Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಹೈ ಬಿಪಿ ಇದ್ದರೆ, ಉಪ್ಪಿನ ಬದಲು ಈ ಆಹಾರ ತಿನ್ನಿ
ಉಪ್ಪಿಲ್ಲದ ಊಟ ರುಚಿಸುವುದೇ ಇಲ್ಲ. ಆದರೆ ಈ ಉಪ್ಪನ್ನು ಅಧಿಕ ತಿನ್ನುವ ಅಭ್ಯಾಸವಿದ್ದರೆ ರಕ್ತದೊತ್ತಡ ಹೆಚ್ಚಾಗುವುದು. ರಕ್ತದೊತ್ತಡ ಹೆಚ್ಚಿರುವ ಉಪ್ಪು ತುಂಬಾ ಕಮ್ಮಿಯಿರುವ ಊಟ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಆದರೆ ಉಪ್ಪಿನಲ್ಲಿರುವ ಸೋಡಿಯಂ ಅಂಶ ಆರೋಗ್ಯಕ್ಕೆ ಅವಶ್ಯಕ. ರಕ್ತದೊತ್ತಡ ಸಮಸ್ಯೆಯಿರುವವರಿಗೆ ಉಪ್ಪು ಹಾಕಿದ ಅಡುಗೆ ತಿಂದರೆ ರಕ್ತದೊತ್ತಡ ಹೆಚ್ಚುವುದು, ಸೋಡಿಯಂ ಕಮ್ಮಿಯಾದರೆ ತಲೆನೋವು, ತಲೆಸುತ್ತು, ದೇಹದ ತೂಕ ಹೆಚ್ಚಾಗುವುದು, ಸ್ನಾಯುಗಳು ಸಡಿಲವಾಗುವುದು ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ಕೆಲವೊಂದು ಆಹಾರಗಳಲ್ಲೂ ಸೋಡಿಯಂ ಇವೆ. ಆದ್ದರಿಂದ ಬಿಪಿ ಇರುವವರು ಉಪ್ಪಿಗೆ ಪರ್ಯಾಯವಾಗಿ ಈ ಆಹಾರ ತೆಗೆದುಕೊಳ್ಳುವುದು ಒಳ್ಳೆಯದು.

ಚಕ್ಕೆ
ಚಕ್ಕೆಯನ್ನು ಅಡುಗೆಯಲ್ಲಿ ಬಳಸಿದರೆ ರಕ್ತದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡುತ್ತದೆ ಹಾಗೂ ಚಕ್ಕೆ ಹಾಕಿ, ಚಿಟಿಕೆಯಷ್ಟು ಉಪ್ಪು ಹಾಕಿ ತಯಾರಿಸಿದ ಅಡುಗೆ ರುಚಿಯಾಗಿ ಇರುತ್ತದೆ.

ಏಲಕ್ಕಿ
ಅಡುಗೆ ಮಾಡುವಾಗ ಅದಕ್ಕೆ ಏಲಕ್ಕಿ ಹಾಕಿದರೆ ಅಡುಗೆಯ ರುಚಿ ಹೆಚ್ಚುವುದು, ಇದು ಬಿಪಿ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ತುಳಸಿ
ಅಡುಗೆಗೆ ಉಪ್ಪು ಹಾಕದೆ ತುಳಸಿ ಹಾಕಿ ಕೂಡ ತಯಾರಿಸಬಹುದು. ತುಳಸಿ ಹಾಕಿ ತಯಾರಿಸಿದ ಅಡುಗೆ ಅಷ್ಟೇನು ರುಚಿಯಾಗಿ ಇಲ್ಲದಿದ್ದರೂ ತಿನ್ನಬಹುದು ಹಾಗೂ ತುಳಸಿಯಲ್ಲಿ ಆರೋಗ್ಯಕರ ಗುಣ ಹೆಚ್ಚಿರುವುದರಿಂದ ಆರೋಗ್ಯ ವೃದ್ಧಿಸುವುದು.

ಮೆಣಸು
ಸ್ವಲ್ಪ ಕರಿ ಮೆಣಸು ಮತ್ತು ಕೆಂಪು ಮೆಣಸು ಹಾಕಿ ತಯಾರಿಸುವ ಅಡುಗೆಗೆ ಉಪ್ಪಿನ ಅವಶ್ಯಕತೆ ಇಲ್ಲ. ತುಂಬಾ ರಕ್ತದೊತ್ತಡವಿರುವವರು ಉಪ್ಪನ್ನು ಹಾಕಿದ ಅಡುಗೆ ತಿನ್ನಲೇಬಾರದು.

ಪಲಾವ್ ಎಲೆ
ಪಲಾವ್ ಎಲೆಯನ್ನು ಕೂಡ ಉಪ್ಪಿಗೆ ಪರ್ಯಾಯವಾಗಿ ಬಳಸಬಹದು. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ.

ಕರಿ ಮೆಣಸು
ಕರಿ ಮೆಣಸಿನಲ್ಲಿ ಸೋಡಿಯಂ ಅಂಶವಿದ್ದು ಉಪ್ಪಿಗೆ ಪರ್ಯಾವಾಗಿ ಬಳಸಬಹುದು.

ಸೋಯಾ ಸಾಸ್
ಉಪ್ಪು ಹಾಕದೆ ಸೋಯಾ ಸಾಸ್ ಹಾಕಿ ತಯಾರಿಸಿದ ಅಡುಗೆ ಸಪ್ಪೆ ಅನಿಸುವುದಿಲ್ಲ. ಉಪ್ಪು ಹಾಕಿದ ಅಡುಗೆ ತಿನ್ನಬೇಡಿ ಎಂದು ವೈದ್ಯರು ಹೇಳಿದ್ದರೆ ಉಪ್ಪಿಗೆ ಪರ್ಯಾಯವಾಗಿ ಇದನ್ನು ಬಳಸಿ ನಾಲಗೆಯ ರುಚಿ ಹೆಚ್ಚಿಸಬಹುದು.

ಈರುಳ್ಳಿ ಪುಡಿ
ಅಡುಗೆಗೆ ಈರುಳ್ಳಿ ಪುಡಿಯನ್ನು ಉಪ್ಪಿಗೆ ಬದಲಾಗಿ ಬಳಸಬಹುದು.

ನಿಂಬೆ ರಸ
ಇಲ್ಲಿ ಹೇಳಿರುವ ಪದಾರ್ಥಗಳನ್ನು ಬಳಸಿ ಅದಕ್ಕೆ ಸ್ವಲ್ಪ ನಿಂಬೆ ರಸ ಹಿಂಡಿದರೆ ಅಡುಗೆ ರುಚಿಯಾಗಿರುತ್ತದೆ.

ಸೂರ್ಯಕಾಂತಿ ಬೀಜ
ಇದರಲ್ಲಿ ಸೋಡಿಯಂ ಅಧಿಕವಿದ್ದು ಇದನ್ನು ತಿನ್ನುವುದರಿಂದ ಅನೇಕ ಪೋಷಕಾಂಶಗಳು ದೊರೆಯುತ್ತವೆ. ಇದನ್ನು ತಿಂದರೆ ಸೋಡಿಯಂ ಕೊರತೆ ಉಂಟಾಗುವುದಿಲ್ಲ.



Click it and Unblock the Notifications