Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಯಾವ್ಯಾವ ಸಮಸ್ಯೆಗಳಿಗೆ ಯಾವ ಯೋಗಾಸನ ಉಪಯುಕ್ತ?
ದೇಹದ ಪ್ರತಿಯೊಂದು ಅಂಗಗಳ ಮೇಲೆ ದಿನನಿತ್ಯ ಹೆಚ್ಚಿನ ಒತ್ತಡ ಹಾಕುತ್ತಿರುತ್ತೇವೆ. ಇದರಿಂದಾಗಿ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕುತ್ತಿಗೆ ನೋವು ಕಾಣಿಸಿಕೊಳ್ಳುವುದು. ಮಲಗುವ ಭಂಗಿ, ಕುಳಿತುಕೊಳ್ಳುವ ಭಂಗಿಯಿಂದಾಗಿ ಕುತ್ತಿಗೆ ನೋವು ಬರುವುದು. ಕುತ್ತಿಗೆ ನೋವು ನಿವಾರಣೆ ಮಾಡಲು ಸುಲಭವಾಗಿ ಮಾಡಬಹುದಾದ ಕೆಲವೊಂದು ಆಸನಗಳು ಇವೆ.
ನಿಮಗೆ ಕುತ್ತಿಗೆ ನೋವು ಕಾಣಿಸಿಕೊಂಡಾಗ ಈ ಆಸನ ಮಾಡಿದರೆ ಅದರಿಂದ ನೋವು ಕಡಿಮೆಯಾಗುವುದು. ನೀವು ಪ್ರತಿನಿತ್ಯವು ಈ ಆಸನಗಳನ್ನು ಮಾಡುವುದರಿಂದ ಹೆಚ್ಚು ಆರಾಮ ಪಡೆಯಬಹುದು. ಎಷ್ಟೇ ವ್ಯಸ್ತರಾಗಿದ್ದರೂ ನೀವು ಈ ಆಸನಗಳನ್ನು ಮಾಡಬಹುದಾಗಿದೆ. ಇದಕ್ಕೆ ಹೆಚ್ಚು ಸಮಯವೂ ಬೇಕಿಲ್ಲ.

ಬಾಲಾಸನ ಅಥವಾ ಮಗುವಿನ ಆಸನ
ಲಾಭಗಳು
ಬೆನ್ನಿಗೆ ಆರಾಮ ನೀಡಿ ನರವ್ಯವಸ್ಥೆಯು ಶಾಂತವಾಗಿರುವಂತೆ ಮಾಡುವುದು.
ಮಲಬದ್ಧತೆ ನಿವಾರಿಸುವುದು
ಇಂತಹ ಸಮಸ್ಯೆಯಿದ್ದರೆ ಈ ಆಸನ ಮಾಡಬೇಡಿ
ಬೆನ್ನು ಅಥವಾ ಮೊಣಕಾಲಿನ ಗಾಯದ ಸಮಸ್ಯೆಯಿದ್ದರೆ
ಗರ್ಭಿಣಿ ಮಹಿಳೆಯರು ಇದನ್ನು ಕಡೆಗಣಿಸಬೇಕು. ಬಾಲಾಸನ ಮಾಡುವ ವಿಧಾನಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ
ನಟರಾಜ ಆಸನ
ಲಾಭಗಳು
ಇದು ಮನಸ್ಸಿಗೆ ಶಾಂತಿ ನೀಡಿ, ಒತ್ತಡ ಕಡಿಮೆ ಮಾಡುವುದು.
ಇದು ದೇಹಸ್ಥಿತಿ ಸುಧಾರಿಸುವುದು
ಆದರೆ ಗರ್ಭಿಣಿ ಮಹಿಳೆಯರು ಈ ಆಸನ ಮಾಡಬಾರದು.
ಮಾರ್ಜಾಸನ ಅಥವಾ ಬೆಕ್ಕಿನ ಆಸನ
ಲಾಭಗಳು
ಬೆನ್ನಿನಲ್ಲಿ ಸ್ಥಿತಿಸ್ಥಾಪಕತ್ವ ಹೆಚ್ಚಿಸುವುದು
ಮೊಣಕೈ ಹಾಗೂ ಭುಜ ಬಲಗೊಳಿಸುವುದು
ಜೀರ್ಣಕ್ರಿಯೆ ವ್ಯವಸ್ಥೆಗೆ ಮಸಾಜ್ ಮಾಡಿ ಜೀರ್ಣಕ್ರಿಯೆ ಸುಧಾರಿಸುವುದು.
ಹೊಟ್ಟೆಗೆ ಶಕ್ತಿ ನೀಡುವುದು.
ಮನಸ್ಸಿಗೆ ಆರಾಮ ನೀಡಿ ರಕ್ತಸಂಚಾರ ಉತ್ತಮಗೊಳಿಸುವುದು.
ಮರ್ಜಾಸನ ಯಾರು ಮಾಡಬಾರದು?
ಬೆನ್ನು ನೋವು ಅಥವಾ ಕುತ್ತಿಗೆ ನೋವು ಇರುವವರು.
ವಿಪರೀತ ಕರನಿ ಆಸನ ಅಥವಾ ಕಾಲುಗಳನ್ನು ಗೋಡೆಗೆ ಇಡುವುದು
ಲಾಭಗಳು
ಸಣ್ಣ ಮಟ್ಟದ ತಲೆನೋವು ನಿವಾರಣೆ
ನಿಶ್ಯಕ್ತಿ ನಿವಾರಣೆ
ಕಾಲುಗಳಲ್ಲಿ ಸ್ನಾಯು ಸೆಳೆತ ನಿವಾರಣೆ
ಆಸನ ಯಾರು ಮಾಡಬಾರದು
ಕುತ್ತಿಗೆ ಅಥವಾ ಬೆನ್ನು ನೋವು ಇರುವವರು.
ಉತ್ಥಿತ ತ್ರಿಕೋನಾಸನ
ಲಾಭಗಳು
ಸಾಮಾನ್ಯ ತಲೆ ನೋವು ನಿವಾರಣೆ
ದೇಹದ ಯಾವುದೇ ಒತ್ತಡ ನಿವಾರಣೆ
ಬೆನ್ನು ಮೂಳೆ ಬಲಗೊಳ್ಳುವುದು ಮತ್ತು ವಿಸ್ತಾರವಾಗುವುದು.
ಈ ಆಸನ ಯಾರು ಕಡೆಗಣಿಸಬೇಕು?
ಹೃದಯ ಸಮಸ್ಯೆ ಇರುವವರು.
ತಲೆನೋವು ಇರುವವರು.
ಭೇದಿ ಇರುವವರು.
ರಕ್ತದೊತ್ತಡ ಕಡಿಮೆ ಇರುವವರು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


