Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಹ್ಯಾಂಗ್ ಓವರಿನಿಂದ ಎದ್ದುಬರಲು 5 ಐಡಿಯಾ

ಈ ಲೇಖನವನ್ನು ಓದುವವರಿಗೆ ಮೊದಲ ಸಲಹೆ ಎಂದರೆ ಮದ್ಯರಹಿತ ಪಾರ್ಟಿ ಮಾಡಿ ಎಂದು. ಆದರೆ ಆಲ್ಕೊಹಾಲ್ ಅನಿವಾರ್ಯ ಎನ್ನುವವರಿಗೆ ಈ ಸಲಹೆ ಅನ್ವಯಿಸುತ್ತದೆ. ಕುಡಿತದ ಅಮಲಿನಲ್ಲಿ ಆರೋಗ್ಯ ಕೆಡಿಸಿಕೊಳ್ಳುವವರಿಗೆ ಇದು ಸ್ವಲ್ಪ ಉಪಯೋಗಕ್ಕೆ ಬರುತ್ತದೆ.
ಕುಡಿತ ಹೆಚ್ಚಾದರೆ ತಲೆ ಸುತ್ತು, ಸುಸ್ತು, ತಲೆ ನೋವು, ವಾಂತಿ, ವಾಕರಿಕೆ ಇವು ಸಹಜ. ಇದನ್ನು ನಿವಾರಿಸಿಕೊಳ್ಳಲು ಇಲ್ಲೊಂದಿಷ್ಟು ಸುಲಭ ಮಾರ್ಗಗಳನ್ನು ನೀಡಲಾಗಿದೆ.
ಕುಡಿತದ ಅಮಲಿಗೆ ಮನೆ ಮದ್ದು ಯಾವುದು?
* ಬಿಸಿ ನೀರಿನ ಸ್ನಾನ: ಕುಡಿತ ಹೆಚ್ಚಾಗಿ ನಿಶೆ ಇನ್ನೂ ಇಳಿದಿಲ್ಲ ಎಂದಾದರೆ ಮೊದಲು ಬಿಸಿ ನೀರಿನ ಸ್ನಾನ ಮಾಡಿಕೊಳ್ಳಿ. ಇದರಿಂದ ಬೆವರಿನ ಮೂಲಕ ಕೆಲವು ವಿಷಯುಕ್ತ ಅಂಶಗಳು ದೇಹದಿಂದ ಹೋಗಲು ನೆರವಾಗುತ್ತದೆ.
* ಚೆನ್ನಾಗಿ ನೀರು ಕುಡಿಯಿರಿ: ಆಲ್ಕೊಹಾಲ್ ಸೇವಿಸುವಾಗಲೂ ಅಥವಾ ಸೇವಿಸಿದ ನಂತರವೂ ಅತಿಯಾಗಿ ನೀರನ್ನು ಕುಡಿಯಬೇಕು. ಇದರಿಂದ ಕುಡಿತದ ವಿಷಕಾರಿ ಅಂಶಗಳು ಬೇಗನೆ ದೇಹದಿಂದ ಹೊರಗೆ ಹೋಗುತ್ತದೆ. ಹೆಚ್ಚು ನೀರು ಕುಡಿದರೆ ತಲೆನೋವನ್ನು ಮತ್ತು ಕುಡಿತದಿಂದ ಹೊಟ್ಟೆಯಲ್ಲಿ ಉಂಟಾಗುವ ಸಮಸ್ಯೆಯನ್ನು ನಿವಾರಿಸಲು ಹೆಚ್ಚು ಸಹಕಾರಿ.
* ಬಾಳೆಹಣ್ಣು ತಿನ್ನಿ: ಕುಡಿತದ ಅಮಲು ನೆತ್ತಿಗೇರಿ ಸಮಸ್ಯೆ ತಂದಾಗ ಬಾಳೆಹಣ್ಣು ಹೆಚ್ಚು ಉಪಯೋಗಕ್ಕೆ ಬರುತ್ತದೆ. ಬಾಳೆಹಣ್ಣನ್ನು ಹೆಚ್ಚು ತಿಂದರೆ ಅದರಲ್ಲಿನ ಪೊಟಾಶಿಯಂ ಕುಡಿತದ ಅಮಲಿನಿಂದ ಹೊರಬರಲು ಸಹಾಯ ಮಾಡುತ್ತದೆ.
* ವಿಟಮಿನ್ ಸಿ: ಕುಡಿತ ಹೆಚ್ಚಾಗಿ ತುಂಬಾ ತಲೆ ನೋವು ಉಂಟಾಗಿದ್ದರೆ, ಅಥವಾ ತುಂಬಾ ತಲೆ ಸುತ್ತು ಕಾಣಿಸಿಕೊಂಡಿದ್ದರೆ ಅಂತಹ ಸಮಯದಲ್ಲಿ ವಿಟಮಿನ್ ಸಿ ಪೂರಿತ ಆಹಾರ ಸೇವಿಸಬೇಕು. ಇದರಿಂದ ದೇಹ ಮತ್ತು ಮನಸ್ಸು ಎರಡಕ್ಕೂ ರಿಲ್ಯಾಕ್ಸ್ ಆಗುತ್ತದೆ.
* ಖಾರದ ಪದಾರ್ಥ ಬೇಡ: ಅತಿ ಖಾರದ ಪದಾರ್ಥಗಳನ್ನು ಈ ಸಮಯದಲ್ಲಿ ಸೇವಿಸಬಾರದು. ಆದರೆ ಹೊಟ್ಟೆ ತುಂಬಾ ಊಟ ಮಾಡುವುದನ್ನು ಮರೆಯಬೇಡಿ. ತರಕಾರಿ ಸೂಪ್ ಈ ಸಮಯಕ್ಕೆ ತುಂಬಾ ಒಳ್ಳೆಯದು.
* ನಿಂಬೆರಸ: ಬಿಸಿ ನೀರಿಗೆ ನಿಂಬೆರಸ ಹಿಂಡಿ ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯಬೇಕು. ಇದರಿಂದ ಸುಸ್ತು ಕಡಿಮೆಯಾಗಿ ವಾಂತಿ ಮತ್ತು ವಾಕರಿಕೆ ನಿಲ್ಲುತ್ತದೆ. ಬೇಗನೆ ದೇಹ ಚುರುಕಾಗುವಂತೆ ಮಾಡುತ್ತದೆ. ಆದರೆ ಆಸಿಡ್ ಪೂರಿತ ಮತ್ತು ಹುಳಿಅಂಶದ ಜ್ಯೂಸ್ ಸೇವನೆ ಬೇಡ.
* ಶುಂಠಿ: ನೀರಿಗೆ ಅಥವಾ ಊಟಕ್ಕೆ ಶುಂಠಿಯನ್ನು ಸೇರಿಸಿ ಸೇವಿಸಿದರೆ ತಲೆ ಸುತ್ತು, ತಲೆ ನೋವು, ಸುಸ್ತು ಎಲ್ಲವೂ ಪರಿಣಾಮಕಾರಿಯಾಗಿ ಕಡಿಮೆಯಾಗುತ್ತದೆ.
* ಕಾಫಿ ಕುಡಿಯಲೇಬೇಡಿ: ತಲೆ ನೋವು ಬಂದಾಗ ಕಾಫಿ ಕುಡಿದರೆ ಬೇಗನೆ ರಿಲ್ಯಾಕ್ಸ್ ಆಗುತ್ತದೆ ಎಂದು ಹಲವರ ಮಾತು. ಆದರೆ ಇದು ತಪ್ಪು ಕಲ್ಪನೆ. ಕಾಫಿ ಅಥವಾ ಇನ್ನಿತರ ಕೆಫೆನ್ ಅಂಶ ಹೊಂದಿರುವ ಪಾನೀಯಗಳು ದೇಹದಲ್ಲಿ ಇನ್ನಷ್ಟು ನೀರಿನಂಶವನ್ನು ಕಡಿಮೆಗೊಳಿಸಿ ಸಮಸ್ಯೆಯನ್ನು ದ್ವಿಗುಣಗೊಳಿಸುತ್ತದೆ. ಆದರೆ ಕಾಫಿ ಬದಲಾಗಿ ಮಸಾಲಾ ಟೀ ಅಥವಾ ಗ್ರೀನ್ ಟೀ ಕುಡಿದರೆ ಹೆಚ್ಚು ಉಪಯೋಗ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications