Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಯಾವ್ಯಾವ ಸಮಸ್ಯೆಗಳಿಗೆ ಯಾವ ಯೋಗಾಸನ ಉಪಯುಕ್ತ?
ದೇಹದ ಪ್ರತಿಯೊಂದು ಅಂಗಗಳ ಮೇಲೆ ದಿನನಿತ್ಯ ಹೆಚ್ಚಿನ ಒತ್ತಡ ಹಾಕುತ್ತಿರುತ್ತೇವೆ. ಇದರಿಂದಾಗಿ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕುತ್ತಿಗೆ ನೋವು ಕಾಣಿಸಿಕೊಳ್ಳುವುದು. ಮಲಗುವ ಭಂಗಿ, ಕುಳಿತುಕೊಳ್ಳುವ ಭಂಗಿಯಿಂದಾಗಿ ಕುತ್ತಿಗೆ ನೋವು ಬರುವುದು. ಕುತ್ತಿಗೆ ನೋವು ನಿವಾರಣೆ ಮಾಡಲು ಸುಲಭವಾಗಿ ಮಾಡಬಹುದಾದ ಕೆಲವೊಂದು ಆಸನಗಳು ಇವೆ.
ನಿಮಗೆ ಕುತ್ತಿಗೆ ನೋವು ಕಾಣಿಸಿಕೊಂಡಾಗ ಈ ಆಸನ ಮಾಡಿದರೆ ಅದರಿಂದ ನೋವು ಕಡಿಮೆಯಾಗುವುದು. ನೀವು ಪ್ರತಿನಿತ್ಯವು ಈ ಆಸನಗಳನ್ನು ಮಾಡುವುದರಿಂದ ಹೆಚ್ಚು ಆರಾಮ ಪಡೆಯಬಹುದು. ಎಷ್ಟೇ ವ್ಯಸ್ತರಾಗಿದ್ದರೂ ನೀವು ಈ ಆಸನಗಳನ್ನು ಮಾಡಬಹುದಾಗಿದೆ. ಇದಕ್ಕೆ ಹೆಚ್ಚು ಸಮಯವೂ ಬೇಕಿಲ್ಲ.

ಬಾಲಾಸನ ಅಥವಾ ಮಗುವಿನ ಆಸನ
ಲಾಭಗಳು
ಬೆನ್ನಿಗೆ ಆರಾಮ ನೀಡಿ ನರವ್ಯವಸ್ಥೆಯು ಶಾಂತವಾಗಿರುವಂತೆ ಮಾಡುವುದು.
ಮಲಬದ್ಧತೆ ನಿವಾರಿಸುವುದು
ಇಂತಹ ಸಮಸ್ಯೆಯಿದ್ದರೆ ಈ ಆಸನ ಮಾಡಬೇಡಿ
ಬೆನ್ನು ಅಥವಾ ಮೊಣಕಾಲಿನ ಗಾಯದ ಸಮಸ್ಯೆಯಿದ್ದರೆ
ಗರ್ಭಿಣಿ ಮಹಿಳೆಯರು ಇದನ್ನು ಕಡೆಗಣಿಸಬೇಕು. ಬಾಲಾಸನ ಮಾಡುವ ವಿಧಾನಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ
ನಟರಾಜ ಆಸನ
ಲಾಭಗಳು
ಇದು ಮನಸ್ಸಿಗೆ ಶಾಂತಿ ನೀಡಿ, ಒತ್ತಡ ಕಡಿಮೆ ಮಾಡುವುದು.
ಇದು ದೇಹಸ್ಥಿತಿ ಸುಧಾರಿಸುವುದು
ಆದರೆ ಗರ್ಭಿಣಿ ಮಹಿಳೆಯರು ಈ ಆಸನ ಮಾಡಬಾರದು.
ಮಾರ್ಜಾಸನ ಅಥವಾ ಬೆಕ್ಕಿನ ಆಸನ
ಲಾಭಗಳು
ಬೆನ್ನಿನಲ್ಲಿ ಸ್ಥಿತಿಸ್ಥಾಪಕತ್ವ ಹೆಚ್ಚಿಸುವುದು
ಮೊಣಕೈ ಹಾಗೂ ಭುಜ ಬಲಗೊಳಿಸುವುದು
ಜೀರ್ಣಕ್ರಿಯೆ ವ್ಯವಸ್ಥೆಗೆ ಮಸಾಜ್ ಮಾಡಿ ಜೀರ್ಣಕ್ರಿಯೆ ಸುಧಾರಿಸುವುದು.
ಹೊಟ್ಟೆಗೆ ಶಕ್ತಿ ನೀಡುವುದು.
ಮನಸ್ಸಿಗೆ ಆರಾಮ ನೀಡಿ ರಕ್ತಸಂಚಾರ ಉತ್ತಮಗೊಳಿಸುವುದು.
ಮರ್ಜಾಸನ ಯಾರು ಮಾಡಬಾರದು?
ಬೆನ್ನು ನೋವು ಅಥವಾ ಕುತ್ತಿಗೆ ನೋವು ಇರುವವರು.
ವಿಪರೀತ ಕರನಿ ಆಸನ ಅಥವಾ ಕಾಲುಗಳನ್ನು ಗೋಡೆಗೆ ಇಡುವುದು
ಲಾಭಗಳು
ಸಣ್ಣ ಮಟ್ಟದ ತಲೆನೋವು ನಿವಾರಣೆ
ನಿಶ್ಯಕ್ತಿ ನಿವಾರಣೆ
ಕಾಲುಗಳಲ್ಲಿ ಸ್ನಾಯು ಸೆಳೆತ ನಿವಾರಣೆ
ಆಸನ ಯಾರು ಮಾಡಬಾರದು
ಕುತ್ತಿಗೆ ಅಥವಾ ಬೆನ್ನು ನೋವು ಇರುವವರು.
ಉತ್ಥಿತ ತ್ರಿಕೋನಾಸನ
ಲಾಭಗಳು
ಸಾಮಾನ್ಯ ತಲೆ ನೋವು ನಿವಾರಣೆ
ದೇಹದ ಯಾವುದೇ ಒತ್ತಡ ನಿವಾರಣೆ
ಬೆನ್ನು ಮೂಳೆ ಬಲಗೊಳ್ಳುವುದು ಮತ್ತು ವಿಸ್ತಾರವಾಗುವುದು.
ಈ ಆಸನ ಯಾರು ಕಡೆಗಣಿಸಬೇಕು?
ಹೃದಯ ಸಮಸ್ಯೆ ಇರುವವರು.
ತಲೆನೋವು ಇರುವವರು.
ಭೇದಿ ಇರುವವರು.
ರಕ್ತದೊತ್ತಡ ಕಡಿಮೆ ಇರುವವರು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

