Just In
- 1 hr ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 5 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 14 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 14 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಂಜಾನ್ 2021: ಉಪವಾಸದ ಈ ತಿಂಗಳಿನಲ್ಲಿ ಹೀಗೆ ಮಾಡಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುವುದು
ರಂಜಾನ್ ಮುಸ್ಲಿಂರ ಪವಿತ್ರ ತಿಂಗಳು. ಇಸ್ಲಾಮಿಕ್ ಕ್ಯಾಲೆಂಡರ್ನ 9ನೇ ತಿಂಗಳೇ ರಂಜಾನ್. ಈ ತಿಂಗಳಿನಲ್ಲಿ ಮುಸ್ಲಿಂರ ಪವಿತ್ರ ಗ್ರಂಥ ಕುರಾನ್ ಸ್ವರ್ಗ ಲೋಕದಿಂದ ಭೂಮಿಗೆ ಬಂದಿದ್ದು, ಅದನ್ನು ಪ್ರವಾದಿ ಮೊಹಮ್ಮದ್ ಮುಸ್ಲಿಂರಿಗೆ ಪರಿಚಯಿಸಿದ್ದು ಎಂಬ ನಂಬಿಕೆ ಇದೆ.
ಈ ಪವಿತ್ರ ತಿಂಗಳಿನಲ್ಲಿ ಮಾಡುವ ಉಪವಾಸಕ್ಕೆ ತುಂಬಾನೇ ಮಹತ್ವವಿದೆ. ಈ ತಿಂಗಳಿನಲ್ಲಿ ಸಹಾರ್ ಅಂದ್ರೆ ಸೂರ್ಯದಕ್ಕೆ ಮುನ್ನ ಆಹಾರ ಸೇವಿಸಿ ನಂತರ ದಿನಪೂರ್ತಿ ಉಪವಾಸವಿದ್ದು ಇಫ್ತಾರ್ ಅಂದ್ರೆ ಸಂಜೆ ಉಪವಾಸ ಮುರಿಯುತ್ತಾರೆ.
12 ಗಂಟೆಗಿಂತಲೂ ಅಧಿಕ ಕಾಲ ಒಂದು ಗುಟುಟಕು ನೀರು ಕುಡಿಯದೆ ಅಷ್ಟೇ ಏಕೆ ಎಂಜಲು ಕೂಡ ನುಂಗದೆ ಕಟ್ಟುನಿಟ್ಟಿನ ಉಪವಾಸ ಮಾಡಬೇಕು. ಈ ವರ್ಷದ ಸವಾಲೆಂದರೆ ಉಪವಾಸದ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಈ ಕೋವಿಡ್ 19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಅಥವಾ ಕುಂದದಂತೆ ನೋಡುವುದು ತುಂಬಾನೇ ಮಹತ್ವದಾಗಿದೆ.
ಆದ್ದರಿಂದ ರಂಜಾನ್ ಉಪವಾಸ ಪಾಲಿಸುವವರು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಅಂಶಗಳನ್ನು ಪಾಲಿಸಬೇಕು.
ಸಹಾರ್ ಸಮಯ
ಉಪವಾಸ ಮಾಡುವಾಗ ಎರಡು ಹೊತ್ತು ಮಾತ್ರ ಆಹಾರ ಸೇವಿಸಲಾಗುವುದು. ಆಗ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ಜೀರ್ಣಕ್ರಿಯೆಗೆ ಸಹಕಾರಿಯಾದ ಆಹಾರ ಸೇವಿಸಬೇಕು.
ಸಹಾರ್ ಹಾಗೂ ಇಫ್ತಾರ್ ಸಮಯದಲ್ಲಿ ದೇಹದ ರೋಗ ನಿರೋಧಕ ವ್ಯವಸ್ಥೆ ತುಂಬಾ ಆ್ಯಕ್ಟಿವ್ ಆಗಿರುತ್ತದೆ. ಆದ್ದರಿಂದ ಸಹಾರ್ ಸಮಯದಲ್ಲಿ ಎದ್ದು ಆಹಾರ ಸೇವಿಸಬೇಕು, ಇಲ್ಲದಿದ್ದರೆ ತುಂಬಾ ಹೊತ್ತು ಹಸಿವಿನಿಂದ ಇರುವುದರಿಂದ ರೋಗ ನಿರೋಧಕ ಶಕ್ತಿ ಕುಗ್ಗುವುದು.
ಯಾವ ರೀತಿಯ ಆಹಾರ ಆಯ್ಕೆ ಮಾಡಬೇಕು?
ರಂಜಾನ್ ಉಪವಾಸ ಮಾಡುವವರು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಅಲ್ಲದೆ ದಿನಾ ಪೂರ್ತಿ ದೇಹಕ್ಕೆ ಅವಶ್ಯಕವಿರುವ ಪೋಷಕಾಂಶವಿರುವ ಆಹಾರ ಸೇವಿಸಬೇಕು. ನಿಮ್ಮ ಆಹಾರದಲ್ಲಿ ಧಾನ್ಯಗಳು, ಹಣ್ಣುಗಳು, ತರಕಾರಿ, ಕಾಳುಗಳು, ನಟ್ಸ್, ಹಾಲಿನ ಉತ್ಪನ್ನಗಳು ಹಾಗೂ ಪ್ರೊಟೀನ್ ಅಂಶವಿರುವ ಆಹಾರ ಸೇವಿಸಬೇಕು.
ನ್ಯೂಟ್ರಿಷಿಯನ್ ಸೂಪ್, ಮೊಟ್ಟೆ, ಚೀಸ್, ಆಲೀವ್, ಹಸಿರು ಸೊಪ್ಪು, ಸೌತೆಕಾಯಿ, ಟೊಮೆಟೊ, ಓಟ್ಮೀಲ್ ಈ ರೀತಿಯ ಆಹಾರಗಳನ್ನು ಸೇವಿಸಬೇಕು.
ಸೂಪ್, ಸಲಾಡ್ ಸೇವಿಸಿ
ರಂಜಾನ್ ತಿಂಗಳಿನಲ್ಲಿ ಇಫ್ತಾರ್ ಆಹಾರಕ್ಕೆ ವಿವಿಧ ಬಗೆಯ ಭಕ್ಷ್ಯಗಳಿರುತ್ತದೆ. ಈ ಸಮಯದಲ್ಲಿ ಆರೋಗ್ಯಕರ ಆಹಾರಕ್ಕೆ ಗಮನ ನೀಡುವುದು ಒಳ್ಳೆಯದು. ನೀವು ಉಪವಾಸ ಮುರಿದ ಬಳಿಕ ಸೂಪ್ ತೆಗೆದುಕೊಂಡು 15 ನಿಮಿಷ ಬಿಟ್ಟು ಆಹಾರ ಸೇವಿಸಬೇಕು. ಸೂಪ್ ತೆಗೆದುಕೊಂಡು ನಂತರ ಆಹಾರ ಸೇವಿಸಿದರೆ ಇದು ತೃಪ್ತಿಯ ಭಾವನೆ ನೀಡುವುದರ ಜೊತೆಗೆ ಇದ್ದಕ್ಕಿದ್ದಂತೆ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಗಟ್ಟುವಲ್ಲಿ ಸಹಕಾರಿ.
ಆ್ಯಂಟಿ ಆಕ್ಸಿಡೆಂಟ್ ಅಧಿಕ ಆಹಾರ ಸೇವನೆ
ಅಧಿಕ ನಾರಿನಂಶವಿರುವ ಹಣ್ಣುಗಳನ್ನು ಸೇವಿಸಿ, ಇದು ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಅಲ್ಲದೆ ಜೀರ್ಣಕ್ರಿಯೆಗೆ ಸಹಕಾರಿಯಾದ ಬ್ಯಾಕ್ಟಿರಿಯಾ ಚಟುವಟಿಕೆ ಉತ್ತಮವಾಗಿರುತ್ತದೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ಕರಿದ ಪದಾರ್ಥಗಳನ್ನು ಕಡಿಮೆ ಸೇವಿಸಿ
ರಂಜಾನ್ ತಿಂಗಳಿನಲ್ಲಿ ವಿಶೇಷ ಪದಾರ್ಥಗಳನ್ನು ತಯಾರಿಸಲಾಗುವುದು. ಆದರೆ ಕರಿದ ಪದಾರ್ಥಗಳನ್ನು ಕಡಿಮೆ ತಿನ್ನುವುದು ಒಳ್ಳೆಯದು. ಅದರಲ್ಲೂ ಮಧುಮೇಹ, ಹೃದಯ ಸಮಸ್ಯೆ ಇರುವವರು ಕರಿದ ಪದರ್ಥಗಳನ್ನು ದೂರವಿಡುವುದು ಒಳ್ಳೆಯದು.
ಇದು ನಿಮ್ಮ ತೂಕ ನಿಯಂತ್ರಣಕ್ಕೆ ತುಂಬಾನೇ ಸಹಕಾರಿಯಾಗಿದೆ.
ಕಡಿಮೆಯೆಂದರೂ ದಿನದಲ್ಲಿ ಒಂದೂವರೆ ಲೀಟರ್ ನೀರು ಕುಡಿಯಿರಿ
ದಿನದಲ್ಲಿ 8 ಲೋಟ ನೀರು ಅವಶ್ಯಕ, ಆದರೆ ಉಪವಾಸದ ಸಮಯದಲ್ಲಿ ಅಷ್ಟು ಕುಡಿಯಲು ಆಗುವುದಿಲ್ಲ, ಆದರೆ ತೀರಾ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ. ಕೆಫೀನ್ ಅಂಶವಿರುವ ಟೀ, ಕಾಫಿ ಕಡಿಮೆ ಮಾಡಿ, ಇದು ದೇಹದಲ್ಲಿ ನೀರಿನಂಶ ಮತ್ತಷ್ಟು ಕಡಿಮೆ ಮಾಡುತ್ತದೆ. ನೀರು, ತಾಜಾ ಹಣ್ಣಿನ ಜ್ಯೂಸ್ ಕುಡಿಯಿರಿ.
ಕೆಫೀರ್ ಬಳಸಿ
ರಂಜಾನ್ ಉಪವಾಸ ಮಾಡುವವರು ಆಹಾರ ಸೇವಿಸುವಾಗ ಕೆಫೀರ್ ಬಳಸಬೇಕು. ಕೆಫೀರ್ಗೆ ಕಡಿಮೆ ಪ್ರಮಾಣದ ಗ್ಲೈಸೆಮಿಕ್ ಇಂಡೆಕ್ಸ್ ಇದ್ದು ತುಂಬಾ ಸಮಯದವರೆಗೆ ಹಸಿವುನತಡೆಗಟ್ಟುತ್ತೆ ಅಲ್ಲದೆ ಮಲಬದ್ಧತೆ ಸಮಸ್ಯೆಯೂ ಕಾಡುವುದಿಲ್ಲ.
ವ್ಯಾಯಾಮ ಮಾಡಬಹುದೇ?
ಉಪವಾಸ ಮಾಡುವಾಗ ವ್ಯಾಯಾಮ ಮಾಡಬಹುದೇ ಎಂದು ನೋಡುವುದಾದರೆ ತಜ್ಞರ ಪ್ರಕಾರ 30 ನಿಮಿಷದ ಲಘು ವ್ಯಾಯಾಮ ಜೀರ್ಣಕ್ರಿಯೆಗೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.
ಇಫ್ತಾರ್ ಊಟದ ಬಳಿಕ ಸ್ವಲ್ಪ ನಡೆಯುವ ವ್ಯಾಯಾಮ ಒಳ್ಳೆಯದು.