೆಗರ್, ನೀರು ಮತ್ತು ಬೇಕಿಂಗ್ ಸೋಡಾ
ಎರಡು ಚಮಚ ವಿನೆಗರ್ಗೆ ಅರ್ಧ ಚಮಚ ಬೇಕಿಂಗ್ ಸೋಡಾವನ್ನು ಸೇರಿಸಿಕೊಂಡು ಒಂದು ಲೋಟ ನೀರಿನಲ್ಲಿ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ದಿನಕ್ಕೆ ಮೂರು ಬಾರಿ ಸೇವಿಸಿ, ಉತ್ತಮ ಫಲಿತಾಂಶವನ್ನು ಪಡೆಯಿರಿ.
ವಿನೆಗರ್ ಮತ್ತು ಜೇನು ತುಪ್ಪ
ಜೇನು ತುಪ್ಪದಲ್ಲಿರುವ ಆಂಟಿಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ನಿವಾರಕ ಅಂಶಗಳು ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಕರಗಿಸಲು ನೆರವಾಗುತ್ತವೆ. ಜೇನು ತುಪ್ಪವು ಈ ಪಾನೀಯದ ರುಚಿಯನ್ನು ಸಹ ಹೆಚ್ಚಿಸುತ್ತದೆ. ಈ ಪಾನೀಯವನ್ನು ತಯಾರಿಸಿಕೊಳ್ಳಲು, ಒಂದು ಸ್ಪೂನ್ ವಿನೆಗರ್ ಜೊತೆಗೆ ಎರಡು ಸ್ಪೂನ್ ಜೇನು ತುಪ್ಪವನ್ನು ಬೆರೆಸಿಕೊಳ್ಳಿ.
ವಿನೆಗರ್, ಆಲೀವ್ ಎಣ್ಣೆ, ನಿಂಬೆ ರಸ ಮತ್ತು ನೀರು
ಲಿಂಬೆ ಹಣ್ಣಿನಲ್ಲಿರುವ ಆಮ್ಲೀಯ ಗುಣಗಳು ಮೂತ್ರದಲ್ಲಿರುವ ಆಮ್ಲದ ಗುಣಗಳನ್ನು ಕಡಿಮೆ ಮಾಡುತ್ತದೆ. ಇದು ಮೂತ್ರಪಿಂಡದಲ್ಲಿ ಕಲ್ಲುಗಳು ಬೆಳವಣಿಗೆಯಾಗುವುದನ್ನು ತಡೆಯುತ್ತದೆ. ಜೊತೆಗೆ ಇದು ಮೂತ್ರಪಿಂಡದಲ್ಲಿ ಬ್ಯಾಕ್ಟೀರಿಯಾವು ಸಹ ಬೆಳೆಯುವುದನ್ನು ತಡೆಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ವಿನೆಗರ್, ಆಲೀವ್ ಎಣ್ಣೆ, ನಿಂಬೆ ರಸ ಮತ್ತು ನೀರು
ವಿನೆಗರ್, ಆಲೀವ್ ಎಣ್ಣೆ, ನಿಂಬೆ ರಸಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಒಂದು ಲೋಟ ನೀರಿಗೆ ಬೆರೆಸಿಕೊಳ್ಳಿ. ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ನಿವಾರಿಸಿಕೊಳ್ಳಲು ಈ ಮಿಶ್ರಣವನ್ನು ಸೇವಿಸಿ.