Just In
- 4 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 5 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 6 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 6 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮ್ಮ ಬುದ್ಧಿವಂತಿಕೆಯನ್ನು ಕೆಡಿಸುವ 10 ಕೆಟ್ಟ ಅಭ್ಯಾಸಗಳು
ನಮ್ಮಲ್ಲಿ ಬಹುತೇಕರಿಗೆ ತಿಳಿದೇ ಇರುವುದಿಲ್ಲ. ನಾವು ಅಳವಡಿಸಿಕೊಳ್ಳುವ ಜೀವನಶೈಲಿಗಳು ಹಾಗು ಅಭ್ಯಾಸಗಳು ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆಯೆಂಬುದನ್ನು. ನಮ್ಮ ದೇಹದಲ್ಲಿರುವ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡುವಂತೆ ಮಾಡಲು, ಮಾನಸಿಕ ಆರೋಗ್ಯವೇ ಅತ್ಯಂತ ಪ್ರಮುಖವಾದ ಅಂಶವಾಗಿರುತ್ತದೆ. ನಮಗೆಲ್ಲ ತಿಳಿದಿರುವಂತೆ, ನಮ್ಮ ಹಿಮ್ಮೆದುಳು ಇಡೀ ದೇಹದ ಕಾರ್ಯ ವ್ಯವಸ್ಥೆಯ ಮೇಲೆ ನಿಯಂತ್ರಣದ ಜವಾಬ್ದಾರಿಯನ್ನು ಹೊಂದಿರುತ್ತದೆ.
ಆದ್ದರಿಂದ
ಆರೋಗ್ಯಕರ
ಜೀವನ
ಶೈಲಿಯನ್ನು
ಹೊಂದಿದ್ದರೆ,
ಒಳ್ಳೆಯ
ಮಾನಸಿಕ
ಆರೋಗ್ಯವು
ಇರುತ್ತದೆ.
ಈ
ಮಾನಸಿಕ
ಆರೋಗ್ಯವನ್ನು
ಕಾಪಾಡುವ
ನಿಟ್ಟಿನಲ್ಲಿ
ನಾವು
ಕೆಲವೊಂದು
ಅಂಶಗಳತ್ತ
ಗಮನ
ಹರಿಸುತ್ತೇವೆ.
ಅದರಲ್ಲೂ
ಮಾನಸಿಕ
ಆರೋಗ್ಯವನ್ನು
ಹಾಳು
ಮಾಡುವ
ಅಭ್ಯಾಸಗಳತ್ತ
ನಮ್ಮ
ಗಮನವನ್ನು
ಹರಿಸುತ್ತೇವೆ.
ಮೆದುಳು
ಸೂಕ್ತ
ರೀತಿಯಲ್ಲಿ
ಕಾರ್ಯನಿರ್ವಹಿಸಲು
12
ಯೋಗಾಸನಗಳು
ಅಧಿಕ ನಿದ್ದೆ
ವೈದ್ಯಕೀಯ ಅಧ್ಯಯನಗಳ ಪ್ರಕಾರ ತಿಳಿದು ಬಂದಿರುವ ಅಂಶವೆಂದರೆ, ಅಧಿಕ ನಿದ್ದೆಯು ಖಿನ್ನತೆಯನ್ನು ತರುತ್ತದೆ. ಅಧಿಕ ನಿದ್ದೆಯು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವುದಷ್ಟೇ ಅಲ್ಲದೆ, ಮಧುಮೇಹದಂತಹ ಕಾಯಿಲೆ ಸಹ ಬರಲು ಕಾರಣವಾಗುತ್ತದೆ. ಅಧಿಕ ನಿದ್ದೆ ಎಂದರೆ ಪ್ರತಿನಿತ್ಯ 6-9 ಗಂಟೆಗಳಿಗು ಅಧಿಕ ಕಾಲ ನಿದ್ದೆ ಮಾಡುವುದು ಎಂದರ್ಥ.
ಆಲ್ಕೋಹಾಲ್
ಆಲ್ಕೋಹಾಲ್ ಸೇವನೆಯಿಂದ ಹಲವಾರು ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುತ್ತೇವೆ ಎಂಬುದು ತಿಳಿದಿರುವ ವಿಚಾರವೇ. ಆದರೂ ಅಧಿಕ ಆಲ್ಕೋಹಾಲ್ ಸೇವನೆಯು ಮಾನಸಿಕ ಆರೋಗ್ಯದ ಮೇಲೆ ವಿಪರೀತವಾದ ದುಷ್ಪರಿಣಾಮವನ್ನು ಬೀರುತ್ತದೆ. ಮಧ್ಯಪಾನ ಚಟವು ಮಾನಸಿಕ ಆರೋಗ್ಯವನ್ನು ನಾಶಮಾಡುತ್ತದೆ. ಇದು ನೆನಪಿನ ಶಕ್ತಿಯನ್ನು ಹಾಳು ಮಾಡುತ್ತದೆ, ಉದ್ವೇಗ ಮತ್ತು ಖಿನ್ನತೆಯನ್ನು ಸಹ ತರುತ್ತದೆ.
ವ್ಯಾಯಾಮದ ಕೊರತೆ
ಪ್ರತಿ ನಿತ್ಯ ವ್ಯಾಯಾಮ ಮಾಡುತ್ತ ಇದ್ದರೆ, ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂಬುದು ನಮಗೆಲ್ಲರಿಗು ಗೊತ್ತಿರುವ ವಿಚಾರವೇ ಆಗಿದೆ. ಆದರೂ, ವ್ಯಾಯಾಮದ ಕೊರತೆಯು ಜನರಲ್ಲಿ ಒತ್ತಡವನ್ನು ತರುತ್ತದೆ. ಜೊತೆಗೆ ಮಾನಸಿಕ ಆರೋಗ್ಯದಲ್ಲಿ ಏರು ಪೇರನ್ನು ಉಂಟು ಮಾಡುತ್ತದೆ.
ಒತ್ತಡ
ಒತ್ತಡವನ್ನು ನಿಭಾಯಿಸುವ ಕಲೆಯು ನಿಮ್ಮ ಮಟ್ಟಿಗೆ ನಿಮಗೆ ಮಾತ್ರ ಗೊತ್ತಿರುತ್ತದೆ. ಮಾನಸಿಕ ಆರೋಗ್ಯದ ನಿಟ್ಟಿನಲ್ಲಿ ಮಾತನಾಡಬೇಕೆಂದರೆ, ಒತ್ತಡವು ಸಹ ಒಂದು ಅಭ್ಯಾಸ. ನಾವು ಅಸೌಕರ್ಯದಿಂದ ಕೂಡಿದ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದರೆ, ಅದರಿಂದ ಒತ್ತಡವು ಬರುತ್ತದೆ. ಒತ್ತಡವು ಮನುಷ್ಯನಲ್ಲಿ ಉದ್ವೇಗ ಮತ್ತು ಖಿನ್ನತೆಗಳನ್ನು ಉಂಟು ಮಾಡುತ್ತದೆ.
ಧೂಮಪಾನ
ಧೂಮಪಾನವು ಸಹ ಕೆಟ್ಟ ಮಾನಸಿಕ ಆರೋಗ್ಯಕ್ಕೆ ದಾರಿ ಮಾಡಿಕೊಡುವ ಚಟವಾಗಿದೆ. ಅದರಲ್ಲೂ ಅಧಿಕ ಧೂಮಪಾನ ಮಾಡುವವರಲ್ಲಿ, ಮೆದುಳಿನ ಕೋಶಗಳ ಕಾರ್ಯ ವೈಖರಿಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ. ಜೊತೆಗೆ ಇದರಿಂದ ಧೀರ್ಘ ಕಾಲದಲ್ಲಿ ನೆನಪಿನ ಶಕ್ತಿ ಮತ್ತು ಚಿತ್ತ ಚಾಂಚಲ್ಯವುಂಟಾಗುತ್ತದೆ.
ಔಷಧಿಗಳು
ಔಷಧಿಗಳು ಸಹ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ, ಪ್ರತಿಕೂಲ ಪರಿಣಾಮ ಬೀರುವ ಅಂಶಗಳಾಗಿವೆ. ಅದರಲ್ಲೂ ಅಧಿಕ ಔಷಧ ಸೇವನೆಯು ಉದ್ವೇಗ ಮತ್ತು ಖಿನ್ನತೆಯಷ್ಟೇ ಅಲ್ಲದೆ ತೀವ್ರ ಸ್ವರೂಪದ ಮಾನಸಿಕ ಕಾಯಿಲೆಗಳನ್ನು ಕೊಡುಗೆಯಾಗಿ ನೀಡುತ್ತದೆ.
ನಿದ್ದೆಯ ಕೊರತೆ
ಅಧಿಕ ನಿದ್ದೆಯಂತೆ, ನಿದ್ದೆಯ ಕೊರತೆಯು ಸಹ ಮಾನಸಿಕ ಆರೋಗ್ಯದ ಸಮತೋಲನವನ್ನು ತಪ್ಪಿಸುತ್ತದೆ. ಮನಿದ್ದೆಯ ಕೊರತೆಯು ಮನುಷ್ಯನಲ್ಲಿ ಉದ್ವೇಗವನ್ನು ಹೆಚ್ಚಿಸುತ್ತದೆ.
ಹೊಸದಾಗಿ ಏನನ್ನು ಕಲಿಯಲು ಇಷ್ಟಪಡದಿರುವುದು
ಹೊಸತು ಎಂಬ ವಿಚಾರವು ಸಹ ಮಾನಸಿಕ ಆರೋಗ್ಯದ ವಿಚಾರದಲ್ಲಿ ತುಂಬಾ ಕೆಲಸಗಳನ್ನು ಮಾಡುತ್ತದೆ. ಹೊಸ ವಿಚಾರಗಳು ಮೆದುಳಿನ ಆರೋಗ್ಯದಲ್ಲಿ ಚುರುಕುತನವನ್ನು ನೀಡುತ್ತದೆ. ಹಾಗಾಗಿ ಹೊಸತನ್ನು ಕಲಿಯದಿದ್ದರೆ, ಚುರುಕುತನ ಬರದೆ ಮಂಕುತನ ಆವರಿಸುತ್ತದೆ. ಮನಸ್ಸು ಒಂದೇ ವಿಚಾರದಲ್ಲಿ ಕೊಳೆಯಲು ಆರಂಭಿಸುತ್ತದೆ. ಹಾಗಾಗಿ ಒಂದೇ ವಿಚಾರದಲ್ಲಿ ಕೊಳೆಯುವ ಬದಲು, ನಿಮ್ಮ ಮೆದುಳಿಗೆ ಹೊಸ ಹೊಸ ವಿಚಾರಗಳ ಆಹಾರವನ್ನು ನೀಡಿ. ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.
ಸರಿಯಾಗಿ ಆಹಾರ ಸೇವಿಸದಿರುವುದು
ಯಾವಾಗಲು ಕರಿದ ತಿಂಡಿಗಳನ್ನು ಸೇವಿಸುವುದು, ಜಂಕ್ ಫುಡ್ ಮತ್ತು ಇನ್ನಿತರ ಅನಾರೋಗ್ಯಕಾರಿ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ನಾವು ನಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೇವೆ. ಅನಾರೋಗ್ಯಕಾರಿ ಆಹಾರಗಳು ನಿಮ್ಮ ಮೆದುಳಿನ ಕಾರ್ಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಜೊತೆಗೆ ಹಲವಾರು ಮಾನಸಿಕ ಸಮಸ್ಯೆಗಳಿಗೆ ಗುರಿಯನ್ನಾಗಿಸುತ್ತದೆ.
ಕೆಟ್ಟ ಸಾಮಾಜಿಕ ಜೀವನ
ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ ಎಂದು ಹೇಳಿದ್ದಾರೆ ಬಸವಣ್ಣ. ಹಾಗಿರಬೇಕು ನಮ್ಮ ಸಹವಾಸಗಳು. ಅದನ್ನು ಬಿಟ್ಟು, ದುರ್ಜನರ ಸಹವಾಸ ಮಾಡಿದರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ನಾವು ಅನಾರೋಗ್ಯವನ್ನು ಅನುಭವಿಸುತ್ತೇವೆ. ಅಧ್ಯಯನಗಳ ಪ್ರಕಾರ ತಿಳಿದು ಬಂದಿರುವ ವಿಚಾರವೇನೆಂದರೆ, ನಮ್ಮ ಮೆದುಳು ಶಾಲೆಗೆ ಹೋಗುವ ಸಮಯದಿಂದಲು ನಾವು ಒಡನಾಡುವ ಜನರ ಪ್ರಚೋದನೆಗಳಿಗೆ ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತ ಇರುತ್ತದೆ. ನಮ್ಮ ಒಡನಾಡಿಗಳು ಒಳ್ಳೆಯ ರೀತಿಯಲ್ಲಿ ಪ್ರಚೋದನೆ ನೀಡಿದರೆ, ನಮ್ಮ ಮೆದುಳು ಅದಕ್ಕೆ ಸ್ಪಂದಿಸುತ್ತದೆ. ಅದೇ ಅವರು ನಕಾರಾತ್ಮಕವಾಗಿ ಪ್ರಚೋದನೆ ನೀಡಿದರೆ ನಮ್ಮ ಮೆದುಳು ಸಹ ಹಾಗೆಯೇ ಸ್ಪಂದಿಸುತ್ತದೆ. ಆದ್ದರಿಂದ ನೋಡಿ ಮಾಡಿ ಒಡನಾಡಿ!.