Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹೈ ಬಿಪಿ ಇದ್ದರೆ, ಉಪ್ಪಿನ ಬದಲು ಈ ಆಹಾರ ತಿನ್ನಿ
ಉಪ್ಪಿಲ್ಲದ ಊಟ ರುಚಿಸುವುದೇ ಇಲ್ಲ. ಆದರೆ ಈ ಉಪ್ಪನ್ನು ಅಧಿಕ ತಿನ್ನುವ ಅಭ್ಯಾಸವಿದ್ದರೆ ರಕ್ತದೊತ್ತಡ ಹೆಚ್ಚಾಗುವುದು. ರಕ್ತದೊತ್ತಡ ಹೆಚ್ಚಿರುವ ಉಪ್ಪು ತುಂಬಾ ಕಮ್ಮಿಯಿರುವ ಊಟ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಆದರೆ ಉಪ್ಪಿನಲ್ಲಿರುವ ಸೋಡಿಯಂ ಅಂಶ ಆರೋಗ್ಯಕ್ಕೆ ಅವಶ್ಯಕ. ರಕ್ತದೊತ್ತಡ ಸಮಸ್ಯೆಯಿರುವವರಿಗೆ ಉಪ್ಪು ಹಾಕಿದ ಅಡುಗೆ ತಿಂದರೆ ರಕ್ತದೊತ್ತಡ ಹೆಚ್ಚುವುದು, ಸೋಡಿಯಂ ಕಮ್ಮಿಯಾದರೆ ತಲೆನೋವು, ತಲೆಸುತ್ತು, ದೇಹದ ತೂಕ ಹೆಚ್ಚಾಗುವುದು, ಸ್ನಾಯುಗಳು ಸಡಿಲವಾಗುವುದು ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ಕೆಲವೊಂದು ಆಹಾರಗಳಲ್ಲೂ ಸೋಡಿಯಂ ಇವೆ. ಆದ್ದರಿಂದ ಬಿಪಿ ಇರುವವರು ಉಪ್ಪಿಗೆ ಪರ್ಯಾಯವಾಗಿ ಈ ಆಹಾರ ತೆಗೆದುಕೊಳ್ಳುವುದು ಒಳ್ಳೆಯದು.

ಚಕ್ಕೆ
ಚಕ್ಕೆಯನ್ನು ಅಡುಗೆಯಲ್ಲಿ ಬಳಸಿದರೆ ರಕ್ತದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡುತ್ತದೆ ಹಾಗೂ ಚಕ್ಕೆ ಹಾಕಿ, ಚಿಟಿಕೆಯಷ್ಟು ಉಪ್ಪು ಹಾಕಿ ತಯಾರಿಸಿದ ಅಡುಗೆ ರುಚಿಯಾಗಿ ಇರುತ್ತದೆ.

ಏಲಕ್ಕಿ
ಅಡುಗೆ ಮಾಡುವಾಗ ಅದಕ್ಕೆ ಏಲಕ್ಕಿ ಹಾಕಿದರೆ ಅಡುಗೆಯ ರುಚಿ ಹೆಚ್ಚುವುದು, ಇದು ಬಿಪಿ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ತುಳಸಿ
ಅಡುಗೆಗೆ ಉಪ್ಪು ಹಾಕದೆ ತುಳಸಿ ಹಾಕಿ ಕೂಡ ತಯಾರಿಸಬಹುದು. ತುಳಸಿ ಹಾಕಿ ತಯಾರಿಸಿದ ಅಡುಗೆ ಅಷ್ಟೇನು ರುಚಿಯಾಗಿ ಇಲ್ಲದಿದ್ದರೂ ತಿನ್ನಬಹುದು ಹಾಗೂ ತುಳಸಿಯಲ್ಲಿ ಆರೋಗ್ಯಕರ ಗುಣ ಹೆಚ್ಚಿರುವುದರಿಂದ ಆರೋಗ್ಯ ವೃದ್ಧಿಸುವುದು.

ಮೆಣಸು
ಸ್ವಲ್ಪ ಕರಿ ಮೆಣಸು ಮತ್ತು ಕೆಂಪು ಮೆಣಸು ಹಾಕಿ ತಯಾರಿಸುವ ಅಡುಗೆಗೆ ಉಪ್ಪಿನ ಅವಶ್ಯಕತೆ ಇಲ್ಲ. ತುಂಬಾ ರಕ್ತದೊತ್ತಡವಿರುವವರು ಉಪ್ಪನ್ನು ಹಾಕಿದ ಅಡುಗೆ ತಿನ್ನಲೇಬಾರದು.

ಪಲಾವ್ ಎಲೆ
ಪಲಾವ್ ಎಲೆಯನ್ನು ಕೂಡ ಉಪ್ಪಿಗೆ ಪರ್ಯಾಯವಾಗಿ ಬಳಸಬಹದು. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ.

ಕರಿ ಮೆಣಸು
ಕರಿ ಮೆಣಸಿನಲ್ಲಿ ಸೋಡಿಯಂ ಅಂಶವಿದ್ದು ಉಪ್ಪಿಗೆ ಪರ್ಯಾವಾಗಿ ಬಳಸಬಹುದು.

ಸೋಯಾ ಸಾಸ್
ಉಪ್ಪು ಹಾಕದೆ ಸೋಯಾ ಸಾಸ್ ಹಾಕಿ ತಯಾರಿಸಿದ ಅಡುಗೆ ಸಪ್ಪೆ ಅನಿಸುವುದಿಲ್ಲ. ಉಪ್ಪು ಹಾಕಿದ ಅಡುಗೆ ತಿನ್ನಬೇಡಿ ಎಂದು ವೈದ್ಯರು ಹೇಳಿದ್ದರೆ ಉಪ್ಪಿಗೆ ಪರ್ಯಾಯವಾಗಿ ಇದನ್ನು ಬಳಸಿ ನಾಲಗೆಯ ರುಚಿ ಹೆಚ್ಚಿಸಬಹುದು.

ಈರುಳ್ಳಿ ಪುಡಿ
ಅಡುಗೆಗೆ ಈರುಳ್ಳಿ ಪುಡಿಯನ್ನು ಉಪ್ಪಿಗೆ ಬದಲಾಗಿ ಬಳಸಬಹುದು.

ನಿಂಬೆ ರಸ
ಇಲ್ಲಿ ಹೇಳಿರುವ ಪದಾರ್ಥಗಳನ್ನು ಬಳಸಿ ಅದಕ್ಕೆ ಸ್ವಲ್ಪ ನಿಂಬೆ ರಸ ಹಿಂಡಿದರೆ ಅಡುಗೆ ರುಚಿಯಾಗಿರುತ್ತದೆ.

ಸೂರ್ಯಕಾಂತಿ ಬೀಜ
ಇದರಲ್ಲಿ ಸೋಡಿಯಂ ಅಧಿಕವಿದ್ದು ಇದನ್ನು ತಿನ್ನುವುದರಿಂದ ಅನೇಕ ಪೋಷಕಾಂಶಗಳು ದೊರೆಯುತ್ತವೆ. ಇದನ್ನು ತಿಂದರೆ ಸೋಡಿಯಂ ಕೊರತೆ ಉಂಟಾಗುವುದಿಲ್ಲ.



Click it and Unblock the Notifications
