Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಮಳೆಗಾಲದಲ್ಲಿ ಕಾಯಿಲೆ ಬೀಳುವುದನ್ನು ತಪ್ಪಿಸುವ ಆಹಾರಗಳು
ಭಾರತೀಯ ಆಹಾರಶೈಲಿಯೆಂದ್ರೆ ಅಲ್ಲಿ ಮಸಾಲೆಗೆ ತುಂಬಾ ಪ್ರಾಮುಖ್ಯತೆ. ಉಪ್ಪು, ಹುಳಿ ಜೊತೆಗೆ ಸ್ವಲ್ಪ ಅಧಿಕ ಖಾರ ಇದು ನಮ್ಮೆಲ್ಲರ ಆಹಾರ ಪದ್ಧತಿಯಾಗಿದೆ.
ಚಕ್ಕೆ, ಲವಂಗ, ಕಾಳು ಮೆಣಸು, ಶುಂಠಿ ಹೀಗೆ ಮಸಾಲೆಯಿಲ್ಲದೆ ನಮ್ಮ ಆಹಾರ ರುಚಿಸುವುದೇ ಇಲ್ಲ ಅಲ್ಲವೇ? ಕೆಲವು ಕಡೆ ಎಷ್ಟು ಖಾರ ತಿನ್ನುತ್ತಾರೆ ಅಂದ್ರೆ ಖಾರ ಅಭ್ಯಾಸವಿಲ್ಲದವರು ಸ್ವಲ್ಪ ತೆಗೆದು ನಾಲಗೆಯಲ್ಲಿ ಇಟ್ಟರೆ ಸಾಕು ಹೂ.. ಆ.. ನೀರು-ನೀರು ಅಂತ ಕಿರುಚಾಡಲಾರಂಭಿಸುತ್ತಾರೆ, ಅಷ್ಟರಮಟ್ಟಿಗೆ ಖಾರವಾಗಿರುತ್ತೆ. ಮಸಾಲೆ ಹೆಚ್ಚು ತಿನ್ನುವುದು ಒಳ್ಳೆಯದೇ ಇಲ್ಲವೇ ಎಂದು ನೋಡುವುದಾದರೆ ಅದು ನಿಮ್ಮ ದೇಹ ಹಾಗೂ ಕಾಲವನ್ನು ಅವಲಂಬಿಸಿರುತ್ತದೆ.
ಇದೀಗ ಮಳೆಗಾಲ, ಮಳೆಗಾಲದಲ್ಲಿ ನಿಮ್ಮ ಆಹಾರಶೈಲಿ ಬೇಸಿಗೆಗಿಂತ ಬದಲಾಗುವುದು. ಮಳೆಗಾಲದಲ್ಲಿ ಬಿಸಿ ಬಿಸಿ ಆಹಾರ ತಿನ್ನಬೇಕು ಅಲ್ಲದೆ ಮಸಾಲೆ ಹಾಕಿದ ಆಹಾರ ಸೇವನೆ ಒಳ್ಳೆಯದು.
ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಸ್ವಲ್ಪ ಕುಗ್ಗುವುದು. ವಾತ ದೋಷ ಹೆಚ್ಚಾಗುವುದು, ಜೀರ್ಣಕ್ರಿಯೆ ನಿಧಾನವಾಗುವುದು. ಆದ್ದರಿಂದ ಈ ಸಮಯದಲ್ಲಿ ಲಘು ಆಹಾರ ಸೇವನೆ ಮಾಡಬೇಕು ಅಲ್ಲದೆ ಮಸಾಲೆಯನ್ನು ಬಳಸುವುದರಿಂದ ಬೇಧಿ, ಶೀತ, ಡೆಂಗ್ಯೂ ಮುಂತಾದ ಮಳೆಗಾಲದ ಕಾಯಿಲೆಗಳನ್ನು ತಡೆಗಟ್ಟಬಹುದು. ಮಳೆಗಾಲದ ಆಹಾರ ಪದ್ಧತಿಯಲ್ಲಿ ಯಾವ ಮಸಾಲೆಗಳನ್ನು ಸೇರಿಸಿದರೆ ಒಳ್ಳೆಯದು ಎಂದು ನೋಡೋಣ:

1. ಇಂಗು:
ನಿಮ್ಮ ಸಾಂಬಾರ್ನಲ್ಲಿ ಇದನ್ನು ಬಳಸಲು ಮರೆಯಬೇಡಿ. ಇದು ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಅಲ್ಲದೆ ಹೊಟ್ಟೆ ನೋವು ಕಡಿಮೆ ಮಾಡಲು ಮನೆಮದ್ದಾಗಿ ಇದನ್ನು ಬಳಸಬಹುದು. ಮಕ್ಕಳ ಹೊಟ್ಟೆ ಉಬ್ಬಿದ್ದರೆ ಅಥವಾ ಅಜೀರ್ಣದಿಂದ ಹೊಟ್ಟೆನೋವು ಆದಾಗ ಸ್ವಲ್ಪ ಇಂಗು ಎದೆ ಹಾಲಿನಲ್ಲಿ ಅಥವಾ ನೀರಿನಲ್ಲಿ ಕಲೆಸಿ ಕುಡಿಸಿದರೆ ಕಡಿಮೆಯಾಗುವುದು. ಇದು ಹೆಚ್1ಎನ್1 ವಿರುದ್ಧ ಕೂಡ ಹೋರಾಡುತ್ತೆ. 1918ರಲ್ಲಿ ಸ್ಪಾನಿಷ್ ಫ್ಲೂ ಗುಣ ಪಡಿಸಲು ಬಳಸಲಾಗುತ್ತು. ಆದ್ದರಿಂದ ಇಂಗು ಮಳೆಗಾಲದಲ್ಲಿ ಸಾಮಾನ್ಯವಾಗಿ ತಡೆಗಟ್ಟುವ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿ.

2. ಶುಂಠಿ
ಮಳೆಗಾಲದಲ್ಲಿ ಶುಂಠಿ ಬೇಕೇ ಬೇಕು. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ-ಕೆಮ್ಮು ತಡೆಗಟ್ಟುವಲ್ಲಿ ಶುಂಠಿ ಸಮರ್ಥವಾಗಿದೆ. ಇದನ್ನು ಅಡುಗೆಯಲ್ಲಿ ಬಳಸಿ. ಅಲ್ಲದೆ ಮಳೆಗಾಲದಲ್ಲಿ ದಿನಾ ಒಂದು ಶುಂಠಿ ಚಹಾ ಮಾಡಿ ಕುಡಿಯುವುದು ಕೂಡ ಒಳ್ಳೆಯದೇ.

3. ಅಜ್ವೈನ್
ಅಜ್ವೈನ್ ಕೂಡ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಅಜ್ವೈನ್ ಅನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಅಜ್ವೈನ್ ಸಮಸ್ಯೆ ಇಲ್ಲವಾಗುವುದು.

4. ಸೋಂಪು
ಹೋಟೆಲ್ಗಳಲ್ಲಿ, ಸಮಾರಂಭಗಳಲ್ಲಿ ಊಟವಾದ ಬಳಿಕ ತಿನ್ನಲು ಸೋಂಪು ಇಟ್ಟಿರುತ್ತಾರೆ. ಸೋಂಪು ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಇದನ್ನು ಆಹಾರದ ಜೊತೆ ಸೇರಿಸಿ ಅಥವಾ ಆಹಾರ ತಿಂದ ಬಳಿಕ ಸ್ವಲ್ಪ ತಿನ್ನಿ.

5. ಜೀರಿಗೆ
ಜೀರಿಗೆ ನಮ್ಮ ಬಹುತೇಕ ಅಡುಗೆಗಳಲ್ಲಿ ಇರುತ್ತದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು ಅಲ್ಲದೆ ರೋಗ ನಿರೋಧಕ ಶಕ್ತಿ ಕೂಡ ವೃದ್ಧಿಸುವುದು. ಆದ್ದರಿಂದ ಇದನ್ನು ನಿಮ್ಮ ಅಡುಗೆಯಲ್ಲಿ ಸೇರಿಸಿ.

6. ಚಕ್ಕೆ
ಚಕ್ಕೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ಉರಿಯೂತ ಕಡಿಮೆ ಮಾಡುತ್ತದೆ. ಹಾನಿಗೊಳಗಾದ ದೇಹದ ನರಗಳನ್ನು ಸರಿಪಡಿಸುತ್ತೆ, ಅಲ್ಲದೆ ಶ್ವಾಸಕೋಶದ ಆರೋಗ್ಯಕ್ಕೂ ಒಳ್ಳೆಯದು.

7. ಬೆಳ್ಳುಳ್ಳಿ
ಮಳೆಗಾಲದಲ್ಲಿ ಬೆಳ್ಳುಳ್ಳಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ನಿಮ್ಮ ದಿನ ನಿತ್ಯದ ಆಹಾರದಲ್ಲಿ ಇದನ್ನು ಸೇರಿಸಿ. ಇದು ಮೈಯನ್ನು ಬೆಚ್ಚಗೆ ಇಡುವುದರಿಂದ ಕೆಮ್ಮು, ಶೀತ ಈ ರಿತಿಯ ಸಮಸ್ಯೆ ತಡೆಗಟ್ಟುತ್ತದೆ.

8. ಅರಿಶಿಣ
ಅರಿಶಿಣ ಇಲ್ಲದೇ ಇರುವ ಅಡುಗೆ ಮನೆಯೇ ಇರಲ್ಲ, ಅರಿಶಿಣವನ್ನು ಬಳಸುವುದರಿಂದ ರೋಗ ನಿರೋಧ ಶಕ್ತಿ ಹೆಚ್ಚುವುದು. ಅಷ್ಟು ಮಾತ್ರವಲ್ಲದೆ ಮಳೆಗಾಲದಲ್ಲಿ ಬಿಸಿ ನೀರಿಗೆ ಅಥವಾ ಹಾಲಿಗೆ ಸ್ವಲ್ಪ ಅರಿಶಿಣ ಪುಡಿ ಸೇರಿಸಿ ಕುಡಿಯುವುದು ಒಳ್ಳೆಯದು.



Click it and Unblock the Notifications